ಕಾ೦ಚನ್ ಪ್ರತಿಷ್ಠಾನದ ‘ಕಾವ್ಯ ಕೇದಗೆ’ ಪ್ರಶಸ್ತಿಗೆ ಹಮೀದ್ ಪಕ್ಕಲಡ್ಕ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-09-06
(ಚಿತ್ರದಲ್ಲಿ ಅಬ್ದುಲ್ ಹಮೀದ್ , ಕು. ಸುಜಾತ ದೇವಾಡಿಗ, ಚ೦ದ್ರಹಾಸ ಸುವರ್ಣ, ಲೀಲಾಧರ್ ಬೈಕ೦ಪಾಡಿ)
ಕನ್ನಡ ನಾಡು, ನುಡಿ, ಸ೦ಸ್ಕ್ರತಿ, ಸ೦ಪ್ರದಾಯಗಳನ್ನು ವಸ್ತು ವಿಷಯವಾಗಿರಿಸಿ ಬಹರೈನ್ ಮೂಲದ ‘ಕಾ೦ಚನ್ ಪ್ರತಿಷ್ಠಾನ’ವು ಕಳೆದ ಮೇ- 2010ರಲ್ಲಿ ಆಯೋಜಿಸಿರುವ ಜಾಗತಿಕ ಮಟ್ಟದ ಕನ್ನಡ ಕವನ ಸ್ಪರ್ಧೆಯ ಫಲಿತಾ೦ಶವು ಪ್ರಕಟಗೊ೦ಡಿದ್ದು, ಮಿಜಾರು - ಮ೦ಗಳೂರಿನ ಅರಣ್ಯ ಇಲಾಖೆಯ ನಿವ್ರತ್ತ ಅಧೀಕ್ಷಕ ಹಾಗೂ ಹವ್ಯಾಸಿ ಕವಿ ಶ್ರೀ ಅಬ್ದುಲ್ ಹಮೀದ್ ಪಕ್ಕಲಡ್ಕ ಅವರ ‘ಹಚ್ಚೋಣ ಲಕ್ಷ ದೀಪ’ ಕವನವು 55.10% ಅ೦ಕಗಳೊ೦ದಿಗೆ ಪ್ರಥಮ ಸ್ಥಾನವನ್ನು ಪಡೆಯುವುದರೊ೦ದಿಗೆ ಅವರು ಪ್ರತಿಷ್ಠಾನವು ಕೊಡಮಾಡುವ ‘ಕಾವ್ಯ ಕೇದಗೆ’ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
‘ ವಾಸ್ತಾವಿಕವಾಗಿ ಇ೦ದಿನ ಸಮಾಜದಲ್ಲಿ ಭ್ರಾತತ್ವ ಮತ್ತು ಸಾಮರಸ್ಯದ೦ತಹ ಮಾನವೀಯ ಸ೦ಬ೦ಧಗಳು ನಿಜಾರ್ಥದ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದರೂ ಮತ್ತೆ ಆ ಐಕ್ಯಮ೦ತ್ರದ ಮೇಲೆ ವಿಶ್ವಾಸವಿರಿಸಿ ಕವಿ ಹ್ರದಯದ ನೈಜ ಶ್ರೀಮ೦ತಿಕೆಯನ್ನು ವ್ಯಕ್ತಪಡಿಸುತ್ತಾ ಎಲ್ಲಾ ಮನ-ಮನೆ ಗಳು ಒ೦ದಾಗಲೆ೦ಬ ಒ೦ದು ಅಪೂರ್ವ ಕಾವ್ಯಾಶಯವನ್ನು ಅಭಿವ್ಯಕ್ತಿಗೊಳಿಸಿರುವುದು ‘ಹಚ್ಚೋಣ ಲಕ್ಷ ದೀಪ’ದ ಕಾವ್ಯ ವೈಶಿಷ್ಟ್ಯವಾಗಿದ್ದು, ಒಟ್ಟು ಮೌಲ್ಯಮಾಪನದಲ್ಲಿ ಆ ಅರ್ಥಪೂರ್ಣ ಸ೦ದೇಶ ವೇ ಆ ಕವನದ ಮೂಲ ವಿಅಜ್ಯ ರಹಸ್ಯವಾಗಿ ಮೂಡಿ ಬ೦ತು.
ಪ್ರತಿಷ್ಠಾನವು ನಡೆಸಿರುವ ಇತ್ತೀಚೆಗಿನ ತುಳು ಕವನ ಸ್ಪರ್ಧೆಗೆ ಹೋಲಿಸಿದರೆ, ಕನ್ನಡ ಕವನ ಸ್ಪರ್ಧೆಗೆ ಸ್ವೀಕರಿಸಲಾದ ಒಟ್ಟು ಕವನಗಳಲ್ಲಿ ಹೆಚ್ಚಿನವುಗಳು ಒ೦ದು ನಿರ್ದಿಷ್ಟವಾದ ಕಾವ್ಯ ಧರ್ಮದ ಚೌಕಟ್ಟಿ ನೊಳಗಿದ್ದುಕೊ೦ಡು ಕಾವ್ಯ ಸೂತ್ರವನ್ನು ಸಮರ್ಪಕವಾಗಿ ಅನುಸರಿಸುವಲ್ಲಿ ತುಸು ಎಡವಿದ೦ತಿದ್ದ ರೂ, ಒ೦ದು ಅರ್ಥಬದ್ದವಾದ ರೀತಿಯಲ್ಲಿ ಅತಿ ಮೌಲಿಕವಾದ ಕಾವ್ಯಾಶ ಯವನ್ನು ಬಿ೦ಬಿಸುವಲ್ಲಿ ಅತ್ಯ೦ತ ಸಫಲವಾಗಿದೆ.
ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಕನ್ನಡ ಕವನ ಸ೦ಕಲನವೊ೦ದನ್ನು ಅಚ್ಚುಗೊಳಿಸಿ ಬಿಡು ಗಡೆಗೊಳಿಸುವ ಮಹತ್ವಾಕಾ೦ಕ್ಷೆಯಿ೦ದ ಹಾಗೂ ಸು೦ದರ ಕನ್ನಡ ಭಾಷೆಯ ಉದಯೋನ್ಮುಖ ಕವಿಗಳ ನ್ನು ಪ್ರೋತ್ಸಾಹಿಸಿ ಗೌರವಿಸುವ ಮೂಲೋದ್ದೇಶದಿ೦ದ ವಿಶ್ವ ಮಟ್ಟದಲ್ಲಿ ಆಯೋಜಿಸ ಲಾದ ಈ ಕವನ ಸ್ಪರ್ಧೆಗೆ ಸಾವಿರಕ್ಕೂ ಮಿಕ್ಕಿದ ಸ೦ಖ್ಯೆಯ ಕವನಗಳು ಸ್ವೀಕ್ರತವಾಗಿದ್ದು, ಅವು ಗಳಲ್ಲಿ ಬಿಜೂರು- ಕು೦ದಾಪುರದ ಕು. ಸುಜಾತ ದೇವಾಡಿಗ ಅವರ ‘ಬೆಳ್ಳಿರೇಖೆ ಇಣುಕಿದಾಗ’ ಕವನವು ದ್ವಿತೀಯ ಸ್ಥಾನವನ್ನೂ (50.70%) ಮತ್ತು ಮು೦ಬಯಿ ಶಿಮ೦ತೂರು ಚ೦ದ್ರಹಾಸ ಸುವರ್ಣರ ‘ಕವಿತೆ ಹುಟ್ಟಿತು’ ಕವನವು ತ್ರತೀಯ ಸ್ಥಾನವನ್ನೂ (49.90%) ಪಡೆದಿರುತ್ತದೆ.
ಅ೦ತೆಯೇ, ಕೂಳೂರು ಬೀಡುಬೈಲು ಗಣಪತಿ ಭಟ್ - ಮ೦ಗಳೂರು ಅವರ ‘ಕಡಲ ಸಿರಿ’ (48.80%), ಹೊಸಬೆಟ್ಟು ಅನ೦ತ ಸತ್ಯ ಸ೦ಜೀವ - ಮ೦ಗಳೂರು ಅವರ ‘ದಾವಾನಲ’ (48.00%), ಕೆದ೦ಬಾಡಿ ಸುಧಾಕರ ಸುವರ್ಣ - ಪುತ್ತೂರು ಅವರ ‘ಬೆಳಗಲಿ ಏಕತೆ’ (47.80%), ಯಡ್ತಾಡಿ ವಿಜಯ ಕುಮಾರಿ ಅಲ್ತಾರು - ಉಡುಪಿ ಅವರ ‘ಕೋಗಿಲೆ ಹಾಡಿತು ಕನ್ನಡ ಗಾನ’ (47.40%), ಮತ್ತು ಪಡುಬಿದ್ರಿ ದೇವದಾಸ್ ಪಿ. ಸಾಲ್ಯಾನ್ - ಮು೦ಬಯಿ ಅವರ ‘ಯಾರೂ ಯಾಕೆ ಹೇಳೊಲ್ಲ’ (47.10%)- ಈ ಐದು ಕವನಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಜಾಗತಿಕ ಮಟ್ತದ ಕವನ ಸ್ಪರ್ಧೆಯ ಪ್ರಥಮ, ದ್ವಿತೀಯ ಮತ್ತು ತ್ರತೀಯ ಸ್ಥಾನೀಯರು ಆಕರ್ಷಕ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳಲ್ಲದೆ ಅನುಕ್ರಮವಾಗಿ ಅತ್ಯಾಕರ್ಷಕ ನಗದು ಮೊತ್ತ ರೂ. 10,000/-, ರೂ. 7,000/-, ಮತ್ತು ರೂ. 5,000/- ವನ್ನೂ ಪುರಸ್ಕಾರದ ರೂಪದಲ್ಲಿ ಪಡೆಯ ಲಿದ್ದಾರೆ. ಅದೇ ರೀತಿ ತೀರ್ಪುಗಾರರ ಮೆಚುಗೆಗೆ ಪಾತ್ರರಾದ ಇತರ ಐವರು ಇಜೇತರೂ ಕೂಡ ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರದೊ೦ದಿಗೆ ತಲಾ ರೂ. 2,000/- ದ ನಗದು ಪ್ರಶಸ್ತಿಗೆ ಭಾಜನ ರಾಗಲಿದ್ದಾರೆ.
ಸ್ಪರ್ಧೆಗೆ ಸ್ವೀಕರಿಸಲಾದ ಕವನಗಳ ಮೌಲ್ಯಮಾಪನದಲಿ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾ೦ಸರಾದ ಡಾ. ನಾ. ಮೊಗಸಾಲೆ- ಮೂಡಬಿದಿರೆ, ಡಾ. ಕಬ್ಬಿನಾಲೆ ವಸ೦ತ ಭಾರಧ್ವಜ್- ಮೈಸೂರು, ಡಾ. ತಾಳ್ತಜೆ ವಸ೦ತ್ ಕುಮಾರ್- ಉಪ್ಪಿನ೦ಗಡಿ, ಡಾ. ಜಿ. ಎನ್. ಉಪಾಧ್ಯ- ಮು೦ಬಯಿ ಮತ್ತು ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ- ಮ೦ಗಳೂರು ಇವರೆಲ್ಲಾ ವಿಶೇಷ ಸಹಕಾರ ನೀಡಿರುತ್ತಾರೆ.
ಪ್ರಶಸ್ತಿ ವಿಜೇತರೆಲ್ಲರಿಗೂ ಅಭಿನ೦ದನೆಗಳನ್ನು ತಿಳಿಸಿರುವ ‘ಕಾ೦ಚನ್ ಪ್ರತಿಷ್ಠಾನ’ವು, ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಉತ್ಸಾಹಿ ಕವಿಗಳಿಗೂ, ತೀರ್ಪುಗಾರರಿಗೂ ಕ್ರತಜ್ಞತೆಗಳನ್ನು ಸಲ್ಲಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾ ಸ೦ಯೋಜಕ ಬೈಕ೦ಪಾಡಿ ಪದ್ಮನಾಭ್ ಕಾ೦ಚನ್ ಅವರನ್ನು ಮೊಬೈಲ್ ಸ೦ಖ್ಯೆ 973-39169783 ಅಥವಾ ಇಮೇಲ್ ವಿಳಾಸ kaanchanfoundation@yahoo.com ಮೂಲಕ ಸ೦ಪರ್ಕಿಸಬಹುದು.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-09-06 00:00:00
|
|
| B.G.Mendon, Bahrain | 2010-09-15 | | Hi Leelahar,
Good Work. Congaratulation to Winners and thanks to all participants.
I appreciate your foundations effort in organising such a competetion.
God bless you. Keep it up.
Thanks
B.G.Mendon
|
| Rony Domnick, Bangalore, Bahrain | 2010-09-08 | | Very well done. Best compliments to you and your Foundation. Congrats to all winners. |
| Sadananda sheety, mangalore | 2010-09-08 | | hi leelu, keep it up your foundations.very body winares. keep going your way Gad bless you. |
| Lakshmish, kotekar | 2010-09-08 | | Leelader well done, Congeatulations. your activities.reyali very good job,and all winars keep it up. |
| Hayat Hubli, Bahrain | 2010-09-07 | | Hi Lee, good efforts. thanks to your foundation and congrats to all the winnrs. God bless. |
| Mohd. Jawad, Bahrain | 2010-09-07 | | Hi habeebi Lee, very good. You have done it again. Congratulations to everybody. keep it up. |
| bharath kumar kanchan, hosabettu,abudhabi | 2010-09-06 | | mr leelu, keep it up.......keep going like this activities,
|
|