| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್ಪಿ |
ಪ್ರಕಟಿಸಿದ ದಿನಾಂಕ : 2010-09-02
ನವದೆಹಲಿ, ಗುರುವಾರ, 2 ಸೆಪ್ಟೆಂಬರ್ 2010 ಜಿಹಾದಿ ಭಯೋತ್ಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಕೇಸರಿ ಭಯೋತ್ಪಾದನೆ ಎಂಬ ಆರೋಪವನ್ನು ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಗೃಹಸಚಿವ ಪಿ. ಚಿದಂಬರಂ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಹಿಂದೂಗಳ ಭಾವನೆಗಳಿಗೆ ಅಪಮಾನ ಎಸಗಿರುವ ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಹಾಗೆ ಕ್ಷಮೆ ಯಾಚಿಸದೇ ಇದ್ದಲ್ಲಿ ಅವರನ್ನು ಸಂಪುಟದಿಂದ ಪ್ರಧಾನಿ ಕೈ ಬಿಡಬೇಕು ಎಂದರು.
ಅತ್ತ ಭೋಪಾಲ್ನಲ್ಲಿ ಆರೆಸ್ಸೆಸ್ ಹಿರಿಯ ನಾಯಕ ರಾಮ್ ಮಾಧವ್ ಕೂಡ ಚಿದಂಬರಂ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಕಾರ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಎನ್ನುವುದು ದೇಶದಲ್ಲಿಲ್ಲ. ಆದರೆ ಕೇಸರಿ ಭಯೋತ್ಪಾದನೆಯೆಂಬ ಪಿಶಾಚಿಯನ್ನು ಸೃಷ್ಟಿಸುವ ಯತ್ನಗಳು ಹಲವು ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಕೇವಲ ಮೂರು-ನಾಲ್ಕು ಘಟನೆಗಳಿಂದ ಇಂತಹ ಉಲ್ಲೇಖಗಳನ್ನು ಮಾಡಲಾಗದು ಎಂದು 'ಭಯೋತ್ಪಾನೆ ಮತ್ತು ಮಾಧ್ಯಮಗಳ ರಾಜಕೀಯ' ಎಂಬ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಜಿಹಾದಿ ಭಯೋತ್ಪಾದನೆಯ ಕಡೆಗಿನ ಗಮನವನ್ನು ವಿಕೇಂದ್ರೀಕರಿಸುವ ಯತ್ನವಾಗಿ ಕೇಸರಿ ಭಯೋತ್ಪಾದನೆ ಎಂಬ ವ್ಯಾಖ್ಯಾನವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಮಾಧವ್, ಇದರ ಹಿಂದೆ ಸ್ಥಾಪಿತ ರಾಜಕೀಯ ಹಿತಾಸಕ್ತಿಗಳು ಅಡಗಿವೆ; ಅದೇ ಕಾರಣದಿಂದ ಜಿಹಾದಿ ಭಯೋತ್ಪಾದನೆ ಕುರಿತು ಸರಕಾರದಲ್ಲಿ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ ಎಂದರು.
ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಹೇಳಲಾಗುತ್ತಿರುವ ಪ್ರಸಕ್ತ ನಡೆಯುತ್ತಿರುವ ಮೂರರಿಂದ ನಾಲ್ಕು ಬಾಂಬ್ ಸ್ಫೋಟ ಪ್ರಕರಣಗಳ ವಿಚಾರಣೆಯ ಕುರಿತು ಪ್ರಸ್ತಾಪಿಸುತ್ತಾ ಅವರು, ಇದರ ಹಿಂದಿನ ನೈಜ ರೂವಾರಿಗಳು ಯಾರೆಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಯಾವುದೇ ರೀತಿಯ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆಗಳಿಲ್ಲ. ಆದರೆ ಭಯೋತ್ಪಾದನೆಗೆ ಬಣ್ಣವೇ ಇಲ್ಲ ಎಂದು ಹೇಳಲಾಗದು. ಯಾಕೆಂದರೆ ಅದು ಧಾರ್ಮಿಕ ಸಿದ್ಧಾಂತಗಳನ್ನು ಹೊಂದಿರುತ್ತದೆ ಎಂದು ಯಾವುದೇ ಸಂಘಟನೆಗಳನ್ನು ಉಲ್ಲೇಖಿಸದೆ ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : web duniya ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
| ಪ್ರಶಾಂತ್ , ಮಂಗಳೂರು | 2010-09-04 | | ಶ್ರೀ ಪ್ರಜ್ವಲ್ ರವರೇ, ಈ ಪ್ರದೀಪ್ ಕುಮಾರ್ ಎಂದು ಹೆಸರಿನ ವ್ಯಕ್ತಿ ಖಂಡಿತಾ ಹಿಂದುಧರ್ಮದವನಲ್ಲ. ಈ ಪ್ರತಿಕ್ರಿಯೆ ಬರೆಯಲು ಮಾತ್ರಾ ತಾತ್ಕಾಲಿಕವಾಗಿ ಹಿಂದುಧರ್ಮಕ್ಕೆ ಮತಾಂತರ ಗೊಂಡ ವ್ಯಕ್ತಿ ಈತ. ಮತ್ತು ವಾಲ್ಟರ್. ಪ್ರಜ್ವಲ್ ರವರೇ.... ನೀವು ಎಷ್ಟೇ ವಿವರಣೆ ನೀಡಿದರೂ ಇಂತಹ ವ್ಯಕ್ತಿಗಳಿಗೆ ಅದೆಲ್ಲಾ ಅರ್ಥವಾಗುವುದಲ್ಲ. ಯಾಕೆಂದರೆ ಇಂತವರು ಇರುವುದು ಬಾವಿಯ ಒಳಗೆ. ಅದೇ ಅವರ ಪ್ರಪಂಚ. ಅದರ ಹೊರಗಡೆ ಒಂದು ಜಗತ್ತು ಇದೆ ಎಂಬ ಬಗ್ಗೆ ಅವರಿಗೆ ಅರಿವೇ ಇಲ್ಲ. ಇಂತವರಿಗೆ ವಿವರ ನೀಡಿ ಅರಿವು ಮೂಡಿಸುವ ಪ್ರಯತ್ನವೆಂದರೆ ಅದೇ ಗಾದೆ ಇದೆಯಲ್ಲಾ. "ಗೋರ್ಕಲ್ಲ ಮೇಲೆ........." ನಮ್ಮ ಭಾರತದ ಮೇಲೆ ಅಲ್ಲ ಸಲ್ಲದ ಮಾತುಗಳನ್ನಾಡುವ ಇಂತವರು ನಮ್ಮ ಪಕ್ಕದಲ್ಲೇ ನಮ್ಮೊಂದಿಗೆ ಸ್ವಾತಂತ್ರ್ಯ ಗಳಿಸಿದ ದೇಶವೊಂದಿದೆ. ಇಂದು ಅಲ್ಲಿನ ಪ್ರಜೆಗಳು ಹೇಗೆ ಜೀವನ ಸಾಗಿಸುತ್ತಿ ದ್ದಾರೆ ಎಂಬುದನ್ನು ಸ್ವಲ್ಪ ಗಮನಿಸಲಿ. ರಸ್ತೆಯಲ್ಲಿ ನಡೆದಾಡುವುದು, ಮಸೀದಿ ಯಲ್ಲಿ ನಮಾಜ್ ನಡೆಸುವುದು ಕಷ್ಟವಾಗಿದೆ. ಮನೆಯಿಂದ ಹೊರಹೋದ ವ್ಯಕ್ತಿ ಮನೆಗೆ ವಾಪಾಸು ಬರುತ್ತಾನೆಂಬ ಗ್ಯಾರೆಂಟಿ ಏನೂ ಇಲ್ಲವೆಂಬ ಪರಿಸ್ಥಿತಿ. ಯಾವಾಗ ಯಾವ ಗಳಿಗೆಯಲ್ಲಿ ಪಟಾಕಿಗಳು... ಗರ್ನಾಲ್ ಗಳು ಶಬ್ದಮಾಡಿಯಾವೋ ಯಾರಿಗೂ ಗೊತ್ತಿರುವುದಿಲ್ಲ. ಯಾರು ಇದನ್ನೆಲ್ಲಾ ಮಾಡುತ್ತಿದ್ದಾರೆ? ಅವರದೇ ಧರ್ಮದವರು. ಇತರರಿಗೆ ಅನ್ಯಾಯ ತೊಂದರೆ ಮಾಡಬಾರದು ಎಂಬ ಭೋಧನೆಯನ್ನು ಪವಿತ್ರ ಕುರಾನ್ ನಲ್ಲಿ ಓದಿದವರೇ!!! ಅಲ್ಲಿರುವ ಅಲ್ಪ ಸ್ವಲ್ಪ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು (ಅಲ್ಲಿನ ಅಲ್ಪ ಸಂಖ್ಯಾತರನ್ನು) ಕಾಲಕೆಳಗಿನ ಕಸಕ್ಕಿಂತಲೂ ನಿಕ್ರಷ್ಟವಾಗಿ ಕಾಣುತ್ತಿದ್ದಾರೆ. ಉಸಿರೆತ್ತುವಂತಿಲ್ಲ... ಆದರೂ ನಮ್ಮ ದೇಶದಲ್ಲಿ ಇಷ್ಟೊಂದು ಫ್ರೀಡಂ ಇದ್ದರೂ ಕೂಡಾ ಕೂಗಾಟ, ಅರಚಾಟ ತಪ್ಪಿಲ್ಲ. ಫ್ರೀಡಂ ಹೆಚ್ಚಾಯಿತು...
|
| ಪ್ರಜ್ವಲ್ , ಮೈಸೂರು | 2010-09-04 | | ಶ್ರೀಯುತ ಪ್ರದೀಪ್ ಕುಮಾರ್ ಹೆಸರಿನಲ್ಲಿ ಬಸ್ರೂರ್ ನಿಂದ ಪ್ರತಿಕ್ರಿಯೆ ನೀಡಿದ ತಮ್ಮಲ್ಲಿ ಒಂದು ಪ್ರಶ್ನೆ? ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಮುಸ್ಲಿಮರು, ಬ್ರೀಟಿಷರು ಸಾವಿರಾರು ವರ್ಷ ಲೂಟಿಮಾಡಿ, ಸ್ವಾತಂತ್ರ್ಯ ಎಂಬ ಸರ್ಟಿಫಿಕೆಟ್ ನೀಡಿ ನೀಚ ರಾಜಕಾರಣಿಗಳ ಕೈಗೆ ಅಧಿಕಾರ ಕೊಟ್ಟ ನಂತರ ಅಲ್ಪಸಂಖ್ಯಾತರು ಎಂದು ಸೀಲ್ ಹೊಡೆದು ಜಾರಿಮಾಡಿದ ಸರ್ಕಾರಿ ಸುತ್ತೋಲೆ 60 ವರ್ಷ ಕಳೆದರೂ ಬಹುಸಂಖ್ಯಾತರಾಗದೆ, ಅಲ್ಪರಾಗಿಯೇ ಉಳಿದು ದೇಶದ ಖಜಾನೆಯನ್ನು ಮುಕ್ಕಿ ಲೂಟಿಮಾಡುವುದರ ಜೊತೆಗೆ, ಕಳೆದ ಎಪ್ಪತ್ತು ವರ್ಷಗಳಿಂದ ಸಾಕ್ಷಿ ಸಹಿತ ಸೆರೆ ಸಿಕ್ಕ ನೂರಾರು ಮಂದಿ ಜೈಲಿನೊಳಗೆ ಇದ್ದು ಮರಣ ದಂಡನೆ ಶಿಕ್ಷೆ ನೀಡಿದರೂ ನೀಚ ರಾಜಕಾರಣಿಗಳ ಅಭಯ ಹಸ್ತದಲ್ಲಿ ಶಿಕ್ಷೆ ಇಲ್ಲದೆ ಹಾಯಾಗಿರುವ ದೇಶ ಭ್ರಷ್ಟರು ಇವೆಲ್ಲಾವೂ ಜೀವಂತ ಸಾಕ್ಷಿಯಾಗಿರು ವಾಗ, ಭಾರತವನ್ನು ಹಿಂದು ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ ಎಂದೆಲ್ಲಾ ತಾವೇ ಪ್ರತ್ಯಕ್ಷ ದರ್ಶಿಯಾಗಿ ನೋಡಿದಂತೆ, ನಡೆದ ಎಲ್ಲಾ ದುರ್ಘಟನೆಗಳು, ಬಾಂಬ್ ಸ್ಪೋಟಗಳು ಸುಳ್ಳು ಎಂಬಂತೆ ಚಿತ್ರಿಸಿರುವ ತಾವು ಒಂದು ಸಮಯ ಹಿಂದುವಾಗಿದ್ದರೆ? ಸತ್ಯತೆಯ ಉತ್ತರವನ್ನು ನೀಡಬಲ್ಲಿರಾ?
ಶ್ರೀ ವಾಲ್ಟರ್ ಅಲ್ಮೇಡಾ ಹೆಸರಿನಲ್ಲಿರುವ ಮತ್ತೊಬ್ಬರಾದ ಬಸ್ರೂರಿನವರೆ, ಈ ಸುದ್ದಿಯಲ್ಲಿ ಮಾನ್ಯ ಅಟಲ್ ಬಿಹಾರಿ ವಾಹಪೇಯಿಯವರ ಹೆಸರಿಲ್ಲದಿದ್ದರೂ ತಾವು ಅನಾವಶ್ಯಕವಾಗಿ ಅವರ ಹೆಸರನ್ನು ತುರುಕಿ ಕಳನಾಯಕರಂತೆ ಚಿತ್ರಿಸಿದ್ದೀರಿ. ಇದರಿಂದ ಗೊತ್ತಗುತ್ತದೆ ತಮ್ಮ ಪ್ರಪಂಚ ಜ್ಞಾನ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುವಾಗ ಭಾರತ ದೇಶ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆದದ್ದು, ವಿಶ್ವ ಸಂಸ್ಥೆಯ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಹಾಕಲು ಜಿ-24 ಸಂಘಟನೆ ರಚಿಸಿ ಭಾರತ ಮತ್ತುಅಭಿವೃದ್ಧಿ ದೇಶಗಳ ಹಿತಾಶಕ್ತಿ ಕಾಪಾಡಿದ್ದು, ಭಾರತ ಪಾಕ್ ಭಾಂದವ್ಯಕ್ಕೆ ಕೈಜೋಡಿಸಿ ಭಾರತ ಪಾಕ್ ಬಸ್ ಪ್ರಯಾಣ ಪ್ರಾರಂಭಿಸಿದ್ದು, 1998 ರಲ್ಲಿ ಅಣು ಪರೀಕ್ಷೆ ನಡೆಸಿ ವಿಶ್ವವೇ ಭಾರತವನ್ನು ಕಂಡು ಬೆಚ್ಚಿ ಬಿದ್ದದ್ದು, ಭಾರತದ ನಾಲ್ಕು ಮೂಲೆಗಳಿಗೆ ಸುವರ್ಣ ಚತುಷ್ಪತ ಹೆದ್ದಾರಿಯನ್ನು ನಿರ್ಮಿಸಿದ್ದು.. ಈಗೆ ಬರೆಯುತ್ತಾ ಹೋದರೆ ತುಂಬಾ ಇದೆ... ತಮ್ಗೆ ಇದು ಗೊತ್ತಿರಲಿ ಎಂದು ಉತ್ತರಿಸಿದ್ದು ಸ್ವಾಮಿ. |
| walter almeda, basrur | 2010-09-04 | | ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದಿದ್ದರೂ ತಾವೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವೆಂದು ಪ್ರಚಾರ ಮಾಡುತ್ತಾ ಅಸಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರೆಂದು ಚಿತ್ರಿಸುತ್ತದೆ. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತನ್ನ ಸಹಚರರನ್ನೇ ಹಿಡಿದು ಕೊಟ್ಟು ತಾನು ಬಚಾವಾದ ಅಟಲ್ ಬಿಹಾರಿ ವಾಜಪೇಯಿಯನ್ನು ದೊಡ್ಡ ಸ್ವಾತಂತ್ರ್ಯ ಯೋಧ ನಂತೆ ಚಿತ್ರಿಸುತ್ತದೆ.
ಗಾಂಧಿಯನ್ನೇ ಕೊಂದವರ ಪಕ್ಷವಾದರೂ ಯಾವುದೇ ಎಗ್ಗೂ ಸಿಗ್ಗೂ ಇಲ್ಲದೆ 1980ರಲ್ಲಿ ಗಾಂಧಿ ಪ್ರಣೀತ ಸಮಾಜವಾದವೇ ತಮ್ಮ ಸಿದ್ಧಾಂತ ಎಂದು ಸೈದ್ಧಾಂತಿಕ ಪಿಕ್ ಪಾಕೆಟ್ ಮಾಡಬಲ್ಲವರು ಈ ಬಿಜೆಪಿ ಮತ್ತವರ ಸಂಘಪರಿವಾರದವರು. ಯಾವುದೇ ಶ್ರಮವಿಲ್ಲದೆ, ಬೆವರು ಸುರಿಸದೇ ಇತರರ ಹೋರಾಟವನ್ನೂ, ಶ್ರಮವನ್ನೂ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವಲ್ಲೂ ಈ ಪರಾವಲಂಬಿ ಜೀವಿಗಳು ಮಹಾನ್ ಪರಿಣಿತರು.
|
| Pradeep Kumar, Basrur | 2010-09-03 | | ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ದಯಾ ನಂದ ಪಾಂಡೆ ಮುಂತಾದವರು ನಡೆಸಿದ ಭಯೋತ್ಪಾದಕ ಕೃತ್ಯಗಳು ಬೆಳಕಿಗೆ ಬರುತ್ತಿ ದ್ದಂತೆಯೇ, ‘ ಹಿಂದೂ ಭಯೋತ್ಪಾದನೆ’ ಎಂಬ ಪದವು ಹೆಡೆಯೆತ್ತಿತು. ಹಿಂದೂರಾಷ್ಟ್ರ, ಹಿಂದುತ್ವ ಹಾಗೂ ಸಂಘಪರಿವಾರದ ವಿಚಾರಧಾರೆ ಗಳಿಂದ ಪ್ರೇರಿತವಾದ ಗುಂಪುಗಳು ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್, ಮಡ್ಗಾಂವ್ ಮತ್ತು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣ ದಲ್ಲಿ ಶಾಮೀಲಾಗಿರುವುದು ತನಿಖೆಯಿಂದ ಬಯಲಾಗಿದೆ.
ವಿಪರ್ಯಾಸವೆಂದರೆ, ಈ ಸ್ಫೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸತ್ತವರು ಮುಸ್ಲಿಮರೇ ಆಗಿದ್ದರೂ ಸಹ, ಪೊಲೀಸರು ಘಟನೆಗಳ ಬಳಿಕ ತಕ್ಷಣವೇ ಬಂಧಿಸಿದ್ದುದು ಅಮಾಯಕ ಮುಸ್ಲಿಂ ಯುವಕರನ್ನು. ನಮಾಝ್ನಂತಹ ಸಂದರ್ಭಗಳಲ್ಲಿ ಜನರು ಗರಿಷ್ಠ ಸಂಖ್ಯೆಯಲ್ಲಿ ಒಂದೆಡೆ ಸೇರುವ ಸಮಯ ವನ್ನು ಲೆಕ್ಕಹಾಕಿಕೊಂಡೇ ಹೆಚ್ಚಿನ ಸ್ಫೋಟಗಳನ್ನು ಆಯೋಜಿಸಲಾಗಿತ್ತು. ನಿರಪರಾಧಿ ಮುಸ್ಲಿಂ ಯುವಕರನ್ನು ಬಂಧಿಸುವುದನ್ನು ನಿಲ್ಲಿಸ ಬೇಕು ಹಾಗೂ ನೈಜ ಅಪರಾಧಿಗಳನ್ನು ಸೆರೆಹಿಡಿಯಬೇಕೆಂಬ ಮಾನವಹಕ್ಕು ಚಳವಳಿ ಕಾರ್ಯಕರ್ತರ ಧ್ವನಿಯು ತನಿಖಾಧಿಕಾರಿಗಳ ಕಿವಿಗೆ ಬೀಳಲು ತುಂಬಾ ಸಮಯ ತಗಲಿತು.
ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಆಕೆಯ ದುಷ್ಟಕೂಟವು ಶಾಮೀಲಾಗಿದೆಯೆಂಬ ಸತ್ಯವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳದ ವರಿಷ್ಠ ಹೇಮಂತ್ ಕರ್ಕರೆ, ಬಲವಾದ ಪುರಾವೆಗಳೊಂದಿಗೆ ಬಯಲಿ ಗೆಳೆದಾಗ, ಒಟ್ಟಾರೆ ಪರಿಸ್ಥಿತಿ ಬೇರೆಯೇ ತಿರುವನ್ನು ಪಡೆದುಕೊಂಡಿತು. ಹೇಮಂತ ಕರ್ಕರೆ ಓರ್ವ ದೇಶದ್ರೋಹಿ ಮತ್ತು ರಾಷ್ಟ್ರೀಯವಾದಿ ವಿರೋಧಿ ಎಂದು ಮೊದಮೊದಲು ಹಿಂದುತ್ವವಾದಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದರು. ದುರದೃಷ್ಟವಶಾತ್ 2008ರ ನವೆಂಬರ್ 26ರ ಮಧ್ಯರಾತ್ರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹೇಮಂತ್ ಕರ್ಕರೆ ಮಡಿದರು.
ಬಜರಂಗದಳ, ಅಭಿನವ್ ಭಾರತ್ ಹಾಗೂ ಸನಾತನ ಸಂಸ್ಥೆಯಂತಹ ಸಂಘ ಟನೆಗಳ ಜೊತೆ ಸಂಪರ್ಕವಿದ್ದ ಗುಂಪು ಗಳು ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್, ಮಡ್ಗಾಂವ್ ಸ್ಫೋಟಗಳಲ್ಲಿ ಶಾಮೀಲಾಗಿರುವುದನ್ನು ಮಹಾರಾಷ್ಟ್ರ ಎಟಿಎಸ್ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಸಾಕ್ಷಾಧಾರಗಳ ಸಮೇತ ಬಹಿರಂಗ ಪಡಿಸಿವೆ. ಆದರೆ ಹಿಂದುತ್ವವಾದಿ ರಾಜಕಾರಣಿ ಗಳು ಮಾತ್ರ ‘‘ಈ ಭಯೋತ್ಪಾದಕ ಕೃತ್ಯಗಳಿಗೆ ಹಿಂದುತ್ವದ ಜೊತೆ ನಂಟು ಕಲ್ಪಿಸಕೂಡದು.
ಯಾಕೆಂದರೆ ಭಯೋತ್ಪಾದನೆಯಲ್ಲಿ ಯೆಹೂದ್ಯ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಗಳದೇ ಏಕಸ್ವಾಮ್ಯ’ವೆಂಬ ಬುಡಮೇಲು ರಹಿತವಾದವನ್ನು ಮುಂದಿಟ್ಟಿದ್ದರು. ಇನ್ನೂ ಕೆಲವು ಪತ್ರಕರ್ತರಂತೂ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಹಿಂದು ಭಯೋತ್ಪಾದನೆಯೆಂಬುದು ಇಲ್ಲ. ಏನಿದ್ದರೂ ಇಬ್ರಾಹೀಂ ಅನುಯಾಯಿಗಳ ಧರ್ಮಗಳೇ (ಯೆಹೂದ್ಯ, ಕ್ರೈಸ್ತ, ಇಸ್ಲಾಂ) ಭಯೋ ತ್ಪಾದನೆಯ ಜೊತೆ ನಂಟು ಹೊಂದಿವೆ’ ಯೆಂದು ವಾದಿಸಿದ್ದರು |
|
|
|