ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’ |
ಪ್ರಕಟಿಸಿದ ದಿನಾಂಕ : 2010-07-29
ಕಾಸರಗೋಡು, ಜು.28: ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ- 2010’ನ್ನು ನೀಡಿ ಗೌರವಿಸಲಾಗುವುದು.
ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತರಾದ ಗಡಿನಾಡ ಕನ್ನಡಿಗರು ಅನುಭವಿ ಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ಹಾಗೂ ಕಾರ್ಯೋನ್ಮುಖವಾಗಲು ಸರಕಾರದ ಗಮನ ಸೆಳೆಯುವ ಉದ್ದೇಶದೊಂದಿಗೆ ಕಾಸರಗೋಡಿನ ಮುನ್ಸಿಪಾಲ್ ಕಾನ್ಪರೆನ್ಸ್ ಹಾಲ್ನಲ್ಲಿ ಆ.7 ರಂದು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭ ಕಿಂಞಿಣ್ಣ ರೈಯವರಿಗೆ ‘ಕರ್ನಾಟಕ ಗಡಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗು ವುದು ಎಂದು ಪ್ರಥಮ ಕರ್ನಾಟಕ ಗಡಿನಾಡ ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎಸ್.ಅಬೂಬಕರ್ ಆರ್ಲಪದವು, ಅಧ್ಯಕ್ಷ ಶಿವರಾಮ ಕಾಸರಗೋಡು ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|