ಟೊರೆ೦ಟೊ : ಅಲ್ಖಾಯಿದಾದಲ್ಲಿ ಭಾರತೀಯ |
ಪ್ರಕಟಿಸಿದ ದಿನಾಂಕ : 2010-08-27
ಟೊರಾಂಟೊ: ವಿಧ್ವಂಸಕ ಕೃತ್ಯ ನಡೆಸಬೇಕೆಂಬ ಅಲ್ ಖಾಯಿದಾ ಸಂಚು ವಿಫಲಗೊಳಿಸಿರುವ ಕೆನಡಾ ರಕ್ಷಣಾ ಪಡೆ ಯೋಧರು, ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬ ಭಾರತೀಯ ಎಂದು ಹೇಳಲಾಗಿದೆ.
‘ಆಪರೇಷನ್ ಸಮೋಸಾ’ ಹೆಸರಿನ ಕಾರ್ಯಾಚರಣೆ ನಡೆಸಿದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ಬುಧವಾರ ಬೆಳಗಿನ ಇಬ್ಬರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರ ಪೈಕಿ ಒಬ್ಬನನ್ನು ಭಾರತದ ಮಿಸ್ಬಾವುದ್ದೀನ್ ಅಹಮದ್ (೩೬) ಎಂದು ಗುರುತಿಸಲಾಗಿದೆ.
ಬಂಧಿತ ಮತ್ತೊಬ್ಬನ್ನು ಅಹಮದ್ ಎಹ್ಸಾನ್ ಎಂದೂ ಗುರುತಿಸಲಾಗಿದ್ದು, ಇನ್ನೂ ಕೆಲವು ಶಂಕಿತರಿ ಗಾಗಿ ಶೋಧ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾದಲ್ಲಿ ಅಲ್ಖಾಯಿದಾ ಸಂಚು ವಿಫಲಗೊಳಿಸಿರುವ ಎರಡನೇ ಪ್ರಕರಣ ಇದಾಗಿದೆ. ೨೦೦೬ ರಲ್ಲಿ ಕೆನಡಾದ ಕೆಲವು ಪ್ರಮುಖ ಸ್ಥಾವರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ೧೮ ಟೊರಾಂಟೊ ಮುಸ್ಲಿಮರನ್ನು ಬಂಧಿಸಲಾಗಿತ್ತು.
ಭಾರತದ ಸಂಸತ್ ಭವನದ ಮೇಲೆ ನಡೆದ ದಾಳಿಯ ಮಾದರಿಯಲ್ಲೇ ಲಗ್ಗೆ ಹಾಕಿನಾಯಕರನ್ನು ಒತ್ತೆ ಇಟ್ಟುಕೊಂಡು ಪ್ರಧಾನಿಯನ್ನು ಮುಗಿಸುವ ಸ್ಕೆಚ್ ಹಾಕಿದ್ದರು.
ಬುಧವಾರ ಸಿಕ್ಕಿಬಿದ್ದಿರುವ ಅಹಮದ್ ಒಟ್ಟಾವದಲ್ಲಿ ಎಕ್ಸ್ರೇ ತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾರತದಲ್ಲಿ ಜನಿಸಿ ಬಾಲ್ಯವನ್ನು ಕಳೆದಿದ್ದರೂ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಹೆಚ್ಚಾಗಿ ವಾಸ್ತವ್ಯ ಹೂಡುತ್ತಿದ್ದುದಾಗಿ ಅಹಮದ್ ಹೇಳಿ ಕೊಂಡಿದ್ದಾನೆ. ಈತನನ್ನು ವಿಚಾರಣೆಗೊಳ ಪಡಿಸಿದಾಗ ಎಲ್ಲ ಮಾಹಿತಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವರದಿಯ ವಿವರಗಳು |
 |
ಕೃಪೆ : ವಿಕ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-27 00:00:00
|
|
| hassanmukha, mangalore/ksa | 2010-09-03 | | ನಾವು ಯಾರನ್ನೂ ಇದುವರೆಗಿನ ಪ್ರತಿಕ್ರಿಯೆಯಲ್ಲಿ ಯಾರನ್ನೂ justify ಮಾಡಲಿಲ್ಲ. ತಪ್ಪು ಯಾರೇ ಮಾಡಲಿ ಅದು ತಪ್ಪೇ. ಆದರೆ ನಮ್ಮ ದೇಶದ ಹೆಚ್ಹಿನ ಮಾಧ್ಯಮಗಳು ಬಡವರ ,ದಮನಿತರ ಪಕ್ಷದಲ್ಲಿ ಬರೆಯುವುದಿಲ್ಲ. ಪೂರ್ವಗ್ರಹ ಪೀಡಿತ ದ್ರಷ್ಟಿಯಲ್ಲಿ ನೋಡದೆ ನಮ್ಮ ದೇಶದ ಆಗುಹೋಗುಗಳನ್ನು ನೋಡಿದಲ್ಲಿ ಸತ್ಯ ಗೋಚರಿಸುತ್ತದೆ. ಎಲ್ಲ ಕಡೆಯಲ್ಲಿ ಲಂಚದ ಹಾವಳಿಯಿರುವಾಗ, ಎಲ್ಲಿತಾನೆ ಯಾರಿಗೆ ನ್ಯಾಯ ಸಿಗಲು ಸಾಧ್ಯ?. ವ್ಯಕ್ತಿಗೆ ಯಾವುದೇ ಹೆಸರಿರಲಿ ಅವನು/ಅವಳು, ಮಾಡಿದ ಕುಕೃತ್ಯಕ್ಕೆ ಆ ಧರ್ಮವನ್ನು ದೂರುವುದು ಸರಿಯೆನಿಸುವುದಿಲ್ಲ. ನಮ್ಮ ಮಾಧ್ಯಮ ಮತ್ತು ರಾಜಕಾರಣಿಗಳಿಗೆ ಒಂದು ಚಾಳಿ ಇದೆ . ಅದೇನೆಂದರೆ ಎಲ್ಲಿಯಾದರೂ ಏನಾದರೂ ಸಂಭವಿಸಿದರೆ ಅದನ್ನು ಇಸ್ಲಾಮಿಕ ಸಂಘಟನೆಗಳ ಮೇಲೆ ಗೂಬೆ ಕೂರಿಸುವುದು. ಇದು ಪ್ರಪಂಚದಾದ್ಯಂತ ನಡೆಯುವ ಪ್ರಕ್ರಿಯೆ.ಇದಕ್ಕೆ ಇಸ್ರೇಲಿಗಳ ಕುಮ್ಮಕ್ಕು ಇದೆ. black sheep ಗಳು ಎಲ್ಲ ಧರ್ಮದ ಅನುಯಾಯಿಗಳಲ್ಲಿ ಇವೆ. ತಪ್ಪನ್ನು ಯಾರೂ,ಯಾವ ಧರ್ಮದ ಅನುಯಾಯಿಗಳೂ ಒಪ್ಪುವುದಿಲ್ಲ. ಏನಂತೀರಿ ಭರತ್ ರವರೆ? |
| manna iliyas udupi, Bahrain | 2010-08-30 | | MR Barth kumar you are a 100% right but this kind of Comments are being done by not only hassan mukka but also many of them here. These guys have to think also. I agree with you dear brother Barth kumar. jai hindh jai karnataka |
| ಭರತ್ ಕುಮಾರ್ , ಮಂಗಳೂರು | 2010-08-29 | | ಶ್ರೀಯುತ ಹಸನ್ ಮುಕ್ಕರಂತಹಾ ಯಾವಾಗಲೂ ವೈವಿದ್ಯಮಯ ಪ್ರತಿಕ್ರಿಯೆ ಬರೆಯುವ ಮಹನೀಯರುಗಳು ಈ ಸುದ್ದಿಯ ಬಗ್ಗೆ ಏನುಬರೆಯುತ್ತೀರಿ? ಹೇಳಿ... ಇದೂ ಸುಳ್ಳು. ಸಯ್ಯದ್ ಮದನಿ ಕೂಡಾ ನಿರ್ಧೋಷಿ, ನಿರುಪದ್ರವಿ. ನಿಮ್ಮ ದ್ರಷ್ಟಿಯಲ್ಲಿ ಅಫ್ಜಲ್ ಗುರು, ಅಜ್ಮಲ್ ಕಸಬ್ ಕೂಡಾ ನಿರಪರಾಧಿಗಳು. ಯಾರೇ ಆಗಲಿ ಇಸ್ಲಾಮಿಕ್ ಹೆಸರುಳ್ಳವರು ಅಪರಾಧಮಾಡಿದರೆ ಅದು ಸುಳ್ಳು. ಬೇರೆಯವರಾದರೆ ಅದು ಸುಳ್ಳಲ್ಲ. ತಪ್ಪು ಅಪರಾಧ ಪ್ರತೀ ಧರ್ಮದವರೂ ಮಾಡುತ್ತಾರೆ. ಅಫ್ಜಲ್ ಗುರು ಅಥವಾ ಕಸಬ್ ಮಾಡಿದ ಘೋರ ಅಪರಾಧವನ್ನು ಪವಿತ್ರ ಕುರಾನ್ ಅಥವಾ ಇಸ್ಲಾಮಿಕ್ ಧರ್ಮದ ಶ್ರೇಷ್ಠ ನಿಯಮಗಳು ಒಪ್ಪುತ್ತವೆಯೋ. ಖಂಡಿಸುತ್ತವೆಯೋ? ಮದನಿ, ಅಫ್ಜಲ್, ಕಸಬ್ ರಂತವರು ಈ ಮಾದ್ಯಮದಲ್ಲಿ ಪ್ರತಿಕ್ರಿಯೆ ಬರೆಯುವವರ ಸಂಬಂಧಿಕರು ನೆಂಟರು ಖಂಡಿತಾ ಅಲ್ಲ. ಹಾಗಿರುವಾಗ ಆತ ಅಪರಾಧ ಮಾಡಿದ್ದಾನೆ ಅಥವಾ ಇಲ್ಲ ಎಂಬುದನ್ನು ಹೇಗೆ ನೀವು ನಿರ್ಧರಿಸಲು ಸಾಧ್ಯ? ಆತ ನಿರಪರಾಧಿ ಆಗಿದ್ದರೆ ಕಾನೂನು ಆತನನ್ನು ಬಿಡುಗಡೆ ಮಾಡಿಯೇ ಮಾಡುತ್ತದೆ. ಬೆಂಕಿಯಿಲ್ಲದೆ ಹೊಗೆ ಇರಲು ಸಾದ್ಯವಿಲ್ಲ. ಸಿಕ್ಕಿದ ಕುರುಹುಗಳ ಆಧಾರದ ಮೇಲೆ ಬಂಧಿಸಿರುತ್ತಾರೆ. ಆಗ ಅಂತಹ ಶಂಕಿತ ಅಪರಾಧಿಗಳು ನಮ್ಮ ಸಂಬಂಧವವರು ಎಂಬ ರೀತಿ ವರ್ತಿಸುವುದು ಎಷ್ಟು ಸರಿ? ಇದು ಭಾರತ, ಇಲ್ಲಿ ಜಾತಿ, ಧರ್ಮ, ಎಲ್ಲವನ್ನೂ ಬದಿಗಿಟ್ಟು ನಾವೆಲ್ಲರೂ ಭಾರತೀಯರು ಎಂಬ ಭಾವನೆ ಹ್ರದಯದಿಂದ ಬರುವ ತನಕ ಇಲ್ಲಿ ಶಾಂತಿ ಸುಭಿಕ್ಷೆಯನ್ನು ನಿರೀಕ್ಷಿಸುವುದು ಕನಸು. |
|