ಮಂಗಳೂರು-ಸೌದಿ ವಿಮಾನ: ಜನಾರ್ದನ ಪೂಜಾರಿ ಆಗ್ರಹ |
ಪ್ರಕಟಿಸಿದ ದಿನಾಂಕ : 2008-03-19
ಬೆಂಗಳೂರು, ಮಾ.೧೮: ಮಂಗಳೂರಿನಿಂದ ಸೌದಿ ಅಬೇರಿಯಾಕ್ಕೆ ವಿಮಾನಯಾನ ಸೌಲಭ್ಯ ಕಲ್ಪಿಸಬೇಕೆಂದು ಕಾಂಗ್ರೆಸ್ ಸಂಸದ ಬಿ.ಜನಾರ್ದನ ಪೂಜಾರಿ ಅವರು ರಾಜ್ಯಸಭೆಯಲ್ಲಿ ಇಂದು ಆಗ್ರಹಿಸಿದ್ದಾರೆ.
ಮಂಗಳೂರು ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೌಲಭ್ಯಗಳನ್ನು ಸಹ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಒತ್ತಾಯ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಬಹಳಷ್ಟು ಮುಸ್ಲಿಮರು ಹಜ್ಯಾತ್ರೆಗೆ ಹೋಗುತ್ತಾರೆ. ಇವರಿಗೆ ಅನುಕೂಲವಾಗುವ ಸಲುವಾಗಿ ಸೌದಿ ಅರೇಬಿಯಾಕ್ಕೆ ಮತ್ತು ಕುವೈತ್ಗೆ ನೇರ ವಿಮಾನ ಸೌಲಭ್ಯದ ಅಗತ್ಯವಿದೆ. ಇದು ಬಹಳ ವರ್ಷಗಳ ಬೇಡಿಕೆಯೂ ಆಗಿದೆ ಎಂದು ಹೇಳಿದ್ದಾರೆ.
ಮಂಗಳೂರು ಕೈಗಾರಿಕೆ ಕ್ಷೇತ್ರದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಒಎನ್ಜಿಸಿಯ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್ ಇದೆ. ವಿಶೇಷ ಆರ್ಥಿಕ ವಲಯವನ್ನೂ ಸಹ ಮಾಡಲಾಗಿದೆ. ಪ್ರವಾಸೋದ್ಯಮದಲ್ಲಿಯೂ ಸಾಕಷ್ಟು ಸ್ಥಳಗಳಿವೆ. ಇಲ್ಲಿನ ಜನ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-19
|
|
| Subhan , Kkandlur(Udupi) | 2008-07-01 | | Assalam alaikum. First thanks to gulf kannadiga news e paper. In my opinion Saudi Flight operate from Dammam to Mangalore will be better for all south canara people. Thank you once again. Allah Hafiz
|
| Jagadish, Kundapur/K.S.A | 2008-06-18 | | The Dream of all the Dakshina Kannda |
| khaleelmohammed, mangalore | 2008-05-01 | | assalam alaikum all staffs for gulf kannadiga news paper....if saudia flight operate to jeddah-mangalore ....its better for all daksina kannada peoples.....i hope insha allah as soon as possible start to operate.....thanks allout gulf kannadiga aditor.....bye...maha salama |
|