ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕಮಲದಲ್ಲಿ ಬಿರುಕು....

ಬಳ್ಳಾರಿ ಗಣಿಧಣಿಗಳ ಗುರಾಣಿ  ರಾಜಕೀಯ.. ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು.. ಕಮಲದಲ್ಲಿ ಬಿರುಕು.. ರೆಡ್ಡಿಗಳ ಸೆಡ್ಡು...ಬಳ್ಳಾರಿಯಲ್ಲಿ ಪಾದಯಾತ್ರೆ ಸಮಾವೇಶ

ಬೆಂಗಳೂರು, ಜು. 28: ಅಕ್ರಮ ಗಣಿಗಾರಿಕೆ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಹೊರಡುತ್ತಿದ್ದಂತೆಯೇ ರೆಡ್ಡಿ ಸಹೋದರ ಸಚಿವರು ಆತ್ಮರಕ್ಷಣೆಯ ಗುರಾಣಿ ಹಿಡಿದು ಹೋರಾಟದ ಅಂಗಳಕ್ಕೆ ದಿಢೀರನೆ ಜಿಗಿದಿದ್ದಾರೆ.

ಒಂದು ಕಡೆ ತಮ್ಮನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್ ಪಾದಯಾತ್ರೆ , ಅದಕ್ಕೆ ಪ್ರತಿಯಾಗಿ ನಡೆಸಲು ಉದ್ದೇಶಿಸಿದ್ದ ಬಳ್ಳಾರಿ ಮೈಸೂರು ಪಾದಯಾತ್ರೆಗೆ ಬಿಜೆಪಿ ವರಿಷ್ಠರ ಬ್ರೇಕ್, ಪಕ್ಷದಲ್ಲಿ ಕರಗುತ್ತಿರುವ ತಮ್ಮ ಬೆಂಬಲ ಪ್ರಾಬಲ್ಯ ಮತ್ತಿತರ ಕಾರಣ ಗಳಿಂದ ಅದೀರರಾದಂತೆ ಕಂಡು ಬಂದಿರುವ ರೆಡ್ಡಿ ಸಹೋದರರು ಅಂತಿಮವಾಗಿ ತಮ್ಮ ಸ್ವರಕ್ಷಣೆಗೆ ಎನ್ನುವಂತೆ ಬಳ್ಳಾರಿಯಲ್ಲಿ ತಮ್ಮದೇ ಹೋರಾಟವನ್ನು ಘೋಷಿಸಿದ್ದಾರೆ.

ಬಳ್ಳಾರಿಯಲ್ಲಿ ಇಂದು ಇಡೀ ದಿನ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ರೆಡ್ಡಿ ಸಹೋದರರು ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವಯಂ ರಕ್ಷಣೆಗಾಗಿ ಪಾದಯಾತ್ರೆ ಹಾಗೂ ಬಳ್ಳಾರಿ ಜಿಲ್ಲೆಯಾದ್ಯಂತ ಆಗಸ್ಟ್ 6ರ ವರೆಗೆ ಸಮಾವೇಶ ನಡೆಸುವ ಕಾರ್ಯಕ್ರಮ ಘೋಷಿಸುವುದರೊಂದಿಗೆ ರೆಡ್ಡಿಗಳು ಪಕ್ಷದ ಆದೇಶ ಉಲ್ಲಂಘಿಸಿದಂತೆ ಆಗಿದೆ. ಇದರೊಂದಿಗೆ 'ಕಮಲ' ದೊಳಗೆ ಬಿರುಕು ಕಾಣಿಸಿಕೊಂಡಿದೆ.

ಅಕ್ರಮ ಗಣಿಗಾರಿಕೆ ಬಿಜೆಪಿ ಸರ್ಕಾರವನ್ನು ಸುತ್ತಿಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಳಸುತ್ತಿರುವ ಈ ಬ್ರಹ್ಮಾಸ್ತ್ರದ ಮೂನಚು ಬಳ್ಳಾರಿಯ ಸಚಿವತ್ರಯರಾದ ಜನಾರ್ದನರೆಡ್ಡಿ , ಶ್ರೀರಾಮುಲು ಹಾಗೂ ಕರುಣಾಕರರೆಡ್ಡಿ ಅವರ ಕಡೆಗೇ ತಿರುಗಿದೆ. ವಿಧಾನಮಂಡಲದ ಉಭಯ ಸದನಗಳಲ್ಲಿ ಆರಂಭವಾದ ಹೋರಾಟ ಈಗ ರಾಜಧಾನಿಯಿಂದ ಬಳ್ಳಾರಿ ಮಾರ್ಗದಲ್ಲಿ ಹೊರಟಿದೆ.

 ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹಣೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವರ್ಚಸ್ಸು ಉಳಿಸಲು ರಫ್ತು ನಿಷೇಧದಂತಹ ದಿಟ್ಟ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ರೆಡ್ಡಿಗಳನ್ನು ರಕ್ಷಿಸುವ ಇರಾದೆ ಅವರಿಗೆ ಇಲ್ಲ ಎನ್ನುವುದು ಸ್ವತಃ ರೆಡ್ಡಿ ಸಹೋದರರಿಗೇ ಅರ್ಥವಾಗಿರುವುದು ಆತ್ಮರಕ್ಷಣೆಯ ಹೊಸ ವರಸೆಗೆ ಕಾರಣವಾಗಿದೆ.

ಅಕ್ರಮ ಗಣಿಗಾರಿಕೆ ವಿಷಯ ಪ್ರಸ್ತಾಪದ ವೇಳೆ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಪ್ರತಿಪಕ್ಷಗಳು ರೆಡ್ಡಿ ಸಹೋದರ ಸಚಿವರ ವಿರುದ್ದ ಮುಗಿಬಿದ್ದರೂ ಆಡಳಿತ ಪಕ್ಷದ ಸಾಲಿನಲ್ಲಿ ಅವರನ್ನು ಸಮರ್ಥಿಸುವ ಉತ್ಸಾಹ ಕಾಣಲಿಲ್ಲ . ಅಕ್ರಮ ಗಣಿಗಾರಿಕೆ ಬಗ್ಗೆ ಸರ್ಕಾರದ ನಿಲುವು ವ್ಯಕ್ತಪಡಿಸುವುದು, ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವುದು ಮುಖ್ಯಮಂತ್ರಿಗಳಿಗೆ ಅನಿವಾರ್ಯವಾಗಿತ್ತು .

ರೆಡ್ಡಿ ಸಹೋದರರ ಬಗ್ಗೆ ಆಡಳಿತ ಪಕ್ಷದಲ್ಲಿಯೇ ಕರಗುತ್ತಿರುವ ಸಹಾನುಭೂತಿಯ ಲಕ್ಷಣಗಳು ಅಧವೇಶನದಲ್ಲಿ ಸ್ಪೆ ಷ್ಟವಾಗಿ ಕಾಣಿಸಿದವು. ಪ್ರತಿಪಕ್ಷ ನಾಯಕರು ತಮ್ಮ ವಿರುದ್ಧ ಅಪರೋಕ್ಷವಾಗಿ ಮಾಡಿದ ಆರೋಪಗಳಿಗೆ ಉತ್ತರಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಸದನದ ಹೊರಗಿನ ವೇದಿಕೆ ಬಳಸಿಕೊಳ್ಳಬೇಕಾಗಿ ಬಂತು.

ರೆಡ್ಡಿ ಬಣಕ್ಕೆ ಶಾಕ್:

ರೆಡ್ಡಿ ಬಣಕ್ಕೆ ಮೂದಲು ಶಾಕ್ ನೀಡಿದ್ದು ಶ್ರೀರಾಮುಲು ಪಾದಯಾತ್ರೆ ಬಗ್ಗೆ ಪಕ್ಷದ ಕಠಿಣ ನಿಲುವು. ಕಾಂಗ್ರೆಸ್ಯಾತ್ರೆಗೆ ಪರ್ಯಾಯ ವಾಗಿ ಬಳ್ಳಾರಿ ಮೈಸೂರು ಪಾದಯಾತ್ರೆ ನಡೆಸುವ ಆರೋಗ್ಯ ಸಚಿವ ಶ್ರೀರಾಮಲು ಏಕಪಕ್ಷೀಯ ನಿರ್ಧಾರವನ್ನು ಪಕ್ಷ ತಳ್ಳಿ ಹಾಕಿತು. ಆ ಮೂಲಕ ನೀವು ಪಕ್ಷದ ಚೌಕಟ್ಟಿನ ಲಕ್ಷ್ಮಣ ರೇಖೆಯಲ್ಲಿ ಇದ್ದೀರಿ ಎನ್ನುವ ನಿಷೂರ ಎಚ್ಚರಿಕೆ ಮುಖ್ಯಮಂತ್ರಿ ನೀಡಿದರು. ತಾವು ಆಡಿದ್ದೇ ಆಟ ಎನ್ನುವ ರೆಡ್ಡಿ ಸಹೋದರರಿಗೆ ಇದು ಮೂದಲ ಶಾಕ್. ಪಕ್ಷದ ನಿಲುವಿನಿಂದ ಅಸಮಾಧಾನ ಗೊಂಡ ಅವರು ದೆಹಲಿಗೆ ತೆರಳಿ, ವರಿಷ್ಠರ ಮೂರೆ ಹೋದರು. ಆದರೆ ಸಚಿವರೇ ಪಾದಯಾತ್ರೆಗೆ ಇಳಿಯುವ ನಿರ್ಧಾರಕ್ಕೆ ವರಿಷ್ಠ ರು ಸಮ್ಮತಿ ಸೂಚಿಸಲಿಲ್ಲ . ಬದಲಾಗಿ 'ತಾಯಿ' ಸುಷಾ ಅವರೇ ಪಕ್ಷದ ಶಿಸ್ತಿನ ಪಾಠ ಹೇಳಿದರು. ತಮ್ಮ ಮೇಲಿನ ಆರೋಪ ಗಳಿಗೆ ಬೀದಿ ಹೋರಾಟದ ಮೂಲಕ ಉತ್ತರ ಹೇಳಲು ಹೊರಟಿದ್ದ ರೆಡ್ಡಿ ಸಹೋದರರಿಗೆ ಅಭಿಮಾನ ಭಂಗವಾಯಿತು.

ವಿಧಾನಮಂಡಲ ಮತ್ತು ಹೊರಗಿನ ಹೋರಾಟದ ಪ್ರತಿತಂತ್ರಗಳಲ್ಲಿ ರೆಡ್ಡಿಗಳನ್ನು ಅನಿವಾರ್ಯವಾಗಿ ಸಮರ್ಥಿಸಬೇಕಾದ ಮುಖ್ಯಮಂತ್ರಿಗಳಿಗೆ ಅವರನ್ನು ರಕ್ಷಿಸುವ ಇರಾದೆ ಇಲ್ಲ . ಕಳೆದ ಅಕ್ಟೋಬರ್­ನಲ್ಲಿ ತಮ್ಮ ವಿರುದ್ಧವೇ ಬಂಡಾಯದ ಭಾವುಟ ಹಾರಿಸಿ, ಸರ್ಕಾರದ ಕುತ್ತಿಗೆ ಹಿಡಿದಿದ್ದ ಗಣಿದಣಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಹಾನುಭೂತಿಯೂ ಇಲ್ಲ . ಸರ್ಕಾರಕ್ಕೆ 'ತಲೆ ನೋವಾಗಿರುವ' ರೆಡ್ಡಿ ಸಹೋದರರನ್ನು ಕಟ್ಟಿಕೊಂಡೇ ಆಡಳಿತ ನಡೆಸುವ ಉತ್ಸಾಹವೂ ಇಲ್ಲ . ಆದರೆ ರೆಡ್ಡಿಗಳಿಗಿರುವ ವರಿಷ್ಠರ ರಕ್ಷಣೆ ಮುಖ್ಯಮಂತ್ರಿಗಳ ಕೈ ಕಟ್ಟಿ ಹಾಕಿದೆ. ಇದು ರೆಡ್ಡಿ ಬಳಗಕ್ಕೂ ಗೊತ್ತಿದೆ. ಆ ಹಿನ್ನೆಲೆಯಲ್ಲಿಯೇ ಜನಾದೇಶ ಪಡೆಯುವ ಮಾತುಗಳು ಆಗಾಗ ಮುಖ್ಯಮಂತ್ರಿಗಳಿಂದ ಹೊರ ಬಿದ್ದಿದೆ. ಒಂದು ವೇಳೆ ಅಕ್ರಮ ಗಣಿಗಾರಿಗೆ ವಿಷಯವೇ ಸರ್ಕಾರಕ್ಕೆ ತಲೆನೋವಾದರೆ, ಅದೇ ವಿಷಯ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಮಧ್ಯಂತರ ಚುನಾವಣೆಗೂ ಮುಂದಾಗಬಹುದು. ಅದಕ್ಕಾಗಿಯೇ ರಫ್ತು ನಿಷೇಧದಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿರಬಹುದು ಎನ್ನುವ ಅನುವಾನವೂ ರೆಡ್ಡಿ ಬಳಗದಲ್ಲಿ ಸೃಷ್ಟಿಯಾಗಿದೆ.

ಕೈ ಬಿಟ್ಟ ಮಿತ್ರರು:

ದಕ್ಷಿಣ ಭಾರತದಲ್ಲಿ ಮೂಟ್ಟ ಮೂದಲು ಅರಳಿದ ಕಮಲದ ಸರ್ಕಾರಕ್ಕೆ ಸ್ಥಿರತೆ ತಂದುಕೊಡುವಲ್ಲಿ ತಮ್ಮ ಶಕ್ತಿಧಾರೆ ಎರೆದ ರೆಡ್ಡಿ ಸಹೋದರರು ತ್ರಿವಿಕ್ರಮರಂತೆ ಪಕ್ಷ ಮತ್ತು ಸರ್ಕಾರದಲ್ಲಿ ಬೆಳೆದು ನಿಂತರು. ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ 'ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅತ್ಯಲ್ಪ ಅವಧಯಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಸಿದರು. ಒಂದೊಂದೇ ಹೆಜ್ಜೆಯಿಟ್ಟ ರೆಡ್ಡಿ ಬಳಗ ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ತೊಡೆತಟ್ಟುವ ಧೈರ್ಯ ಪ್ರದರ್ಶಿಸಿದ್ದು ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಗಣಿಸಿತ್ತು . ಅವರ ಬಗ್ಗೆ ಪಕ್ಷದೊಳಗೇ ಇರುವ ಅಸಮಾಧಾನ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗುತ್ತಿದೆ.

ಇದಕ್ಕೆ ಪ್ರತಿಯಾಗಿ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಶಕ್ತಿ ಕ್ಷೀಣವಾಗುತ್ತಿರುವ ಆತಂಕ ರೆಡ್ಡಿ ಬಳಗವನ್ನು ಕಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಬಂಡಾಯದಲ್ಲಿ ತಮ್ಮದೇ ಪ್ರತ್ಯೇಕ ಅಜೆಂಡಾ ಇಟ್ಟುಕೊಂಡು ರೆಡ್ಡಿಗಳ ಜತೆ ಕೈ ಜೋಡಿಸಿದ್ದ ಸಚಿವ ರೇಣುಕಾಚಾರ್ಯ ಬಳಗ ರೆಡ್ಡಿಗಳ ವಿರುದ್ಧವೇ ಈಗ ತಿರುಗಿ ಬಿದ್ದಿದೆ. ಇನ್ನೊಂದೆಡೆ ಎಲ್ಲಾ ಚುನಾವಣೆ ಗಳಲ್ಲಿಯೂ ಸಾರಥ್ಯ ವಹಿಸಿದ ಯಡಿಯೂರಪ್ಪ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಲೇ ಹೋಗುತ್ತಿದ್ದಾರೆ. ಅಗತ್ಯ ಬಿದ್ದರೆ ಜನಾದೇಶಕ್ಕೆ ತೆರಳುವ ಆತ್ಮವಿತ್ವಾಸದ ಮಾತುಗಳು ಅವರಿಂದ ಹೊರ ಬಿದ್ದಿದೆ. ಈ ಎಲ್ಲಾ ವಿದ್ಯಮಾನಗಳಿಂದ ತಾವು ನಿಂತ ನೆಲವೇ ಅದರುತ್ತಿರುವ ಅನುಭವ ರೆಡ್ಡಿ ಬಳಗಕ್ಕೆ ಆಗಿದೆಯೇ?

ಕಪ್ಪುಬಟ್ಟೆ ಧರಿಸಿ ಬರಿಗಾಲಲ್ಲಿಯೇ ಬಳ್ಳಾರಿಯಲ್ಲಿ ಇಂದು ಪಾದಾಯಾತ್ರೆ ನಡೆಸಿದ ಶ್ರೀರಾಮುಲು ಮತ್ತು ಅವರ ಬಳಗದಲ್ಲಿ ಆತ್ಮರಕ್ಷಣೆಗೆ ಗುರಾಣಿ ಹಿಡಿಯುವ ಅನಿವಾರ್ಯತೆ ಎದ್ದು ಕಾಣುತಿತ್ತು . ಸ್ವಂತ ಜಿಲ್ಲೆಯಲ್ಲಿಯೇ ರಾಯಲಿ ನಡೆಸುವ ಅವರ ನಿರ್ಧಾರ, ರಾಜ್ಯ ಬಿಜೆಪಿ ವರಿಷ್ಠರಿಗೆ ಎಸೆದ ಸಣ್ಣ ಸವಾಲಿನಂತೆಯೂ ಇತ್ತು . ಭೋರ್ಗರೆವ ನದಿಯಂತೆ ಬಳ್ಳಾರಿಯತ್ತಲೇ ಬರುತ್ತಿರುವ ಕಾಂಗ್ರೆಸ್ ಪಾದಯಾತ್ರೆಯ ಅಲೆಗಳಿಂದ ರಕ್ಷಿಸಿಕೊಳ್ಳುವ ಆತುರ ಎದ್ದು ಕಾಣುತಿತ್ತು .

ತಮ್ಮ ವಿರುದ್ಧವೇ ಸೆಡ್ಡು ಹೊಡೆದಿದ್ದ ರೆಡ್ಡಿ ಸಹೋದರರ ಈ ಆತ್ಮರಕ್ಷಣೆಯ ಹೋರಾಟ ಒಂದು ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿನ ಹಾದಿ ಸುಗಮವೂ ಆಗಬಹುದು, ಇಲ್ಲವೇ ಸರ್ಕಾರದ ಸ್ಥಿರತೆಗೆ ಭಂಗ ತರಲೂ ಬಹುದು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : Udayavani
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಬಂಟ್ವಾಳ: ಹೊಳೆಗೆ ವಿಷ; ಮೀನುಗಳ ಸಾವು
»ರಾಜ್ಯಮಟ್ಟದ ಕಿಶೋರ ಪ್ರತಿಭಾ ಸ್ಪರ್ಧೆ: ಉಡುಪಿಯ ದೀಕ್ಷಾಗೆ ಮೊದಲ ಸ್ಥಾನ
»ಪ್ರೊ.ಎಸ್. ಶೆಟ್ಟರ್‌ಗೆ ಎಸ್‌ವಿಪಿ ಪ್ರಶಸ್ತಿ
»ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರಕಟ
»‘ಮಾಸ್ಟರ್ ಚೆಫ್’ ವಿಕಾಸ್ ಖನ್ನರೊಂದಿಗೆ ಕೆಲಹೊತ್ತು...
»ತೋನ್ಸೆ ಪುಷ್ಕಳ ಕುಮಾರ್‌ಗೆ ‘ಸ್ಕಂದಶ್ರೀ’ ವರ್ಷದ ಪ್ರಶಸ್ತಿ
»ಹೆದ್ದಾರಿ ಕಾಮಗಾರಿಗೆ ಯುಪಿಸಿಎಲ್ ಬೂದಿ: ರಸ್ತೆ ತಡೆ, ಪ್ರತಿಭಟನೆ
»ಉಡುಪಿ: ಹಳೆ ಆರೋಪಿಯ ಬಂಧನ
»ಕಳವು ಆರೋಪಿಯ ಸೆರೆ: ಚಿನ್ನಾಭರಣ ವಶ
»ದಾಖಲೆಗಿಳಿಲ್ಲದೆ ಸಿಮ್ ಮಾರಾಟ: ಮೂವರ ಸೆರೆ
»ಅಕ್ರಮ ಮರ ಸಾಗಾಟ: ಇಬ್ಬರ ಬಂಧನ; ಲಾರಿ ವಶ
»ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು
»ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
»ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
»ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
»ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
»ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯದ ಉದ್ಯೋಗಾವಕಾಶಗಳ ತರಬೇತಿ ಕಾರ್ಯಕ್ರಮ
»ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
»ಡಿವಿಜಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ‘ಡಿವಿಜಿಯನ್ನು ಜನ ಎಂದಿಗೂ ಮರೆಯಲ್ಲ’
»ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
»ಪರಪ್ಪೆ ಬಳಿ ಭೀಕರ ಬಸ್ ಅಪಘಾತ: ಕ್ಲೀನರ್ ಮೃತ್ಯು, 35 ಮಂದಿಗೆ ಗಾಯ, ಹಲವರು ಗಂಭೀರ
»‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ
»ಪಡುಬಿದ್ರೆ: ರಸ್ತೆ ಕಾಮಗಾರಿಗೆ ಮತ್ತೆ ತಳಬೂದಿ ಬಳಕೆ; ಫೆ. 4ರಂದು ಪ್ರತಿಭಟನೆ
»ಭಟ್ಕಳ ಎಜುಕೇಶನ್ ಟ್ರಸ್ಟ್‌ಗೆ 75ರ ಸಂಭ್ರಮ: ಸಮಾರೋಪ ಸಮಾರಂಭ: ಕಠಿಣ ಪರಿಶ್ರಮದಿಂದ ಮಹತ್ತರ ಸಾಧನೆ ಸಾಧ್ಯ: ಡಾ.ದಾಸ್
»ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
»ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
»ಕಳಂಕಿತ ಅಧ್ಯಕ್ಷರೇ? ಎಂದು ಸಂಬೋಧಿಸಿ..ಸಭಾಧ್ಯಕ್ಷರ ವಿರುದ್ಧ ವಾಗ್ದಾಳಿ: ಗೂಳಿ ಹಟ್ಟಿ ಅಮಾನತು
»ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
»ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
»ಯಶವಂತಪುರ - ಕಾರವಾರ ರೈಲು ಸುರತ್ಕಲ್‌ನಲ್ಲಿ ನಿಲುಗಡೆ; ಸುದುಪಯೋಗಪಡಿಸಿ: ಅಸ್ಕರ್‌
»ಮಂಗಳೂರಿನಲ್ಲೀಗ ಕೆಟಿಎಂ 200 ಡ್ಯೂಕ್ ಬೈಕ್
»ಭಟ್ಕಳ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಜಾಮಿಯಾ ಇಸ್ಲಾಮಿಯಾ: ಮಾ.18ರಿಂದ 21ರವರೆಗೆ ಶೈಕ್ಷಣಿಕ ಹಾಗೂ ಸೌಹಾದರ್ ಸಮಾವೇಶ
»ಮಂಗಳೂರಿನಲ್ಲಿ ಸಮಸ್ತ ಸಮ್ಮೇಳನ ವಾಹನ ಪ್ರಚಾರ ಜಾಥಾ, ಬೈಕ್ ರ್ಯಾಲಿ
»ಆದಿವಾಸಿ ಕೊರಗ ವಿದ್ಯಾರ್ಥಿನಿ ಗೀತಾ ಸಾವು ಪ್ರಕರಣ: ತನಿಖೆ ವಿಳಂಬ ವಿರೋಧಿಸಿ ಜಿಲ್ಲಾ ಕೊರಗ ಸಂಘದ ಪ್ರತಿಭಟನೆ
»ಆರಾಧನಾಲಯಗಳನ್ನು ಉಳಿಸಿಕೊಂಡೇ ರಾ.ಹೆ. ಅಭಿವೃದ್ಧಿ: ಇಬ್ರಾಹೀಂ ಕುಂಞಿ
»ಪಡುಬಿದ್ರೆ: ಹೆದ್ದಾರಿ ಕಾಮಗಾರಿಗೆ ತಳಬೂದಿ ಬಳಕೆ; ಸ್ಥಳೀಯರ ತಡೆ
»ನಕಲಿ ಚಿನ್ನ ಮಾರಾಟ ಯತ್ನ: ಇಬ್ಬರ ಸೆರೆ
»ಡಾ.ಗುರುರಾಜ್ ಭಟ್ಟ ಸ್ಮಾರಕ ಪ್ರಶಸ್ತಿ: ಡಾ.ಎನ್. ಜಯರಾಂ ಆಯ್ಕೆ : ಫೆ.11ರಂದು ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನ
»ಭೂ ಹಗರಣ ಪ್ರಕರಣ: ಯಡಿಯೂರಪ್ಪ ವಿರುದ್ಧ ವಿಚಾರಣೆ ಆರಂಭ
»ಕಾರು-ಬೈಕ್ ಡಿಕ್ಕಿ: ಪೋಲೀಸ್ ಕಾನ್ ಸ್ಟೇಬಲ್ ವರದರಾಜ್ ಬಲಿ; ಕಾರಿನೊಡನೆ ಚಾಲಕ ಪರಾರಿ
»ಜಾಗೋಭಾರತ್ ಭಾರತ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ವಿದ್ಯಾರ್ಥಿಗಳಿಂದ ಬಲವಂತದ ತರಗತಿ ಬಹಿಷ್ಕಾರ
»ಉಡುಪಿ ಕಿದಿಯೂರ್ ಹೋಟೆಲ್ ನ ರಜತ ಸಂಭ್ರಮ : ಸ್ಥಳ ದೇವ ನಾಗರಾಜನಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ
»ಹುಟ್ಟು ಅಂಧನಾದರೂ ವಿಶಿಷ್ಟ ಸಾಧನೆಯ ಮೂಲಕ ನಿರಂತರ ಬೆಳಕಿನ ಸೇವೆ !
»ರೊಸಾರಿಯೊ: ಚಿನ್ನದ ಪದಕ ವಿಜೇತ ವಿದ್ಯಾರ್ಥಿಗೆ ಸನ್ಮಾನ
»ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಸ್ಥಾವರ ನಿರ್ಮಾಣ; ಸಮೀಕ್ಷೆ ನಡೆಸದೆ ಕಾಮಗಾರಿ ಆರಂಭ: ರೈತ ಸಂಘ
»ತೊಕ್ಕೊಟ್ಟು ಪ್ರಕರಣ: ಗೃಹ ಸಚಿವರಿಗೆ ಶಾಸಕ ಖಾದರ್ ಮನವಿ
»ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಧರಣಿ
»ಇಂಪ್ರಿಂಟ್ಸ್ -2012ಕ್ಕೆ ಚಾಲನೆ: ಅಂತರ್ ಕಾಲೇಜು ವಾಣಿಜ್ಯ ಸ್ಪರ್ಧಾ ಸಮ್ಮೇಳನ ‘ಆ್ಯಕ್ಮೆ’ಗೆ ಚಾಲನೆ
»ಸರಣಿ ಹತ್ಯಾ ಪ್ರಕರಣದ ವಿಚಾರಣೆ: ಮೋಹನ್‌ಕುಮಾರ್‌ನ ಹಸ್ತಾಕ್ಷರದ ಸಾಮ್ಯತೆಯ ಸಾಕ್ಷ
»ತೊಕ್ಕೊಟ್ಟು: ಅಪಾಯದ ಅಂಚಿನಲ್ಲಿ ಬಸ್ ತಂಗುದಾಣ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri