ಉಡುಪಿ: ಎರಡನೇ ದಿನದ ಮಕ್ಕಳ ಸಾಹಿತ್ಯ ಸಮ್ಮೇಳನ : ಪ್ರತಿಯೊಂದು ಮಗುವಿನ ಅಳು, ನಗು, ನಡೆ, ಕೋಪ ಎಲ್ಲವೂ ಕವಿತೆಗಳೇ |
ಪ್ರಕಟಿಸಿದ ದಿನಾಂಕ : 2010-09-09
ಸ್ನೇಹ, ಪ್ರೀತಿ, ಗಣಪತಿ, ಪರಿಸರ, ಮಳೆ, ಕಡಲತಡಿ, ನೆನಪು, ಹಬ್ಬ ಎಲ್ಲವನ್ನು ಮಕ್ಕಳು ತಮಗೆ ತೋಚಿದಂತೆ ಕವಿತೆಯಾಗಿಸಿದ್ದರು.
ಅವರ ಸಂಭ್ರಮಕ್ಕೆ ಕವಿಗೋಷ್ಠಿ ಕಾರಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಂಗಮ ಉಡು ಪಿಯ ಯು .ಕಮಲಾಭಾಯಿ ಪ್ರೌಡ ಶಾಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ೧೭ ನೇಯ ಮಕ್ಕಳ ಧ್ವನಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಕವಿಗೋಷ್ಟಿ ಸಮ್ಮೇಳನಕ್ಕೆ ಕಳೆಕೊಟ್ಟಿತು.

೨೦ ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದರು.
ಸುವ್ರತ ಅಡಿಗ, ಮಾಣೂರು, ಸುರೇಶ ಕುಂದರ್ ಕೋಡಿ ಕನ್ಯಾನ, ಪ್ರಗತಿ ಎನ್. ಗಿಳಿಯಾರು, ಮಧು. ಸಿ.ಎನ್ ಸುಳ್ಯ, ಎ. ಪಲ್ಲವಿ ಗಿಳಿಯಾರು, ಪ್ರಿಯಶ್ರೀ ಭಟ್, ಸುಳ್ಯ, ಸೌಮ್ಯ ಗುಂಡ್ಮಿ, ಟಿ. ಸುಶ್ಮಿತಾ ಪೈ, ಕೋಟ, ಪಲ್ಲವಿ ಎ.ಪೆರ್ಲ, ಪ್ರತೀಕ್ಷಾ ಎನ್ ಕೋಟ್, ಗೌರವ್ ಉರ್ವ, ಮಂಗಳೂ ರು, ಕಾವ್ಯ. ಸಿ. ಚಿತ್ರಪಾಡಿ, ಪೂರ್ಣಿಮಾ ಕಾರ್ಕಳ, ಚಿನ್ಮಯಿ ಪಾವಟೆ ಉಜಿರೆ, ಅಶ್ವಿತಾ ಕೆ.ಸುಳ್ಯ, ಸಮೀಕ್ಷಾ ಟಿ.ಎ, ಉಜಿರೆ, ಅನುಪಮ ಸುಳ್ಯ, ಶ್ರೀ ವಿದ್ಯಾ, ಕಟೀಲು, ಪ್ರಿಯಾ ಹಳೆಯಂಗಡಿ, ಇಂಚರಾ ಕಟೀಲು, ರಾಮಾಂಜಿ ನಮ್ಮ ಭೂಮಿ ಕವಿಗಳಾಗಿದ್ದರು.

ಪ್ರತಿಯೊಂದು ಮಗುವಿನ ಅಳು, ನಗು, ನಡ್ಕೆ, ಕೋಪ ಎಲ್ಲವೂ ಕವಿತೆಗಳೇ ಆಗಿದೆ. ಪ್ರತಿಯೊಂ ದು ಮಗು ಕವಿತೆ ಎಂದು ಹಿರಿಯ ಸಾಹಿತಿ, ಕವಿ ಡಾ.ನಾ.ಮೊಗಸಾಲೆ ಹೇಳಿದರು.
ಪ್ರತಿಯೊಂದು ಮಗುವು ಒಂದು ಸುಂದರವಾದ ಕವಿತೆ ಎಂದ ಅವರು ಮಕ್ಕಳ ಕವಿತೆಗಳು ಮುದ ನೀಡಿದವು ಎಂದ ಅವರು ಕವಿಗಳಿಗೆ ಶುಭ್ ಹಾರೈಸಿದರು.

ಮಾನಸಿಕ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ವಿಜ್ರಂಭಿಸುತ್ತಿದೆ. ಆದರೆ ಸ್ರಜನಶೀಲತೆ ಯನ್ನು ಬೆಳೆಸ ಬಲ್ಲ, ವ್ಯಕ್ತಿತ್ವವನ್ನು ವಿಕಶಿಸಬಲ್ಲ ಸಾಮರ್ಥ್ಯ ಇರುವ ಸಾಧ್ಯತೆ ಇರುವುದು ಕನ್ನಡ ಮಾಧ್ಯಮದಲ್ಲಿ ಮಾತ್ರ. ನಾವು ತಾಯಿ ಭೂಮಿಯನ್ನು-ತಾಯಿ ಭಾಷೆಯನ್ನು ಪ್ರೀತಿಸೋಣ ಎಂದು ಅಧ್ಯಕ್ಷತೆ ವಹಿಸಿದ್ದ ಕೋಟದ ಕು, ತ್ರಪ್ತಿ ಕೆ.ಆರ್ ಹೇಳಿದರು.

ಚೇತನ್ ನೀರೆ ನಿರೂಪಿಸಿದರು, ಪ್ರಣಮ್ಯ ಹೆಗ್ಡೆ, ಕಾರ್ಕಳ, ಸ್ವಾಗತಿಸಿದರು. ಸಂಗೀತಾ ವಂದಿಸಿ ದರು.
ಕವಿತೆಯ ಕೆಲವು ಸಾಲುಗಳು:
ಆದರೆ ಈಗೇನು ಮಾಡಲಿ
ದೇವರು ಮಾನವನನ್ನಾಗಿ ಮಾಡಿ ಅದ ಮೇಲೆ
ಮನಸ್ಸಿನ ತುಂಬಾ ಆಸೆಯೇ ಆಸೆ-
ಚಿನ್ಮಯಿ ಪಾವಟೆ
ನ್ರರೆಂಟು ಬಗೆಯ ಆರಾಧನೆಯಲ್ಲೂ
ಇರೋ ದೇವನೋ ಒಬ್ಬನೇ
ಹಲವು ಬಣ್ಣಗಳ ಹೂವುಗಳಿದ್ದರೂ
ಅದು ಬೆಳೆಯುವ ಭುವಿಯು ಒಚಿದೇ ತಿಳಿದಿರಲಿ
ಮಾನವರೆಂಬುದ ವ್ಮರೆಯದಿರಲಿ
ಸಮೀಕ್ಷಾ ಟಿ.ಏ, ಉಜಿರೆ
ಹನಿಯಾಗಿ ಬಂದ ಸ್ನೇಹ ನದಿಯಾಗಿ ಹರಿಯಲಿ
ಸಮುದ್ರಕ್ಕೆ ಒಂದು ಕಣ್ಣೀರು ಬಿತ್ತು
ಅದು ಸಿಗುವವರೆಗೆ ನನ್ನ ಮರೆಯದಿರಲಿ
ವರದಿಯ ವಿವರಗಳು |
 |
ಕೃಪೆ : ರಾಜ್ ಶೆಖರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|