ಅಣ್ಣಿಗೇರಿಯ ತಲೆ ಬುರುಡೆಗಳು: 150 ವರ್ಷಗಳ ಹಿಂದಿನದ್ದು: ತಲೆಬುರುಡೆಗಳ ಡಿಎನ್ಎ ಪರೀಕ್ಷೆ: ಸಚಿವ ಆಚಾರ್ಯ |
ಪ್ರಕಟಿಸಿದ ದಿನಾಂಕ : 2010-09-02
ಬೆಂಗಳೂರು, ಸೆ.1: ಧಾರವಾಡದ ನವಲಗುಂದ ತಾಲೂಕಿನ ಅಣ್ಣಿಗೇರಿ ಬಳಿ ದೊರೆತಿರುವ ನೂರಾ ರು ತಲೆಬುರೆಡೆಗಳು ಹಲವು ಸಂಶಯಗಳಗೆ ಕಾರಣವಾಗಿದ್ದು, ಈ ಕುರಿತು ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ, ಇದು 150 ವರ್ಷಗಳ ಹಿಂದಿನದ್ದಾ ಗಿದೆ. ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಿರುವ ಸಾಧ್ಯತೆ ಇದ್ದು, ಯಾವುದೇ ರೀತಿಯ ಆತಂಕ ಬೇಡ ಎಂದಿದ್ದಾರೆ.
ಹಲವು ಸಂಶಯಗಳಿಗೆ ಕಾರಣವಾಗಿರುವ ತಲೆ ಬುರುಡೆಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋ ಗಾಲಯದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು, ಅಲ್ಲದೆ ಮಣಿಪಾಲ ಆಸ್ಪತ್ರೆಯ ಮತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡಿಎನ್ಎ ಮೂಳೆ ತಜ್ಞರು ಸ್ಥಳಕ್ಕೆ ತೆರಳಿ ಹಲವು ತಲೆ ಬುರುಡೆ ಗಳನ್ನು ವಶಕ್ಕೆ ತೆಗೆದು ಕೊಂಡು ಅದನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ.
ಅದರ ಪರೀಕ್ಷೆ ಸಂಪೂರ್ಣ ಆಗಿಲ್ಲ. ಪರೀಕ್ಷೆಯ ವರದಿ ಬಂದ ನಂತರ ಈ ಪ್ರಕರಣವನ್ನು ಬೇಧಿಸ ಲಾಗುವುದು ಎಂದು ಡಾ.ಆಚಾರ್ಯ ತಿಳಿಸಿದರು.
ಪ್ರಾಥಮಿಕ ವರದಿ ಪ್ರಕಾರ ಈ ತಲೆ ಬುರುಡೆಗಳು 100ರಿಂದ 150 ವರ್ಷ ಗಳಷ್ಟು ಹಿಂದಿನದ್ದಾ ಗಿದೆ. ಈ ಹಿಂದೆ ನಡೆದ ಯಾವುದೋ ಯುದ್ಧ ಇಲ್ಲವೆ ಸಾಮೂಹಿಕ ಹತ್ಯೆಯಲ್ಲಿ ಸಾವನ್ನಪ್ಪಿದವ ರನ್ನು ಇಲ್ಲಿಗೆ ತಂದು ಹೂತಿರಬಹುದು ಎಂದ ಆಚಾರ್ಯ, ಕೇವಲ ತಲೆ ಬುರುಡೆ ಮಾತ್ರ ಅಲ್ಲ ಕೆಲವೆಡೆ ಅಸ್ತಿ ಪಂಜರ ಕೂಡಾ ಪತ್ತೆಯಾಗಿದೆ ಎಂದರು.
ಅಗೆದಷ್ಟು ತಲೆಬುರುಡೆ ಪತ್ತೆಅಣ್ಣಿಗೇರಿ ಪುರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಆಗಸಿ ಓಣಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಜೆಸಿಬಿ ಮೂಲಕ ಚರಂಡಿಯಲ್ಲಿ ಮಣ್ಣು ಮೇಲಕ್ಕೆತ್ತುತ್ತಿ ದ್ದಾಗ ಈ ಬುರುಡೆಗಳು ಪತ್ತೆಯಾಗಿವೆ. ಮಂಗಳ ವಾರ ಕೂಡಾ ಮತ್ತಷ್ಟು ಬುರುಡೆಗಳು ಪತ್ತೆ ಯಾಗಿವೆ.
ಈ ಬುರುಡೆಗಳು ಪತ್ತೆಯಾಗುತ್ತಿದ್ದಂತೆ ತೀವ್ರ ಕುತೂಹಲಕ್ಕೀಡಾಗಿರುವ ಈ ಭಾಗದ ಜನ ಆತಂಕ ಕ್ಕೊಳಗಾಗಿದ್ದು, ಇದೀಗ ಈ ಬುರುಡೆಗಳ ಬಗ್ಗೆ ಹಲವು ಸಂಶಯಗಳು, ಊಹಾಪೋಹ ಗಳು ಎಬ್ಬಿವೆ.
ತಲೆ ಬುರುಡೆಗಳು ಒಂದಕ್ಕೊಂದು ಜೋಡಿಸಿಟ್ಟಂತಿದ್ದು, ಅದರ ಪಕ್ಕದಲ್ಲಿಯೇ ಕೆಲವು ಅಸ್ತಿಪಂಜ ರದ ಅವಶೇಷಗಳು, ಹಲ್ಲುಗಲು ಕೂಡಾ ಪತ್ತೆಯಾಗಿದೆ.
ತಲೆ ಬುರುಡೆ ಡಿಎನ್ಎ ಪರೀಕ್ಷೆಗೆ:
ಬೆಂಗಳೂರು, ಸೆ.1: ನವಲಗುಂದ ಶಾಸಕ ಶಂಕರ ಪಾಟೀಲ ಮುನೆನಕೊಪ್ಪ, ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖ ದಲ್ಲಿ ಜೆಸಿಬಿ ಯಂತ್ರದ ಮೂಲಕ ಓಣಿಯ ಪಕ್ಕದಲ್ಲಿರುವ ಇತರ ಸ್ಥಳವನ್ನು ಅಗೆದಾಗ ಯಾವುದೇ ಅವಶೇಷಗಳು ಪತ್ತೆಯಾಗಲಿಲ್ಲ.
ಈ ಪ್ರದೇಶವು ಈ ಹಿಂದೆ ಸ್ಮಶಾನವಾಗಿರಬಹುದು, ಅಲ್ಲವೇ ಯುದ್ಧದಲ್ಲಿ ಮಡಿದವರ ಮೃತ ದೇಹಗಳಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ.
ತಲೆಬುರುಡೆ ರಕ್ಷಣೆಗೆ ಶೆಡ್ತಲೆ ಬುರುಡೆ ಪತ್ತೆಯಾದ ಸ್ಥಳದಲ್ಲಿ ಅದನ್ನು ರಕ್ಷಿಸುವ ಉದ್ದೇಶದಿಂದ ಅಣ್ಣಿಗೇರಿ ಪುರಸಭೆ ಶೆಡ್ ನಿರ್ಮಾಣಕ್ಕೆ ಮುಂದಾಗಿದೆ.
ಮಂಗಳವಾರ ತಲೆ ಬುರುಡೆ ಪತ್ತೆಯಾದ ಸ್ಥಳಕ್ಕೆ ಪರೀಕ್ಷಾ ತಂಡಗಳು, ಧಾರವಾಡ ಜಿಲ್ಲಾಧಿಕಾರಿ ದರ್ಪಣ ಜೈನ್ ಸೇರಿದಂತೆ ಹಲವರು ಭೇಟಿ ನೀಡಿದ್ದು, ಇನ್ನು ಮುಂದೆ ಈ ಪ್ರದೇಶದಲ್ಲಿ ಉತ್ಖ ನನ ಮಾಡಬಾರದು. ಬುರುಡೆ ಪತ್ತೆಯಾಗುತ್ತಿರುವ ಪ್ರದೇಶ ವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜನರ ದಂಡುಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿರುವ ತಲೆ ಬುರುಡೆಯನ್ನು ವೀಕ್ಷಿಸಲು ಧಾರವಾಡ, ಹುಬ್ಬಳ್ಳಿ ಸುತ್ತಮುತ್ತಲ ಜನರ ದಂಡೇ ಹರಿದು ಬರುತ್ತಿದೆ. ಬುಧವಾರ ಕೂಡಾ ಸ್ಥಳಕ್ಕೆ ವಿವಿಧೆಡೆಗಳ ಜನರು ಆಗಮಿಸಿ, ತಲೆ ಬುರುಡೆ ಪತ್ತೆಯಾದ ಪ್ರದೇಶವನ್ನು ವೀಕ್ಷಿಸಿದರು.
ತಲೆಬುರುಡೆಗಳ ಡಿಎನ್ಎ ಪರೀಕ್ಷೆ: ಸಚಿವ ಆಚಾರ್ಯ
ಬೆಂಗಳೂರು: ಗದಗದ ಸಮೀಪದ ಅಣ್ಣಿಗೇರಿಯಲ್ಲಿ ಪತ್ತೆಯಾದ ತಲೆ ಬುರುಡೆಗಳ ಬಗ್ಗೆ ಡಿ.ಎನ್.ಎ ಪರೀಕ್ಷೆ ಮಾಡಿಸಲಾಗುವುದು ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಬುಧವಾರ ಇಲ್ಲಿ ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕೆಲ ಪ್ರಾಧ್ಯಾಪಕರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರು ಎರಡು ತಲೆ ಬುರುಡೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಪರೀಕ್ಷೆ ನಂತರ ಎಷ್ಟು ವರ್ಷಗಳ ಹಿಂದೆ ಸತ್ತಿರಬಹುದು ಎನ್ನುವುದನ್ನು ಪತ್ತೆ ಮಾಡಲಿದ್ದಾರೆ ಎಂದರು.
ತಲೆ ಬುರುಡೆಗಳನ್ನು ನೋಡಿದರೆ ಸುಮಾರು 150 ವರ್ಷಗಳ ಹಿಂದೆ ಸಂಭವಿಸಿದ ಅವಘಡದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಿರುವ ಸಾಧ್ಯತೆ ಇದೆ. ಯಾವ ಕಾರಣಕ್ಕೆ ಸತ್ತಿದ್ದರು? ನರಗುಂದ ಯುದ್ದದಲ್ಲಿ ಏನಾದರೂ ಸತ್ತರೇ ಎನ್ನುವುದರ ಬಗ್ಗೆ ಅನುಮಾನಗಳಿವೆ ಎಂದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-02 00:00:00
|
|
| Panchajanya, Kuwait | 2010-09-03 | | ಗುಜರಾತಿನಿಂದ ಏಕೆ ಇದನ್ನು ಆಮದುಮಾಡಿಕೊಳ್ಳಬೇಕು? ಮೊದಲೇ ಒಳಗೆ ಏನೂ ಇರದಿದ್ದ ತಲೆಗಳು, ತಲೆಬುರುಡೆ ಆದ ನಂತರ ಏತಕ್ಕೆ? ಕನಿಷ್ಠ ಪಕ್ಷ ವೈದ್ಯಕೀಯ ವಿಧ್ಯಾರ್ಥಿಗಳಿಗೂ ಪ್ರಯೋಜನಕ್ಕೆ ಬಾರದವು ನಮಗೇತಕ್ಕೆ ...? |
| hassanmukha, mangalore | 2010-09-02 | | ಸದ್ಯ ಆಚಾರ್ಯರ ಮಾತು ಕೇಳಿ ಸಮಾದಾನದ ನಿಟ್ಟಿಸಿರು ಬಿಡಬಹುದು.ಗುಜರಾತಿನಿಂದ ಅಮದು ಮಾಡಿರಲಿಕ್ಕಿಲ್ಲ ಅಲ್ಲವೇ? |
|