ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್ ಷರೀಫ್ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ |
ಪ್ರಕಟಿಸಿದ ದಿನಾಂಕ : 2010-09-07
ಬೆಂಗಳೂರು : ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ. ಪಕ್ಷದ ಎಲ್ಲ ಪ್ರಮುಖ ಹುದ್ದೆಗಳು ವಲಸಿಗರ ಪಾಲಾಗಿ, ಮೂಲ ಕಾಂಗ್ರೆಸ್ಸಿಗರು ಮೂಲೆಗುಂಪಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಧುರೀಣ ಸಿ.ಕೆ. ಜಾಫರ್ ಷರೀಫ್ ಬಹಿರಂಗವಾಗಿ ಅಪಸ್ವರ ಎತ್ತಿದ್ದಾರೆ.
ಪಕ್ಷದಲ್ಲಿ ನಾಯಕರ ನಡುವೆ ಮುಂದುವರಿದಿದ್ದ ಶೀತಲ ಸಮರ, ಮುಸುಕಿನ ಗುದ್ದಾಟಕ್ಕೆ ಬಳ್ಳಾರಿ ಪಾದಯಾತ್ರೆ ಯಶಸ್ಸಿನಿಂದ ತೆರೆಬಿದ್ದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸತ್ಯ ರಾಜ್ಯ ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ ಎಂಬ ನಿರೀಕ್ಷೆ ಇದರಿಂದ ಹುಸಿ ಯಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಹೊಸ ಅಧ್ಯಕ್ಷರ ನೇಮಕದ ದಿನಗಳ ಸಮೀಪಿಸಿದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಮತ್ತೂಮ್ಮೆ ವಲಸಿಗರು ಮತ್ತು ಮೂಲಕಾಂಗ್ರೆಸ್ಸಿಗರು ಎಂಬ ವಾದಕ್ಕೆ ಇಂಬು ಸಿಕ್ಕಿದೆ.
ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪಾಗಿದ್ದಾರೆ. ವಲಸಿಗರ ಕೈಗೆ ಸಿಲುಕಿ ಪಕ್ಷ ಹಾಳಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು, ವಿಧಾನಸಭೆ ವಿರೋಧಪಕ್ಷದ ನಾಯಕರು, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಆಯಕಟ್ಟಿನ ಹುದ್ದೆಗಳೂ ವಲಸಿಗರ ಪಾಲಾಗಿವೆ ಎಂದು ಜಾಫರ್ ಷರೀಫ್ ಏಕಾಏಕಿ ಬಹಿರಂಗವಾಗಿ ಭಿನ್ನಮತದ ಧ್ವನಿ ಎತ್ತಿದ್ದಾರೆ.
ವಲಸಿಗರಿಗೆ ಸಿಕ್ಕಿರುವ ಮನ್ನಣೆ ಮತ್ತು ಅವಕಾಶಗಳು ಪಕ್ಷಕ್ಕಾಗಿ ಜೀವನವಿಡೀ ನಿಷ್ಠೆಯಿಂದ ದುಡಿದವರಿಗೆ ಸಿಕ್ಕಿಲ್ಲ . ಈಗಿನ ಕೆಪಿಸಿಸಿ ಅಧ್ಯಕ್ಷರೂ ವಲಸಿಗ ಮುಖಂಡರಿಗೇ ಮನ್ನಣೆ ನೀಡುತ್ತಿದ್ದಾರೆ. ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ನಲ್ಲಿರುವ ಮುಖಂಡ ರೊಂದಿಗೆ ಮಾತ್ರವೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರೂ ಭ್ರಮನಿರಶನ ಗೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮತ್ತು ಮೂಲ ಕಾಂಗ್ರೆಸ್ಸಿಗರಿಗೆ ಮನ್ನಣೆ ಸಿಗದಿದ್ದರೆ, ರಾಜ್ಯದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದಿಢೀರನೆ ಈಗ ಈ ವಿಚಾರ ಪ್ರಸ್ತಾಪ ಏಕೆ ಎಂಬ ಕುರಿತು 'ಉದಯವಾಣಿ'ಗೆ ಪ್ರತಿಕ್ರಿಯೆ ನೀಡಿದ ಷರೀಫ್, ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕರ ಆಯ್ಕೆ ಆಗಬೇಕಾಗಿದೆ. ಹೀಗಾಗಿ, ಇದು ಸೂಕ್ತ ಸಮಯವಾಗಿದೆ ಎಂದು ಈ ವಿಚಾರಗಳನ್ನು ಮುಚ್ಚುಮರೆ ಇಲ್ಲದೆ ನೇರವಾಗಿ ಪ್ರಸ್ತಾಪಿಸಿದ್ದೇನೆ. ಪಕ್ಷದ ತತ್ವ , ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿರುವ ಮೂಲ ಕಾಂಗ್ರೆಸ್ಸಿಗರಿಗೆ ಅವಕಾಶಗಳು ಸಿಗಬೇಕು ಎಂಬುದು ತಮ್ಮ ಆಶಯ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷದ ಒಳಿತಿಗಾಗಿ ಹೇಳಬೇಕಾದ್ದನ್ನು ನೇರ ಮಾತುಗಳಲ್ಲಿ ಹೇಳಿದ್ದೇನೆ. ಈ ಕುರಿತು ಪಕ್ಷದಲ್ಲಿ ಚರ್ಚೆಗಳು ನಡೆಯಲಿ ಎಂದರು.
ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷಿಸಿಲ್ಲ : ದೇಶಪಾಂಡೆ
ಜಾಫರ್ ಷರೀಫ್ ಅವರು ಪಕ್ಷದ ಹಿರಿಯ ಮುಖಂಡರು. ಅವರ ನಿರ್ದೆàಶನದಲ್ಲಿಯೇ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ತಾವು ನಡೆಸಿರುವ ಸಭೆಗಳಲ್ಲಿ ಎಲ್ಲ ನಾಯಕರೂ ಭಾಗವಹಿಸಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದರು.
ಮನೆಯ ವಿಚಾರವನ್ನು ಮನೆಯಲ್ಲಿ ಕುಳಿತು ಮಾತನಾಡಬೇಕು. ಆದರೆ, ಷರೀಫ್ ಅವರು ಈ ರೀತಿ ಮಾತನಾಡಿದ್ದಾರೆ ಎಂದು ತಾವು ಭಾವಿಸುವುದಿಲ್ಲ . ಈ ಕುರಿತು ಅವರೊಂದಿಗೇ ಮಾತನಾಡುವೆ. ನಾನಂತೂ 1971 ರಲ್ಲಿಯೇ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ಷರೀಫ್ ಅವರು ಹೇಳಿರಲಾರರು ಎಂದರು.
ವರದಿಯ ವಿವರಗಳು |
 |
ಕೃಪೆ : Udayavani ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-07 00:00:00
|
|
| M.SABIR, DUBAI | 2010-09-09 | | Mr.Sharif,why should they consult you,what capacity you have.You ara a use less politician,every congress leaders know that. You did not helped any community in your time period ...that time you did only money and property. Now your time is over aged take rest. |
| ರೋಶನ್ , ಮಂಗಳೂರು | 2010-09-08 | | ಮೂಲ ಕಾಂಗ್ರೆಸಿಗರು ಮೂಲೆ ಗುಂಪು, ಮಾನ್ಯ ಜಾಫರ್ ಷರೀಫ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಿಮ್ಮ ಅಧಿಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕಿದಷ್ಟು ರೈಲ್ವೆ ಸವಲತ್ತು ಇನ್ನ್ಯಾವ ರಾಜ್ಯಗಳಿಗೂ ಸಿಗಲಿಲ್ಲ. ನಿಮ್ಮನ್ನು ಕರ್ನಾಟಕ ರಾಜ್ಯದ ಜನತೆ ಇಂದಿಗೂ ನೆನೆಸಿಕೊಳ್ಳುತ್ತಾರೆ. ಅಂದಿನ ದಿನಗಳಲ್ಲಿ ತಾವು ಸಲ್ಲಿಸಿದ ಸೇವೆ ಇಂದಿಗೂ ತಮ್ಮನ್ನು ಗೌರವದ ಸ್ಥಾನದಲ್ಲೆ ಇರಿಸಿದೆ. ತಮಗೆ ಸಾಂತ್ವಾನ ಹೇಳಿರುವ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ತಾವು ಕೊಳ್ಳೆ ಹೊಡೆದ ನೆರೆ ಸಂತ್ರಸ್ತರ ನಿಧಿಯ ಲೆಕ್ಕವನ್ನು ರಾಜ್ಯದ ಜನತೆಯ ಮುಂದೆ ಇಡಲಾಗದ ಸ್ಥಿತಿಯಲ್ಲಿರುವಾಗ, ಇನ್ನು ಯಾವ ರೀತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಡೆಸುವ ತಾಕತ್ತಿದೆ. ಬಳ್ಳಾರಿಯಲ್ಲಿ ನಡೆದ ಇವರ ದೊಂಬರಾಟ ಪೂರ್ತಿ ಜಗತ್ತೆ ನೋಡಿದೆ. ಒಟ್ಟಿನಲ್ಲಿ ನಿಮ್ಮ ಕಾಂಗ್ರೆಸ್ ಪಕ್ಷ ನರಸತ್ತಂತಾಗಿದೆ. ಇನ್ನು ರಾಜ್ಯದ ಹೆಚ್ಚಿನ ಜನತೆ ಒಪ್ಪೊತ್ತಿನ ಊಟಕ್ಕೆ ಇಲ್ಲದೆ ಪರದಾಡುತ್ತಿರುವಾಗ ಸಿದ್ದರಾಮಯ್ಯನವರು ತಟ್ಟೆ ಇಟ್ಟುಕೊಂಡು ದನದ ಮಾಂಸ ತಿನ್ನುತ್ತೇನೆ ಎಂದು ಬರ್ಜರಿಯಾಗಿ ಹೊಟ್ಟೆ ತುಂಬಿಸಿಕೊಳ್ಳುತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕಥೆ, ಹುಚ್ಚಿ ಮುಂಡೆ ಮದುವೆಲಿ ಉಂಡವನೆ ಜಾಣ. |
| ಶರತ್ ಕುಮಾರ್ , ಉಡುಪಿ | 2010-09-07 | | Mr. Saif, Ajman.... ನೀವೊಬ್ಬ ಅಪ್ಪಟ, ಪರಿಶುದ್ದ ಭಾರತೀಯ!!! ಭಾರತಮಾತೆಯ ಹೆಮ್ಮೆಯ ಸುಪುತ್ರ!! certainly you are the Great and Great Indian!! ನಿಮ್ಮ ನಿಷ್ಪಕ್ಷಪಾತದ ಮಾತು, ನೇರ ಹಾಗೂ ನಿರ್ಭೀತ ನುಡಿ.... ಹೆಮ್ಮೆಯಾಗುತ್ತಿದೆ ನಿಮ್ಮಮೇಲೆ. ಇದ್ದದ್ದನ್ನು ಇದ್ದಂತೆ ನುಡಿಯುವ ಛಾತಿ ಎಲ್ಲರಿಗೂ ಇರುವುದಿಲ್ಲ. ಅದೂ ತಾನು ಹುಟ್ಟಿದ ನೆಲ ಹಾಗೂ ತನ್ನ ದೇಶದಲ್ಲಿ ಕೊಳೆತುನಾರುತ್ತಿರುವ ರಾಜಕೀಯದ ವಿಷಯ ಬಂದಾಗ. Bravo!!! my honorable salute to you. |
| Saif, Ajman | 2010-09-07 | | Mr Sheriff, where is Congress? it is dead & gone in 1947 itself! What u have is only duplicate Congress with corrupt, immature & physically handicapped herd of people! See the latest party supremos election - The Congress could not find one able person to lead them out of 105 crores Indian people & again banked upon imported, inexperienced, aged widow to show them where to go & how to work! NOTE: The meaning of the words is not to demean but to be understood as; Imported = Foriegner, Inexperienced = She neither had any political experience earlier or even now do not have any experience as a grass root level worker, aged = Her age is the retirement age for public beurocrats! |
|