ಭಾರತದಲ್ಲೂ ಎಂಡೊಸಲ್ಫಾನ್ ನಿಷೇಧಿಸಲಾಗುವುದೇ ? |
ಪ್ರಕಟಿಸಿದ ದಿನಾಂಕ : 2010-07-30
(ಡಾ. ಸಿ. ನಿತ್ಯಾನಂದ ಪೈ, ಪುತ್ತೂರು)
ಎಂಡೊಸಲ್ಫಾನ್ ದುಷ್ಪರಿಣಾಮಕ್ಕೊಳಗಾದ ಇಂತಹ ಪ್ರಕರಣಗಳು ಅದೆಷ್ಟೋ....
ಪುತ್ತೂರು: ವಿಶ್ವದ ಬಹುತೇಕ ರಾಷ್ಟ್ರಗಳ ರೈತಾಪಿ ಜನರು ಮತ್ತು ಕೃಷಿಕರನ್ನು ಶಾಪದೋಪಾದಿಯಲ್ಲಿ ಪೀಡಿಸಿದ್ದ ಮತ್ತು ಇಂದಿಗೂ ಪೀಡಿಸುತ್ತಿರುವ ಕೀಟನಾಶಕಗಳಲ್ಲಿ ಎಂಡೊಸಲಾ–ನ್ ಪ್ರಮುಖವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಈ ಅಪಾಯಕಾರಿ ಕೀಟನಾಶಕವನ್ನು ನಿಷೇಧಸಿ ವರುಷಗಳೇ ಕಳೆದಿದ್ದರೂ, ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿರುವ ಅಮೆರಿಕಾ ಇದನ್ನು ನಿಷೇಧಸಿರಲಿಲ್ಲ.
ಆದರೆ ಇದೇ ವರ್ಷದ ಜೂ. 9ರಂದು ಅಮೆರಿಕಾದ ಪರಿಸರ ಸಂರಕ್ಷಣಾ ಸಮಿತಿ ಎಂಡೊಸಲ್ಫಾನ್ ಕೀಟನಾಶಕದ ಬಳಕೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಈ ಕೀಟನಾಶಕದ ಸಾಧಕ ಬಾಧಕಗಳ ಬಗ್ಗೆ ಅಮೂಲಾಗ್ರ ಅಧ್ಯಯನ ನಡೆಸಿದ್ದ ಈ ಸಂಸ್ಥೆ, ಇದರ ಬಳಕೆಯಿಂದ ಕೃಷಿ ಕಾರ್ಮಿಕರು, ರೈತರು ಮತ್ತು ಅವರ ಕುಟುಂಬಗಳ ಸದಸ್ಯರಲ್ಲಿ ಕಂಡು ಬಂದಿದ್ದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳನ್ನು ಗಮನಿಸಿದ್ದರು.
ಎಂಡೊಸಲ್ಫಾನ್ ಮನುಷ್ಯನ ನರಮಂಡಲ, ಪ್ರಜನನಾಂಗ ಮತ್ತು ಇತರ ಅಂಗಗಳಿಗೆ ಸಂಬಂಧಸಿದ ಗಂಭೀರ ಸಮಸ್ಯೆ, ಮಾರಕ ವ್ಯಾಧಗಳನ್ನು ಒಡ್ಡಿರುವುದು ಹಾಗೂ ಇತರ ಪಶುಪಕ್ಷಿಗಳು ಮತ್ತು ಜೀವ ಜಂತುಗಳನ್ನು ಬಾಧಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ ಹಲವು ವರ್ಷಗಳ ಬಳಿಕ ಈ ಕೀಟನಾಶಕ ನಿಷೇಧಸುವ ನಿರ್ಧಾರ ತಳೆದಿರುವುದು ಸ್ವಾಗತಾರ್ಹ. ಅಮೆರಿಕಾದ ಈ ನಿರ್ಧಾರ ಇದುವರೆಗೆ ಈ ಕೀಟನಾಶಕ ನಿಷೇಧಸಿರದ ಆಸ್ಟ್ರೇಲಿಯಾ, ಕೆನಡಾ ಮತ್ತಿತರ ದೇಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಭಾರತ ಸರಕಾರವು ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ನಿಷೇಧಿಸದ ಭಾರತ 1990ರ ದಶಕದಲ್ಲಿ ಕೇರಳದ ಕಾಸರಗೋಡು ತಾಲೂಕಿನ ಸ್ವರ್ಗ, ಪಡ್ರೆ, ಎಣ್ಮಕಜೆ ಹಾಗೂ ಕುಂಬಾxಜೆ ಪರಿಸರದ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಮಾರಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದವು. ಅನೇಕ ವಿಧದ ಕ್ಯಾನ್ಸರ್, ಅಪಸ್ಮಾರ, ಆಸ್ತಮಾ, ಜನ್ಮದತ್ತ ಅಂಗ ವೈಕಲ್ಯಗಳು, ಬುದ್ಧಿಮಾಂದ್ಯ, ಬಂಜೆತನ, ನಪುಂಸಕತೆ, ವಿವಿಧ ಚರ್ಮ ರೋಗಗಳು, ಸಂತಾನ ಹೀನತೆ, ಕೇಂದ್ರ ನರಮಂಡಲಕ್ಕೆ ಸಂಬಂಧಸಿದ ವ್ಯಾಧಗಳು, ರಕ್ತ ಹೀನತೆ, ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತ, ಕೈಕಾಲುಗಳ ನಿಶ್ಯಕ್ತಿ ಮುಂತಾದ ಕಾಯಿಲೆಗಳು ಈ ನಿರ್ದಿಷ್ಟ ಪ್ರದೇಶದ ಜನರಲ್ಲಿ ಕಂಡು ಬಂದಿದ್ದವು. ಇವರಲ್ಲಿ ಕೆಲವರು ಕ್ಯಾನ್ಸರ್ನಂತಹ ಕಾಯಿಲೆಗಳಿಂದ ಮೃತಪಟ್ಟಲ್ಲಿ, ಇನ್ನು ಕೆಲವರು ತಮ್ಮನ್ನು ಬಾದಿಸುತ್ತಿರುವ ವ್ಯಾಧಗಳ ಯಾತನೆ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇಂದಿಗೂ ಬದುಕಿ ಉಳಿದಿರುವ ಸಹಸ್ರಾರು ಜನರು ಇದೀಗ ಜೀವಂತ ಶವಗಳಂತೆ ಬದುಕು ಸಾಗಿಸುತ್ತಿದ್ದಾರೆ.
ಸರಿ ಸುಮಾರು ಇದೇ ಸಮಯದಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಕೊಕ್ಕಡ, ನಿಡ್ಲೆ ಮತ್ತು ಪಟ್ರಮೆ ಪರಿಸರದ ನಿವಾಸಿಗಳಲ್ಲೂ, ಕಾಸರಗೋಡು ತಾಲೂಕಿನ ನಿವಾಸಿಗಳಲ್ಲಿ ಕಂಡು ಬಂದಿದ್ದಂತಹ ಆರೋಗ್ಯದ ಸಮಸ್ಯೆಗಳು ಪತ್ತೆಯಾಗಿದ್ದವು. ಈ ರೀತಿಯಲ್ಲಿ ವಿಭಿನ್ನ ರಾಜ್ಯಗಳ ವಿಭಿನ್ನ ಪ್ರದೇಶಗಳ ಜನರಲ್ಲಿ ಒಂದೇ ರೀತಿಯ ಆರೋಗ್ಯದ ಸಮಸ್ಯೆಗಳು ಉದ್ಭವಿಸಲು ಕಾರಣವೇನೆಂದು ಪರಿಶೀಲಿಸಿದಾಗ, 'ಎಂಡೊಸಲಾ–ನ್' ಕೀಟನಾಶಕವನ್ನು ಇವೆರಡೂ ಪ್ರದೇಶಗಳಲ್ಲಿರುವ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪಡಿಸಿದ್ದುದೇ ಕಾರಣವೆಂದು ತಿಳಿದು ಬಂದಿತು. ಎರಡು ದಶಕಗಳಿಗೂ ಅಧಕ ಕಾಲ ವರ್ಷದಲ್ಲಿ ಎರಡು ಬಾರಿಯಂತೆ ಎಂಡೊಸಲಾ–ನ್ ರಾಸಾಯನಿಕವನ್ನು ಸಿಂಪಡಿಸಿದ್ದುದು ನಿಶ್ಚಿತವಾಗಿಯೂ ಇಲ್ಲಿನ ನಿವಾಸಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು.
2009-10ರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳು ಎಂಡೊಸಲ್ಪಾನ್ನ ದುಷ್ಪರಿಣಾಮದಿಂದ ಸಂತ್ರಸ್ತ ಜನರಿಗೆ ಒಂದಿಷ್ಟು ಪರಿಹಾರ ನೀಡಿದ್ದರೂ, ಭಾರತ ಸರಕಾರ ಈ ಅಪಾಯಕಾರಿ ಕೀಟನಾಶಕ ನಿಷೇಧಸುವ ಪ್ರಯತ್ನವನ್ನೇ ನಡೆಸಿಲ್ಲ. ಇಷ್ಟು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ನಿಷೇಧಸುವ ಪ್ರಸ್ತಾವನೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ !.
ಎಂಡೊಸಲ್ಫಾನ್ನಿಂದ ಗಂಡಾಂತರ
1950ರಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದ್ದ ಈ ಕೀಟನಾಶಕ, 'ಸೈಕ್ಲೊಡೈನ್' ಗುಂಪಿಗೆ ಸೇರಿದೆ. ಕೇವಲ 2ರಿಂದ 1 ದಶಕಗಳ ಬಳಕೆಯ ಬಳಿಕ ಈ ಕೀಟನಾಶಕವು ಮನುಷ್ಯರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ರಾಷ್ಟ್ರಗಳು 1984ರಲ್ಲೇ ಇದರ ಬಳಕೆಯನ್ನು ನಿಷೇಧಸಿದ್ದವು. 1990ರ ದಶಕದಲ್ಲಿ ಇದರ ರೋಗ ಮತ್ತು ಮಾರಕತೆಯ ಪರಿಣಾಮಗಳನ್ನು ಅನೇಕ ದೇಶಗಳ ವಿಜ್ಞಾನಿಗಳು ದಾಖಲಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಭಾರತ ಸರಕಾರ ಇಂದಿನ ತನಕ ಇದನ್ನು ನಿಷೇಧಸಿಲ್ಲ. ಅದೇ ರೀತಿಯಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಸಂಖ್ಯ ಭಾರತೀಯ ಕೃಷಿಕರು, ಈ ಕೀಟನಾಶಕದ ಬಳಕೆಯನ್ನು ಇಂದಿಗೂ ನಿಲ್ಲಿಸಿಲ್ಲ !.
ಭಾರತದ ಪ್ರತಿರೋಧ
ಗತವರ್ಷದಲ್ಲಿ ಎಂಡೊಸಲ್ಫಾನ್ ಕೀಟನಾಶಕದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಸುವ ಅಂತಾರಾಷ್ಟ್ರೀಯ ಪ್ರಸ್ತಾವನೆಗೆ ಭಾರತ ಮತ್ತೂಮ್ಮೆ ತನ್ನ ಪ್ರತಿರೋಧ ವ್ಯಕ್ತಪಡಿಸಿತ್ತು.
2009ರ ಮಾರ್ಚ್ 21ರಿಂದ 29ರ ತನಕ ಜರಗಿದ್ದ ಪಿ.ಐ.ಸಿ. ರಾಸಾಯನಿಕ ಪುನರ್ ವಿಮಶಾì ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ 29 ರಾಷ್ಟ್ರಗಳಲ್ಲಿ ಭಾರತವನ್ನು ಹೊರತು ಪಡಿಸಿ, ಇತರ ಎಲ್ಲ ರಾಷ್ಟ್ರಗಳ ಪ್ರತಿನಿಧಗಳು ಎಂಡೊಸಲಾ–ನನ್ನು ನಿರ್ಬಂಧತ ಕೀಟನಾಶಕಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದ್ದರು. ಆಫ್ರಿಕಾ ಖಂಡದ 5 ರಾಷ್ಟ್ರಗಳಲ್ಲಿ ಹತ್ತಿ ಬೆಳೆಯುವ ಸಹಸ್ರಾರು ಕೃಷಿಕರು ಇದರ ದುಷ್ಪರಿಣಾಮಗಳಿಗೆ ಬಲಿಯಾಗಿರುವುದು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಭಾರತದಲ್ಲೂ ತನ್ನ ಮಾರಕತೆ ಮೆರೆದಿದ್ದ ಈ ಕೀಟನಾಶಕವನ್ನು ನಿರ್ಬಂಧಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ್ದ ಭಾರತದ ಪ್ರತಿನಿಧ, ಎಂಡೊಸಲಾ–ನನ್ನು ನಿಷೇಧಸುವುದನ್ನು ತೀವ್ರವಾಗಿ ವಿರೋಧಸಿದ್ದರು. ಜೊತೆಗೆ ತಮ್ಮ ನಿಲುವನ್ನು ಸಮರ್ತಿಸಿಕೊಳ್ಳಲು, ಎಂಡೊಸಲಾ–ನ್ನ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ಅಧ್ಯಯನದ ವರದಿಗಳು ಅಪೂರ್ಣವಾಗಿವೆ ಎನ್ನುವ ಕುಂಟು ನೆಪವನ್ನೂ ಮುಂದೊಡ್ಡಿದ್ದರು.
ಭಾರತವನ್ನು ಪ್ರತಿನಿಧಿಸಿದ್ದ ಪರಿಸರ ಮಂತ್ರಾಲಯದ ಸಲಹೆಗಾರರಾಗಿದ್ದ ಜಿ.ಕೆ. ಪಾಂಡೆ ಅವರು ಈ ಸಭೆಯಲ್ಲಿ 'ಭಾರತದಲ್ಲಿ ಎಂಡೊಸಲಾ–ನ್ನ ಸಿಂಪಡಿಕೆಯಿಂದ ಒಬ್ಬನೇ ಒಬ್ಬ ವ್ಯಕ್ತಿಯು ಪೀಡಿತನಾಗಿಲ್ಲ' ಎಂದು ಘಂಟಾಘೋಷವಾಗಿ ಸಾರಿದ್ದರು !.
ಅದೇನೇ ಇರಲಿ, ಇದೀಗ ಅಮೆರಿಕಾವು ಈ ವಿನಾಶಕಾರಿ ಕೀಟನಾಶಕ ನಿಷೇಧಸಿರುವುದರಿಂದ, ಇದುವರೆಗೆ ಈ ರಾಸಾಯನಿಕವನ್ನು ನಿಷೇಧಸಿರದ ಜಗತ್ತಿನ ಅನೇಕ ರಾಷ್ಟ್ರಗಳು ಇದನ್ನು ನಿಷೇಧಸುವ ಸಾಧ್ಯತೆಗಳಿವೆ. ಆದರೆ ಎಂಡೊಸಲ್ಫಾನ್ನ ದುಷ್ಪರಿಣಾಮಗಳನ್ನು ಧೃಢೀಕರಿಸುವ ಸಹಸ್ರಾರು ಜೀವಂತ ಸಾಕ್ಷಿಗಳಿದ್ದರೂ, ಈ ಕೀಟನಾಶಕವನ್ನು ಇದುವರೆಗೆ ನಿಷೇಧಸಿರದ ಭಾರತವು ತನ್ನ ನಿರ್ಧಾರವನ್ನು ನಿಶ್ಚಿತವಾಗಿಯೂ ಪುನರ್ ವಿಮರ್ಶಿಸಬೇಕಾಗಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30
|
|
|