ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್

ವಿಶ್ವದಾದ್ಯ೦ತ ಇ೦ದು ಮುಸ್ಲಿಮ್ ಬಾ೦ಧವರ ಪವಿತ್ರವಾದ ರ೦ಜಾನ್ ಹಬ್ಬ ಆಚರಣೆ. ಇ೦ದು ಬೆಳಿಗ್ಗೆಯೇ ಮಸೀದಿಯಲ್ಲಿ ಜನ ಸೇರಿ ವಿಶೇಷ ಈದುಲ್ ಫಿತ್ ರ್ ನಮಾಜ್ ಪ್ರಾರ್ಥನೆ ಸಲ್ಲಿಸಿ ದರು

ಉಡುಪಿಯ ಇ೦ದ್ರಾಳಿಯ ಮಸೀದಿಯಲ್ಲಿ ಜನರು ಸೌಹಾರ್ದತೆಯಿ೦ದ ನಮಾಜ್  ಮಾಡಿ ಪರಸ್ಪರ ಶುಭಾಶಗಳನ್ನು ಕೋರಿದರು.

ಕರಾವಳಿಯಾದ್ಯ೦ತ ಸ೦ಭ್ರಮದ ರ೦ಜಾನ್ ಹಬ್ಬವನ್ನು ಆಚರಿಸಲಾಯಿತು. ಇ೦ದು ಬೆಳಿಗ್ಗೆ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮುಸ್ಲಿ೦ ಬಾ೦ಧವರು ವಿಶೇಷ ನಮಾಜ್ ಸಲ್ಲಿಸಿದರು.

ಉಡುಪಿ ಇ೦ದ್ರಾಳಿ ಸಮೀಪದ ನೂರಾನಿ ಮಸೀದಿಯಲ್ಲಿ ಧರ್ಮದ ಗುರುಗಳಾದ ಮುಸಿಯುಲ್ಲಾ ಖಾನ್ ರವರ ನೇತ್ರತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಇದೇ ಸ೦ದರ್ಭದಲ್ಲಿ ಎಲ್ಲಾ ಮುಸ್ಲಿ೦ ಬಾ೦ಧವರಿಗೆ ರ೦ಜಾನ್ ಹಬ್ಬದ ಶುಭಾಶಯಗಳನ್ನು ಹೇಳಿದವರು, ದೇಶದಲ್ಲಿ ಶಾ೦ತಿ, ನೆಮ್ಮದಿ ನೆಲೆಯೂರಿ ಸರ್ವ ಧರ್ಮಿಯರು ಒ೦ದಾಗಿ ಸೌಹಾರ್ದತೆಯಿ೦ದ ಬಾಳುವ೦ತಾಗಲಿ ಎ೦ದು ದೇವರಲ್ಲಿ ಪ್ರಾರ್ಥಿಸುವೆ ಎ೦ದು ಹೇಳಿದರು.

ದಾನ-ಧರ್ಮಗಳ ಹಬ್ಬ "ಈದ್‌-ಉಲ್‌-ಫಿತರ್‌'
ಇಸ್ಲಾಂ ಧಮೀìಯರ ಪ್ರಮುಖ ಹಬ್ಬಗಳಲ್ಲಿ ಈದ್‌-ಉಲ್‌-ಫಿತರ್‌ ಒಂದು
ಗಣೇಶ ಕುಳಮರ್ವ

ಇಸ್ಲಾಂ ಧಮೀìಯರ ಪ್ರಮುಖ ಹಬ್ಬಗಳಲ್ಲಿ  ಈದ್‌-ಉಲ್‌-ಫಿತರ್‌ ಒಂದು. ಒಂದು ತಿಂಗಳ ರಂಝಾನ್‌ ಅಥವಾ ರಮಾದಾನ್‌ ಉಪವಾಸ ಆಚರಣೆಯ ಅನಂತರ ಈದ್‌- ಉಲ್‌-ಫಿತರನ್ನು ಆಚರಿಸಲಾಗುತ್ತದೆ. ಇಸ್ಲಾಂ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು ಇದಾಗಿರುತ್ತದೆ. ಇಸ್ಲಾಂನ ಐದು ಪ್ರಮುಖ ಕಂಬಗಳಲ್ಲಿ  ಇದು ನಾಲ್ಕನೇಯದ್ದು. ದಾನ-ಧರ್ಮ ಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯವಿದೆ. ಹಾಗೇ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಹಾರೈಸುವುದಕ್ಕೂ ಈ ಹಬ್ಬದಲ್ಲಿ  ಮಹತ್ವ ಹೆಚ್ಚು.

ಬಡವ - ಶ್ರೀಮಂತರೆನ್ನುವ ಭೇದವಿಲ್ಲದೆ ಎಲ್ಲರೂ ಒಂದು ತಿಂಗಳ ಕಠಿಣ ವ್ರತಾಚರಣೆ ನಡೆಸಿ ಹಸಿವಿನ ತೀವ್ರತೆಯ ಬಗ್ಗೆ ಅರಿತು ವಿಶ್ವದ ಮುಸಲ್ಮಾನರೆಲ್ಲ ಸಮಾನರು ಎಂದು ಸಾರುವುದು. ಉಪವಾಸ ಆಚರಣೆಯಿಂದ ಬಡತನದ ಹಸಿವಿನ ಬೇಗೆಯ ಬಗ್ಗೆ ಅರಿವು ಮೂಡಿಸಿ ಬಡವರಿಗೆ ಶ್ರೀಮಂತರು ದಾನ-ಧರ್ಮಗಳನ್ನು ಮಾಡುವಂತೆ ಪ್ರೇರಿಸುವುದು ಹಬ್ಬದ ಆಚರಣೆಯ ಉದ್ದೇಶ ಗಳಲ್ಲಿ  ಒಂದು.

ಇಸ್ಲಾಂ ಧರ್ಮವು ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುತ್ತದೆ ಮತ್ತು ಶ್ರೀಮಂತನು ಬಡವರಿಗೆ ದಾನ-ಧರ್ಮಗಳನ್ನು ಮಾಡುವಂತೆ ಪ್ರೇರಿಸುತ್ತದೆ. ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾಗಿದೆ. ಮುಸ್ಲಿಮರು ಆಚರಿಸುವ ಎರಡೂ ಹಬ್ಬಗಳು ದಾನ ಮಾಡುವುದನ್ನು ಪ್ರೋತ್ಸಾಹಿಸುತ್ತವೆೆ.  ಈದ್‌-ಉಲ್‌-ಫಿತರ್‌ ಸಂದಭೋìಚಿತವಾಗಿ "ಧಾನ್ಯ' ದಾನ ಮಾಡು ಎಂದು ಹೇಳುತ್ತದೆ. ಇದು ಪ್ರತಿಯೊಬ್ಬ ಮುಸಲ್ಮಾನನ ಕಡ್ಡಾಯ ಕರ್ಮವಾಗಿದೆ. ಈದ್‌ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದ ಉದ್ದೇಶವಾಗಿದೆ.

ಪ್ರತಿಯೊಬ್ಬ ಮುಸ್ಲಿàಮನು ತನ್ನ ಈದ್‌ ದಿನದ ಹಗಲಿನ ಮತ್ತು ರಾತ್ರಿಯ ಖರ್ಚಿಗೆ ಬೇಕಾದಷ್ಟು ಸಂಪತ್ತು ಉಳಿಸಿ ಬೇರೇನಾದರೂ ಉಳಿದಲ್ಲಿ ಕಡ್ಡಾಯ ವಾಗಿ ದಾನ‌ ನೀಡಬೇಕು. ಯಾರೆಲ್ಲ  ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನ ಪಡೆಯಲು ಅರ್ಹ ರಾಗಿರುತ್ತಾರೆ. ಆದರೆ ಈ ದಾನ ನೀಡುವುದು ಎಷ್ಟರ ವರೆಗೆ ಕಡ್ಡಾಯ ವಾಗಿರುತ್ತದೆ ಅಂದರೆ, ಮನೆಯಲ್ಲಿ ದಾನ ನೀಡಲು ಹಣ, ಧಾನ್ಯ ಇತ್ಯಾದಿಗಳು ಇಲ್ಲದಿದ್ದರೂ ಪಾತ್ರೆ ಸಾಮಾನುಗಳು ಧಾರಾಳವಾಗಿದ್ದರೆ ಅವು ಗಳನ್ನು ಮಾರಿಯಾದರೂ ದಾನ ನೀಡಬೇಕಾಗಿರುತ್ತದೆ. ಇದು ದಾನಕ್ಕೆ ಮುಸ್ಲಿಮರು ನೀಡಿರುವ ಮಹತ್ವವನ್ನು ಸೂಚಿಸುತ್ತದೆ. 

ದೇಹ ಮತ್ತು ಆತ್ಮ ಶುದ್ಧಿಯಿಂದ ಅಲ್ಲಾನಿಗೆ ಹತ್ತಿರವಾಗುವುದು. ಮಾನಸಿಕವಾಗಿ ತಮ್ಮನ್ನು  ತಾವು ನಿಗ್ರಹಿಸಿಕೊಂಡು ಪರಿಶುದ್ಧ ಮನಸ್ಸಿನ ಪರಿಪೂರ್ಣ ವ್ಯಕ್ತಿಯಾಗುವುದು ಪವಿತ್ರ ರಂಝಾನ್‌ ಮಾಸಾಚರಣೆ ಯ ಹಿಂದಿನ ಮೂಲ ಉದ್ದೇಶ ವಾಗಿದೆ. ಪ್ರತಿಯೊಬ್ಬ ಮುಸಲ್ಮಾನನು ರಂಝಾನ್‌ ಸಂದರ್ಭ ದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಊಟ, ನೀರು, ಕಾಫಿ, ಚಾ, ಫಲಹಾರ ಸೇವನೆ, ಧೂಮಪಾನ, ಕಾಮಕ್ರೀಡೆ ಇತ್ಯಾದಿ ಗಳನ್ನು ಮಾಡಬಾರದು. ಸಿಟ್ಟು, ಕೋಪ-ತಾಪ, ದರ್ಪ, ದ್ವೇಷ, ಅಸೂಯೆ, ಮೋಸ, ವಂಚನೆಗಳಿಂದ ದೂರವಿರಬೇಕು. 

ಪ್ರಮುಖ ಆಚರಣೆ
ಆದಷ್ಟು ಮನಸ್ಸನ್ನು ನಿಗ್ರಹಿಸಿ ಏಕಾಗ್ರತೆ ಮತ್ತು ಶಾಂತಚಿತ್ತವಾಗಿ ಕುರಾನ್‌ ಪಠಣ ಮಾಡು ವುದು. ಒಳ್ಳೆಯ ಆಲೋಚನೆಗಳತ್ತ ಮನಸ್ಸನ್ನು ಕೇಂದ್ರೀಕರಿಸಿ, ಬಡವರಿಗೆ ಸಹಾಯ ಹಸ್ತ ಚಾಚುತ್ತ ಸಮಾಜಕ್ಕೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವುದು.  ಯಾವುದೇ ಸ್ವಾರ್ಥ ವಿಲ್ಲದ ಸೇವೆ ಭಗವಂತನಿಗೆ ಇಷ್ಟ. ಸಾಧ್ಯವಾದಷ್ಟು ಮಟ್ಟಿಗೆ ಅದನ್ನು ನೆರವೇರಿಸುವುದು. ತಮ್ಮ ಕೈಲಾದಷ್ಟು ಬಂಧು ಬಳಗ, ಸ್ನೇಹಿತರನ್ನು ಭೇಟಿ ಮಾಡಿ ಶುಭ ಹಾರೈಸುವುದು. ರಂಝಾನ್‌ ಉಪವಾಸದ ಸಂದರ್ಭದಲ್ಲಿ ಯಾವುದೇ ವಿಧದ ಮನೋರಂಜನಾ ಚಟುವಟಿಕೆಗಳಿಗೆ ಅವಕಾಶ ವಿಲ್ಲ. ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಗೀತಗಳನ್ನು ಹಾಕಬಾರದು ಮತ್ತು ಕೇಳಬಾರದು. ಕಳ್ಳತನ, ಮೋಸ, ದ್ರೋಹ, ರೋಷಕ್ಕೆ ಕಡಿವಾಣ ಹಾಕಬೇಕು. ತಾವು ಉಳಿಸಿದ ಹಣದಲ್ಲಿ ಒಂದು ಸಣ್ಣ ಭಾಗವನ್ನಾದರೂ ಬಡವರಿಗೆ ಸಹಾಯಾರ್ಥವಾಗಿ ನೀಡಬೇಕು.  ರಂಝಾನ್‌ ಮಾಸದಲ್ಲಿ  ಕನಿಷ್ಠನಕ್ಕೆ ಐದು ಬಾರಿಯಾದರೂ ನಮಾಜ್‌ ಮಾಡಬೇಕು. ಮಸೀದಿಗೆ ಹೋಗಿ ನಮಾಜ್‌ ಮಾಡಲು ಸಾಧ್ಯವಾಗದ್ದಿರೆ, ತಮಗೆ ಅನುಕೂಲವಾದ ಸ್ಥಳದಲ್ಲಿ  ಮಾಡಬಹುದು.

ಖರ್ಜೂರ ಸೇವನೆಗೆ ಮಹತ್ವ

ರಂಝಾನ್‌ ಉಪವಾಸದ ಸಂದರ್ಭದಲ್ಲಿ  ಖರ್ಜೂರ ಸೇವನೆಗೆ ಬಹಳ ಮಹತ್ವವಿದೆ. ಉಪವಾಸ ವ್ರತ ಕೈಗೊಂಡ ಮುಸಲ್ಮಾನರು ಉಪವಾಸ ಬಿಡಲು ಖರ್ಜೂರವನ್ನೇ ಬಳಸು­ವುದು ಧಾರ್ಮಿಕ ವಿಧಿಯ ಭಾಗಗಳಲ್ಲೊಂದು. ಆದರೆ ಅಷ್ಟೇ ವೈಜ್ಞಾನಿಕ ಹಿನ್ನೆಲೆಯೂ ಇದೆ ಎಂಬುದು ಗಮ­ನಾರ್ಹ. ಮ­ರಳು­ಗಾಡಿನಲ್ಲಿ ಬೆಳೆ­ಯುವ ಈ ಸ್ವಾದಿಷ್ಟ ಹಣ್ಣು ಅತ್ಯಧಿಕ ಪೋಷಕಾಂ­ಶಗಳನ್ನು ಹೊಂದಿರು­ವುದೇ ಇದರ ವೈಶಿಷ್ಟ್ಯವಾಗಿದೆ. ಮ­ನುಷ್ಯ ಉಪವಾಸದ ಸಂದರ್ಭ­ದಲ್ಲಿ ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗು­ತ್ತದೆ. ಉಪವಾಸ ಬಿಡುವ ಹೊತ್ತಿಗೆ ಖರ್ಜೂರವನ್ನು ಬಳಸು­ವು­ದರಿಂದ ನರನಾಡಿಗಳ ಚಟು­ವಟಿಕೆ­ಗಳು ಉತ್ತೇ­ಜನಗೊಂಡು, ಸಕ್ಕರೆಯ ಅಂಶಗಳನ್ನು ಸಮ­ತೋಲನಕ್ಕೆ ತರು­ತ್ತದೆ. ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿರುವ ಖಜೂìರ ದೇಹದ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಅತ್ಯಧಿಕ ಪೋಷಕಾಂ­ಶಗಳನ್ನು ಹೊಂದಿರುವ ಖರ್ಜೂರ ಹಲವು ಪ್ರಮುಖ ರೋಗಗಳಿಗೆ ರಾಮ­ಬಾಣವೂ ಹೌದು.

ಒಣ ಖರ್ಜೂರಗಳೂ ಅತ್ಯಂತ ಸ್ವಾದಿಷ್ಟಕರವಾಗಿದ್ದು, ರಂಝಾನ್‌  ಇಫ್ತಾರ್‌ ತಿನಿಸಿನಲ್ಲಿ ಇದಕ್ಕೆ ಅಗ್ರಗಣ್ಯ ಸ್ಥಾನವಿದೆ. ಕ್ಯಾಲ್ಸಿಯಂ, ಸಲ–ರ್‌, ಕಬ್ಬಿಣ, ಪೊಟಾಷಿಯಂ, ಮ್ಯಾಂ­ಗನೀಸ್‌ ಮುಂತಾದ ಲವಣಾಂ­ಶಗಳನ್ನೊಳಗೊಂ­ಡಿರುವ ಖರ್ಜೂರ ಹಣ್ಣಿನಲ್ಲಿ ನೈಸರ್ಗಿಕ ಗ್ಲುಕೋಸ್‌ ಅಂಶಗಳು ಧಾರಾಳವಾಗಿವೆ. ಹಸಿವಿನಲ್ಲಿರು­ವವರಿಗೆ ಸಿಹಿಯ ನೈಜ ಅನು­ಭವವನ್ನು ನೀಡಬಲ್ಲ  ಖರ್ಜೂರದಲ್ಲಿ 20 ಸ್ತರದ ಆಮ್ಲಗಳಿದ್ದು, ಜೀ­ರ್ಣ­ಶಕ್ತಿಗೆ ಪ್ರಚೋ­ದನೆ­ಯನ್ನು ನೀಡು­ತ್ತವೆ.

ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬವು ಶುಭವನ್ನು  ಉಂಟುಮಾಡಲಿ. ಇನ್ನು  ಮುಂದೆಯೂ ಹೆಚ್ಚಿನ ಪ್ರಮಾಣದಲ್ಲಿ ದಾನ-ಧರ್ಮಗಳನ್ನು ಮಾಡುವ ಶಕ್ತಿ ಸರ್ವಶಕ್ತನಾದ ಅಲ್ಲಾನು ನೀಡಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-10 00:00:00

Tell a Friend

ಪ್ರತಿಸ್ಪಂದನ
mohsin belapu, udupi
2010-09-10
WISH U a HAPPY EID MUBARAK
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
»ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
»ಅಖಿಲ ಭಾರತ ಬಿಲ್ಲವರ ಯೂನಿಯನ್ ಗೆ 100ರ ಸಂಭ್ರಮ:ಫೆ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ
»ಸ್ಟ್ರಿಂಗ್ ಝೂಕ್ ನಲ್ಲಿ ಅತಿರೇಕವಾಗಿದ್ದರೆ ಕರ್ತವ್ಯದಲ್ಲಿದ್ದವರಿಂದ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು
»ಹೋಟೆಲ್ ಕಿದಿಯೂರ್ ರಜತ ಮಹೋತ್ಸವ ಉದ್ಘಾಟನೆ
»ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
»ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೋಮು ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ: ಸಿಂಘಾಲ್‌
»ಮೂಡಬಿದಿರೆ ಪುರಸಭೆಗೆ ’ವರ್ಲ್ಡ್ ವಾಟರ್‌ ಅವಾರ್ಡ್‌’
»ಪೆರುಂಬಳ ದುರಂತ: ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳ ಸಾವು
»ಬಿ.ಸಿ.ರೋಡ್: ಪೈಪ್‌ಲೈನ್ ಒಡೆದು ಪೋಲಾಗುತ್ತಿರುವ ನೀರು
»ಬೆಂಡರವಾಡಿಗೆ ‘ಪನ್ನಾಭ ಪುರಸ್ಕಾರ’
»ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷರ ಪದಗ್ರಹಣ
»ಫೆ.11-12: ಮಂಗಳೂರು ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬ
»‘ಅಲ್‌ಪೈನ್ ಅಸೋಸಿಯೇಟ್ಸ್’ಗೆ ನಾಲ್ಕನೆ ವರ್ಷದ ಸಂಭ್ರಮ: ಆಯುರ್ವೇದ-ಯುನಾನಿ ಔಷಧಿಗಳು, ತಜ್ಞರಿಂದ ಚಿಕಿತ್ಸೆ
»ಪುತ್ತೂರು: ಯಕ್ಷಗಾನ ಬಯಲಾಟ ಸಪ್ತಾಹ ಉದ್ಘಾಟನೆ
»ವಿರೋಧದ ನಡುವೆಯೂ ಸೂಲಿಬೆಲೆ ಭಾಷಣ...
»ಹೋಟೆಲ್ ಕಿದಿಯೂರ್ ರಜತ ಸಂಭ್ರಮ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಬೃಹತ್ ಹೊರಕಾಣಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri