|
|
|
ರಾಮ(ರಾಜ)ಕ್ಷತ್ರಿಯ ಸಂಘ, ಕುವೈಟ್ ತೃತೀಯ ವರ್ಷಕ್ಕೆ ಪಾದಾರ್ಪಣೆ |
ಪ್ರಕಟಿಸಿದ ದಿನಾಂಕ : 2008-03-22
ಕುವೈಟ್: ರಾಮ(ರಾಜ)ಕ್ಷತ್ರಿಯ (RK Sangha,Kuwait) ಸಮಾಜ ಬಾಂಧವರು ಇತ್ತೀಚೆಗೆ, ದ್ವಿತೀಯ ವರ್ಷದ ಆಚರಣೆ ಯನ್ನು ಇಲ್ಲಿನ ಜಿಲೀಬ್ ಅಲ್ ಶುಯೋಕ್ನಲ್ಲಿ, ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.
ಪೂಜಾ ಕಾರ್ಯವನ್ನು ಸಂಘದ ಅಧ್ಯಕ್ಷರಾಗಿರುವ ಮಲ್ಲಿಗೆಮಾಡು ಸತೀಶಾ ಚಿತ್ತಾರಿ, ಇವರು ನೆರವೇರಿಸಿದರು. ಪೂಜೆಯ ಅಂಗವಾಗಿ ಮಹಿಳಾ ಸದಸ್ಯರಿಂದ ಸಾಮೂಹಿಕ ಸ್ತೋತ್ರ ಪಠಣೆ ಮತ್ತು ಭಜನಾ ಕಾರ್ಯಕ್ರಮ ನೆಡೆಯಿತು.
ನಂತರ ನೆಡೆದ ಕಾರ್ಯಕಾರಿ ಮಂಡಳಿ ಆಯ್ಕೆಯಲ್ಲಿ ಸಂಘದ ಅಧ್ಯಕ್ಷರಾಗಿ, ಮಲ್ಲಿಗೆಮಾಡು ಸತೀಶಾ ಚಿತ್ತಾರಿ, ಉಪಾಧ್ಯಕ್ಷರಾಗಿ ಕೃಷ್ಣರಾಜ್ ಉಪ್ಪೂರು, ಕಾರ್ಯದರ್ಶಿಯಾಗಿ ಕಿರಣ್ ನಾಯ್ಕ್ ಕುಂದಾಪುರ, ಕೋಶಾಧಿಕಾರಿಯಾಗಿ ಮಲ್ಲಿಗೆಮಾಡು ರವೀಂದ್ರ ಕಾಸರಗೋಡು ರವರನ್ನು ಆರಿಸಲಾಯಿತು.
ಕೆ.ಎಸ್. ಚಂದ್ರಶೇಕರ್ ಕಾಸರಗೋಡು ರಿಂದ ಕಾರ್ಯಕ್ರಮ ಆಯೋಜನೆ, ಡಾ| ನಾರಾಯಣ್ ಕೆ. ಇವರಿಂದ ಆಡಳಿತ ಮಂಡಳಿಯ ಅನುಮೋದನೆ, ಕೃಷ್ಣಮೂರ್ತಿ ಪಾಂಡೇಶ್ವರ ರಿಂದ ಕಾರ್ಯಕ್ರಮ ನಿರ್ವಹಣೆ, ಯಶವಂತ ಕೀಕಾನ ರಿಂದ ಧನ್ಯವಾದ ಸಮರ್ಪಣೆ ನೆರವೇರಿತು. ಶ್ರೀಮತಿ ಪೂರ್ಣಿಮಾ ಕಿರಣ್ ನಾಯ್ಕ್ ಸಹಕರಿಸಿದರು. ಉಟೋಪಚಾರದ ವ್ಯವಸ್ಥೆಯನ್ನು ವಾಸುದೇವ ರಾವ್ ರವರು ನಿರ್ವಹಿಸಿದರು.
ಹೊಸ ಸದಸ್ಯರು rksangha_kuwait@yahoo.com ಯನ್ನು ಸಂರ್ಪಕಿಸಬೇಕೆಂದು ಕೋರಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಮಂಜೇಶ್ವರ ಮೊಹನ್ ದಾಸ್ ಕಾಮತ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-22
|
|
|
|
|