ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ

ಸದಾ ಶಾಂತವಾಗಿದ್ದ ಅಭಯಾರಣ್ಯದಲ್ಲಿನ ಈ ಗಡಿ ಪ್ರದೇಶದಲ್ಲಿ ಗಗನ ಮುಟ್ಟಿದ ಕ್ರೀಡಾ ಕಲರವ.

ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯುವ 19ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ‘ಕ್ವೀನ್ಸ್ ಬೇಟನ್’ಗೆ ರಾಜ್ಯದ ಹೆಬ್ಬಾಗಿನಲ್ಲಿ ಅಭೂತಪೂರ್ವ ಸ್ವಾಗತ.   

ಕಕ್ಕೆನಹಳ್ಳ ಚೆಕ್ ಪೋಸ್ಟ್(ಕರ್ನಾಟಕ-ತಮಿಳುನಾಡು ಗಡಿ): ಹಚ್ಚ ಹಸಿರು ಹೊದ್ದ ಬಂಡೀಪುರ ಬೆಟ್ಟಗಳ ತಪ್ಪಲಿನಲ್ಲಿ ಬುಧವಾರ ಹಬ್ಬದ ವಾತಾವರಣ, ಸದಾ ಶಾಂತವಾಗಿದ್ದ ಅಭಯಾರಣ್ಯದಲ್ಲಿನ ಈ ಗಡಿ ಪ್ರದೇಶದಲ್ಲಿ ಗಗನ ಮುಟ್ಟಿದ ಕ್ರೀಡಾ ಕಲರವ. ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯುವ 19ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ‘ಕ್ವೀನ್ಸ್ ಬೇಟನ್’ಗೆ ರಾಜ್ಯದ ಹೆಬ್ಬಾಗಿನಲ್ಲಿ ಅಭೂತಪೂರ್ವ ಸ್ವಾಗತ.

ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಬೇಟನ್ ರಿಲೆ ಸೆಪ್ಟೆಂಬರ್ 7ರತನಕ ರಾಜ್ಯದಲ್ಲಿದ್ದು, ಬಳಿಕ ಅದನ್ನು ಗೋವಾ ಒಲಿಂಪಿಕ್ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಇದೀಗ ರಾಜ್ಯ ಪ್ರವೇಶಿಸಿರುವ ಬೇಟನ್ ಮೊದಲ ದಿನವನ್ನು ಮೈಸೂರಿನಲ್ಲಿ ಕಳೆದಿದ್ದು, ಗುರುವಾರ ಬೆಂಗಳೂರಿನಲ್ಲಿ ಸಂಚರಿಸಲಿದೆ.

ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಸಾರ್ವಜನಿಕರು ಬೇಟನ್‌ನೊಂದಿಗೆ ಛಾಯಚಿತ್ರ ತೆಗೆಯಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸೆ. 4ರಂದು ಹಾಸನದಲ್ಲಿ ತಂಗಲಿದೆ, ಸೆ. 5ರಂದು ಮಂಗಳೂರಿನಲ್ಲಿ ಸಂಚರಿಸಲಿದೆ.

ಸೆಪ್ಟೆಂಬರ್ 7ರಂದು ಗೋವಾ ಅಧಿಕಾರಿಗಳಿಗೆ ಹಸ್ತಾಂತರವಾಗುವ ಮೊದಲು ಬೇಟನ್ ಸೋಮವಾರ (ಸೆ.6)ದಂದು ಕಾರವಾರ ಜಿಲ್ಲೆ ಸಂಚರಿಸಲಿದೆ.

ಹಚ್ಚಹಸಿರಿನಿಂದ ಹೊದ್ದ ಬೆಟ್ಟಗಳ ಸೆರಗಿನಲ್ಲಿರುವ ಕಕ್ಕೆನಹಳ್ಳಿಯಲ್ಲಿ ಮಧ್ಯಾಹ್ನ 1-20ಕ್ಕೆ ಆಗಮಿಸಿದ ಬೇಟನ್ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಗುಲಾಬಿ ಬಣ್ಣದ ಸೀರೆತೊಟ್ಟ ಗುಂಡ್ಲುಪೇಟೆಯ ಬೆಥೆಲ್ ಕಮ್ಯೂನಿಟಿ ಕಾಲೇಜ್‌ನ ನರ್ಸಿಂಗ್ ವಿದ್ಯಾರ್ಥಿನಿಯರು ಪೂರ್ಣ ಕುಂಭ ಸ್ವಾಗತ ನೀಡಿ ರಾಜ್ಯಕ್ಕೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಬೇಟನ್ ಸ್ವಾಗತಕ್ಕಾಗಿ ಕ್ರೀಡಾ ಆಡಳಿತಗಾರರು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು.

ಬೇಟನ್ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು  ಪ್ರವೇಶಿಸುವಂತಹ ವಾಹನಗಳು ಸಾಲಾಗಿ ನಿಂತವಲ್ಲದೆ. ಬಸ್ಸು, ಕಾರು ಹಾಗೂ ಇತರೆ ವಾಹನಗಳಲ್ಲಿದ್ದಂತಹ ಜನರು ಇಳಿದು ಸಾಲಾಗಿ ನಿಂತು ಅದಕ್ಕೆ ಗೌರವ ಸೂಚಿಸುವುದರ ಜೊತೆಯಲ್ಲಿ ತಮ್ಮ ಕ್ರೀಡಾಭಿಮಾನವನ್ನು ಪ್ರದರ್ಶಿಸಿದರು.

ಬಳಿಕ ಹಂಗಳೆ, ಗುಂಡ್ಲುಪೇಟೆ, ಬೇಗೂರು, ಹಿರಿಕಟ್ಟಿ ಮೂಲಕ ನಂಜನಗೂಡಿನಲ್ಲಿ ಸಾಗಿದ ಬೇಟನ್‌ಗೆ ಸಿಕ್ಕ  ಸ್ವಾಗತವಂತೂ ವರ್ಣನಾತೀತವಾಗಿತ್ತು. ಗ್ರಾಮಸ್ಥರು ಹಾರ-ತುರಾಯಿಗಳ ಜೊತೆಯಲ್ಲಿ ಮುಗಿಲುಮುಟ್ಟುವಂತೆ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿ ಬೇಟನ್‌ಗೆ ಸ್ವಾಗತ ಕೋರಿದರು. ಅಷ್ಟೇ ಅಲ್ಲ ಗುಂಡ್ಲುಪೇಟೆಯಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಮಕ್ಕಳು ದಾರಿಯುದ್ದಕ್ಕೂ ಕ್ರೀಡಾಕೂಟಕ್ಕೆ ಜೈಕಾರ ಹಾಕುತ್ತಾ ಭಾರತದ ತ್ರಿವರ್ಣ ಧ್ವಜಗಳನ್ನು ಬೀಸಿ ಬರಮಾಡಿಕೊಂಡರು. ಶಾಲಾ ಬ್ಯಾಂಡ್‌ಗಳು ಮಕ್ಕಳ ಕೇಕೆಗೆ ಪುಷ್ಠಿ ನೀಡಿ ಅಭಿಮಾನ ತಾರಕಕ್ಕೇರುವಂತೆ ಮಾಡಿತು.

ಬಳಿಕ ಮೈಸೂರಿನಲ್ಲಿ ಕ್ವೀನ್ಸ್ ಬೇಟನ್ ರಿಲೇ     ಜರುಗಿತು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಮೊದಲ ದಿನ ಬೇಟನ್‌ಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ, ಮುಂದಿನ ಆರೂ ದಿನಗಳ ಕಾಲ ರಾಜ್ಯದಲ್ಲಿ ಇದೇ ರೀತಿಯ ಸ್ವಾಗತ ಸಿಕ್ಕುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅದರಲ್ಲಿಯೂ ಚಾಮರಾಜನಗರ ಹಾಗೂ ಮೈಸೂರಿನ ಯುವಕರು ಮತ್ತು ಮಕ್ಕಳು ಕ್ರೀಡೆಯತ್ತ ಉತ್ಸಾಹದಾಯಕ ಆಸಕ್ತಿ ತೋರಿದ್ದಾರೆ, ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಸಂಖ್ಯೆಯ ಕ್ರೀಡಾಪಟುಗಳು ಗ್ರಾಮಾಂತರ ಪ್ರದೇಶದಿಂದ ಮೂಡಿ ಬರುತ್ತಾರೆ ಎಂದು ಹೇಳಿದರು.

‘ಬೇಟನ್‌ಗೆ ಇಷ್ಟೊಂದು ಉತ್ಸಾಹದಾಯಕ ಸ್ವಾಗತವನ್ನು ಕಂಡು ಆನಂದವಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ, ಬೆಂಗಳೂರಿನಲ್ಲಿ ಗುರುವಾರ ನಡೆಯುವ ಕಾರ್ಯಕ್ರಮ ಸ್ಮರಣೀಯವಾಗಿಸುವುದಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ’ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಅವರು  ತಿಳಿಸಿದರು.

ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ನಿರ್ದೇಶಕ ಶಿವನಂಜಯ್ಯ, ಚಾಮರಾಜನಗರ ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್, ಜಿಲ್ಲಾ ರಕ್ಷಣಾಧಿಕಾರಿ ಬಿ.ಎಸ್. ಪ್ರಕಾಶ್ ಹಾಗೂ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ ಜಿ. ಸುಭಾಷ್ ಚಂದ್ರ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸೂಪರ್ ಸ್ಟಾರ್ ರಜನಿಕಾಂತ್ ಅವರ ’ಕೊಚಡಯ್ಯಾನ್’ಗೆ ದೀಪಿಕಾ ನಾಯಕಿ
»ಹಾಡು ಬರೆದ ಗೀತಪ್ರಿಯರಿಗೀಗ ಮಾತೇ ಬರುತ್ತಿಲ್ಲ
»ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
»ಕ್ರಿಕೆಟ್ ತಂಡಕ್ಕೆ ಕಡಿವಾಣ: ಹಾಕಿ ನೆರವಿಗೆ ನಿಂತ ಸಹರಾ
»ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ
»ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ
»ತ್ರಿಕೋನ ಪ್ರೇಮಕತೆ: ಸೋನಂ ಕಪೂರ್‌ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
»ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸುವರ್ಣಾವಕಾಶ: ಪೇಸ್
»ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ
»ಜೊತೆ ಜೊತೆಯಲಿ ಯೋಗಿ-ರಾಧಿಕಾ ಹ್ಯಾಟ್ರಿಕ್!
»ಅಮೇರ್ ಮತ್ತೊಂದು ಅವಕಾಶಕ್ಕೆ ಅರ್ಹರು: ಶೋಯಿಬ್ ಅಖ್ತರ್
»ಸಂಚಿತಾ ಕೈಯಲ್ಲಿ ತಮಿಳು, ಮನದಲ್ಲಿ ಕನ್ನಡ..!
»ಸ್ನೂಕರ್‌: ಆದಿತ್ಯ ಮೆಹ್ತಾಗೆ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ
»ವರ್ತಮಾನದ ತೆಳು ಚಿತ್ರಣ: ಹಿಂದಿಚಿತ್ರ: ಗಲಿ ಗಲಿ ಚೋರ್ ಹೈ
»ಯುವರಾಜ್‌ಗೆ ಕ್ಯಾನ್ಸರ್; ಅಮೆರಿಕದಲ್ಲಿ ಚಿಕಿತ್ಸೆ ( Updated)
»ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ
»ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ
»ಶ್ವಾಸಕೋಶದ ಕ್ಯಾನ್ಸರ್: ಅಮೆರಿಕಾದಲ್ಲಿ ಕಿಮೊತೆರಪಿ ಚಿಕಿತ್ಸೆಗೊಳಗಾಗಲಿರುವ ಯುವರಾಜ್ ಸಿಂಗ್
»ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ
»ಕಾಮನ್‌ವೆಲ್ತ್‌ ಗೆಮ್ಸ್‌ ಹಗರಣ: ಜಾಮೀನಿನಲ್ಲಿ ಬಿಡುಗಡೆ: ಸುರೇಶ್‌ ಕಲ್ಮಾಡಿಗೆ ಭವ್ಯ ಸ್ವಾಗತ!
»ಐಪಿ‌ಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್ ( Upadated)
»ಕೊಡಿಗೇಹಳ್ಳಿ ಮಣ್ಣಲ್ಲಿ ಕರಿಬಸವಯ್ಯ ಲೀನ: ಅಂತಿಮ ದರ್ಶನಕ್ಕೆ ಜನಸಾಗರ(Updated)
»ಕ್ರಿಕೆಟ್ ಮಂಡಳಿ ಬೇ’ಸಹಾರ’: ಭಾರತ ತಂಡ ಪ್ರಾಯೋಜಕತ್ವ ಕೈಬಿಟ್ಟ ಸಹಾರ ಸಂಸ್ಥೆ
»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ
»ಇಂದು ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ
»ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ?
»ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ
»'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್‌ಗೆ ಆಗ್ಬಿಟ್ಟೈತಿ’..!
»ಮಾರ್ಚ್ 11ಕ್ಕೆ ನಟಿ ರೀಮಾ ಸೇನ್‌ಗೆ ಗಟ್ಟಿಮೇಳ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri