ಕತಾರ್: ಎಂ.ಪಲ್ಲೊಂಜಿ ತ೦ಡಕ್ಕೆ ತುಳು ಕೂಟ ಕತಾರ್ ಕ್ರಿಕೆಟ್ ಟ್ರೋಫಿ |
ಪ್ರಕಟಿಸಿದ ದಿನಾಂಕ : 2011-03-20
ಕತಾರ್, ಮಾ.20: ಇಲ್ಲಿನ ತುಳು ಕೂಟ ಏರ್ಪಡಿಸಿದ್ದ 4ನೆ ವರ್ಷದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಎಂ.ಪಲ್ಲೊಂಜಿ ಕತಾರ್ ಜಯಗಳಿಸಿದೆ.
ಇಲ್ಲಿನ ಹಳೆ ಐಡಿಯಲ್ ಇಂಡಿಯನ್ ಶಾಲೆ ಮೈದಾನದಲ್ಲಿ ಮಾ.18 ರಂದು ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರಿನ ಹುಡುಗರನ್ನೆ ಹೊಂದಿರುವ ಎಂ. ಪಲ್ಲೊಂಜಿ ತಂಡವು ಕ್ವಲ್ಕೊ ತಂಡ ವನ್ನು 32 ರನ್ಗಳಿಂದ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದ ಎಂ.ಪಲ್ಲೊಂಜಿ ತಂಡವು ಬ್ಯಾಟಿಂಗ್ ಮಾಡಲು ನಿರ್ಧರಿಸಿ ನಿಗದಿತ 15 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 151 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.ತಂಡದ ಪರವಾಗಿ ಶೈಲೇಶ್ 29 ಎಸೆತದಲ್ಲಿ 56 ರನ್ ಮತ್ತು ಅಖಿಲ್ 24 ಎಸೆತದಲ್ಲಿ 26 ರನ್ ಗಳಿಸಿದರು.
ಬೃಹತ್ ಮೊತ್ತವಾದ 152 ರನ್ಗಳ ಗುರಿಯ ಬೆನ್ನತ್ತಿದ ಕ್ವಲ್ಕೊ ತಂಡವು ಆತಂಭದಲ್ಲಿಯೇ ತನ್ನ ಅಮೂಲ್ಯವಾದ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಪಲ್ಲೊಂಜಿ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ನಸೀಬ್ 31 ಮತ್ತು ಸರ್ಫ್ರಾಝ್ 28ರನ್ ಕಲೆಹಾಕಿದರೂ ಅದು ತಂಡವನ್ನು ಗೆಲ್ಲಿಸಲು ಸಾಧ್ಯವಾಗದೆ ಅಂತಿಮವಾಗಿ 119 ರನ್ಗಳಿಗೆ ಆಲೌಟ್ ಆಗಿ 32 ರನ್ಗಳಿಂದ ಸೋಲೊಪ್ಪಿಕೊಂಡಿತು.

ಪಲ್ಲೊಂಜಿ ತಂಡದ ರವಿರಾಜ್ ಮತ್ತು ಜೆರ್ರಿ ತಲಾ ಎರಡು ವಿಕೆಟ್ ಪಡೆದರು. ಶೈಲೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಕತಾರ್ ಕರ್ನಾಟಕ ಸಂಘದ ಝಹೀರ್ ಟೂರ್ನಮೆಂಟ್ನ ಅತ್ಯುತ್ತಮ ಬೌಲರ್, ಕುರ್ರರ್ಮ ಅತ್ಯತ್ತಮ ಬ್ಯಾಟ್ಸ್ಮನ್ ಮತ್ತು ಶೈಲೇಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಟೂರ್ನಿಯ ಪ್ರಾಯೋಜಕರಾದ ಕತಾರ್ ಮಲ್ಟಿಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿಸಾರ್, ಗೋಲ್ಟನ್ ಟ್ರೇಡಿಂಗ್ ಮತ್ತು ಡೆಕೋರೇಟಿಂಗ್ನ ಅಶ್ವಮಂತ್ ಅಲಿ, ರೈಸ್ ಅಂಡ್ ಶೈನ್ ಟ್ರೇಡಿಂಗ್ನ ದಿವಾಕರ್, ಐಸಿಸಿ ಅಧ್ಯಕ್ಷ ಕೆ.ಎಂ. ವರ್ಗೀಸ್ ಮತ್ತು ಐಸಿಬಿಎಫ್ ಅಧ್ಯಕ್ಷ ನಿಲಾಂಶು ದೇ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ತುಳು ಕೂಟದ ಅಧ್ಯಕ್ಷ ರಾಮಚಂದ್ರ ಶೆಣೈ ಸ್ವಾಗತಿಸಿದರೆ,ಕಿರಣ್ ಆನಂದ್ ಕಾರ್ಯಕ್ರಮ ನಿರೂ ಪಿಸಿ, ಉದಯ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಆತಿಥೇಯ ಕತಾರ್ ತುಳು ಕೂಟ, ಕತಾರ್ ಕರ್ನಾಠಕ ಸಂಘ, ಹನನ್ ಇಲೆವೆನ್, ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವಿಸಸ್, ದಕ್ಷಿಣ ಕನ್ನಡ ಮುಸ್ಲಿಂ ಕ್ಷೇಮಾಭಿವೃದ್ದಿ ಸಂಘ, ಕ್ವಲ್ಕೊ, ಮಂಗಳೂರು ಕ್ರಿಕೆಟ್ ಕ್ಲಬ್, ಕ್ಯುಡಿಸಿ, ಪಲ್ಲೊಂಜಿ ಕತಾರ್, ಒಎಹ್ಎಲ್, ಟೆಕ್ ಸಲ್ಯುಷನ್ಸ್, ಕತಾರ್ ಟೆಕ್, ಅಲ್ ಮುಫ್ತ, ಅಲ್ ಫಝರ್ ಅಂಡ್ ಲಗಾನ್ ಸೇರಿದಂತೆ 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿ ದ್ದವು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-03-20
|
|
|