ಬಂಟ್ವಾಳ ಪೊಲೀಸ್ ದೌರ್ಜನ್ಯ ಪ್ರಕರಣ: ಗೃಹ ಸಚಿವರಿಂದ ನಗರದ ಅಸ್ಪತ್ರೆಯಲ್ಲಿ ಶಿವರಾಮ ಭಂಡಾರಿಯ ಭೇಟಿ - 3 ಮಂದಿ ಪೇದೆಗಳ ಅಮಾನತು. |
ಪ್ರಕಟಿಸಿದ ದಿನಾಂಕ : 2010-07-30
ಮಂಗಳೂರು, ಜು.29: ಬಂಟ್ವಾಳ ಪೊಲೀಸರ ದೌರ್ಜನ್ಯ ಪ್ರಕರಣದಿಂದ ಇದೀಗ ನಗರದ ಎ.ಜೆ. ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಶಿವರಾಮ ಭಂಡಾರಿ ಎಂಬವರನ್ನು ಗೃಹ ಸಚಿವ ವಿ.ಎಸ್. ಆಚಾರ್ಯ ಭೇಟಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿ ದ್ದಾರೆ.

‘‘ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಎಸ್ಪಿ ಮೂರು ಮಂದಿ ಪೇದೆಯನ್ನು ಅಮಾನತುಗೊಳಿಸಿ ದ್ದಾರೆ. ಶಿವರಾಮ ಭಂಡಾರಿಯ ಆಸ್ಪತ್ರೆಯ ಖರ್ಚು ಸರಕಾರ ನೋಡಿಕೊಳ್ಳುತ್ತದೆ’’ ಎಂದು ನಗರದಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿರುವ ಗೃಹ ಸಚಿವರು, ಶಿವರಾಮ ಗೌಡರ ಪರಿಸ್ಥಿತಿ ಬಗ್ಗೆ ವೈದ್ಯರ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿದರು.


ಕರಾವಳಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಯವರ ಬಂಟ್ವಾಳ ಪಂಜಿ ಕಲ್ಲು ತೋಟದ ಮನೆಯಲ್ಲಿದ್ದ ಕಾರ್ಮಿಕ ರಾಜಣ್ಣ ಎಂಬಾತನ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಉಪ್ಪಳ ಕೋಡಿಬೈಲಿನ ನಿವಾಸಿ ಶಿವರಾಮ ಭಂಡಾರಿಯನ್ನು ವಿಚಾರಣೆಯ ನೆಪದಲ್ಲಿ ಠಾಣೆಯಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದ್ದರೆನ್ನಲಾಗಿದೆ. ಸರಕಾರ ಮತ್ತು ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ಹೊಂದಿರುವ ಶಿವರಾಮ ಭಂಡಾರಿಯ ಕುಟುಂಬಸ್ಥರು ಮತ್ತು ಹಿತೈಷಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ. ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.ಶಿವರಾಮ ಭಂಡಾರಿಯ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ನಾಗರಾಜ ಶೆಟ್ಟಿಯ ತೋಟದ ಮನೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಇದೀಗ ಪುತ್ತೂರು ಎಎಸ್ಪಿ ಅಮಿತ್ ಕುಮಾರ್ ಸಿಂಗ್ ಅವರಿಗೆ ವಹಿಸಲಾಗಿದೆ.


ಕಾಂಗ್ರೆಸ್ ಪಾದಯಾತ್ರೆಯಿಂದ ಸರಕಾರಕ್ಕೆ ತೊಂದರೆ ಇಲ್ಲ:

ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸ ಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದ ಯಾತ್ರೆಯಿಂದ ಸರಕಾರಕ್ಕೆ ಏನೂ ತೊಂದರೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಸಂದರ್ಭ ಗೃಹ ಸಚಿವ ವಿ.ಎಸ್. ಆಚಾರ್ಯ ಪ್ರತಿಕ್ರಿಯಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-07-30 00:00:00
|
|
| P.P.ABDUL KAREEM THOKUR, RIYADH K.S,A. | 2010-07-30 | | MOORUMANDHI PEDHEYANNU AMAANATHUGOLISIRUHUDU
BARE NAATAKA ASTTE,,,!. |
|