ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದನದ ಮಾಂಸ ತಿನ್ತೇನೆ, ತಪ್ಪೇನಿದೆ?: ಸಿದ್ದರಾಮಯ್ಯ

ಕಡೂರು, ಗುರುವಾರ, 2 ಸೆಪ್ಟೆಂಬರ್ 2010

ಆಡಳಿತರೂಢ ಬಿಜೆಪಿ ಪಕ್ಷ ಗೋ ಹತ್ಯೆ ನಿಷೇಧ ವಿಧೇಯಕ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಮುಂದಾಗಬಾರದು ಎಂದು ಒತ್ತಾಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಮಾಂಸ ತಿನ್ನುವವರ ಸಂಖ್ಯೆಯೇ ಅಧಿಕ. ನಾನು ಕೂಡ ದನದ ಮಾಂಸ ತಿನ್ನುತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಕಡೂರು ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಕೆಂಪರಾಜು ಪರ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು.

ಕೇವಲ ಒಂದು ವರ್ಗದ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದರು. ಗೋ ಹತ್ಯೆ ನಿಷೇಧದಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಪರಿಣಾಮ ಬೀರುತ್ತದೆ. ಮೂಳೆ ಮತ್ತು ಚರ್ಮದ ಉದ್ಯಮಕ್ಕೆ ಧಕ್ಕೆ ಉಂಟಾಗಲಿದೆ ಎಂದರು.

ಬಿಜೆಪಿ ಧಾರ್ಮಿಕ ಮನೋಭಾವದೊಂದಿಗೆ ಜನಸಾಮಾನ್ಯರ ಭಾವನೆಯ ಮೇಲೆ ಪರಿಣಾಮವಾಗುವಂತೆ ತಂತ್ರ ರೂಪಿಸಿ ಮತ ಸೆಳೆಯಲು ಗೋ ಹತ್ಯೆ ನಿಷೇಧದಂತಹ ಕಾಯ್ದೆ ಜಾರಿಗೆ ಮುಂದಾಗುವುದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮುಂದಿಟ್ಟು ಮತಯಾಚಿಸುವುದಾಗಿ ಬಿಜೆಪಿ ಹೇಳಿದೆ. ಅದಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಡೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯೇ ಎದುರಾಳಿ ಹೊರತು ಜೆಡಿಎಸ್‌ನ ದತ್ತ ಎದುರಾಳಿ ಅಲ್ಲ ಎಂದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವೆಬ್ ದುನಿಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00

Tell a Friend

ಪ್ರತಿಸ್ಪಂದನ
ಸಂತೋಷ್ , ಮಂಗಳೂರು
2010-09-07
ಐದು ಕೋಟಿ ಕನ್ನಡಿಗರಲ್ಲಿ ಶೇಕಡಾ ೯೯% ಕನ್ನಡಿಗರು ಗೋಮಾಂಸ ಭಕ್ಷಕರಲ್ಲ ಎನ್ನುವ ಸತ್ಯವನ್ನು ಅರಿಯದ, ಸತ್ಯವೇ ನಮ್ಮ ತಂದೆ ತಾಯಿ ಸತ್ಯವೇ ನಮ್ಮ ಬಂಧು ಬಳಗ ಎನ್ನುವ ಗೋವಿನ ಗೀತೆ ರಚನೆಯಾದ ನಾಡಿನಲ್ಲಿ ಗೋಮಾತೆಯನ್ನೆ ತಿನ್ನುತ್ತೇನೆ ಎನ್ನುವ ಉದ್ಧಟತನದಿಂದ ತಟ್ಟೆ ಸಹಿತ ಪೋಸ್ ಕೊಟ್ಟು ಹೇಳಿಕೆ ನೀಡಿರುವ ಸಿದ್ದರಾಮಯ್ಯನವರೆ, ತಮ್ಮ ಹೇಳಿಕೆ ಗೋಮಾತೆಯನ್ನು ಪೂಜಿಸುವವರ ಮನದಲ್ಲಿ ಯಾವ ಪರಿಣಾಮ ಬೀರುತ್ತದೆ ಎನ್ನುವುದನ್ನು ಯೋಚಿಸಿದ್ದಿರಾ?

ಬರೇ ಓಟಿಗಾಗಿ ಇರುವುದಾದರೆ, ನಿಮಗೆ ಖಂಡಿತ ಒಂದು ಓಟು ಕೂಡ ಸಿಗಲಿಕಿಲ್ಲ. ಅಲ್ಪಸಂಖ್ಯಾತರು ಎಂದರೆ ತಲೆ ಇಲ್ಲದವರು ಎಂದು ತಿಳಿದು ಕೊಂಡಿದ್ದರೆ ಅದು ನಿಮ್ಮ ತಪ್ಪು ಲೆಕ್ಕಚಾರವಾಗುತದೆ. ಅವರು ಪಡೆಯ ಬೇಕಾದ ಸವಲತ್ತುಗಳನ್ನು ಯಾವ ರೀತಿಯಲ್ಲಿಯಾದರೂ ಪಡೆದು ಕೊಳ್ಳುತ್ತಾರೆ. ನಿಮ್ಮನ್ನು ನಂಬಿ ಕೈಕಟ್ಟಿ ಕುಳಿತುಕೊಳ್ಳುವವರಲ್ಲ. ಈಗಾಗಲೆ ಬಳ್ಳಾರಿಗೆ ಪಾದಯಾತ್ರೆಯಲ್ಲಿ ದೊಂಬರ ಆಟದ ಮಂಗನಂತೆ ಕುಣಿದು ಕುಣಿದು ಏನು ಕಡಿದು ಕಟ್ಟೆ ಹಾಕಲಾಗದೆ ಪೆಚ್ಚು ಮೋರೆ ಹಾಕಿಕೊಂಡು ಅರ್ಧ ಮಾನ ಕಳ್ಕೋಂಡಿದ್ದೀರಿ. ಇವಾಗ ಈ ಹೇಳಿಕೆ ನೀಡಿ ಪೂರ್ತಿ ಮಾನ ಕಳ್ಕೊಂಡಿದ್ದೀರಿ. ಇನ್ನು ಎಲ್ಲಿದೆ ಸ್ವಾಮಿ ನಿಮಗೆ ಮಾನ. ಧಾರ್ಮಿಕ ಚಿಂತನೆ ಮಾಡುವವರ ಮುಂದೆ ಮುಖ ತೋರಿಸಲಿಕ್ಕೆ ನಿಮಗೆ ಮುಖವೇ ಇಲ್ಲದಂತೆ ಮಡ್ಕೊಂಡಿದ್ದೀರಿ ಅಲ್ಲವೇ ಸಿದ್ದರಾಮಯ್ಯನವರೆ.

Satish , Suratkal
2010-09-07
ಸಿದ್ದರಾಮಯ್ಯನಂತ ರಾಜಕಾರಣಿಗಳು ಓಟಿಗಾಗಿ ದನದ ಮಾಂಸವಲ್ಲ ನಾಯಿ ಮಾಂಸವನ್ನೂ ತಿನ್ನಲು ರೆಡೀ... ನಮ್ಮ ಓಟು ನಿನಗಣ್ಣಾ ಈ ಮಾಂಸ ತಿನ್ನಣ್ಣ ಎಂದು ನಾಯಿ ಮಾಂಸ ತಯಾರಿಸಿ ಕೊಟ್ಟರೂ ಇಂತಹ ಆಸಾಮಿಗಳು ಚಕಾರವೆತ್ತದೇ ನುಂಗುತ್ತಾರೆ. ಇವರ ಪಕ್ಷದ ಹೈಕಮಾಂಡಿನವರು ಕೂಡಾ ತಿನ್ನಿ ಸಿದ್ದರಾಮಯ್ಯ ತೊಂದರೆಯಿಲ್ಲ ಓಟು ಸಿಗುತ್ತದೆ ತಾನೇ? ಎನ್ನಬಹುದು. ತಿನ್ನಣ್ಣ ಸಿದ್ದರಾಮಣ್ಣಾ.... ನಂತರ ಒಂದಾರು ಮದುವೆ ಕೂಡಾ ಮಾಡಿಕೊಳ್ಳು.... ಒಂದಿಪ್ಪತ್ತು ಮಕ್ಕಳನ್ನೂ ಹುಟ್ಟಿಸು. ನಂತರ ಅವುಗಳನ್ನು ರಸ್ತೆಯಲ್ಲಿ ಬಿಟ್ಟುಬಿಡು, ಪಿಕ್ ಪಾಕೆಟ್ ಮಾಡಿಕೊಂಡೋ , ದರೋಡೆ ಮಾಡಿಕೊಂಡೋ, ನಂತರ ದೇಶದ ಎಲ್ಲೆಡೆ ಬಾಂಬ್ ಇಟ್ಟುಕೊಂಡೋ ದಿನ ತೆಗೆಯುತ್ತವೆ ಬಿಡು. ಹುಟ್ಟಿದ ದೇಶಕ್ಕೆ ನಿನ್ನ ಅದ್ಭುತ ನಿನ್ನ ಕೊಡುಗೆ ಆಗುತ್ತೆ.
DINESH POOJARY DUBAI, bejai
2010-09-06
ದನದ ಮಾಂಸ ತಿನ್ನುವುದರಲ್ಲಿ ತಪ್ಪೇನಿಲ್ಲ ಸಿದ್ದು. ಅದು ನೀನು ಹುಟ್ಟಿದ ಧರ್ಮಕ್ಕೆ ವಿರೋಧ ಮಾಡಿದಂತೆ. ಅಷ್ಟೇ..ಬೇರೇನು ದೊಡ್ಡ ತಪ್ಪಾಗಲ್ಲ. ಅದೇ ರೀತಿ 2-3 ಮದುವೆನೂ ಹಾಗು. ಯಾರು ಬೇಡ ಅನ್ನಲ್ಲ. ಯಾಕೆ ಗೊತ್ತಾ..ನಿನ್ನ ಹಣೆಬರಹವೇ ಇಷ್ಟು.
ಭರತ್ ಕುಮಾರ್ , ಮಂಗಳೂರು
2010-09-06
ಪಾಂಚಜನ್ಯ.. ಒಬ್ಬ ನೇರನುಡಿಯ ದಿಟ್ಟ ಮನಸ್ಸಿನ, ಧೀರ ವ್ಯಕ್ತಿತ್ವದ ಅಪರೂಪ ಮನೋಭಾವದ ವ್ಯಕ್ತಿ. ಅವರು ಬರೆದ ಈ ತನಕದ ಪ್ರತಿಯೊಂದು ಪ್ರತಿಸ್ಪಂದದಲ್ಲಿಯೂ ದೇಶಪ್ರೇಮದ ಅಭಿಮಾನ ತುಂಬಿಹರಿಯುದನ್ನು ನಾನು ಕಂಡಿದ್ದೇನೆ. ಅದು ಕೇವಲ ನಿಷ್ಕಲ್ಮಶ ಮನಸ್ಸಿನ ದೇಶಪ್ರೇಮಿಗಳಿಗೆ ಮಾತ್ರ ಅರ್ಥವಾಗುವಂತಹದು. ಅವರ ಯಾವುದೇ ಶಬ್ದಗಳಲ್ಲಿ ಕಲ್ಪನೆಯ ಮಾತಿಲ್ಲ. ಎಲ್ಲವೂ ಅಂಗೈಯಂತಹ ಸಹಜ ಸತ್ಯ.

ಆದರೆ ಕೆಲವರಿಗೆ ಅವರ ಸತ್ಯತೆಯ ನೇರ ನುಡಿಯನ್ನು ಅಥವಾ ಬಾಣದಂತಹ ಬರಹವನ್ನು ಎದುರಿಸಲಾಗದೆ ಈಗ ಅವರ ಹೆಸರಲ್ಲಿಯೇ ಅಂದರೆ "ಪಾಂಚಜನ್ಯ" ಎಂಬ ಹೆಸರನ್ನು ಉಪಯೋಗಿಸಿಕೊಂಡೇ ಪ್ರತಿಸ್ಪಂದನ ಬರೆಯಲಾರಂಬಿಸಿದ್ದಾರೆ.

ಛೀ. ನಾಚಿಕೆಗೇಡು. ಶುದ್ದ ಹೇಡಿಗಳು, ನಾಚಿಕೆಸತ್ತವರು ಮಾತ್ರಾ ಇಂತಹಾ ಕೈಲಾಗದ ಕೆಲಸ ಮಾಡಲು ಸಾದ್ಯ. ಕೈಲಾಗದವ ಮೈಪರಚಿಕೊಂಡ ಎಂಬಂತೆ.

panchajanya kuwait, sully
2010-09-06
siddaramayya baratada gandu huli .jai siddaramayya ( !! - Shall I post your email!! & Phone no if genuine? - EDITOR)
ಪ್ರಜ್ವಲ್ , ಮೈಸೂರು
2010-09-04
ಬಹುಸಂಖ್ಯಾತರ ಭಾವನೆಗಳ ಮೇಲೆ ಆಟವಾಡುತ್ತಾ ಬಂದಿರುವ ರಾಜಕಾರಣಿಗಳ ಸಾಲಿಗೆ ಸಿದ್ದರಾಮಯ್ಯನವರು ಸೇರಿದ್ದು ದುರಂತ. ಸ್ವಾಮಿ ಸಿದ್ದರಾಮಯ್ಯನವರೆ, ತಾವು ದನದ ಮಾಂಸ ತಿನ್ನುವುದು ತಮ್ಮ ವೈಯಕ್ತಿಕ ವಿಚಾರ. ಆದರೆ ಗೋಮಾತೆಯನ್ನು ಪೂಜಿಸುವ ಬಹುಸಂಖ್ಯಾತರ ನಾಡಿನಲ್ಲಿದ್ದೀರಿ ಸ್ವಾಮಿ. ತಾವು ಹೇಳಿದಂತೆ ಚುನಾವಣಾ ಪ್ರಚಾರದಲ್ಲಿ, ಗೋಹತ್ಯೆ ನಿಷೇದವನ್ನು ವಿರೋಧಿಸುತ್ತೇನೆ ಎಂದು ಬಹಿರಂಗವಾಗಿ ಜನತೆಯ ಮುಂದೆ ತಾವು ಹೇಳಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅದು ತಮ್ಮ ರಾಜಕೀಯದ ಒಂದು ಅತಿ ದೊಡ್ಡ ಸಾಧನೆಯಾಗಬಹುದಲ್ಲವೆ? ಇವಾಗ ನಿಮ್ಮ ಸಾಧನೆಗಳ ಬಗ್ಗೆ ಹೇಳಿ ಕೊಳ್ಳಲು ಬೇರೆ ಏನು ಉಳಿದಿದೆ?
Panchajanya, Kuwait
2010-09-03
ಸಿದ್ದರಾಮಯ್ಯನಂತಹ ರಾಜಕಾರಣಿಗೆ ಇಂತಹ ಮಾತುಗಳು ಶೋಭೆ ತರುವಂತದ್ದಲ್ಲ. ದಲಿತ ನಾಯಕನಿರಬಹುದು. ಆದರೆ ತಾನು ತಿನ್ನುವುದನ್ನು ಸಮರ್ಥಿಸಿಕೊಳ್ಳುವವನು ನಾಳೆ ಮುಖ್ಯಮಂತ್ರಿಯಾದರೆ ಬಹುಸಂಖ್ಯಾತರ ಭಾವನೆಗಳಿಗೆ ಹೇಗೆ ಬೆಲೆ ಕೊಡಬಲ್ಲ?. ಸಿದ್ದರಾಮಯ್ಯ ಒಬ್ಬ ನಾಸ್ತಿಕ. ಅಂದ ಮಾತ್ರಕ್ಕೆ ಬೇರೊಬ್ಬರ ಧಾರ್ಮಿಕ ಮನೋಭಾವನೆಗೆ ಘಾಸಿ ತರುವಂತಹ ಹೇಳಿಕೆ ನೀಡುವುದು ಸರಿಯಲ್ಲ.

ಇದೇ ನಾಸ್ತಿಕ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ತನ್ನ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಮಾಡು ಇಲ್ಲವೇ ಮಡಿ ಹೋರಾಟವಿದ್ದಾಗ, ದೇವೇಗೌಡರ ಕುಟುಂಬ ಸಿದ್ದರಾಮಯ್ಯ ನನ್ನು ಮಕ್ಕಡೆ ಮಲಗಿಸಲು ಇಲ್ಲದ ಭಗೀರಥ ಪ್ರಯತ್ನ ಮಾಡಿತ್ತು. ಜೊತೆಗೆ ಬಿಜೆಪಿ ತನ್ನ ಸ್ಪರ್ಧಿಯನ್ನು ಕಣಕ್ಕಿರಿಸಿರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಸಿದ್ದರಾಮಯ್ಯ ಶರಣಾದದ್ದು ಮಠಮಂದಿರಗಳಿಗೆ. ಮಠಾಧಿಪತಿಗಳ ಕೈಕಾಲು ಹಿಡಿದು ಹೇಗೋ ಚುಣಾವಣೆ ಗೆದ್ದುಬಂದರು. ಆದರೆ ಈಗ ಗೋಮಾಂಸ ತಿನ್ನುತ್ತೇನೆ ಏನುತಪ್ಪು ಎನ್ನುತ್ತಿದ್ದಾರೆ. ಈ ಹೇಳಿಕೆ ಕೇವಲ ಮಾಧ್ಯಮದವರ ಎದುರು ಮಾತ್ರ ಏಕೆ ಹೇಳುವುದು..? ಸಾರ್ವಜನಿಕವಾಗಿ ಹೇಳಲಿ. ಎಷ್ಟು ಓಟು ಬೀಳುತ್ತದೆ ನೋಡೋಣ.

ಕಡೂರಿನಲ್ಲಿ ವೀರಶೈವ, ಒಕ್ಕಲಿಗ ಮತ್ತು ಕುರುಬರ ಮತಗಳು ಹೆಚ್ಚಿರುವುದರಿಂದ, ಒಂದು ವೇಳೆ ಅಂತಹ ಹೇಳಿಕೆ ಬಹಿರಂಗವಾಗಿ ಕೊಟ್ಟಲ್ಲಿ ಒಕ್ಕಲಿಗರು ಮತ್ತು ವೀರಶೈವರು ಒಂದಾಗಿ ಕಾಂಗ್ರೆಸ್ಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ. ಇಲ್ಲದಿದ್ದರೆ ಬಿಜೆಪಿ ಗೋಹತ್ಯೆ ನಿಷೇಧ ಜಾರಿಗೆ ತಂದರೆ ,ಕಾಂಗ್ರೆಸ್ಸ್ ಗೆ ಅಧಿಕಾರ ಸಿಕ್ಕಾಗ ಆ ನಿಷೇಧವನ್ನು ವಾಪಾಸ್ಸು ತೆಗೆಯುತ್ತೇವೆ ಎಂದು ಹೇಳಲಿ ನೋಡೋಣ. ಅವರಿಗೂ ಗೊತ್ತಿದೆ. ಒಂದು ವೇಳೆ ಗೋಹತ್ಯೆ ನಿಷೇಧ ಜಾರಿಗೆ ಬಂದದ್ದೆ ಆದಲ್ಲಿ ಈ ಜನ್ಮದಲ್ಲಿ ಅದನ್ನು ಹಿಂತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು. ಏಕೆಂದರೆ ಈ ಹಿಂದೆ ಯಡಿಯೂರಪ್ಪ ಲಾಟರಿ ನಿಷೇಧ, ವೀಡಿಯೊ ಗೇಮ್ ನಿಷೇಧ, ಸೂಪರ್ ಲೊಟ್ಟೋ ನಿಷೇಧ, ಲೈವ್ ಬ್ಯಾಂಡ್ ನಿಷೇಧ, ಅಷ್ಟೇ ಏಕೆ ಸಾರಾಯಿ ನಿಷೇಧ ಮಾಡಿದಾಗಲೂ ಕಾಂಗ್ರೆಸ್ಸ್ ಒಂದಲ್ಲ ಒಂದು ರೀತಿಯಲ್ಲಿ ತಗಾದೆ ತೆಗೆದೇ ಇತ್ತು.

ಈ ಎಲ್ಲಾ ನಿಷೇಧಗಳು ಕಾಂಗ್ರೆಸ್ಸ್ ಸರಕಾರ ಇದ್ದಾಗ ಏಕೆ ಸಾಧ್ಯವಾಗಲಿಲ್ಲ?ಇದು ಯಾವುದೂ ಸಮಾಜವಿರೋಧಿಯಾಗಿರಲಿಲ್ಲವೇ......? ಯಾಕೆಂದರೆ ಆಗ ಕಾಂಗ್ರೆಸ್ಸ್ ನ "ನಾವು ದುಡ್ಡು ಮಾಡುತ್ತೇವೆ.ನೀವು ದುಡ್ಡು ಮಾಡಿಕೊಳ್ಳಿ."ಪದ್ಧತಿ ಜಾರಿಯಲ್ಲಿತ್ತು.

ಒಂದಂಕಿ ಲಾಟರಿ, ವೀಡಿಯೊ ಗೇಮ್, ಸಾರಾಯಿ, ಲೈವ್ ಬ್ಯಾಂಡ್ ಗಳಿಂದ ಮಕ್ಕಳಿಂದ ಹಿಡಿದು ಯವಕರು, ಮುದುಕರು ಎಲ್ಲರೂ ವ್ಯಸನಿಗಳಾಗಿದ್ದರು. ಕರ್ನಾಟಕದ ಹೆಣ್ಣುಮಕ್ಕಳ ಕಣ್ಣೀರ ಶಾಪವೇ ಕಾಂಗ್ರೆಸ್ಸ್ ಗೆ ಈ ದುಸ್ಥಿತಿ ಬರಲು ಕಾರಣ. ಅಷ್ಟೇ ಅಲ್ಲದೇ, ಕಾಂಗ್ರೆಸ್ಸ್ ನ ಕೋಡಂಗಿ ರಾಜಕಾರಣಿ ಜನಾರ್ಧನ ಪೂಜಾರಿ ಇನ್ನು ಒಂದು ಹೆಜ್ಜೆ ಮುಂದು ಹೋಗಿ ಕಾಂಗ್ರೆಸ್ಸ್ ಗೆ ಅಧಿಕಾರ ಬಂದರೆ ಸಾರಾಯಿ ನಿಷೇಧ ಹಿಂತೆಗೆಯುವುವುದಾಗಿ ಹೇಳಿಕೆ ಭಟ್ಕಳದಲ್ಲಿ ಹೇಳಿಕೆ ನೀಡಿ, ಅಲ್ಲಿಯ ಹೆಣ್ಣು ಮಕ್ಕಳಿಂದ ಮಹಾಮಂಗಳಾರತಿ ಮಾಡಿಸಿ ಕೊಂಡದ್ದಲ್ಲದೆ, ಭಟ್ಕಳದ ಕಾಂಗ್ರೆಸ್ಸ್ ಅಭ್ಯರ್ಥಿ ಸೋಲುವ ಹಾಗೆ ಮಾಡಿದರು.

ಈಗ ಯಡಿಯೂರಪ್ಪ ನಿಷೇಧ ಮಾಡಲು ಹೊರಟಿರುವುದು ನಾಡಿನ ಲಕ್ಷಾಂತರ ಅನಾಥ ಮಕ್ಕಳ ಪಾಲಿಗೆ ತಾಯಿ ಎದೆಹಾಲಿಗೆ ಪರ್ಯಾಯವಾಗಿ ದೇವರು ಸೃಷ್ಟಿಸಿದ,ಸಮುದ್ರಮಥನದಲ್ಲಿ ಕಲ್ಪವೃಕ್ಷದೊಂದಿಗೆ ಸೃಷ್ಟಿಯಾದ ಕಾಮಧೇನುವಿನ ಹತ್ಯೆಯನ್ನು ವೈಜ್ಞಾನಿಕವಾಗಿ ನೋಡಿದರೂ, ಅಥವಾ ಧಾರ್ಮಿಕತೆಯಿಂದ ನೋಡಿದರೂ ಗೋಹತ್ಯೆ ನಿಷೇಧ ಸಮರ್ಪಕವಾಗೆ ಇದೆ. ಮನುಷ್ಯತ್ವ ಇಲ್ಲದ ಕಾಡು ಪ್ರಾಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲ.

sawood , shirur
2010-09-03
is baat mea kuch daam hai jai hind
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಅಶ್ಲೀಲ ಕಲಾಪಕ್ಕೆ ಸದನ ಬಲಿ
»ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
»ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ
»ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ
»ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ
»ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ
»‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ
»ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
»ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ
»ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ
»ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ
»ಬಿಬಿ‌ಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ
»ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್‌ ಚಾರಿಯಟ್‌' 'ಹೌಸ್‌ ಫ‌ುಲ್‌ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು
»ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು
»ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿ‌ಎಂ
»ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿ‌ಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update)
»ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
»ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು
»ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ
»50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ
»ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ
»ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ
»ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್
»ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ
»ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ
»ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ
»ಹಾಸನದ ಆರು ತಾಲೂಕುಗಳು ಬರಪೀಡಿತ: ಬೇಸಿಗೆ ಸಮಸ್ಯೆ ನಿವಾರಣೆಗೆ ಕ್ರಮ: ನೂತನ ಜಿಲ್ಲಾಧಿಕಾರಿ ಮೋಹನ್‌ರಾಜ್
»ರೈತರ ಮೇಲೆ ನಿರಂತರ ದಬ್ಬಾಳಿಕೆ ತಡೆಗೆ ಸರಕಾರ ವಿಫಲ: ಕುಮಾರಸ್ವಾಮಿ ಆರೋಪ
»ಪುಣ್ಯಕ್ಷೇತ್ರದಲ್ಲಿ ಗಾಂಜಾ ಬಾಬಾಗಳ ದಮ್ ಮಾರೋ ದಮ್*
»SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
»ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
»ನೇತ್ರಾಣಿ ದ್ವೀಪದಲ್ಲಿ ಬಾಂಬ್ ಸ್ಫೋಟ; ಆಕ್ಷೇಪಣೆಗೆ ಆದೇಶ
»ಅಧಿಕಾರ ಇಲ್ಲದ ಕುಮಾರಸ್ವಾಮಿ ಮಾನಸಿಕ ಅಸ್ವಸ್ಥ: ಪುಟ್ಟಣ್ಣಯ್ಯ
»ಹೂವಿನಹಡಗಲಿ: ಬಸ್- ಕ್ರೂಸರ್ ಜೀಪ್ ಢಿಕ್ಕಿ; ಏಳು ಮಂದಿಯ ಸಾವು; ನಾಲ್ವರಿಗೆ ಗಾಯ
»ಬಿ‌ಎಸ್‌ವೈ ಸಂಬಂಧಿ ಅಲ್ಲ, ಆರೋಪಗಳೆಲ್ಲ ಸುಳ್ಳು: ಬನ್ನೂರುಮಠ
»ಕಲಾಪಕ್ಕೆ ಹಾಜರ್; ಎಲ್ಲರ ಗಮನ ಸೆಳೆದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
»ಕರ್ನಾಟಕದ ಎರಡು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕಗಳಲ್ಲಿ ಹರೆಕಳ ಹಾಜಬ್ಬನವರ ಜೀವನ ಕಥೆಯ ಸೇರ್ಪಡೆ
»ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು
»ಭಾರತ ಹುಣ್ಣಿಮೆ: ಇಂದು ಸವದತ್ತಿ ಯಲ್ಲಮ್ಮನ ಜಾತ್ರೆ
» ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಒತ್ತಾಯ: ಪ್ರತಿಭಟನೆ
»ಯುವತಿಯ ಮೈಮೇಲೆ ಕೈಚಲಕಕ್ಕೆ ಯತ್ನ; ಸಿಕ್ಕಾಪಟ್ಟೆ ಗೂಸಾ
»ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಿ ಟ್ರೆಕ್ಕಿಂಗ್: 21 ಮಂದಿ ಬಂಧನ
»ಭರದಿಂದ ಸಾಗಿದ 43ಕೋಟಿ ರೂ ವೆಚ್ಚದ ತುಂಗಭದ್ರಾ ಸೇತುವೆ ಕಾಮಗಾರಿ
»ಮತ್ತೆ ಸಿಡಿದ ಗಣಿ ವರದಿ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ | ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ನೇಣಿಗೇರಿಸಿ: ಸಿದ್ದು ಗುಡುಗು
»ಸಂಘರ್ಷದ ನಡುವೆಯೂ ಬಿಜೆಪಿ ಚುನಾವಣೆ ಸಿದ್ಧತೆ: ನಾಯಕತ್ವದ ಬಗ್ಗೆ ಚರ್ಚೆ ಬೇಡ: ಈಶ್ವರಪ್ಪ
»ಲೋಕಾಯುಕ್ತ ಸ್ಥಾನದಿಂದ ಹಿಂದೆ ಸರಿದ ಬನ್ನೂರಮಠ: ಕೊನೆಗೂ ಗೆದ್ದ ರಾಜ್ಯಪಾಲರ ಹಠ
»ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕ್ರಮ: ಶರಣಾಗತರಿಗೆ ತಲಾ 2 ಲಕ್ಷ ರೂ. ದಾಳಿಯಲ್ಲಿ ಸತ್ತ ಪೋಲೀಸ್ ರಿಗೆ 5 ಲಕ್ಷ ರೂ.ಪರಿಹಾರ; ಕಾರ್ಕಳದ ಐಜಿಪಿ- ಎಎನ್‌ಎಫ್ ಹೆಗಲಿಗೆ ನಕ್ಸಲ್ ನಿಗ್ರಹ ಜವಾಬ್ದಾರಿ; 500 ಪೊಲೀಸರಿಗೆ ವಿಶೇಷ ತರಬೇತಿ
»ಮತ್ತೆ ಸಿಡಿದ ಗಣಿ ವರದಿ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ
»ಹೊಸ ಸರಕಾರಿ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ: ಶೀಘ್ರದಲ್ಲೇ ಕಾಯ್ದೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri