ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ?

ಮೈಸೂರಿನ ಕೈಲಾಸಪುರಂ ಬಡಾವಣೆಯ ದಲಿತ ಕಾಲನಿಗಳಿಗೆ ಪ್ರವೇಶಗೈದಿರುವ ಪೇಜಾವರ ಶ್ರೀಗಳು ಅಲ್ಲಿನ ದಲಿತರನ್ನು ರೋಮಾಂಚನಗೊಳಿಸಿದ್ದರು. ಅಲ್ಲಿನ ಮಾದಿಗರೊಂದಿಗೆ ಬೆರೆತ ಸ್ವಾಮೀಜಿ ಗಳು ಕೆಲವು ದಲಿತರ ಮನೆಗಳಿಗೂ ಭೇಟಿ ನೀಡಿ, ತಮ್ಮ ಹೃದಯವೈಶಾಲ್ಯತೆ ಯನ್ನು ಮೆರೆದರು. ಸ್ವಾಮೀಜಿಯ ಭೇಟಿಗಾಗಿ ದಲಿತರು ತಮ್ಮ ಕಾಲನಿಯನ್ನು ಶೃಂಗಾರಗೊಳಿಸಿ ದ್ದರು. ಮನೆ- ಅಂಗಳ ವನ್ನು ಶುಚಿಗೊಳಿಸಿದ್ದರಂತೆ. ಎಲ್ಲಕ್ಕಿಂತ ವಿಶೇಷವೆಂದರೆ, ದಲಿತ ಕಾಲನಿಗೆ ಭೇಟಿ ನೀಡಿದ ಪೇಜಾ ವರಶ್ರೀಗಳು ಒಂದು ಪ್ಯಾಕೇಜನ್ನು ದಲಿತರಿಗಾಗಿ ಘೋಷಿಸಿದ್ದರು.

ದಲಿತರು ಮದ್ಯ, ಮಾಂಸವನ್ನು ತ್ಯಜಿಸಿದರೆ ಅವರನ್ನು ತಾನು ವೈಷ್ಣವರಾಗಿಸುತ್ತೇನೆ’ ಎನ್ನುವುದೇ ಈ ದಲಿತ ಪ್ಯಾಕೇಜ್. ದಲಿತರು ಇಸ್ಲಾಂ ಧರ್ಮಕ್ಕೆ, ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುವ ಅಗತ್ಯ ವಿಲ್ಲ, ನನ್ನಲ್ಲೂ ಮತಾಂತರದ ಪ್ಯಾಕೇಜ್ ಇದೆ ಎನ್ನುವುದನ್ನು ಅವರು ದಲಿತರಿಗೆ ತಿಳಿಸಿದ್ದಾರೆ.

ದಲಿತ ಕಾಲನಿಗೆ ಪೇಜಾವರರು ನೀಡಿರುವ ಭೇಟಿ ಶ್ಲಾಘನೀಯವಾಗಿದೆ. ಆದರೆ ಅವರು ವ್ರತಧಾರಿಯಾಗಿ ದಲಿತರ ಕಾಲನಿಗೆ ಭೇಟಿ ನೀಡಿದ್ದರು. ದಲಿತರ ಮನೆಯಲ್ಲಿ ಅವರ ಮನೆ ದೇವರಿಗೆ ಪೂಜೆ ಯನ್ನೇನೋ ಸಲ್ಲಿಸಿದರು. ಆದರೆ ದಲಿತರ ಮನೆಯಲ್ಲಿ ಏನಾದರೂ ಉಂಡರೇ, ತಿಂದರೆ? ಎನ್ನುವು ದರ ಕುರಿತಂತೆ ಯಾವ ಪತ್ರಿಕೆಗಳಲ್ಲೂ ಮಾಹಿತಿಯಿರಲಿಲ್ಲ.

ಬಹುಶಃ ದಲಿತರ ಮನೆಯಲ್ಲಿ ಅವರು ಕೊಟ್ಟ ಒಂದು ಹಿಡಿ ಅವಲಕ್ಕಿಯನ್ನು ‘ಕೃಷ್ಣಾರ್ಪಣ’ ಎಂದು ಬಾಯಿಗೆ ಹಾಕಿಕೊಂಡಿದ್ದರೆ, ಅದು ರಾಜ್ಯ ಮಟ್ಟದಲ್ಲಿ ಕ್ರಾಂತಿ ಕಾರಕ ಸುದ್ದಿಯಾಗುತ್ತಿತ್ತು.

ಆದರೆ ಅಂತಹದೇನೂ ನಡೆಯಲಿಲ್ಲ. ಪೇಜಾವರರನ್ನು ಬೆರಳತುದಿಯಿಂದ ದಲಿತರು ಸ್ಪರ್ಶಿಸುತ್ತಿರು ವುದನ್ನೇ ಪತ್ರಿಕೆಗಳು ಮಹಾಕ್ರಾಂತಿ ಯೆಂಬಂತೆ ಛಾಪಿಸಿದ್ದವು. ಪೇಜಾವರರ ಪಾಲಿಗೆ ಅದೊಂದು ಮಹಾನ್ ಸಾಧನೆ ಮತ್ತು ಕ್ರಾಂತಿಯೇ ಆಗಿರಬಹುದು. ಆದರೆ ಶತಶತಮಾನ ಗಳಿಂದ ಅಸ್ಪಶತೆಯ ಅವಮಾನವನ್ನು ಅನುಭವಿಸಿಕೊಂಡು ಬಂದಿರುವ ದಲಿತರಿಗೆ ಅದರಿಂದ ಏನು ಪ್ರಯೋಜನವಾದಂ ತಾಯಿತು. ಪೇಜಾವರರು ದಲಿತ ಕಾಲನಿಯಲ್ಲಿ ದಲಿತರೊಂದಿಗೆ ಸಾಮೂಹಿಕ ಭೋಜನವನ್ನು ಮಾಡಿದ್ದರೆ ಆ ದಿನ ದಲಿತರ ಪಾಲಿಗೆ ಆಶಾದಾಯಕ ದಿನವಾಗುತ್ತಿತ್ತು. ಆದರೆ ಇದಕ್ಕೆ ಪೇಜಾವರರು ಸಿದ್ಧರಿರಲಿಲ್ಲ.

ವಿಪರ್ಯಾಸವೆಂದರೆ, ಕ್ರೆಸ್ತ, ಇಸ್ಲಾಂ ಧರ್ಮಕ್ಕೆ ದಲಿತರು ಮತಾಂತರವಾಗುವುದನ್ನು ತಡೆಯಲು ಪೇಜಾವರರು ಘೋಷಿಸಿದ ಪ್ಯಾಕೇಜ್. ದಲಿತರು ಮಾಂಸಾಹಾರವನ್ನು ತ್ಯಜಿಸುವುದಾದರೆ ಅವರನ್ನು ವೈಷ್ಣವ ಧರ್ಮಕ್ಕೆ ಮತಾಂತರ ಗೊಳಿಸಲು ತಾನು ಸಿದ್ಧ ಎಂದಿದ್ದಾರೆ ಅವರು. ಪೇಜಾವರ ಶ್ರೀಗಳು ಒಂದನ್ನು ಸ್ಪಷ್ಟಪಡಿ ಬೇಕು.

ಈಗ ಇರುವ ದಲಿತರು ಹಿಂದೂ ಧರ್ಮಕ್ಕೆ ಸೇರಿದವರಲ್ಲವೆ? ಅವರನ್ನು ಹಿಂದೂಗಳೆಂದು ನೀವು ಒಪ್ಪುತ್ತೀರಾದರೆ, ಅವರು ಮತ್ತೊಮ್ಮೆ ಮತಾಂತರವಾಗುವ ಆವಶ್ಯಕತೆ ಇದೆಯೆ? ಉಳಿದೆಲ್ಲ ಜಾತಿ ಗಳಿಗೆ ಈ ಮತಾಂತರದ ಅಗತ್ಯವಿಲ್ಲದೇ ಇರುವಾಗ ದಲಿತರನ್ನು ನೀವು ಒಪ್ಪಬೇಕಾದರೆ, ಸ್ವೀಕರಿಸಬೇಕಾದರೆ ಯಾಕೆ ಈ ಮತಾಂತರ ಅಗತ್ಯ ವಾಗುತ್ತದೆ? ಮಾಂಸಾಹಾರ ಉಳಿದೆಲ್ಲ ಜಾತಿಗಳ ಆಹಾರವಾಗಿರುವಂತೆಯೇ ದಲಿತ ರದ್ದೂ ಆಹಾರವಾಗಿದೆ.

ದಲಿತರಿಗೆ ಅವರದೇ ಆದ ಸಂಸ್ಕೃತಿಯಿದೆ. ದೈವ ದೇವರುಗಳಿವೆ. ಆಚರಣೆಗಳಿವೆ. ಅವರನ್ನು ನೀವು ಹಿಂದೂಗಳೆಂದು ಒಪ್ಪುವುದಾದರೆ, ಅವರೇಕೆ ಮತ್ತೊಮ್ಮೆ ವೈಷ್ಣವ ಧರ್ಮಕ್ಕೆ ಮತಾಂತರ ವಾಗಬೇಕು? ನಿಮ್ಮಂತೆಯೇ ಅವರೂ ಹಿಂದೂಗಳು ಎನ್ನುವುದು ನಿಜವೇ ಆಗಿದ್ದರೆ ನೀವೇಕೆ ಅವರ ಮನೆಯಲ್ಲಿ ಸಾಮೂಹಿಕವಾಗಿ ಸಸ್ಯಾಹಾರ ಊಟವನ್ನು ಮಾಡಬಾರದು? ಹಿಂದೂಗಳೆಲ್ಲ ಒಂದು ಎನ್ನುವುದನ್ನು ಎಲ್ಲಾ ವೇದಿಕೆಗಳಲ್ಲಿ, ಸಂಘ ಪರಿವಾರ ಹಮ್ಮಿಕೊಳ್ಳುವ ಹಿಂದೂ ಸಮಾ ವೇಶಗಳಲ್ಲಿ ಸಾರಿ ಸಾರಿ ಹೇಳುತ್ತಿರುವವರು ನೀವು. ಆದರೆ ಅನುಷ್ಠಾನದ ಸಮಯದಲ್ಲಿ ಮಾತ್ರ ದಲಿತರು ಬೇರೆಯಾಗುವುದು ಹೇಗೆ?

ಮತಾಂತರ ದಲಿತರ ಪಾಲಿಗೆ ಬಿಡುಗಡೆಯ ದಾರಿಯೂ ಕೂಡ. ಈ ದೇಶದಲ್ಲಿ ಲಕ್ಷಾಂತರ ದಲಿತರು, ಶೂದ್ರರು ಮತಾಂತರದ ಮೂಲಕ ಸಮಾನತೆಯ ಬದುಕನ್ನು ಕಂಡುಕೊಂಡಿದ್ದಾರೆ. ದಲಿತರ ಪಾಲಿಗೆ ಮತಾಂತರವೆನ್ನುವುದು ಆಧ್ಯಾತ್ಮಿಕ ಆವಶ್ಯಕತೆಯಷ್ಟೇ ಅಲ್ಲ, ಅದು ಅವರ ಪಾಲಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಆವಶ್ಯಕತೆಯೂ ಕೂಡ. ಯಾವ ವೈಷ್ಣವ ಧರ್ಮ ತಮ್ಮನ್ನು ಚಂಡಾಲ, ನೀಚ ಎಂಬಿತ್ಯಾದಿಯಾಗಿ ಭಾವಿಸುತ್ತದೆಯೋ ಆ ಧರ್ಮವನ್ನು ದಲಿತರು ಯಾಕಾಗಿ ಗೌರವಿಸಬೇಕು.

ತಮ್ಮ ಸಂಸ್ಕೃತಿ, ಆಹಾರ ಪದ್ಧತಿ ಎಲ್ಲವನ್ನು ಬದಿಗಿಟ್ಟು ನೀವು ನೀಡುವ ವೈಷ್ಣವ ಧರ್ಮವನ್ನು ಆಚರಿ ಸಿದರೆ ಅದು ಅವರಿಗೆ ರಾಜಕೀಯ, ಸಾಮಾಜಿಕ ಬಿಡುಗಡೆಯನ್ನು ಕೊಡಬಹುದೆ? ಅಥವಾ ದಲಿತ ವೈಷ್ಣವರಾಗಿ ಮತ್ತೆ ತಮ್ಮ ಕಾಲನಿಯಲ್ಲಿ ದಿನನೂಕಬೇಕಾದೀತೋ?

ದಲಿತರು ಮನುಷ್ಯರು. ಇದನ್ನು ಪೇಜಾವರರು ಮೊದಲು ಪರಿಗಣಿಸಬೇಕಾಗಿದೆ. ಅವರಿಗೆ ಮನಸ್ಸು ಎನ್ನುವುದಿದೆ. ಅವರು ಹಿಂದೂಗಳು ಎನ್ನುವುದನ್ನು ಪೇಜಾವರರು ಒಪ್ಪುತ್ತಾರಾದರೆ, ಹಿಂದೂಗಳು ಎಂದು ಸಮಾನತೆಯಿಂದ ಕಂಡು ಗೌರವಿಸುತ್ತಾರಾದರೆ ಮತ್ತೆ ವೈಷ್ಣವರಾಗುವ ಅಗತ್ಯವೇನಿದೆ? ದಲಿತರನ್ನು ಹೀನಾಯವಾಗಿ ಕಾಣುತ್ತಿರುವುದರ ವಿರುದ್ಧ ಪೇಜಾವರರು ನೋವಿನಿಂದ ಮಾತನಾಡಿ ದ್ದಾರೆ.

ತನ್ನ ಸಮಾಜದ ಮುಖ್ಯವಾಹಿನಿಯಲ್ಲಿ ದಲಿತರನ್ನು ಕೊಂಡೊ ಯ್ಯುವ ಉದ್ದೇಶ ಪೇಜಾವರರಿ ಗಿದ್ದರೆ ಅದಕ್ಕೊಂದೇ ಮಾರ್ಗ. ದಲಿತರೊಂದಿಗೆ ಸಾಮೂಹಿಕ ಭೋಜನವನ್ನು ಮಾಡುವುದು. ಪೇಜಾವರರು ಇದಕ್ಕೆ ಸಿದ್ಧರಿದ್ದಾರೆಯೆ? ಈ ಪ್ರಶ್ನೆಗೆ ಪೇಜಾವರರು ನೀಡುವ ಉತ್ತರದಿಂದ, ದಲಿತರು ಹಿಂದೂಗಳು ಹೌದೋ, ಅಲ್ಲವೋ ಎನ್ನುವುದು ಸಾಬೀತಾಗಿ ಬಿಡುತ್ತದೆ.

ದಲಿತರನ್ನು ಹಿಂದೂಗಳೆಂದು ನಂಬಿಸಿ, ವಂಚಿಸಿ ಅವರನ್ನು ಮುಸ್ಲಿಮರ, ಕ್ರೈಸ್ತರ ವಿರುದ್ಧ ಎತ್ತಿ ಕಟ್ಟುವ ಕೆಲಸ ಹಿರಿಯರಾದ ಪೇಜಾವರಶ್ರೀಗಳಿಗೆ ಶೋಭಿಸು ವುದಿಲ್ಲ. ದಲಿತರಿಗೆ ಯಾವುದೇ ನ್ಯಾಯವನ್ನು ಕೊಡದೆ, ಅವರನ್ನು ಸಂಘಪರಿವಾರದ ಕುಕೃತ್ಯಗಳಿಗೆ ಬಲಿಕೊಡುವ ಉದ್ದೇಶದಿಂದ ಪೇಜಾವರರು ದಲಿತಕಾಲನಿಗೆ ಕಾಲಿಟ್ಟಿದಿದ್ದರೆ ಅದಕ್ಕಿಂತ ಅನ್ಯಾಯ, ಮೋಸ ಇನ್ನೊಂದಿಲ್ಲ.

ದಲಿತರನ್ನು ಪೇಜಾವರರು ವೈಷ್ಣವಧರ್ಮಕ್ಕೆ ಸೇರಿಸದಿದ್ದರೂ ಚಿಂತಿಲ್ಲ, ಹಿಂದೂಗಳೆಂದು ಒಪ್ಪದಿದ್ದರೆ ಚಿಂತಿಲ್ಲ. ದಲಿತರನ್ನು ದಲಿತರಷ್ಟಕ್ಕೇ ಬಿಡಲಿ. ದಲಿತರು ಇಂಗ್ಲಿಷ್ ಕಲಿಯಲಿ. ಕಂಪ್ಯೂಟರ್ ಕಲಿಯಲಿ. ವಿದ್ಯಾವಂತರಾಗಲಿ. ಶೋಷಿತ ಬದುಕಿನಿಂದ ಹೊರ ಬರುವ ದಾರಿ ಅವರಿಗೆ ಆ ಮೂಲಕವೇ ತೆರೆದುಕೊಳ್ಳುತ್ತದೆ. ಪೇಜಾವರರಂತಹ ಹಿರಿಯ ಸ್ವಾಮೀಜಿಗಳು ದಲಿತರ ಆ ದಾರಿಗೆ ಯಾವ ಕಾರಣಕ್ಕೂ ತಡೆಯಾಗದಿರಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಸಂಪಾದಕೀಯ; ವಾರ್ತಾ ಭಾರತಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-01 00:00:00

Tell a Friend

ಪ್ರತಿಸ್ಪಂದನ
hassanmukha, mangalore/ksa
2010-09-03
ಅಂದರೆ ಜಾತಿ ವ್ಯವಸ್ತೆಯನ್ನು ಮಾಡಿದ ಮನು ಮತ್ತು ಅವನ ಕೂಟವನ್ನು ತಲೆ ಕೆಟ್ಟವರು ಅಂತ ಹೇಳುತಿರೋ ಮಿ.ರೋಶನ್? ಪಾನ್ಚಜನ್ಯರಿಗೆ ಬೇಸರವಾದೀತು.
ರೋಶನ್, ಮಂಗಳೂರು
2010-09-01
ಹಸನ್ ಮುಕ್ಕ ರವರೆ ಪಾಂಚಜನ್ಯ ಏನು ಪ್ರತಿಕ್ರಿಯೆ ಮಾಡುತ್ತಾರೊ ಅದೇ ಪ್ರತಿಕ್ರಿಯೆಯನ್ನು ನಿಜವಾದ ಭಾರತೀಯ ಮಾಡುತ್ತಾನೆ. ಇಸ್ಲಾಂ, ಕ್ರೈಸ್ತರಲ್ಲಿ ಇರದ ಹಿಂದುಳಿದವರು, ದಲಿತರು, ಹಿಂದುಗಳಲ್ಲಿ ಯಾಕೆ? ಯಾರೋ ತಲೆಕೆಟ್ಟವರು ಮಾಡಿದ ಈ ವ್ಯವಸ್ಥೆಯನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿ ಕೊಂಡಿದ್ದು ರಾಜಕಾರಣಿಗಳು ಮಾತ್ರ ಸ್ವಾತಂತ್ರ್ಯದ ನಂತರ ಇಲ್ಲಿವರೆಗೆ ಎಷ್ಟು ಕೋಟಿ ಕೋಟಿ ಯೋಜನೆ ಹಾಕಿದ್ದಾರೆ? ಏಷ್ಟು ಖರ್ಚು ಮಾಡಿದ್ದಾರೆ? ಎಷ್ಟು ಹಿಂದುಳಿದವರು ಮುಂದೆ ಬಂದಿದ್ದಾರೆ. ಯಾರಾದರೂ ಹೇಳಬಲ್ಲಿರಾ? ಬಿಟ್ಟಿ ಸಿಕ್ಕಿದರೆ, ಸಿಗುವವರೆಗೆ ಹಿಂದುಳಿದ ಸ್ಥಿತಿಯಲ್ಲಿರುತ್ತಾರೆ. ಹುಚ್ಚಿಮುಂಡೆ ಮದುವೇಲಿ ಉಂಡವನೇ ಜಾಣ.
Panchajanya, Kuwait
2010-09-01
ಇದಕ್ಕೆ ನನ್ನ ಮೊದಲ ಪ್ರತಿಕ್ರಿಯೆ ಇದು ಯಾವ ಪತ್ರಿಕೆಯಲ್ಲಿ ಬಂದ ವರದಿ ಎಂಬುದನ್ನು ಮೊದಲು ನೋಡಿ. ಆ ಪತ್ರಿಕೆ ನಿಮಗೆ ಮಾತ್ರ ಮೀಸಲು ಮತ್ತು ಮೂಸಲು. ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?

ಸರಿ ನಿಮಗೇಕೆ ಬೇಸರ ಮಾಡಿಸಲಿ ?ಕೇಳಿ ಇಲ್ಲಿ , ಪೇಜಾವರ ಶ್ರೀ ಹೇಳಿದಂತೆ ದಲಿತರು ಹಿಂದುಗಳಾದರೆ ಅವರನ್ನು ವೈಷ್ಣವಧರ್ಮಕ್ಕೆ ಸೇರಿಸುವ ಅಗತ್ಯ ಏನಿದೆ ಎಂಬುದೇ ತಾನೇ ನಿಮ್ಮ ಪ್ರಶ್ನೆ?....!ಅನಾದಿ ಕಾಲದಿಂದಲೂ ಹಿಂದುಗಳಲ್ಲಿ ವೈಷ್ಣವ ಮತ್ತು ಶೈವ ಧರ್ಮಗಳೆಂಬ ಎರಡು ಪಂಗಡಗಳಿದ್ದವು. ಕ್ರಿಶ್ಚಿಯನ್ನರಲ್ಲಿ ರೋಮನ್ ಕೆಥೋಲಿಕ್, ಬ್ಯಾಪ್ಟಿಸ್ಟ್, ಒರ್ತೋಡಾಕ್ಸ್, ಮೊದಲಾದ ಪಂಗಡಗಳಿರುವಂತೆ, ಜೈನರಲ್ಲಿ ಶ್ವೆತಂಬರ ಮತ್ತು ದಿಗಂಬರ ಎಂಬ ಪಂಗಡಗಳಿಲ್ಲವೇ ಹಾಗೆ. ಅಷ್ಟೇ ಏಕೆ ನಿಮ್ಮ ಧರ್ಮದಲ್ಲಿಯೂ ಶಾಫಿ,ಸಲಫಿ,ಸುನ್ನಿ ..ಇನ್ನಿತರ ಪಂಗಡಗಳಿಲ್ಲವೇ ಹಾಗೆಯೇ!

ಆಯಾ ಪಂಗಡದ ಪ್ರತಿಪಾದಕರು ಅನುಸರಿಸಿದಂತೆ ಮಾರ್ಗದರ್ಶನ ನೀಡಿದಂತೆ ಅವರ ಅನುಯಾಯಿಗಳು, ಹಿಂಬಾಲಕರು ಮುಂದುವರೆಯುತ್ತಾರೆ....ದ್ವೈತ ಸಿದ್ದಾಂತ ,ಅದ್ವೈತ ಸಿದ್ದಾಂತ, ವಿಶಿಷ್ಟಾದ್ವೈತ ಸಿದ್ದಾಂತ ವನ್ನು ಪ್ರತಿಪಾದಿಸಿದ ಅಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ರು ತಮ್ಮದೇ ಆದ ಮಾರ್ಗಸೂತ್ರದಲ್ಲೇ ತಮ್ಮ ಶಿಷ್ಯವೃಂದ ವನ್ನು, ಅನುಯಾಯಿಗಳನ್ನು, ಭಕ್ತವೃಂದವನ್ನು ಮುನ್ನಡೆಸಿಕೊಂಡು ಬಂದರು. ಹಾಗೆಯೇ ಪೇಜಾವರ ಶ್ರೀ ವೈಷ್ಣವ ಧರ್ಮ ಎಂದು ಹೇಳಿದ್ದಾರೋ ಅಂದರೆ ಆ ಪಂಗಡದ , ಸಿದ್ದಾಂತದ ಅನುಯಾಯಿಗಳಾದ ಅವರು,ಅಹಿಂಸೆಯನ್ನು ನಾಶಮಾಡಿ ಬರುವುದಾದರೆ, ಅಂದರೆ ಮಾಂಸಹಾರವನ್ನು ತ್ಯಜಿಸಿ ಬರುವುದಾದರೆ, ಜೊತೆಗೆ ಸಮಾಜಕಂಟಕ ಮದ್ಯಸೇವನೆಯನ್ನು ಬಿಟ್ಟು ಬರುವುದಾದರೆ ವೈಷ್ಣವ ಪಂಗಡ(ಧರ್ಮ)ದ ದೀಕ್ಷೆಯನ್ನು ನೀಡುವುದಾಗಿ ಹೇಳಿದ್ದರು.

ಅಹಾರಪದ್ಧತಿಯಲ್ಲಿ ಮತ್ತು ಉಡುಗೆತೊದುಗೆಗಳಲ್ಲಿ ಇರುವ ಭಿನ್ನತೆಯೇ ಅಲ್ಲವೇ ಧರ್ಮಧರ್ಮಗಳಲ್ಲಿ ಮತ್ತು ಪಂಗಡಗಳಲ್ಲಿ ತನ್ನದು ಮಾತ್ರ ಮಿಗಿಲು ಎಂಬ ಭಾವನೆ ಮೂಡಿಸುವುದು? ಶೈವ ಪಂಗಡದ ಜನ ಶಿವನನ್ನು ಆರಾಧಿಸುತ್ತಾರೆ,ವೈಷ್ಣವ ಪಂಗಡದವರು ವಿಷ್ಣುವನ್ನು ಆರಾಧಿಸುತ್ತಾರೆ.ನಮ್ಮ ದೋಸೆಯಲ್ಲಿ ತೂತು ಹುಡುಕಲು ಹೊರಡಬೇಡಿ. ನಿಮ್ಮ ಕಾವಲಿಯಲ್ಲೇ ತೂತು ಇರುವಾಗ......!ನಿಮ್ಮ ಎಲ್ಲ ಪದ್ಧತಿಗಳು ನಮಗೆ ಉಲ್ಟಾ ಎಂದುಕೊಂಡರೆ, ನಿಮ್ಮಲ್ಲೇ ಇರುವ ಕೆಲವು ಪಂಗಡಗಳು ನಿಮಗೆ ಉಲ್ಟಾ ಇದೆಯಲ್ಲ...?ಅಥವಾ ನಿಮ್ಮ ಆಚರಣೆಗಳೇ ಅವರಿಗೆ ಉಲ್ಟಾವೆ?. ನಿಮ್ಮ ಉಪವಾಸ ವ್ರತ ಶುರುವಾದ ಮರುದಿನ ಕೆಲ ಪಂಗಡದ ಜನ ಶುರು ಮಾಡುತ್ತಾರೆ ಅಲ್ಲವೇ?. ನೀವು ರಂಜಾನ್ ಹಬ್ಬ ಆಚರಣೆ ಮಾಡುವ ಮರುದಿನ ಕೆಲವು ಪಂಗಡ ಜನರು ಹಬ್ಬ ಆಚರಿಸುತ್ತಾರೆ ಅಲ್ಲವೇ? ಕೆಲವು ಪಂಗಡದ ಜನರು ಪ್ರತ್ಯೇಕ ಮಸೀದಿಗಳಿಗೆ ಹೋಗುತ್ತಾರೆ ಏಕೆ?ಅವರನ್ನೇಕೆ ನಿಮ್ಮ ಮಸೀದಿಗೆ ಸೇರಿಸುವುದಿಲ್ಲ ?. ನಿಮ್ಮ ಪತ್ರಿಕೆಗೆ ಹೇಳಿ ಮೊದಲು ಆ ಕಾವಲಿಯ ತೂತನ್ನು ಮುಚ್ಚಲು.!ಮತ್ತೆ ಹಿಂದೂಗಳ ವಿಷಯಕ್ಕೆ ಬರಲಿ.!

ಇಂದು ಶ್ರೀಕೃಷ್ಣ ಜಯಂತಿ. ಪೇಜಾವರ ಶ್ರೀ ಯವರು ಅವರದೇ ಆದ ವ್ರತಾಚರಣೆಯಲ್ಲಿ ತೊಡಗಿರಬಹುದು...ಅಥವಾ ಉಪವಾಸದಲ್ಲಿಯೇ ಇರಬಹುದು.ನೀವೀಗ ಆಚರಿಸುತ್ತಿಲ್ಲವೇ...?ನಿಮಗೀಗ ಊಟಮಾಡಿ ಎಂದರೆ ನೀವು ತಯಾರಿದ್ದೀರಾ?ಅಂತಹದರಲ್ಲಿ ಅವರು ಊಟ ಮಾಡಲಿಲ್ಲ ಎಂದು ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿರುವುದು ಯಾಕೆ?

ನಿಮ್ಮ ಪತ್ರಿಕೆಯ ಸಂಪಾದಕರು ಹೇಳಿರುವ ಪ್ರಕಾರ ಮತಾಂತರ ಎನ್ನುವುದು ದಲಿತರಿಗೆ ಬಿಡುಗಡೆಯ ದಾರಿ. ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ದಲಿತರಾಗಿದ್ದರು ಎಂದು ಹೇಳಿದ ಹಾಗಾಯ್ತು. ಈಗ ಏನಂತೀರಿ ಅದಕ್ಕೆ?.

ಸ್ವತಂತ್ರ ಭಾರತದಲ್ಲಿ 63 ವರ್ಷಗಳಿಂದಲೂ ದಲಿತರನ್ನು ಮೇಲೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ಇಷ್ಟು ವರ್ಷಗಳಾದರೂ ಅವರಿಗೆ ಮೇಲೆ ಬರಲಾಗಲಿಲ್ಲ ಎಂದರೆ ಅದು ರಾಜಕೀಯ ಪಕ್ಷಗಳ ಕಸರತ್ತಿನ ಪ್ರಭಾವ. ಇಷ್ಟೆಲ್ಲಾ ಮಾಡುವುದರ ಬದಲು ಅವರಿಗೆ ಶಿಕ್ಷಣವನ್ನು ಕಡ್ಡಾಯ ಮಾಡಿದ್ದರೆ ಸಾಕಿತ್ತು. ಸುಶಿಕ್ಷಿತ ದಲಿತರಿಗೆ ಮಾತ್ರ ಮೀಸಲಾತಿ ಎಂದು ಮಾಡಿದ್ದರೆ ಅವರು ಯಾವಾಗಲೋ ಪ್ರಗತಿ ಹೊಂದುತ್ತಿದ್ದರು. ರಾಜಕೀಯದಾಟದಲ್ಲಿ ದಲಿತರು ಸೊರಗಿದರು ಮಾತ್ರವಲ್ಲ, ಇತರ ಧರ್ಮಗಳ ಪುಸಲಾಯಿಸುವಿಕೆಗೆ ಮರುಳಾಗಿ ತಮ್ಮ ನೆಮ್ಮದಿಯನ್ನೇ ಕಳೆದುಕೊಂಡರು. ಅದಕ್ಕಾಗಿ ನೀವು ಕೂಡ ಮನೆಬಿಟ್ಟು ಹೋಗಬೇಡಿ ಉಳಿದವರಂತೆ ಎಂದು ದಲಿತರಿಗೆ ಪೇಜಾವರಶ್ರೀಯವರು ಜಾಗೃತಿಯನ್ನು ಉಂಟುಮಾಡುತ್ತಿರುವುದು ಬಹುಷಃ ಆ ಸಂಪಾದಕರಿಗೆ ಏಕೆ ತಡೆದು ಕೊಳ್ಳಲಾಗುತಿಲ್ಲ ಎಂಬುದು ಇಡೀ ಮಂಗಳೂರಿಗೆ ಗೊತ್ತಿದೆ.

ಇಂತಹ ವರದಿಗೆ ತಲೆಕೆಡಿಸಿಕೊಳ್ಳದೆ ವಿಶಾಲವಾಗಿ ಯೋಚಿಸುವುದನ್ನು ಆರಂಬಿಸಿ ಹಸನ್ಮುಖ ಅವರೇ.......ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?think my friend....!

hassanmukha, mangalore
2010-09-01
ಪಾಂಚಜನ್ಯ , ಮೇಲೆ ತಿಳಿಸಿದ ವರದಿಗೆ ತಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ , ಹಸ್ಸನ್ಮುಖ
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............
»ನ್ಯಾ ಸುಧೀಂದ್ರರಾವ್ : ಬಂಗಾರಪೇಟೆಯ ಸ್ಟಾಂಪ್ ವೆಂಡರ್ ಮಗ ಇಂದಿಗೂ ಮನೆ ಸಾಲ ಕಟ್ಟುತ್ತಿರುವ ನ್ಯಾಯಾಧೀಶ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri