ಸುಳ್ಯ : ದುಗ್ಗಲಡ್ಕದಲ್ಲಿ "ಕಸಾಪ ಸಾಹಿತ್ಯ" ಸಂಭ್ರಮ : ಸಾಹಿತ್ಯದಲ್ಲಿ ಆದರ್ಶವಿದೆ: ಯುಸುಗೌ |
ಪ್ರಕಟಿಸಿದ ದಿನಾಂಕ : 2010-09-01
ಸುಳ್ಯ, ಆ.31: ಸಾಹಿತ್ಯದಲ್ಲಿ ಆದರ್ಶವಿರುವುದರಿಂದಲೇ ಸಾಹಿತ್ಯ ಕೃತಿಗಳು ಬದುಕಿಗೆ ಮಾರ್ಗ ದರ್ಶಕ, ಮಾನವಿಕ ಮೌಲ್ಯಗಳಾಗಿವೆ ಎಂದು ಸಾಹಿತಿ, ಉಪನ್ಯಾಸಕ ಯು.ಸುಬ್ರಾಯ ಗೌಡ ಹೇಳಿದ್ದಾರೆ. ಸುಳ್ಯ ತಾಲೂಕು ಕನ್ನಡ ಪರಿಷತ್ ವತಿಯಿಂದ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆ ಮತ್ತು ಮಿತ್ರ ಯುವಕ ಮಂಡಲದ ಸಹಯೋಗದಲ್ಲಿ ನಡೆದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ದಲ್ಲಿ ಅವರು ಉಪನ್ಯಾಸ ನೀಡಿದರು.
ಹದಗೊಳ್ಳದ ಮನಸ್ಸು ಪ್ರಕ್ಷುಬ್ಧಗೊಳ್ಳುತ್ತದೆ. ಆದರೆ ಪುಸ್ತಕಗಳ ಓದು ಮನುಷ್ಯನನ್ನು ಹದಗೊಳಿಸು ತ್ತದೆ. ಸುಸಂಸ್ಕೃತ ನೆಲೆಯಲ್ಲಿರುವಂತೆ ಮಾಡುತ್ತದೆ ಎಂದು ಅವರು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಮದುವೆಗದ್ದೆ ಭೋ ಜಪ್ಪ ಗೌಡ ಮಾತನಾಡಿ, ಮನುಷ್ಯನಿಗೆ ಪ್ರಕೃತಿಯೇ ಸಾಹಿತ್ಯ ನೀಡುತ್ತದೆ. ಅದರ ಒಡನಾಟದಿಂದ ಸಾಹಿತ್ಯ ಬದುಕು ಶ್ರೀಮಂತಗೊಳ್ಳುತ್ತದೆ ಎಂದರು.ಕಸಾಪ ಅಧ್ಯಕ್ಷೆ ವಿೂನಾಕ್ಷಿ ಗೌಡ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸೂಫೀ ಪೆರಾಜೆ, ಮಿತ್ರ ಯುವಕ ಮಂಡಲ ಅಧ್ಯಕ್ಷ ಕೆ.ಟಿ.ಭಾಗಿಶ್ ಉಪಸ್ಥಿತರಿದ್ದರು.ಕಸಾಪ ಕೋಶಾಧಿಕಾರಿ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ದಿನೇಶ ಮಡಪ್ಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ನಿರ್ದೇಶಕ ಚಂದ್ರಶೇಖರ ಪೇರಾಲು ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭ್ಹಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-01 00:00:00
|
|
|