ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು

ಮುಂಗಾರು ಕೊಂಡಿ ಕಳಚಿಕೊಂಡಿತು

ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ.

‘ಮುಂಗಾರು' ಮುನ್ನಡೆಸಲು ಅಂತಿಮವಾಗಿ ರಘುರಾಮ ಶೆಟ್ರು ಹೊಸ ದಾರಿ ಕಂಡು ಕೊಂಡರು. ಪತ್ರಿಕೆಯ ಆಡಳಿತ ಸೂತ್ರವನ್ನು ಹೊಸದಾಗಿ ಬಂಡವಾಳ ತೊಡಗಿಸುವವರಿಗೆ ವಹಿಸಿಕೊಡು ವುದು ಮತ್ತು ತಾವು ಸಂಪಾದಕರಾಗಿ ಮುಂದುವರಿ ಯುವುದು ಶೆಟ್ರು ಕಂಡುಕೊಂಡ ಹೊಸ ದಾರಿ. ಶ್ರಮ ಪಟ್ಟು ಹುಟ್ಟು ಹಾಕಿದ ಸಂಸ್ಥೆ ಯಾವುದೇ ಕಾರಣಕ್ಕೂ ಮುಚ್ಚಬಾರದು ಎನ್ನುವ ಕಾಳಜಿ ಯಿಂದಾಗಿ ಆಡಳಿತ ನಿರ್ವಹಣೆಯನ್ನು ತೊರೆಯಲು ಶೆಟ್ರು ಮುಂದಾಗಿದ್ದರು ಮತ್ತು ಅದು ಅನಿವಾರ್ಯವೂ ಆಗಿತ್ತು.

ಮೂಲತ: ತುಳುವರಾಗಿದ್ದು ಬೆಂಗಳೂರಲ್ಲಿ ಉದ್ದಿಮೆ ನಡೆಸಿ ಹೆಸರುವಾಸಿಯಾಗಿದ್ದ ಡಿ.ಕೆ.ಚೌಟ ಅವರ ಹೆಗಲಿಗೆ ‘ಮುಂಗಾರು' ಹೊಣೆ ವಹಿಸಿಕೊಟ್ಟರು. ಆಗ ಅವರ ಸಹೋದರ ಡಾ.ಡಿ.ಸಿ.ಚೌಟ ಅವರು ಆಡಳಿತ ನಿರ್ದೇಶಕರಾದರು. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂತು. ಅಂತೂ ರಘು ರಾಮ ಶೆಟ್ರು ಸಂಸ್ಥೆ ಮುನ್ನಡೆಸಲು ಹಣ ಹೊಂದಿಸುವ ಜವಾಬ್ದಾರಿಯಿಂದ ಮುಕ್ತರಾದರು, ಸಂಪಾದಕರಾಗಿ ಮುಂದುವರಿದರು.

ಹುಡುಗನಾಗಿದ್ದ ರಘುರಾಮ ಶೆಟ್ರು ಉದ್ಯೋಗ ಹರಸಿಕೊಂಡು ಮುಂಬೈ ನಗರ ಸೇರಿ ಹೊಟೇಲ್ ನಲ್ಲಿ ಚಹಾ ಸರಬರಾಜು ಮಾಡುವ ಕಾಯಕದಲ್ಲಿದ್ದರು. ಆಗ ಆ ಹೋಟೆಲ್ ಸಮೀ ಪವೇ ‘ಪ್ರೀಪ್ರೆಸ್ ಜರ್ನಲ್' ಆಂಗ್ಲ ದಿನಪತ್ರಿಕೆ ಕಚೇರಿಯಿತ್ತು. ಅಲ್ಲಿ ಆ ಕಾಲದಲ್ಲಿ ಉಪಸಂಪಾದಕ ರಾಗಿದ್ದವರು ವೈ. ಎಂ.ಹೆಗ್ಡೆ(ಎಕ್ಕಾರು ಮಹಾಬಲ ಹೆಗ್ಡೆ)ಯವರು. ಅವರು ಅಲ್ಲಿ ನಿವೃತ್ತಿ ಹೊಂದಿ ಮಂಗಳೂರಲ್ಲಿ ನೆಲೆಸಿದ್ದರು. ಶೆಟ್ರಿಗೂ ಪರಿಚಿತರಾಗಿದ್ದ ವೈ.ಎಂ.ಹೆಗ್ಡೆಯವರು ‘ಮುಂಗಾರು' ಪತ್ರಿಕೆಯ ನೂತನ ಎಕ್ಸಿಕ್ಯುಟಿವ್ ಎಡಿಟರ್ ಆದರು. ನಿತ್ಯದ ಸುದ್ದಿಗಳ ನಿರ್ವಹಣೆಯನ್ನು ವೈ.ಎಂ.ಹೆಗ್ಡೆ ಯವರು ನೋಡಿ ಕೊಳ್ಳುತ್ತಿದ್ದುದರಿಂದ ರಘುರಾಮ ಶೆಟ್ರಿಗೆ ತುಸು ಹಗುರವಾಗಿತ್ತು. ಸಂಪಾದಕೀಯ, ವಿಶೇಷ ಬರಹ ಗಳಿಗೆ ಗಮನ ಕೊಡಲು ಸಾಧ್ಯವಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ.

ರಘುರಾಮ ಶೆಟ್ರು ಆಡಳಿತವನ್ನು ವಹಿಸಿಕೊಟ್ಟ ಮೇಲೆ ಖಿನ್ನರಾಗಿಬಿಟ್ಟರು. ಸಂಪಾದಕೀಯ ಬರೆಯಲು ಉದಾಸೀನ ತೋರಿದರು. ಅಗ್ರಲೇಖನ ಬರೆಯಲು ಒತ್ತಾಯಿಸಬೇಕಾಯಿತು. ಬೀಡಿ ಸೇದಿಕೊಂಡು ಅವರು ಬರೆಯುತ್ತಿದ್ದ ಭಂಗಿಯನ್ನು ನೋಡಿ ಆನಂದಿಸುತ್ತಿದ್ದ ನನ್ನಂಥವರು ಶೆಟ್ರು ಬೀಡಿ ಸೇದುವುದನ್ನೇ ನೋಡಬೇಕಾಯಿತೇ ಹೊರತು ಅವರ ಲೇಖನಿಯಿಂದ ಲೇಖನಗಳು ಹರಿದು ಬರುವುದು ಅಪರೂಪವಾಯಿತು.

ಶೆಟ್ರಿಗೆ ಏನಾಗಿದೆ? ಯಾಕೆ ಲೇಖನ ಬರೆಯುತ್ತಿಲ್ಲ? ಇತ್ಯಾದಿ ಪ್ರಶ್ನೆಗಳನ್ನು ಪತ್ರಿಕೆ ಮಾರುವ ಅಂಗಡಿಯವರು ಓದುಗರಿಂದ ಎದುರಿಸಬೇಕಾಯಿತು. ಮೊದಲಿನಂತೆ ಸುದ್ದಿಗಳ ಬಗ್ಗೆ ನನ್ನೊಂದಿಗೆ ಚರ್ಚಿ ಸುವುದನ್ನು ಬಿಟ್ಟರು. ನಾನೇ ಅವರ ಗಮನಕ್ಕೆ ತಂದರೂ ಅಷ್ಟೊಂದು ಉತ್ಸಾಹ ತೋರಿಸುತ್ತಿರಲಿಲ್ಲ. ಏನೇ ಹೇಳಿದರೂ ಅವರಿಂದ ಬರುತ್ತಿದ್ದ ಉತ್ತರ ‘ನೀನೇ ನೋಡ್ಕೊಳ್ಳೋ ತಮ್ಮಾ'.

ಮನೆಗೆ ಬಂದು ಹೋಗಲು ಹೇಳುತ್ತಿದ್ದರು. ಏನೋ ಇರಬೇಕು ಅಂದುಕೊಂಡು ಮನೆಗೆ ಹೋದರೆ ಆರಾಮ ಕುರ್ಚಿಯಲ್ಲಿ ಒರಗಿಕೊಂಡು ಬೀಡಿ ಸೇದುತ್ತಿದ್ದರು. ‘ಸಾರ್ ಅದೇನೋ ಮಾತಾಡಲಿಕ್ಕಿದೆ ಅಂದಿರಿ' ಅಂದ್ರೆ ‘ಏನೂ ಇಲ್ಲಾ ಕಣೋ, ಸುಮ್ಮನೆ ಕರೆದೆ' ಎಂದೇಳಿ ನಿರ್ಲಿಪ್ತರಾಗುತ್ತಿದ್ದರು. ಅಲ್ಲಿ ಅವರು ಮಾತಾಡುತ್ತಿದ್ದು ಲೋಕಾಭಿರಾಮವಾಗಿ ಮಾತ್ರ. ಚಹಾ ಕುಡಿದು ಹೊರಟ ಮೇಲೆ ‘ಸಂಜೆ ಫೋನ್ ಮಾಡು ಹೇಳ್ತೇನೆ' ಎನ್ನುತ್ತಿದ್ದರು. ಮತ್ತೆ ಸಂಜೆ ಫೋನ್ ಮಾಡಿದರೆ ‘ಬೆಳಿಗ್ಗೆ ಮನೆಗೆ ಬಾ'. ಅಂತೂ ನನ್ನ ಮನೆಯಲ್ಲಿ ಚಹಾ ಕುಡಿಯದಿದ್ದರೂ ಶೆಟ್ರ ಮನೆಯಲ್ಲಿ ನಿತ್ಯವೂ ಸೇವೆ ತಪ್ಪುತ್ತಿರ ಲಿಲ್ಲ.

ಅಂದರೆ ರಘುರಾಮ ಶೆಟ್ರು ಆಡಳಿತವನ್ನು ವಹಿಸಿಕೊಟ್ಟ ಮೇಲೆ ಮಾನಸಿಕವಾಗಿ ಕುಬ್ಜರಾಗಿ ಬಿಟ್ಟರು. ಮನಸ್ಸಿಲ್ಲದ ಮನಸ್ಸಿನಿಂದಲೇ ಕೆಲವು ತಿಂಗಳುಗಳನ್ನು ಸಂಪಾದಕರಾಗಿ ಶೆಟ್ರು ಕಳೆದರು. ಆದರೂ ಪತ್ರಿಕೆಯ ಪ್ರಸಾರ ಸಂಖ್ಯೆ ಇಳಿಯಲಿಲ್ಲ. ನಿನ್ನ ನಾಮದ ಬಲ ವೊಂದಿದ್ದರೆ ಸಾಕು ಅನ್ನುವಂತೆ ಪತ್ರಿ ಕೆಯ ಸಂಪಾದಕರಾಗಿ ಶೆಟ್ರು ಮುಂದುವರಿಯುತ್ತಿರುವುದನ್ನು ಓದುಗರು ಖಾತ್ರಿಪಡಿಸಿಕೊಂಡು ಅದೇ ನೆಮ್ಮದಿಯಿಂದ ಪತ್ರಿಕೆ ಓದುತ್ತಿದ್ದರು.

ಆಂಗ್ಲ ಪತ್ರಿಕೆಯಲ್ಲಿ ದುಡಿದ ವೈ.ಎಂ.ಹೆಗ್ಡೆಯವರಿಗೆ ಕನ್ನಡ ಪತ್ರಿಕೋದ್ಯಮ ಹೊಸತು, ಹಾಗಾಗಿ ಅವರಿಂದ ಚಮತ್ಕಾರ ನಿರೀಕ್ಷಿಸುವಂತಿರಲಿಲ್ಲ. ಈ ಸತ್ಯವನ್ನು ಹೆಗ್ಡೆಯವರು ಹೇಳಿಕೊಳ್ಳುತ್ತಿದ್ದರು. ಆದರೆ ಅವರು ಅತ್ಯಂತ ಸಜ್ಜನ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ರಘುರಾಮ ಶೆಟ್ರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಹೆಗ್ಡೆಯವರು ಆಗಾಗ ಶೆಟ್ರ ಮನಸ್ಸನ್ನು ಹದಗೊಳಿಸುವ ಪ್ರಯತ್ನ ಮಾಡಿದ್ದರು.

ಅದೊಂದು ದಿನ ಮುಸ್ಸಂಜೆ. ಫೋನ್ ರಿಂಗಣಿಸಿತು. ರಿಸೀವ್ ಮಾಡಿದೆ. ಆ ಕಡೆಯಲ್ಲಿದ್ದವರು ರಘು ರಾಮ ಶೆಟ್ರು. ‘ಸಾರ್' ಅಂದೆ. ಕ್ಷಣ ಮಾತೇ ಇಲ್ಲ. ಮತ್ತೆ ಸಾರ್... ಸಾರ್ ಅಂದೆ.

‘ತಮ್ಮಾ ನಾನು ಸೂಸೈಡ್ ಮಾಡ್ಕೊಳ್ತಾ ಇದ್ದೀನಿ' ಅಂದ್ರು. ದಿಗಿಲಾಯ್ತು. ಇದೇನಪ್ಪಾ ಅಚಾತುರ್ಯ ಎಂದವನೇ ‘ಸಾರ್ ಏನ್ ಮಾತಾಡ್ತಿದ್ದೀರಿ ' ಅಂದೆ ಗಾಬರಿಯಿಂದಲೇ.

ಹೌದು ತಮ್ಮಾ ನಾನು ಸಾಯಲು ಹೊರಟಿದ್ದೀನಿ. ಬಾವಿಗೆ ಬೀಳುತ್ತಿದ್ದೇನೆ'. ನನಗೆ ಏನು ಹೇಳಬೇಕು ಅಂತಲೇ ತೋಚಲಿಲ್ಲ. ‘ಸಾರ್... ಹೀಗೆಲ್ಲ ಯಾಕೆ ಮಾತಾಡ್ತೀರಿ?' ಅಂದೆ.

ನನ್ನಿಂದ ಇನ್ನು ಮುಂದೆ ನಿಮ್ಮಂಥ ಯುವಕರನ್ನು ಬೆಳೆಸಲು ಸಾಧ್ಯವಿಲ್ಲ. ನಿನ್ನನ್ನು ಅರ್ಧದಲ್ಲಿ ಕೈ ಬಿಡುತ್ತಿದ್ದೇನೆ, ಬೇಸರ ಪಟ್ಟುಕೊಳ್ಳಬೇಡ,

ಸಂಪಾದಕನ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ' ಅಂದ್ರು.

ಸಾರ್ ಯಾಕೆ ಇಂಥ ನಿರ್ಧಾರ ತೆಗೆದುಕೊಳ್ತಿದ್ದೀರಿ, ಸುಮ್ಮನಿರಿ ನಾವೆಲ್ಲಾ ಇದ್ದೀವಲ್ಲಾ' ಎಂದೆ.

ತಮ್ಮಾ ನಾನು ಬಹಳ ದೂರ ಹೋಗಿದ್ದೇನೆ, ನಾಳೆ ಮನೆಗೆ ಬಾ' ಅಂದವರೇ ಫೋನ್ ಇಟ್ಟು ಬಿಟ್ಟರು. ಮರುದಿನ ಅವರ ಮನೆಗೆ ಹೋದಾಗ ಶೆಟ್ರು ಒಂಥರಾ ನಿರುಮ್ಮಳರಾಗಿದ್ದರು.

ತಮ್ಮಾ ನಾನು ಸೋತು ಹೋದೆ. ನಾನು ನಂಬಿದವರು ಕೈಕೊಟ್ಟರು, ಮೈಫೇಟ್' ಅಂದವರೇ ಬೀಡಿಗೆ ಬೆಂಕಿ ಹಚ್ಚಿದರು. ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.

ಸಾರ್ ನೀವು ಅವಸರ ಮಾಡಿದಿರಿ ಅನ್ನಿಸುತ್ತೆ?' ಅಂದೆ ತುಸು ಆತಂಕದಿಂದಲೇ. ‘ನನಗೆ ಬೇರೆ ದಾರಿಯೇ ಇಲ್ಲ ತಮ್ಮಾ. ಇಲ್ಲಿಯ ಜನರ ತಲೇಲಿ ಅದೇನ್ ತುಂಬಿದೆಯೋ ಏನೋ ಬಿಡು ಹೋಗ್ಲಿ' ಅಂದ್ರು.

‘ನಾನ್ ಏನ್ ತಪ್ಪು ಮಾಡಿದೆ ಹೇಳು ತಮ್ಮಾ? ಹೊಸ ಹೊಸ ವಿಚಾರಗಳನ್ನು ಕಲಿಯಬೇಕು, ಚಿಂತನೆ ಮಾಡುವುದನ್ನು ಕಲಿತುಕೊಳ್ಳಿ ಅನ್ನೋದೂ ಅಪರಾಧವೇನೋ? ನಾನು ಯಾರ ಪರ ವಾಗಿ ಹೋರಾಟ ಮಾಡಬೇಕು ಅಂದುಕೊಂಡಿದ್ದೆನೋ ಅದು ಸಾಧ್ಯವಾಗಲಿಲ್ಲ ಅನ್ನೋ ಬೇಸರ ಇದೆ?' ಎಂದವರೇ ಮೌನಕ್ಕೆ ಶರಣಾದರು.

ಸಾರ್ ಮುಂದೇನು ಮಾಡ್ತೀರಿ? ಅಂದಾಗ ‘ವಡ್ಡರ್ಸೆಗೆ ಹೋಗ್ತೀನಿ, ಅಲ್ಲೇ ನೆಲೆಯೂರಿ ಕೃಷಿ ಮಾ ಡ್ಕೊಂಡಿರ್ತೇನೆ, ಈ ಮಣ್ಣಂಗಟ್ಟಿ ಜನರ ಸಹವಾಸವೇ ಬೇಡ' ಸಿಟ್ಟಿತ್ತು ಮಾತಿನಲ್ಲಿ.

‘ಹಾಗೆಯೇ ಅವರೊಂದಿಗೆ ಮಾತಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಶೆಟ್ರು ನನ್ನ ಹೆಗಲ ಮೇಲೆ ಕೈ ಇಟ್ಟು ಬೆನ್ನು ಸವರಿದರು. ಮಾನಗೆಟ್ಟು ಪತ್ರಿಕೋದ್ಯಮ ಮಾಡಬೇಡ ತಮ್ಮಾ. ನಿನಗೆ ಹೇಳಬೇಕಾದ್ದನ್ನು ನಿರ್ಭಯವಾಗಿ ಹೇಳು. ಜನಪರವಾಗಿರಲಿ ಬರವಣಿಗೆ' ಕಣ್ಣಾಲಿಗಳು ತುಂಬಿ ಬಂದವು. ಅವರಿಂದ ಬೀಳ್ಕೊಟ್ಟೆ. ಮತ್ತೆ ಅವರನ್ನು ಭೇಟಿ ಮಾಡಿದ್ದು ಕೆಲವು ವರ್ಷಗಳ ಬಳಿಕ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ. ಆಗಷ್ಟೇ ‘ಕನ್ನಡಪ್ರಭ' ಸೇರಿದ್ದೆ. ‘ತಮ್ಮಾ ಏನ್ ಮಾಡ್ಕೊಂಡಿ ದ್ದಿಯಾ?' ಕೇಳಿದರು. ‘ಸಾರ್ ಕನ್ನಡಪ್ರಭ ಸೇರಿದ್ದೇನೆ' ಅಂದೆ.

ಶೆಟ್ರು ನನ್ನನ್ನು ದಿಟ್ಟಿಸಿ ನೋಡಿದ್ರು. ಏನನ್ನೂ ಹೇಳಲಿಲ್ಲ. ಲೋಕಾಭಿರಾಮವಾಗಿ ಮಾತಾಡಿದರು. ಮತ್ತೆ ಅವರನ್ನು ಜೀವಂತವಾಗಿ ಕಾಣುವುದು ಸಾಧ್ಯವಾಗಲಿಲ್ಲ.

ಇಷ್ಟು ಹೇಳಿದ ಮೇಲೆ ಹೇಳಲೇಬೇಕಾದ ಕಡೆಯ ಮಾತುಗಳಿವು. ರಘುರಾಮ ಶೆಟ್ರು ಮುಂಗಾರು ಹುಟ್ಟು ಹಾಕಿದ್ದು ಸರಿ, ಅವರ ಧ್ಯೇಯೋದ್ದೇಶಗಳೂ ಸರಿಯಾದವೇ. ಆದರೆ ಅವರು ಸಂಸ್ಥೆ ಬೇಕಿದ್ದ ಸ್ಥಳ ಕರಾವಳಿ ಅಲ್ಲವೇ ಅಲ್ಲ. ಶೆಟ್ರು ಧ್ವನಿಯಾಗಿದ್ದವರು ಪತ್ರಿಕೆ ಕೊಂಡು ಓದುವಷ್ಟು ಸಬಲರಾಗಿರಲಿಲ್ಲ. ಶೆಟ್ರು ವಿರೋಧಿಸುತ್ತಿದ್ದವರೇ ಬಹುತೇಕ ಓದುಗರಾಗಿದ್ದವರು. ಅಂಥವರು ಎಷ್ಟು ದಿನ ಕೈಹಿಡಿ ದಾರು? ಬೆಂಗಳೂರು ಅಥವಾ ಮೈಸೂರಲ್ಲಿ ‘ಮುಂಗಾರು' ಜನ್ಮ ತಳೆದಿದ್ದರೆ ರಘುರಾಮ ಶೆಟ್ರು ಕನ್ನಡ ಪತ್ರಿಕೋದ್ಯಮದ ಪಾಳೆಗಾರರಾಗಿ ಇಂದಿಗೂ ನಮ್ಮ ನಡುವೆಯೇ ಇರುತ್ತಿದ್ದರು. ಕನ್ನಡಪತ್ರಿಕೋದ್ಯಮಕ್ಕೆ ಈಗಿನ ಅನಾಥಪ್ರಜೆ ಕಾಡುತ್ತಿರಲಿಲ್ಲ ಜೊತೆಗೆ ನನ್ನಂಥವರಿಗೆ ಕೂಡಾ.

(ಮುಗಿಯಿತು)

- ಚಿದಂಬರ ಬೈಕಂಪಾಡಿ

{ ಗುರಿಕಾರ ವಡ್ಡರ್ಸೆ ರಘುರಾಮಶೆಟ್ಟರ ಹೆಸರು ಕೇಳಿದ್ದೇ ವಿನಹ ಅವರ ಬಾಳರೀತಿ ಬಗ್ಗೆ ಹೆಚ್ಹು ತಿಳುವಳಿಕೆ ಇರಲಿಲ್ಲ.   ಮುಂಗಾರು ಹೇಗೆ ಪ್ರಾರಂಭವಾಗಿ, ಜನಪ್ರಿಯವಾಗಿ ನಡೆದಿತ್ತು  ಮತ್ತು ಅದೇಕೆ ಮುಚ್ಚಿ ಕೊಂಡಿತು ಎಂಬ ವಿಷಯದ ಬಗ್ಗೆ ಈ ಒಂದು ಚಾರಿತ್ರಿಕ ಅನುಭವಗಳನ್ನು 'ಗಲ್ಫ್ ಕನ್ನಡಿಗ' ದಲ್ಲಿ ಹಂಚಿ ಕೊಂಡ ಚಿದಂಬರ ಅವರಿಗೆ ಹಾಗೂ ನಮಗೆ ಯಾವಾಗಲೂ ನೆರೆವಾಗಿ ಹುರುಪು ತುಂಬುತ್ತಿರುವ ಪ. ರಾಮಚಂದ್ರರವರಿಗೆ ನಮ್ಮ ಹೃತ್ಪೂರ್ವಕ, ಕೃತಜ್ಞತೆಗಳು. - ಗ.ಕ.ಸಂಪಾದಕೀಯ ಮಂಡಳಿ }

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕೆ೦ಡ ಸ೦ಪಿಗೆ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-29 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-13 : ಚಿಂದಿಯಾದ ‘ಚೆಲುವ ಕನ್ನಡನಾಡು'
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-12 : ‘ಮುಂಗಾರು' ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (2) : ಮುಂಗಾರು ನೆಟ್ಟ ಹೆಜ್ಜೆಗುರುತುಗಳು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (1) : ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-10 : ಬಸವಣ್ಣನ ಬುಲೆಟ್ ಸವಾರಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-7: ಎಡವಟ್ಟಾದ ಯಂತ್ರದ ಥಿಯರಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-5 : ಇಂದೂಧರ ಹೊನ್ನಾಪುರ ಬೆಂಬಲಕ್ಕೆ ನಿಂತರು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-4: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-3: ಯುವಕರ ಟೀಮ್ ಕಟ್ಟಿದ ಸಂತೃಪ್ತಿ ಶೆಟ್ರಿಗೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-2 : ಸ್ವಾಭಿಮಾನ ಕೆಣಕಿದ ನೇಮಕಾತಿ ಪತ್ರ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-1: ಸಂಪಾದಕ ಶೆಟ್ಟರ ಉಗ್ರಾವತಾರ
»

ಪ್ರತಿಸ್ಪಂದನ
nazeerullal, ullal
2010-09-04
vaddarseyavaru thukku hidida vyavasthege, manassige sane hidiva kelasa arambisiddaru. thadavagiyadaru endu pala kodutta ede.
hassanmukha, mangalore
2010-08-29
ಚಿದಂಬರರವರ, ಈ ಕೊನೆಯ ಲೇಖನ ಓದಿ ಅರಗಿಸಿಕೊಳ್ಳಲು ತುಂಬಾ ಕಷ್ಟವಾಯಿತು.ವ.ರಘುರಾಮ ಶೆಟ್ರ ಕೊನೆಯ ಮಾತಿನಂತೆ, ಚಿದಂಬರರು ಆ ರೀತಿ ಜನಪರವಾಗಿ, ನಿರ್ಭಯವಾಗಿ ಮತ್ತು ಯಾರದೇ ಮುಲಾಜಿಲ್ಲದೆ ನಡೆಯುವ ಪತ್ರಿಕೋದ್ಯಮವನ್ನು ಸೇರಿ ಕೆಲಸ ಮಾಡಬೇಕೆಂಬುದೇ ನಮ್ಮ ಆಸೆ. ಅಂಥಹ ಪತ್ರಿಕೆಯೊಂದು ನಮ್ಮ ಕರಾವಳಿಯಲ್ಲಿದೆ ಎಂದು ನಮ್ಮ ಭಾವನೆ.

ಚಿದಂಬರರವರಿಗೆ ಶುಭವಾಗಲಿ ಹಾಗು ಇದನ್ನು ಪ್ರಕಟಿಸಿದ ಗ.ಕ.ಕ್ಕೂ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಮೂಡಿಗೆರೆ: ಜನಪರ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಶೂದ್ರ, ದಲಿತ ಸಂಸ್ಕೃತಿಗಳು ಕೀಳಲ್ಲ: ನಿಡುಮಾಮಿಡಿ ಶ್ರೀ
»ಡಾ| ಕಮಲಾ ಹಂಪನಾ ಅವರಿಗೆ 'ಚಾವುಂಡರಾಯ ಪ್ರಶಸ್ತಿ' ಪ್ರದಾನ
»‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
»ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
»ಡಾ. ಗೀತಾ ನಾಗಭೂಷಣಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
»ಮುಳಿಯ ಪ್ರಶಸ್ತಿ ಪ್ರದಾನ: ರೋಚಕ ಕೃತಿಗಳು ಕಡಿಮೆಯಾದಾಗ ಸಾಂಸ್ಕೃತಿಕ ಶ್ರೀಮಂತಿಕೆ ಮರೆಯಾಗುತ್ತದೆ: ಮಾಧವ ಆಚಾರ್ಯ
»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri