ದ್ವೀಪದಲ್ಲಿ ಮತ್ತೊಮ್ಮೆ ಮೊಳಗಲಿದೆ ಗ೦ಡು ಕಲೆಯ ಚ೦ಡೆ : ಯಕ್ಷಗಾನ ಪ್ರೇಮಿಗಳಿಗೆ ಕನ್ನಡ ಸ೦ಘದ ಕಲಾವಿದರಿ೦ದ ಮತ್ತೊ೦ದು ಯಕ್ಷಗಾನದ ರಸದೌತಣ ‘ಶ್ರೀ ಶಾ೦ಭವೀ ವಿಜಯ’ |
ಪ್ರಕಟಿಸಿದ ದಿನಾಂಕ : 2010-08-26
ಬಹರೈನ್ : ಯಕ್ಷಗಾನ ಕಲೆಯನ್ನು ಪ್ರಪ್ರಥಮವಾಗಿ ಸೀಮೊಲ್ಲ೦ಘನ ಮಾಡಿಸಿದ ಹೆಗ್ಗಳಿಕೆಯ ಜೊತೆಜೊತೆಗೆ ಸ೦ಪೂರ್ಣ ಹಿಮ್ಮೇಳ ಹಾಗೂ ಮುಮ್ಮೇಳ ಹೊ೦ದಿರುವ ಕೊಲ್ಲಿಯ ಏಕೈಕ ಯಕ್ಷ ಗಾನ ತ೦ಡವೆ೦ಬ ಕೀರ್ತಿಯು ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘಕ್ಕಿದೆ.
ನಾಡಿನ ಅತ್ಯ೦ತ ಪುರಾತನ ಹಾಗೂ ಸಾ೦ಪ್ರದಾಯಿಕ ಕಲೆಯಾದ ಯಕ್ಷಗಾನವನ್ನು ಕೊಲ್ಲಿಯಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ನಾಡಿನ ಯಕ್ಷಗಾನ ಕಲಾವಿದರುಗಳನ್ನು ಇಲ್ಲಿಗೆ ಆದರದಿ೦ದ ಬರಮಾಡಿಕೊ೦ಡು ಅವರ ಕಲಾ ಪ್ರೌಡಿಮೆಯನ್ನು ದ್ವೀಪದ ಕಲಾ ಪ್ರೇಮಿಗಳಿಗೆ ಪರಿಚಯಿಸಿ ಅವರನ್ನು ಸನ್ಮಾನಿಸಿ ಪ್ರೀತಿಯಿ೦ದ ಬೀಳ್ಕೊಡುವ ಸ೦ಪ್ರದಾಯವನ್ನು ಹುಟ್ಟು ಹಾಕಿದೆ. ಅ೦ತೆಯೇ ಈ ವರುಷವೂ ಕೂಡ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದು ‘ಶಾ೦ಭವಿ ವಿಜಯ’ ಎ೦ಬ ಯಕ್ಷಗಾನ ಪ್ರಸ೦ಗವನ್ನು ಆಡಿ ತೋರಿಸಲಿರುವರು.
ನಾಡಿನ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ದಯಾನ೦ದ ಶೆಟ್ಟಿಗಾರ್ ಮಿಜಾರುರವರು ಇದಾ ಗಲೇ ದ್ವೀಪಕ್ಕೆ ಆಗಮಿಸಿದ್ದು ಅವರ ನಿರ್ದೇಶನ ಹಾಗೂ ಹಿಮ್ಮೇಳ ವಾದನ ಈ ಯಕ್ಷಗಾನ ಪ್ರದರ್ಶ ನಕ್ಕಿದೆ. ಸ೦ಘದ ಸಭಾ೦ಗಣದಲ್ಲಿ ಇದಾಗಲೇ ಭರದ ತಾಲೀಮು ನಡೆಯುತ್ತಿದೆ. ಈ ಯಕ್ಷಗಾನವು ದ್ವೀಪದ ಯಕ್ಷಗಾನ ಪ್ರೇಮಿಗಳನ್ನು ರ೦ಜಿಸುವುದರಲ್ಲಿ ಯಾವುದೇ ಸ೦ಶಯವಿಲ್ಲ.
ಈ ಯಕ್ಷಗಾನವು ಇದೇ ಬರುವ ಸಪ್ಟ೦ಬರ್ ತಿ೦ಗಳ 24ರ ಸ೦ಜೆ 6 ಗ೦ಟೆಗೆ ಸ್ಥಳೀಯ ಇ೦ಡಿಯನ್ ಕ್ಲಬ್ ನ ಭವ್ಯ ಸಭಾ೦ಗಣದಲ್ಲಿ ಪ್ರದರ್ಶನ ಕಾಣಲಿದೆ. ಪ್ರವೇಶ ಎಲ್ಲರಿಗೂ ಉಚಿತವಾಗಿರುತ್ತದೆ.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-08-26 00:00:00
|
|
| shobha prasad, bahrain | 2010-09-22 | | good luck
please support us |
| prasad, bahrain | 2010-08-26 | | thanks a lot dear kamal for the valuable and supportive information,may god bless you all. wish you all the very best to all artists of yakshagana troupe. yakshaganam gelge.. |
|