ಕು೦ದಾಪುರದಲ್ಲಿನ ತಮ್ಮಯ್ಯ ದೇವಾಡಿಗರ ಸಿಗಡಿ ಸಾಕಣೆ |
ಪ್ರಕಟಿಸಿದ ದಿನಾಂಕ : 2010-07-29
ಕುಂದಾಪುರಕ್ಕೆ ಹೋಗುವ ದಾರಿಯಲ್ಲಿ, ಜಾಲಾಡಿ ಎಂಬ ಗ್ರಾಮದಲ್ಲಿ ಶ್ರೀಯುತ ತಮ್ಮಯ್ಯ ದೇವಾಡಿಗ ಎನ್ನುವವರು ಸುಮಾರು ೨೦ ಎಕರೆ ಜಾಗದಲ್ಲಿ ಸಿಗಡಿ ಸಾಕಾಣಿಕೆ ಮಾಡುತ್ತಿದ್ದಾರೆ.
ಶ್ರೀಯುತ ತಮ್ಮಯ್ಯ ದೇವಾಡಿಗರವರಲ್ಲಿ ನೀವು ಸಿಗಡಿಯನ್ನು ಸಾಕಾಣಿಕೆಗೆ ಎಲ್ಲಿಂದ ತರಿಸು ತ್ತೀರಿ ಎಂದು ಪ್ರಶ್ನಿಸಿದಾಗ; ಬಹುಪಾಲು ಸಿಗಡಿಯನ್ನು ಚೆನ್ನೈಯಿಂದ ಲ್ಯಾಬ್ ಯಾನೆ ಪ್ರಯೋಗ ಶಾಲೆಯಲ್ಲಿ ಅವುಗಳನ್ನು ಪರಿಶೀಲಿಸಿ, ಅದು ಆರೋಗ್ಯವಾಗಿದೆಯೋ ಎಂಬುದು ಮನದಟ್ಟಾದ ನಂತರ ಪ್ಯಾಕ್ ಮಾಡಿ (೧ ಪ್ಯಾಕ್ನಲ್ಲಿ ೧೦೦೦ ಸಿಗಡಿ ಹಾಕಲಾಗುತ್ತದೆ. ಆ ಪ್ಯಾಕ್ನಲ್ಲಿ ನೀರು, ಆಮ್ಲಜನಕ ತುಂಬಿಸಿ, ಸಾಮಾನ್ಯವಾಗಿ ಐದು ಲೀಟರು ನೀರು ಇರುತ್ತದೆ. ಹೀಗೆ ೧೦ ಪ್ಯಾಕ್ ತರಿಸಿದ್ದೇನೆ). ಇದನ್ನು ಇನ್ಸುಲೇಟರ್ ಮುಖಾಂತರ ಕೇಂದ್ರಕ್ಕೆ ತರಲಾಗುವುದು.
ಅಲ್ಲಿಂದ ನಮ್ಮ ಮೀನು ಸಾಕಾಣಿಕಾ ಕೇಂದ್ರಕ್ಕೆ ತರುವಾಗ ಸುಮಾರು ೨೫ ಗಂಟೆ ತಗಲುತ್ತದೆ. ಇದನ್ನು ತಂದ ನಂತರ `ಸಿಂಟೆಕ್ಸ್' ಟ್ಯಾಂಕ್ನಲ್ಲಿ ಆಕ್ಸಿಜನ್ ತುಂಬಿಸಿ ಗರಿಷ್ಠ ೧ ಗಂಟೆಯವರೆಗೆ ಇರಿಸುತ್ತಾರೆ. ನಂತರ ಕೊಳಕ್ಕೆ (ಕ್ಟಿಟಿಜ) ಬಿಡುವುದಕ್ಕಿಂತ ಮುಂಚೆ ಅದನ್ನು ಬ್ಲೀಚಿಂಗ್ ಮೂಲಕ ಶುದ್ಧೀಕರಿಸಿ ಸಂಸ್ಕರಿಸಲ್ಪಟ್ಟ ನೀರನ್ನು ಆ ಕೊಳಕ್ಕೆ ಬಿಡಲಾಗುವುದು.
ತದನಂತರ ಒಂದು ಲಕ್ಷದಷ್ಟು ಮರಿಗಳನ್ನು ಆ ಕೊಳದಲ್ಲಿ ಬಿಡಲಾಗುವುದು. ಕೊಳಕ್ಕೆ ಬಿಟ್ಟು ೪೦ ರಿಂದ ೫೦ ದಿನಗಳ ನಂತರ, ಒಂದು ಲಕ್ಷದಲ್ಲಿ ಎಷ್ಟು ಉಳಿದಿದೆ ಎಂಬುದನ್ನು ಪರಿಶೀಲಿಸಿ. ಉದಾ: ೫೦,೦೦೦ ಮರಿಗಳು ಉಳಿದಿದ್ದರೆ, ಅಷ್ಟಕ್ಕೆ ಬೇಕಾಗುವ ಆಹಾರ ಒದಗಿಸಲಾಗುವುದು.
ಸಿಗಡಿ ಮೀನಿನ ಆಹಾರವನ್ನು ಸಿ.ಪಿ. ಅಕ್ವೆಕಲ್ಚರ್ (ಇಂಡಿಯಾ) ಪ್ರೈ ಲಿಮಿಟೆಡ್ ನಿಂದ ಆಹಾರ ತಯಾರಿಸುತ್ತಾರೆ. (ಅದರ ಆಹಾರ ಸೋಯಾಬೀನ್, ಗೋಧಿ ಹಿಟ್ಟು, ಪುಡಿ ಅಕ್ಕಿ, ವಿಟಮಿನ್ ಮತ್ತು ಮಿನರಲ್) ಒಳಗೊಂಡಿರುತ್ತದೆ.
ಈ ಮೀನು ಯಾನೆ ಸಿಗಡಿ ಅತ್ಯಂತ ಸೂಕ್ಷ್ಮ ಆಗಿರುವುದರಿಂದ ಮಗುವಿಗಿಂತ ಹೆಚ್ಚು ಆರೈಕೆ ಬೇಕಾಗುತ್ತದೆ. ಅವರು ಸಿಗಡಿ ಬೇಸಾಯ ಮಾಡುವ ಕೊಳದ ಸುತ್ತಲೂ ಕ್ರಾಪ್ನೆಟ್ ಹಾಕಬೇಕಾಗುತ್ತದೆ.
ಸಿಗಡಿ ಮೀನಿಗೆ ಆಹಾರ ನೀಡುವ ಸಮಯ
ಬೆಳಿಗ್ಗೆ: ೬ ಗಂಟೆಗೆ
ಮಧ್ಯಾಹ್ನ : ೧೨ ಗಂಟೆಗೆ
ಸಂಜೆ : ೬ ಗಂಟೆಗೆ
ರಾತ್ರಿ : ೧೨ ಗಂಟೆಗೆ
ಈ ಸಿಗಡಿ ಮೀನು ಸಾಕಾಣಿಕಾ ಕೇಂದ್ರದ ಮಾಲೀಕರ ಪ್ರಕಾರ ಗರಿಷ್ಠ ಪ್ರಮಾಣದಲ್ಲಿ ಬ್ಲೀಚ್ ಹಾಕಿ ಸ್ವಚ್ಛ ಗೊಳಿಸುವುದು ಉತ್ತಮ. ಈ ಸಿಗಡಿ ಮೀನಿಗೆ ಬರುವ ಪ್ರಮುಖ ರೋಗವೆಂದರೆ ಬಿಳಿ ಚುಕ್ಕೆ ರೋಗ. ಬಿಳಿ ಚುಕ್ಕೆ ರೋಗದ ಚಿಹ್ನೆಗಳೆಂದರೆ, ಸಿಗಡಿಯ ಮೈಯಲ್ಲಿ ಸಣ್ಣ ಸಣ್ಣ ಚುಕ್ಕೆಗಳಿರುತ್ತದೆ. ಒಂದೆರಡು ದಿನಗಳಲ್ಲಿ ಸಿಗಡಿ ಕೊಳದ ಬದಿಯಲ್ಲಿ ಸತ್ತು ಬಿದ್ದಿರುವುದು ಕಂಡು ಬರಬಹುದು. ಆಗ ಬಿಳಿ ಚುಕ್ಕಿ ರೋಗ ಬಂದಿದೆ ಎಂಬುದನ್ನು ಖಾತ್ರಿ ಪಡಿಸಬಹುದು.
ಯಾವುದರಿಂದ ಈ ರೋಗ ಬರುತ್ತದೆ?
೧. ಮರಿಗಳಿಂದಲೂ ಈ ರೋಗ ಬರಬಹುದು.
೨. ಏಡಿಯಿಂದ ಬರಬಹುದು.
೩. ಹೊರಗಡೆ ನೀರಿನಿಂದ ಬರಬಹುದು.
೪. ಪಿ.ಹೆಚ್. ಮೇಲ್ಮಟ್ಟಕ್ಕೆ ಹೋದರೂ ಈ ಖಾಯಿಲೆ ಬರಬಹುದು.
೫. ಆಮ್ಲಜನಕ ಕಡಿಮೆಯಾದಾಗಲೂ ಸಾಯುವ ಸಂಭವ ಇರುತ್ತದೆ.
೬. ಒಂದು ಕಡೆಯಲ್ಲಿ ಸತ್ತ ಸಿಗಡಿಯನ್ನು ಕೊಳಕ್ಕೆ ತಂದು ಹಾಕಬಹುದು. ಆಗ ಕೂಡ ಖಾಯಿಲೆ ಬರುವ ಸಂಭವವಿದೆ.
ಬಿಳಿ ಚುಕ್ಕೆ ರೋಗ ಬಂದಿದೆ ಎಂದು ತಿಳಿದ ಕೂಡಲೇ ನೀರು ಖಾಲಿ ಮಾಡಿ, ಸಿಗಡಿಯನ್ನು ಪೆಟ್ಟಾ ಗದ ರೀತಿಯಲ್ಲಿ ಬಲೆಯಲ್ಲಿ ಹಿಡಿದು ರಾಶಿ ಹಾಕಬೇಕು. ಉತ್ತಮವಾಗಿ ಬೆಳೆದ ಸಿಗಡಿ ೧ ಕೆ.ಜಿ. ಗೆ ೩೦.೦೦ ರೂ. ಬರುತ್ತದೆ. ಇದನ್ನು ಮೂರು ರೀತಿಯಾಗಿ ಪ್ರಥಮ ದರ್ಜೆ, ಎರಡನೇ ದರ್ಜೆ, ಮೂರನೆಯ ದರ್ಜೆ ಎಂದು ವಿಂಗಡಿಸಲಾಗುವುದು. ನಂತರ ಪ್ಯಾಕ್ ಮಾಡುವ ಮೊದಲು ಐಸ್ ಹಾಕಬೇಕು. ಪ್ಯಾಕ್ ಮಾಡಿದ ನಂತರ ಐಸ್ ಹಾಕಬೇಕು. ಸಿಗಡಿ ಮಾಡುವಾಗಲೇ ಯಾವ ಕಂಪನಿ ಹೆಚ್ಚಿನ ಹಣ ನೀಡುವ ಒಪ್ಪಂದಕ್ಕೆ ಸಹಿ ಹಾಕುತ್ತದೆ ಆ ಕಂಪನಿಗೆ ವಿಕ್ರಯವಾಗುತ್ತದೆ.
ಈ ಸಿಗಡಿ ಕೃಷಿಯಲ್ಲಿ ಎಲ್ಲಾ ರೀತಿಯ ಅವಘಡಗಳನ್ನು ಎದುರಿಸಬೇಕಾಗಬಹುದು ಎಂಬ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-07-29
|
|
|