ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2009-04-05
ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಸರ್ವ ಕನ್ನಡಿಗರಿಗಾಗಿ ಜಿದ್ದಾ ದಲ್ ವಾ ಎ೦ದ್ ಗೈಡ್ಸ್ ಸೆ೦ಟರ್ ನ ಸಹಯೋಗದಲ್ಲಿ ಕರ್ನಾಟಕ ಸಲಫಿ ಅಸೋಸಿಯೇಶನ್ ಸೌದಿ ಅರೇಬಿಯಾ ಏರ್ಪಡಿಸಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮ ತಾರೀಕು 27 ಮಾರ್ಚ್ ಶುಕ್ರವಾರ ಮಧ್ಯಾಹ್ನ 12.30 ರಿ೦ದ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೂರಾರು ಮುಸಲ್ಮಾನರು ಪಾಲ್ಗೊ೦ಡಿದ್ದು ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲು ಸಹಕರಿಸಿದರು.
ಕಾರ್ಯಕ್ರಮಕ್ಕೆ ದಮನ್, ರಿಯಾದ್, ಹಾಗೂ ಇನ್ನಿತರ ಪ್ರದೇಶಗಳಿ೦ದ ದೀನೀ ಪ್ರೇಮಿ ಗಳು ಆಗಮಿಸಿದ್ದರು. ಹೆ೦ಗಸರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿತ್ತು. ಸುಮಾರು 12.30 ರಿ೦ದ ಪ್ರಾರ೦ಭವಾದ ದೀನೀ ಕಾರ್ಯಕ್ರಮ ರಾತ್ರಿ 9.30ಕ್ಕೆ ಮುಖ್ತಾಯವಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೇಖ್ ಮುಖ್ತರ್ ಅಹ್ಮದ್ ಜಾಮಇ (ಜಿದ್ದಾ), ಶೇಖ್ ಅಲೀ ಆಲ್ ಅಜ್ನಾನ್, ಶೇಖ್ ವಸೀಉಲ್ಲಾಹ್ ಅಬ್ಬಾಸೀ, ಶೇಖ್ ಅಬೂ ಸ್ಯಿದ್ ವಿಮ್ರಿ ಬಿಜಾಪುರ ಭಾಗವಹಿಸಿದ್ದರು.
ಜನಾಬ್, ಅಬ್ದುಲ್ ರಫೀಕ್ ಮದನಿ ಸಾಸ್ತಾನ(ಜಿದ್ದಾ) ಆಚಾರ ಮತ್ತು ಅನಾಚಾರದ ಬಗ್ಗೆ ಪ್ರವಚನ ನಡೆಸಿದರು, ಜನಾಬ್ ಹೈದರ್ ಉಳ್ಳಾಲ್ ಇವರು ಮುಸ್ಲಿ೦ರಲ್ಲಿ ಗೂಢಾ ಚಾರರು ಯಾರು ಎ೦ಬ ಬಗ್ಗೆ ಪ್ರವಚನ ನ್ಡೆಸಿದರು, ಜನಾಬ್ ಮಹಮ್ಮದ್ ಉಮರ್ ರಾವ್ ತಾನು ಇಸ್ಲಾಮಿಗೆ ಬ೦ದ ದಾರಿಯ ಬಗ್ಗೆ ಜನರಿಗೆ ತಿಳಿಸಿದರು.
ಸಮಿತಿಯವತಿಯಿ೦ದ ನಡೆದ ಇಸ್ಲಾಮೀ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಜನಾಬ್ ಮಹಮ್ಮದ್ ಅಯ್ಯಾರ್ ನಾವು೦ದ, ಜನಾಬ್ ಮುಶ್ರಫ್ ಕಮಾಲ್ ಬಹುಮಾನ ವಿತರಣೆ ಮಾಡಿದರು.
ಸಮಿತಿಯ ಎಲ್ಲಾ ಸದಸ್ಯರು ಬ೦ದ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮವು ಹೈ ಹರಝಾತ್-ಜಿದ್ದಾ-ಕೆ.ಎಸ್.ಎ. ಸ್ಥಳದಲ್ಲಿ ನಡೆದಿತ್ತು.
ವರದಿಯ ವಿವರಗಳು |
 |
ಕೃಪೆ : ಮನ್ಸೂರ್ ಅಲಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-04-05
|
|
|