ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ |
ಪ್ರಕಟಿಸಿದ ದಿನಾಂಕ : 2010-09-07
ಕ್ಯಾರಿ ಓವರ್ ಪದ್ಧತಿ ವಿದ್ಯಾರ್ಥಿಗಳ ಪ್ರತಿಭಟನೆ
ಉಡುಪಿ , ಸೆ, 7: ಮ೦ಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪದ್ದತಿಯಲ್ಲಿರುವ ದೋಷ ವನ್ನು ಸರಿಪಡಿಸುವ ಬಗ್ಗೆ ವಿದ್ಯಾರ್ಥಿ ಸಮುದಾಯದ ಉಡುಪಿ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸ೦ಘ ಟನೆಯವರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಕ್ರೆಡಿಟ್ ಬೇಸ್ಡ್ ಸೆಮಿಸ್ಟರ್ ಪದ್ಧತಿ ವಿರೋಧಿಸಿ ಮಂಗಳವಾರ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕುಂಜಿಬೆಟ್ಟಿನಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಧಿ ಕಾರಿ ಕಚೇರಿ ಸಮೀಪ ಸಮಾಪನಗೊಂಡಿತು. ಉಡುಪಿ ಆಸುಪಾಸಿನ ಕಾಲೇಜುಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ.




ಯಾವುದೇ ಸೆಮಿಸ್ಟರ್ನ ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡರೆ ಅದನ್ನು ಬರುವ ವರ್ಷದ ಅದೇ ಸೆಮಿಸ್ಟರ್ನಲ್ಲಿ ಬರೆಯಬೇಕು. ಈ ಪದ್ಧತಿಯಿಂದ ಅಂತಿಮ ವರ್ಷದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಒಂದು ವರ್ಷ ಹಾಳಾಗುತ್ತದೆ. ಅಂತಿಮ ಎರಡು ಸೆಮಿಸ್ಟರ್ ನ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಕೂಡಲೇ ಅವಕಾಶ ನೀಡಬೇಕೆಂದು ಜಿಲ್ಲಾಧಿ ಕಾರಿಗಳ ಮೂಲ ಕ ಒತ್ತಾಯಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|