ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2009-03-16
ಒಮಾನ್, ಮಾ. ೯: ಸಲಾಲ ಕರ್ನಾಟಕ ಸಂಘದ ವತಿಯಿಂದ ಅಂತರ್ - ವಿಭಾಗ ಅಂತ್ಯಾಕ್ಷರಿ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಕನ್ನಡ, ಮಲಯಾಳ, ತೆಲುಗು, ಹಿಂದಿ, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಹಿಳಾ ವಿಭಾಗಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಸುಮಾರು ೫ ತಾಸು ನಡೆದ ಈ ರಸಸಂಜೆಯನ್ನು ಮೂಡಬಿದಿರೆಯ ಪಿ. ರಾಮದಾಸ್ ಕಾಮತ್ ಹಾಗೂ ಉಮಾ ಕುಲಕರ್ಣಿ ನಿರ್ವಹಿಸಿದರು. ಶ್ರೀಮತಿ ರಚನಾ ವಿನೋದ್ ಸ್ವಾಗತಿಸಿದರು. ಸಂಘದ ಅಧ್ಯಕ್ಶ ರೊಸಾರಿಯೊ ಸ್ಪರ್ಧೆಯ ವಿವರಗಳನ್ನು ತಿಳಿಸಿದರು. ಹಿಂದಿ ವಿಭಾಗ ಪ್ರಥಮ, ಮಲಯಾಳ ವಿಭಾಗ ದ್ವಿತೀಯ ಹಾಗೂ ಕರ್ನಾಟಕ ವಿಭಾಗ ತೃತೀಯ ಬಹುಮಾನ ಗಳಿಸಿದವು.
ಇಂಡಿಯನ್ ಸೋಶಿಯಲ ಕ್ಲಬ್ ಅಧ್ಯಕ್ಷ ಎಂ.ಪಿ. ಮಂದಣ್ಣ, ಬಹುಮಾನ ವಿತರಿಸಿದರು. ವಿಜಯ ಪೂಜಾರಿ ಮೂಡಬಿದಿರೆ ಅವರು ನಿರ್ಮಿಸಿದ ಕಲಾತ್ಮಕ ವೇದಿಕೆಯು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಡಾ| ಸುಹೈಲ ಹಸನ್ ವಂದಿಸಿದರು. ಜಿ.ಅ. ಪ್ರದೀಪ್ ಸುಬ್ರಹ್ಮಣ್ಯ, ಶ್ರೀಧರ್ ಬಂಗೇರ, ರಮೇಶ್ ಪೂಜಾರಿ, ಮಿರ್ಜ ಬೇಗ್, ಇನ್ನ ಕೃಷ್ಣಮೂರ್ತಿ, ಡಾ| ಉಪಾಧ್ಯಾಯ, ದಿನೇಶ್ ಕುಲಕರ್ಣಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ - ಬರಹ: ರಾಧಿಕಾ ಕಾಮತ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-03-16
|
|
|