ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ |
ಪ್ರಕಟಿಸಿದ ದಿನಾಂಕ : 2010-09-03
ತಿರುವನಂತಪುರಂ, ಶುಕ್ರವಾರ, 3 ಸೆಪ್ಟೆಂಬರ್ 2010 ಕ್ಯಾಥೊಲಿಕ್ ಮಾಜಿ ಸನ್ಯಾಸಿನಿ ಸಿಸ್ಟರ್ ಜೆಸ್ಮಿಯವರು ಕೇರಳದ ಚರ್ಚುಗಳಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳಗಳನ್ನು ಕೇಳಿ ನಡುಗಿ ಹೋಗಿದ್ದ ದೇಶಕ್ಕೆ ಮತ್ತೊಬ್ಬ ಮಾಜಿ ಪಾದ್ರಿ ಮರ್ಮಾಘಾತ ನೀಡಿದ್ದಾರೆ. ನಿಷ್ಠೆಯಿಂದ ಬ್ರಹ್ಮಚರ್ಯವನ್ನು ಪಾಲಿಸ ಬೇಕಾದಿದ್ದ ಪಾದ್ರಿಗಳು ಮತ್ತು ಸನ್ಯಾಸಿನಿಯರ ಅನೈತಿಕ ಸಂಬಂಧಗಳಿಗೆ ಮಿತಿಯೇ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಕೆ.ಪಿ. ಶಿಬು ಎಂಬವರೇ ಈ ರೀತಿಯಾಗಿ ಆರೋಪಿಸಿರುವ ಮಾಜಿ ಪಾದ್ರಿ. ಅವರು ತನ್ನ 'ಒರು ವೈದಿಕಂಡೆ ಹೃದಯಮಿತ' (ಇಲ್ಲಿದೆ ಓರ್ವ ಪಾದ್ರಿಯ ಹೃದಯ ಮಿಡಿತ) ಆತ್ಮಕಥನದಲ್ಲಿ ಕೇರಳದ ಚರ್ಚುಗಳ ಸಾಕಷ್ಟು ಕರ್ಮಕಾಂಡಗಳ ಕುರಿತು ಅಸಹ್ಯ ವ್ಯಕ್ತಪಡಿಸಿದ್ದಾರೆ.
ಲೌಕಿಕ ಹಂಬಲ ಮತ್ತು ಇಂದ್ರಿಯ ಸುಖದ ಆಕಾಂಕ್ಷೆಗಳಿಂದ ದೂರ ಉಳಿಯುತ್ತೇವೆ ಎಂಬ ತಮ್ಮ ವಿಧಿಬದ್ಧ ಪ್ರತಿಜ್ಞೆಯ ಹೊರತಾಗಿಯೂ ಪಾದ್ರಿಗಳು ಮತ್ತು ಕ್ರೈಸ್ತ ಸನ್ಯಾಸಿನಿಯರು ಲೈಂಗಿಕತೆ ಮತ್ತು ಭ್ರಷ್ಟಾಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಚರ್ಚಿನ ನೈತಿಕ ನೆಲೆಗಟ್ಟನ್ನು ದುರ್ಬಲಗೊಳಿಸಿದ್ದಾರೆ ಎಂದು ಶಿಬು ತನ್ನ ಆತ್ಮಕಥೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಸಹೋದ್ಯೋಗಿ ಪಾದ್ರಿಗಳ ಕುಕೃತ್ಯಗಳ ತಪ್ಪೊಪ್ಪಿಗೆಗಳನ್ನು ಆಲಿಸಿದ್ದ ಸಂದರ್ಭಗಳ ವಿವರಣೆಯನ್ನೂ ಶಿಬು ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅವರ ಪ್ರಕಾರ ಶೇ.60ಕ್ಕೂ ಹೆಚ್ಚು ಪಾದ್ರಿಗಳು ತಾವು ಅಕ್ರಮ ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.
ಕ್ರೈಸ್ತ ಸನ್ಯಾಸಿನಿಯರು, ವಿಧವೆಯರು ಮತ್ತು ಸಮಾಜದ ಮಹಿಳೆಯರು ಧಾರ್ಮಿಕ ಬೋಧನೆಗಾಗಿ ಪಾದ್ರಿಗಳ ಮೊರೆ ಹೋಗಿದ್ದಾಗ ಅವರಿಂದ ಲೈಂಗಿಕ ಕಿರುಕುಳ ಮತ್ತು ಅನೈತಿಕತೆಯ ಕೂಪಕ್ಕೆ ತಳ್ಳಲ್ಪಟ್ಟಿರುವುದನ್ನು ತಪ್ಪೊಪ್ಪಿಗೆಯಲ್ಲಿ ಹೇಳಿದ್ದರು ಎಂದು ಮಾಜಿ ಪಾದ್ರಿ ಬಹಿರಂಗಪಡಿಸಿದ್ದಾರೆ.
ತಾನು ಚರ್ಚಿನಿಂದ ಹೊರ ಬರುತ್ತಿರುವುದು ಮತ್ತು ಈ ರೀತಿಯಾಗಿ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸುವುದು ಸ್ವತಃ ತನ್ನ ಸಂಬಂಧಿಕರಿಗೆ ಅಸಮಾಧಾನ ತಂದಿದೆ ಎಂದೂ ಶಿಬು ಹೇಳಿದ್ದಾರೆ.
ಸಲಿಂಗಕಾಮ ಮತ್ತು ವಯಸ್ಕರ ಚಿತ್ರಗಳ ವೀಕ್ಷಣೆಯು ಹಲವು ಚರ್ಚುಗಳ ಪಾದ್ರಿಗಳ ಜೀವನ ಶೈಲಿಯಾಗಿ ಹೋಗಿದೆ. ಇಲ್ಲಿ ಸನ್ಯಾಸಿನಿಯರು ಹಣ ಮತ್ತು ಅಧಿಕಾರಕ್ಕಾಗಿ ಪಾದ್ರಿಗಳ ಲಾಲಸೆಗೆ ಬಲಿಯಾಗುತ್ತಾರೆ. ಚರ್ಚುಗಳಲ್ಲಿನ ಹಣದ ವ್ಯವಹಾರದಲ್ಲೂ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಚರ್ಚುಗಳಲ್ಲಿ ವಿದ್ಯಾರ್ಥಿ ಮತ್ತು ಪಾದ್ರಿಯಾಗಿ 24 ವರ್ಷಗಳನ್ನು ಕಳೆದಿದ್ದ ಶಿಬು, ಕೆಲವು ಉತ್ತಮ ಪಾದ್ರಿಗಳ ಹೊರತಾಗಿಯೂ ಹಲವು ಮಂದಿ ಸೆಕ್ಸ್, ದುರಾಸೆ ಮತ್ತು ಅಧಿಕಾರಕ್ಕಾಗಿ ಹಾತೊರೆಯುತ್ತಿರುವುದನ್ನು ಮನಗಂಡು ಕೆಲ ತಿಂಗಳುಗಳ ಹಿಂದಷ್ಟೇ ಕೇರಳ ಪಾದ್ರಿಗಳ ಸಂಘಟನೆಯಾಗಿರುವ 'ವಿನ್ಸೆಂಟಿಯನ್ ಕಾಂಗ್ರಿಗೇಶನ್' ತೊರೆದಿದ್ದರು.
ತಳ್ಳಿ ಹಾಕುತ್ತಿದ್ದಾರೆ ಪಾದ್ರಿಗಳು...
ಕೇರಳದ ಚರ್ಚುಗಳ ವಿರುದ್ಧ ಗಂಭೀರ ಆರೋಪ ಹೊರಿಸುವ ಶಿಬು ಅವರ ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು, ಆರೋಪಗಳನ್ನು ತಳ್ಳಿ ಹಾಕಿವೆ.
ಇದು ಚರ್ಚುಗಳ ಗೌರವವನ್ನು ಮಣ್ಣು ಪಾಲು ಮಾಡುವ ಯತ್ನ ಎಂದು ಸಿರೊ ಮಲಬಾರ್ ಕ್ಯಾಥೊಲಿಕ್ ಚರ್ಚ್ ವಕ್ತಾರರು ಹೇಳಿದ್ದಾರೆ.
11 ವರ್ಷಗಳ ಕಾಲ ಪಾದ್ರಿಯಾಗಿ ಕಾರ್ಯನಿರ್ವಹಿಸಿ, ಸಾಕಷ್ಟು ತಪ್ಪೊಪ್ಪಿಗೆಗಳನ್ನು ಆಲಿಸಿದ್ದ ಮತ್ತು ಅಧಿಕಾರ ವ್ಯಾಪ್ತಿಯಲ್ಲಿನ ಕ್ರೈಸ್ತ ಸಮಾಜಕ್ಕೆ ಮಾರ್ಗದರ್ಶನಗಳನ್ನು ನೀಡಿದ್ದವರು ಹೀಗೆ ನಡೆದುಕೊಂಡಿರುವುದು ಮರುಕ ಹುಟ್ಟಿಸಿದೆ. ತಾನಿಟ್ಟ ನಂಬಿಕೆಗೆ ಅವರು ಮೋಸ ಮಾಡಿದ್ದಾರೆ ಎಂದು ಚರ್ಚ್ ವಕ್ತಾರರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
| ನವೀನ್ ಕುಮಾರ್ , ಉಡುಪಿ | 2010-09-06 | | ನಿತ್ಯಾನಂದಾ ಸ್ವಾಮಿಯನ್ನು ದಿನಕ್ಕೆ ನೂರು ಬಾರಿ ತೋರಿಸಿ, ದೊಡ್ಡ ದೊಡ್ಡ ನಾಯಕರುಗಳನ್ನು ಕೂರಿಸಿಕೊಂಡು ಚರ್ಚೆ ಮಾಡಿ ವೈಭವೀಕರಿಸಿದ್ದ ಭಾರತದ ಎಲ್ಲಾ ಮಾಧ್ಯಮಗಳು ಈ ಸುದ್ದಿಯನ್ನು ಯಾಕೆ ಪ್ರಸಾರ, ಪ್ರಚಾರ ಮಾಡುವುದಿಲ್ಲ? |
| Vinay, Puttur | 2010-09-05 | | Mr.Ronald, atleast now stop commenting with pre-conceived notions about Hindus/Hinduism/Hindu culture.Black sheeps are there in every religion.We do not wish to hurt any one, like you keep on doing with Hindus. Imagine all of us start hating your faith the way you hate us what will be your fate and faith ? My only good wish and advise, please learn to live with all in true secular spirit. |
| ನವೀನ್, ಉಡುಪಿ | 2010-09-05 | | ಮಿ. ರೊನಾಲ್ಡ್ ಉಡುಪಿಯವರೆ ತಮ್ಮ ಉತ್ತರದ ಅರ್ಥ ’ಜಾಣ ಕುರುಡು’ ಅಲ್ಲವೇ. |
| Ronald, Udupi | 2010-09-05 | | SNS, I have already replied you few days ago. I do not support wrong from any religion and I\'m not against any religion,individual and party. Do not expect me to search every news and comment. |
| S.N.S., Mangalooru | 2010-09-04 | | HELLO Mr. RONALD UDUPI,
GOOD MORNING.
THE ONE WHO WRITING COMMENTS REGULARLY FOR \'GULFKANNADIGA\' AT THE BOTTOM OF NEWS RELATED TO ONLY STATE GOVT., POLICE DEPT.,BJP, SANGHA PARIVAR, HINDUS, INDIAN CULTURE, INDIAN CUSTOMS, KUMBHA MELA.
WHERE ARE YOU?
WHAT IS YOUR COMMENTS FOR THIS NEWS?
IF WE ARE LIKE YOU, WE CAN COMMENT ANYTHING LIKE YOU FOR THIS NEWS. BUT, WE RESPECT OTHER RELIGION, CUSTOMS ALSO. SO, TAKE CARE.BE A GENTLE MAN WHILE WRITING, BLAMING ANYOTHER PEOPLE, RELIGION, COMMUNITY, CUSTOMS.
IT SHOULD NOT HURT ANY OTHER'S 'RELIGIOUS BELIEF'
GOD BLESS YOU.( ದಯಮಾಡಿ ಕ್ಯಾಪಿಟಲ್ ಅಕ್ಷರದಲ್ಲಿ ಬರೆಯ ಬೇಡಿ) |
|