ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭' |
ಪ್ರಕಟಿಸಿದ ದಿನಾಂಕ : 2007-11-25
ಕುವೈಟ್: ಬಂಟರ ಸಂಘ ಇದರ ಸ್ನೇಹಮಿಲನ-೨೦೦೭ ಇಲ್ಲಿಯ ಶಾಬ್ ಲೀಜರ್ ಪಾರ್ಕ್ ಅಡಿಟೋರಿಯಂನಲ್ಲಿ ನವಂಬರ್ ೧೬ರಂದು ನಡೆಯಿತು.
ಈ ದಿನದ ಕಾರ್ಯಕ್ರಮಗಳು ಬೇಬಿ ಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷರಾದ ಶ್ರೀ ದಿವಿನ್ ಕುಮಾರ್ ಮೆಂಡ, ನಾಲ್ಕು ಜನ ಹಿರಿಯರು ಹಾಗು ಸಂಘದ ಇತರ ಪದಾಧಿಕಾರಿಗಳ ಉಪಸ್ಥಿಥಿಯಲ್ಲಿ ದೀಪ ಬೆಳಗಿಸಿ ಈ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ದಿನದ ವೈಶಿಷ್ಟತೆಯಲ್ಲಿ ಬಂಟರ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಹಾಡುವ ಸ್ಪರ್ಧೆ ಹಾಗು ಛದ್ಮವೇಷ ಸ್ಪರ್ಧೆಗಳನ್ನು ನಡೆಸಲಾಯಿತು.
ಮಧ್ಯಾನದ ಭೋಜನದ ನಂತರ ಸಂಘದ ಸದಸ್ಯರು ನೃತ್ಯ, ಜೊಕ್ಸ್ ಹಾಗು ಕಿರು ನಾಟಕಗಳಿಂದ ಸೇರಿದ ಸಭೆಯನ್ನು ರಂಜಿಸಿದರು. ನಂತರ 'ಹಾವು-ಏಣಿ' ಆಟ, ಹೌಸಿ-ಹೌಸಿ ಆಟಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗು ಕಲಾಕಾರರಿಗೆ ಸ್ಮರಣ ಫಲಕವನ್ನು ವಿತರಿಸಲಾಯಿತು. ಕಡೆಯದಾಗಿ ಸಂಘದ ಕಾರ್ಯದರ್ಶಿ ಶ್ರೀಮತಿ ಸನ್ಮತಿ ಡಿ. ಮೆಂಡ ಎಲ್ಲರಿಗು ಸಂಘದ ಪರವಾಗಿ ಧನ್ಯವಾದ ಸಮರ್ಪಿಸಿ, ರಾಷ್ಟ್ರಗೀತೆಯೊಂದಿಗೆ ಅಂದಿನ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಈ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಸಂಘದ ಸಾಂಸ್ಕ್ರತಿಕಾಧಿಕಾರಿ ಶ್ರೀ ಕಿಶೋರ್ ಶೆಟ್ಟಿ ಬಿ. ಯವರ ನೇತ್ರತ್ವದಲ್ಲಿ, ಶ್ರೀ ಸುರೇಂದ್ರ ಶೆಟ್ಟಿ ಸುಸೂತ್ರವಾಗಿ ನಡೆಸಿಕೊಟ್ಟರು.
ವರದಿಯ ವಿವರಗಳು |
 |
ಕೃಪೆ : ಸನ್ಮತಿ.ಡಿ.ಮೆಂಡ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2007-11-25
|
|
|