ಭಾರತದ ಕುತಂತ್ರ: ಪಾಕ್ ಪತ್ರಿಕೆ ಆರೋಪ |
ಪ್ರಕಟಿಸಿದ ದಿನಾಂಕ : 2010-09-03
ಲಾಹೋರ್ : ಫಿಕ್ಸಿಂಗ್ ಹಗರಣದ ಬಗ್ಗೆ ಎಲ್ಲರೂ ಪಾಕಿಸ್ಥಾನವನ್ನು ದೂರುತ್ತಿದ್ದಾರೆ. ಆದರೆ ಪಾಕಿಸ್ಥಾನದ ಪತ್ರಿಕೆಯೊಂದು 'ಕಪೋಲಕಲ್ಪಿತ' ವರದಿಯೊಂದಿಗೆ ಭಾರತವನ್ನು ದೂರಿದ್ದು, ಇದು ಭಾರತದ ಬೇಹುಗಾರ ಇಲಾಖೆ 'ರಾ' ನಡೆಸಿರುವ ಪಿತೂರಿ ಎಂದು ಆರೋಪಿಸಿದೆ.
'ಲಾರ್ಡ್ಸ್ ಪ್ರಸಂಗವು 'ರಾ'ದ ಮತ್ತೂಂದು ಕುತಂತ್ರವಾಗಿದೆ' ಎಂಬ ತಲೆಬರಹದೊಂದಿಗೆ ವರದಿ ಮಾಡಿರುವ 'ಡೈಲಿ ಮೇಲ್' ಪತ್ರಿಕೆಯು, ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗಿಡಲು ಈ ವಿವಾದ ಸೃಷ್ಟಿಸಲಾಗಿದೆ ಎಂದು ದೂರಿದೆ.
'ಪಾಕಿಸ್ಥಾನ ಕ್ರಿಕೆಟ್ ಮೇಲೆ 3-5 ವರ್ಷಗಳ ನಿಷೇಧ ಹೇರಲು ಐಸಿಸಿ ಅಧ್ಯಕ್ಷ ಶರದ್ ಪವಾರ ಕಾರ್ಯ ಪ್ರವೃತ್ತರಾಗಿದ್ದಾರೆ. ಬುಕ್ಕಿ ಎನ್ನಲಾಗುತ್ತಿರುವ ಮಜರ್ ಮಜೀದ್ 'ರಾ'ದ ವ್ಯಕ್ತಿಯಾಗಿದ್ದಾನೆ. ರಾ ಅಧಿ ಕಾರಿಗಳೇ ಆತನನ್ನು ಭಾರತೀಯ ಕ್ರಿಕೆಟಿಗೆ ಪರಿಚಯಿಸಿದ್ದಾರೆ' ಎಂದು ವರದಿ ತಿಳಿಸಿದೆ.
2009ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಭೋಜನ ಕೂಟವೊಂದರ ವೇಳೆ ಪಾಕ್ ಆಟಗಾರರು ವೊದಲ ಬಾರಿಗೆ ಈ ಬುಕ್ಕಿಯನ್ನು ಭೇಟಿಯಾಗಿದ್ದರು. ನಕಲಿ ಕುಟುಕು ಕಾರಾಯಚರಣೆ ನಡೆಸಲು ಇಂಗ್ಲಿಷ್ ಪತ್ರಕರ್ತರು 'ರಾ'ದಿಂದ 50 ಸಾವಿರ ಪೌಂಡ್ ಪಡೆದಿದ್ದಾರೆ. ಬುಕ್ಕಿಗೆ ಜಾಮೀನು ಸಿಗುವಲ್ಲಿ ಲಂಡನ್ನ ಭಾರತೀಯ ಹೈ ಕಮಿಶನ್ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಪಾಕ್ ಆಟಗಾರರನ್ನು ಸಾ³ಟ್ ಫಿಕ್ಸಿಂಗ್ನಲ್ಲಿ ಸಿಲುಕಿಸಲು ಪವಾರ ಮತ್ತು ಸ್ಕಾಟ್ಲಂಡ್ ಯಾರ್ಡ್ಸ್ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ವರದಿ ಹೇಳಿದೆ.
ಐಸಿಸಿ ಮುಖ್ಯಸ್ಥರು ಮತ್ತು ಅದರ ರಾ ಸಂಬಂಧಿತ ಸದಸ್ಯರು ಈಗಿನ ವಿವಾದದ ಹಿಂದಿನ 'ಮಾಸ್ಟರ್ವೆುçಂಡ್'ಗಳಾಗಿದ್ದಾರೆ. ಸೆನ್ಸೇಶನಲ್ ಯುವ ವೇಗದ ಬೌಲರ್ ವೊಹಮ್ಮದ್ ಆಮೀರ್ ಅವರ ವೃತ್ತಿಜೀವನವನ್ನು ಕೊನೆಗೊಳಿಸಲು ವಿಶೇಷ ಗಮನ ಹರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬುಕ್ಕಿ ಜೊತೆ ಸಲ್ಮಾನ್ ಬಟ್ ಇರುವ ಚಿತ್ರ ಮತ್ತು ಮಜೀದ್ ನೀಡಿದ ಪೌಂಡ್ ಒಳಗೊಂಡ ಜಾಕೆಟನ್ನು ಪಾಕ್ ಆಟಗಾರ ವಹಾಬ್ ರಿಯಾಜ್ ಧರಿಸುತ್ತಿರುವ ವೀಡಿಯೊ ನಕಲಿಯಾಗಿದೆ ಎಂದು ಪತ್ರಿಕೆ ತಿಳಿಸಿದೆ.
'ಬುಕ್ಕಿಯು ರಾದ ಮುಖ್ಯ ವ್ಯಕ್ತಿಯಾಗಿದ್ದಾನೆ. ನ್ಯಾಯಬಾಹಿರ ಹಣಕಾಸು ವಿಚಾರದಲ್ಲಿ ಆತನಿಗೆ ಪ್ರಮುಖ ಸ್ಥಾನವಿದೆ. ಕೆಲ ವರ್ಷಗಳ ಹಿಂದೆ ಆತ ಮುಂಬಯಿಯಲ್ಲಿ ಚಲನಚಿತ್ರಗಳ ಟಿಕೆಟ್ ಮಾರಾಟ ದಲ್ಲಾಳಿಯಾಗಿದ್ದನು. ಅನಂತರ ಆತನನ್ನು ರಾಕ್ಕೆ ಸೇರಿಸಿಕೊಂಡು ಕ್ರೀಡಾ ಬೆಟ್ಟಿಂಗ್ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು. ರಾ ಅಧಿ ಕಾರಿಗಳಿಂದ ಆತನನ್ನು ಮುಂಬಯಿ, ದಿಲ್ಲಿ, ಜೊಹಾನ್ಸ್ಬರ್ಗ್, ಕೇಪ್ಟೌನ್ ಮತ್ತು ದುಬೈನ ವಿವಿಧ ಬುಕ್ಕಿಗಳಿಗೆ ಪರಿಚಯಿಸಲಾಗಿದೆ' ಎಂದು ವರದಿ ವಿವರಿಸಿದೆ.
ರಾ 2007ರಲ್ಲಿ ಮಜೀದ್ನನ್ನು ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್ ಮತ್ತು ರಾಹುಲ್ ದ್ರಾವಿಡ್ ಅವರಂಥ ಕೆಲ ಭಾರತೀಯ ಕ್ರಿಕೆಟ್ ತಾರೆಯರಿಗೆ ಪರಿಚಯಿಸಿತ್ತು. ಅವರು ಆತನನ್ನು ಇತರ ತಂಡಗಳಿಗೆ, ಅದರಲ್ಲೂ ಮುಖ್ಯವಾಗಿ ಪಾಕ್ ತಂಡಕ್ಕೆ ಮತ್ತು ವಾಟ್ಸನ್ ಅವರಂಥ ಪ್ರಮುಖ ವಿದೇಶಿ ಆಟಗಾರರಿಗೆ ಪರಿಚಯಿಸಲಿ ಎಂಬುದು ಇದರ ಉದ್ದೇಶವಾಗಿತ್ತು. 2009ರ ಸೆಪ್ಟಂಬರ್ನಲ್ಲಿ ಭಾರತೀಯ ಉದ್ಯಮಿ ವಿಜಯ್ ಅಲೂವಾಲಿಯ ಕೇಪ್ಟೌನ್ನಲ್ಲಿ ಏರ್ಪಡಿಸಿದ್ದ ಔತಣ ಕೂಟಕ್ಕೆ ಪಾಕ್ ಮತ್ತು ಭಾರತ ತಂಡದ ಆಟಗಾರರ ಜೊತೆಗೆ ಮಜೀದ್ನನ್ನೂ ಆಹ್ವಾನಿಸಲಾಗಿತ್ತು. ಅಲ್ಲಿ ಪಾಕ್ ಆಟಗಾರರಿಗೆ ವೊದಲ ಬಾರಿಗೆ ಆತನನ್ನು ಪರಿಚಯಿಸಲಾಗಿತ್ತು. ಆದರೂ ಈ ತಂತ್ರ ಫಲಿಸದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ಥಾನ ತಂಡವು ಸುಲಭವಾಗಿ ಭಾರತ ತಂಡವನ್ನು ಸೋಲಿಸಿತ್ತು. ಅನಂತರ ಮಜೀದ್ ಪಾಕ್ ಆಟಗಾರರೊಂದಿಗೆ ಸಂಬಂಧ ಮುಂದುವರಿಸುತ್ತ ಬಂದನು ಎಂದು ವರದಿ ವಿವರಿಸಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
| Panchajanya, Kuwait | 2010-09-03 | | ಕೋತಿ ತಾನು ಮೊಸರು ತಿಂದು ಮೇಕೆ ಮುಖಕ್ಕೆ ಸವರಿತಂತೆ.....! |
|