ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)

ಇಸ್ಲಾಮಾಬಾದ್ ಬಳಿಯ ಮರ್ಗಲ್ಲಾ ಬೆಟ್ಟದಲ್ಲಿ ದುರಂತ
 
ಭೀಕರ ವಿಮಾನ ಅಪಘಾತ: 155 ಸಾವು
 
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು.
 

 
ಇಸ್ಲಾಮಾಬಾದ್ (ಪಿಟಿಐ): ಇಲ್ಲಿಗೆ ಸಮೀಪದ ದುರ್ಗಮ ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 9.45ರ ಸುಮಾರಿಗೆ ದಟ್ಟ ಮಂಜು ಮತ್ತು ಮೋಡ ಕವಿದ ವಾತಾವರಣದಲ್ಲಿ ಪಾಕಿಸ್ತಾನದ ಖಾಸಗಿ ಪ್ರಯಾಣಿಕ ವಿಮಾನವೊಂದು ದುರಂತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 155 ಮಂದಿ ಮೃತಪಟ್ಟಿದ್ದಾರೆ.
 
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು. ಸತ್ತವರಲ್ಲಿ ಐವರು ಮಕ್ಕಳು ಮತ್ತು 29 ಮಹಿಳೆಯರೂ ಸೇರಿದ್ದಾರೆ.
 
ಕರಾಚಿಯಲ್ಲಿ ಈ ವಿಮಾನದಲ್ಲಿ ಪ್ರಯಾಣಿಸಲು 159 ಮಂದಿ ಟಿಕೆಟ್ ಖರೀದಿಸಿದ್ದರು. ಆದರೆ 12 ಮಂದಿ ವಿಮಾನವನ್ನು ತಪ್ಪಿಸಿಕೊಂಡಿದ್ದರು ಅಥವಾ ಕೊನೆಯ ಕ್ಷಣದಲ್ಲಿ ಯಾನ ರದ್ದುಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಭೀಕರ ದುರಂತದಲ್ಲಿ ಬದುಕುಳಿದ ಐದು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಳಾಡಳಿತ ಸಚಿವ ರೆಹಮಾನ್ ಮಲಿಕ್‌ಅವರೇ ಮೊದಲು ಹೇಳಿದ್ದರು. ಆದರೆ ದುರಂತದಲ್ಲಿ ಯಾರೂ ಬದುಕಿ ಉಳಿದಿಲ್ಲ, ಯಾರನ್ನೂ ರಕ್ಷಿಸಲಾಗಿಲ್ಲ ಎಂಬುದು ಸಂಜೆ ಸ್ಪಷ್ಟವಾಯಿತು. ಸಂಜೆ ಸ್ವತಃ ಸಚಿವ ಮಲಿಕ್ ಅವರೇ ದುರಂತದಲ್ಲಿ ಎಲ್ಲರೂ ಸತ್ತಿದ್ದಾರೆ ಎಂದು ಪ್ರಕಟಿಸಿದರು.
 
ಹೆಸರಾಂತ ದಮನೆಕೊ ರೆಸಾರ್ಟ್ ಸಮೀಪ ಈ ದುರಂತ ಸಂಭವಿಸಿದೆ. ವಿಮಾನ ಇನ್ನೇನು ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಬೆಟ್ಟದ ಕೊರಕಲಿಗೆ ಅಪ್ಪಳಿಸಿ ಛಿದ್ರಗೊಂಡಿತು. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ವಿಮಾನದಲ್ಲಿದ್ದ ಬಹುತೇಕ ಮೃತದೇಹಗಳು ಗುರುತು ಹಿಡಿಯಲಾರದಷ್ಟು ಕರಕಲಾದವು.
 
ಎರಡು ಬೆಟ್ಟಗಳ ನಡುವಿನ ಆಳವಾದ ಕಂದಕದಲ್ಲಿ ವಿಮಾನದ ಅವಶೇಷಗಳು ಚದುರಿ ಬಿದ್ದಿದ್ದು,ಹಲವು ಗಂಟೆಗಳ ಬಳಿಕವೂ ಬೆಂಕಿ ಉರಿಯುತ್ತಲೇ ಇತ್ತು. ಜೋರಾಗಿ ಸುರಿಯುತ್ತಿದ್ದ ಮಳೆಯೂ ಬೆಂಕಿಯನ್ನು ಆರಿಸುವಲ್ಲಿ ವಿಫಲವಾಯಿತು. ದುರಂತ ನಡೆದು ಹಲವು ಗಂಟೆಗಳ ಬಳಿಕವಷ್ಟೇ ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತೆರಳಲು ಸಾಧ್ಯವಾಯಿತು. ಆ ವೇಳೆಗೆ ಅದೆಷ್ಟೋ ದೇಹಗಳು ಪೂರ್ತಿ ಭಸ್ಮವಾಗಿದ್ದವು. ಕೆಲವು ತಲೆಬುರುಡೆಗಳು, ಎಲುಬುಗಳನ್ನೇ ಚೀಲಗಳಲ್ಲಿ ತುಂಬಿ ತರಲಾಗಿದೆ.
 
‘ಬದುಕಿ ಉಳಿದಿರಬಹುದಾದವರಿಗಾಗಿ ನಾವು ಕಾಡಿನಲ್ಲಿ ಕೂಗಿದೆವು. ಆದರೆ ಯಾವುದೇ ಸ್ಪಂದನ ದೊರೆತಿಲ್ಲ.ಹೀಗಾಗಿ ಎಲ್ಲರೂ ಸತ್ತಿರಬೇಕೆಂದು ಭಾವಿಸಿದ್ದೇವೆ’ ಎಂದು ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.
 
ಇಸ್ಲಾಮಾಬಾದ್ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ದಟ್ಟ ಮೋಡ ಮತ್ತು ಮಂಜು ಮುಸುಕಿದ ವಾತಾವರಣ ಇಲ್ಲಿ ನೆಲೆಸಿದೆ. ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಇಸ್ಲಾಮಾಬಾದ್‌ಗೆ ಆಗಮಿಸುವ ತನ್ನೆಲ್ಲಾ ವಿಮಾನಗಳನ್ನು ಲಾಹೋರ್‌ನತ್ತ ಕಳುಹಿಸುತ್ತಿದೆ. ಆದರೂ ಈ ಖಾಸಗಿ ವಿಮಾನಕ್ಕೆ ಇಲ್ಲಿಗೆ ಆಗಮಿಸುವುದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಕ್ರಮಕ್ಕೆ ನಾಗರಿಕ ವಿಮಾನಯಾನ ಪ್ರಾಧಿಕಾರ ಅಚ್ಚರಿ ವ್ಯಕ್ತಪಡಿಸಿದೆ.
 
ಅಗತ್ಯದ ಹವಾಮಾನ ಮತ್ತು ತಾಂತ್ರಿಕ ಪರಿಶೀಲನೆಗಳ ಬಳಿಕವೇ ವಿಮಾನಕ್ಕೆ ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೆ ಅನುಮತಿ ನೀಡಲಾಗಿತ್ತು. ಬೆಳಿಗ್ಗೆ 9.45ರ ಸುಮಾರಿಗೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ವಿಮಾನವು ಎಟಿಸಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ನಾಗರಿಕ ವಿಮಾನಯಾನ ಇಲಾಖೆಯ ವಕ್ತಾರ ಪರ್ವೇಜ್ ಜಾರ್ಜ್ ಹೇಳಿದ್ದಾರೆ.
 
ದಟ್ಟ ಅರಣ್ಯದಲ್ಲಿ ವಿಮಾನದ ಅವಶೇಷಗಳು ದೂರಕ್ಕೆ ಚದುರಿ ಬಿದ್ದುದು ಟಿವಿ ಚಾನೆಲ್‌ಗಳ ಪ್ರಸಾರದಲ್ಲಿ ಗೊತ್ತಾಗುತ್ತಿದ್ದು, ದುರಂತ ಸ್ಥಳದಲ್ಲಿ ಬೆಂಕಿ, ಹೊಗೆ ಹಲವು ತಾಸುಗಳ ತನಕ ಮೇಲೇಳುತ್ತಿದ್ದುದು ಕಾಣಿಸುತ್ತಿತ್ತು.ರಾಜಧಾನಿಯಲ್ಲಿ ಈ ವಿಮಾನ ಅತ್ಯಂತ ಕೆಳಭಾಗದಲ್ಲಿ ಹೋಗುತ್ತಿತ್ತು, ಅದು ಸಮತೋಲನ ಕಳೆದುಕೊಂಡಂತಹ ಸ್ಥಿತಿಯಲ್ಲಿತ್ತು. ಕೆಲವೇ ಕ್ಷಣದಲ್ಲಿ ದೊಡ್ಡ ಸದ್ದಿನೊಂದಿಗೆ ಮಾರ್ಗಲ್ಲಾ ಬೆಟ್ಟಕ್ಕೆ ಅಪ್ಪಳಿಸಿದ್ದು ಕೇಳಿಸಿತು. ಸ್ಥಳದಲ್ಲಿ ಭಾರಿ ಹೊಗೆ ಮೇಲೇಳುತ್ತಿತ್ತು ಎಂದು ಡಮನೆಕೊ ರೆಸಾರ್ಟ್‌ಗೆ ಕುಟುಂಬ ಸಮೇತ ಬಂದಿದ್ದ ಪ್ರತ್ಯಕ್ಷದರ್ಶಿ ಸಕ್ಲೇನ್ ಅಲ್ತಾಫ್ ತಿಳಿಸಿದರು.
 
ವಿಮಾನನಿಲ್ದಾಣದಲ್ಲಿ ನೂರಾರು ಮಂದಿ ತಮ್ಮ ಬಂಧುಗಳಿಗಾಗಿ ಆತಂಕದಿಂದ ನಿರೀಕ್ಷಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.ಈ ವಿಮಾನ 10 ವರ್ಷಗಳಷ್ಟು ಹಳೆಯದು. ಏರ್‌ಬ್ಲೂ ಸಂಸ್ಥೆಯು 2006ರಲ್ಲಿ ಈ ವಿಮಾನವನ್ನು ಭೋಗ್ಯಕ್ಕೆ ಪಡೆದಿತ್ತು ಎಂದು ಏರ್‌ಬಸ್ ಕಂಪೆನಿ ತಿಳಿಸಿದೆ.
 
ಪಾಕಿಸ್ತಾನದಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಭಾರಿ ದೊಡ್ಡ ವಿಮಾನ ದುರಂತ ಇದು. 2006ರ ಜುಲೈನಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ)  ಫೊಕ್ಕೆರ್ ಎಫ್ 27 ವಿಮಾನ ಅಪಘಾತಕ್ಕೀಡಾಗಿ 45 ಮಂದಿ ಸತ್ತಿದ್ದರು.
 
1992ರ ಸೆಪ್ಟೆಂಬರ್‌ನಲ್ಲಿ ಕಠ್ಮಂಡು ಸಮೀಪ ಪಿಐಎ ಏರ್‌ಬಸ್ ಎ 300 ವಿಮಾನ ಬೆಟ್ಟಕ್ಕೆ ಅಪ್ಪಳಿಸಿದ್ದರಿಂದ 167 ಮಂದಿಮೃತಪಟ್ಟಿದ್ದರು. 
 
ಪಾಕ್ ವಿಮಾನ ದುರಂತಗಳ ಕ(ಹಿ)ನ್ನೋಟ
ಮೇ 20, 1965: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ)ನ 707 ಬೋಯಿಂಗ್‌ನ ಆರಂಭಿಕ ಹಾರಾಟದ ವೇಳೆ ಕೈರೊದಲ್ಲಿ ಪತನ. 124 ಪ್ರಯಾಣಿಕರ ಸಾವು
 
ಆಗಸ್ಟ್ 6, 1970: ಗುಡುಗು ಮಳೆಯ ಹವಾಮಾನ ಪರಿಸ್ಥಿತಿಯಲ್ಲಿ ಇಸ್ಲಾಮಾಬಾದ್ ನಿಲ್ದಾಣದಿಂದ ಟೇಕ್‌ಆಫ್ ಮಾಡುತ್ತಿದ್ದ ಪಿಐಎಯ ಫಾಕರ್ ಎಫ್27 ವಿಮಾನ ದುರಂತ;30 ಪ್ರಯಾಣಿಕರ ದುರ್ಮರಣ
 
ಡಿಸೆಂಬರ್ 8, 1972: ಪಿಐಎಯ ಫಾಕರ್ ಎಫ್ 27 ವಿಮಾನ ರಾವಲ್ಪಿಂಡಿಯಲ್ಲಿ ದುರಂತಕ್ಕೀಡಾಗಿ 26 ಪ್ರಯಾಣಿಕರ ಸಾವು
                        
ನವೆಂಬರ್ 26,1979: ಸೌದಿ ಅರೆಬಿಯದಿಂದ ಹಜ್ಜ್ ಯಾತ್ರಾರ್ಥಿಗಳನ್ನು ಕರೆತರುವ ವೇಳೆ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಹಂತದ ವೇಳೆ ಪಿಐಎಯ ಬೋಯಿಂಗ್707 ವಿಮಾನ ದುರಂತಕ್ಕೀಡು. 156 ಮಂದಿಯ ಮೃತ್ಯು.
 
ಅಕ್ಟೋಬರ್ 23,1986:ಪಿಐಎಯ ಫಾಕರ್ ಎಫ್27 ಪೇಶಾವರದಲ್ಲಿ ದುರಂತಕ್ಕೀಡು; 54 ಮಂದಿ ಪ್ರಯಾಣಿಕರಲ್ಲಿ 13 ಮಂದಿಯ ಸಾವು.
 
ಆಗಸ್ಟ್ 17,1988: ಅಮೆರಿಕ ನಿರ್ಮಿತ ಹರ್ಕ್ಯುಲಸ್ ಸಿ-130 ಸೇನಾ ವಿಮಾನ ಪತನ; ಸೇನಾ ಆಡಳಿತಗಾರ ಜ.ಮುಹಮ್ಮದ್ ಝಿಯಾವುಲ್ ಹಕ್ ಮತ್ತು ಪಾಕ್ ಸೇನಾಧಿಕಾರಿಗಳು ಹಾಗೂ ಅಮೆರಿಕದ ರಾಯಭಾರಿ ಸೇರಿದಂತೆ ಇತರ 30 ಮಂದಿಯ ಸಾವು.
 
 ಆಗಸ್ಟ್ 25, 1989: ಉತ್ತರ ಪಾಕಿಸ್ತಾನದಿಂದ 54 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಫಾಕರ್ ವಿಮಾನ ನಾಪತ್ತೆ; ಅವಶೇಷಗಳು ಇದುವರೆಗೂ ಪತ್ತೆಯಾಗಿಲ್ಲ.
 
 ಸೆಪ್ಟಂಬರ್ 28, 1992:ಪಿಐಎಯ ಏರ್‌ಬಸ್ ಎ300 ಪತನ; 167 ಮಂದಿಯ ಮೃತ್ಯು.
 
 ಫೆಬ್ರವರಿ 19, 2003: ವಾಯುಪಡೆಯ ಫಾಕರ್ ಎಫ್ 27 ಕೊಹಾತ್‌ನಲ್ಲಿ ಪತನ; ವಾಯುಸೇನೆಯ ಮುಖ್ಯಸ್ಥ ಮುಶಾಫ್ ಅಲಿ, ಅವರ ಪತ್ನಿ ಹಾಗೂ ಇತರ 15 ಮಂದಿಯ ಸಾವು.
 
 ಫೆಬ್ರವರಿ 24, 2003:ಅಫ್ಘಾನ್‌ನ ಗಣಿ ಹಾಗೂ ಕೈಗಾರಿಕೆ ಸಚಿವ ಜುಮಾ ಮುಹಮ್ಮದ್ ಮೊಹಮ್ಮದಿ ಹಾಗೂ ಇತರ ನಾಲ್ವರು ಅಧಿಕಾರಿಗಳನ್ನು ಕೊಂಡೊಯ್ಯುತ್ತಿದ್ದ 402ಬಿ ವಿಮಾನ ಅರಬಿ ಸಮುದ್ರದಲ್ಲಿ ಪತನ.
 
 ಜುಲೈ 10, 2006: ಪಿಐಎಯ ಫಾಕರ್ ಎಫ್27 ಮುಲ್ತಾನ್ ನಗರದಲ್ಲಿ ಟೇಕ್ ಅಫ್ ಆದ ಕೆಲವೇ ಕ್ಷಣಗಳಲ್ಲಿ ಅಗ್ನಿ ಆಕಸ್ಮಿಕದಿಂದ ಭಸ್ಮ; 4 ಮಂದಿ ಸಿಬ್ಬಂದಿ ಸೇರಿ ಒಟ್ಟು 41 ಮಂದಿ ಪ್ರಯಾಣಿಕರ ದುರ್ಮರಣ
 

ಬುಧವಾರ ಬೆಳಿಗ್ಗೆ ಇಸ್ಲಾಮಾಬಾದ್ ಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಪ್ರತಿಕೂಲ ಹವಾಮಾನದ ಕಾರಣ ಬುಧವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಿಮಾನ ಸಾರಿಗೆ ಸಂಸ್ಥೆ 'ಏರ್ ಬ್ಲೂ'ಗೆ ಸೇರಿದ್ದ ಈ ವಿಮಾನವು, ಕರಾಚಿಯಿಂದ ಇಸ್ಲಾಮಾಬಾದ್ ಕಡೆಗೆ ಹೋಗುವಾಗ ಮರ್ಗುಲ್ಲಾ ಬೆಟ್ಟಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಆ ನತದೃಷ್ಟ ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿ ಇದ್ದರೆಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರದ ವಕ್ತಾರ ಪರ್ವೇಜ್ ಜಾರ್ಜ್ ಅವರು ತಿಳಿಸಿದ್ದಾರೆ.

ಕಳೆದ ಒಂದೆರಡು ದಿನಗಳಿಂದ ಇಸ್ಲಾಮಾಬಾದ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮೋಡಗಳು ತೀರ ಕೆಳಮಟ್ಟದಲ್ಲಿದ್ದು ನಗರದ ಮೇಲೆ ಮಂಜು ಕವಿದಿದೆ,

ರಸ್ತೆ ಸಂಪರ್ಕ ಸಾಧ್ಯವಾಗದ ದುರ್ಗಮ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಅಪಘಾತ ಸ್ಥಳಕ್ಕೆ ತೆರಳಲು ತಮಗೆ ಕಷ್ಟವಾಗುತ್ತಿದೆ ಎಂದು ಪರಿಹಾರ ತಂಡದ ಸದಸ್ಯರು ತಿಳಿಸಿದ್ದಾರೆ

 
ಇಸ್ಲಾಮಾಬಾದ್: 159 ಮಂದಿಯನ್ನು ಹೊತ್ತುಕೊಂಡು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಬರುತ್ತಿದ್ದ 'ಏರ್ ಬ್ಲೂ' ಖಾಸಗಿ ಪ್ರಯಾಣಿಕರ ವಿಮಾನ ಭಾರೀ ಮಳೆ ಮತ್ತು ಮಂಜಿನ ಕಾರಣದಿಂದ ರಾಜಧಾನಿ ಸಮೀಪದ ಮರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಪತನಗೊಂಡಿದೆ.
 
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದ ಸಾವು-ನೋವಿನ ಸಂಖ್ಯೆ ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಯಾರೊಬ್ಬರೂ ಜೀವಂತವಾಗಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ. ಇದುವರೆಗೆ ಒಂದು ಶವವನ್ನಷ್ಟೇ ಹೊರಗೆ ತೆಗೆಯಲಾಗಿದೆ ಎಂದು ವರದಿಗಳು ಹೇಳಿವೆ.
 
ಪ್ರಾಥಮಿಕ ಮಾಹಿತಿಗಳ ಪ್ರಕಾರ 146 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳನ್ನು ಹೊತ್ತಿದ್ದ ವಿಮಾನವು ಕರಾಚಿಯಿಂದ ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಆದರೆ ವಿಮಾನದಲ್ಲಿ 159 ಮಂದಿ ಇದ್ದರು ಎಂದು ಹೇಳ ಲಾಗುತ್ತಿದೆ. ಪತನಕ್ಕೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲವಾದರೂ, ಭಾರೀ ಮಳೆಯಿಂದಾಗಿ ಹೀಗಾಯಿತು ಎಂದು ಹೇಳಲಾಗಿದೆ.
 
ವಿಮಾನ ಬೆಟ್ಟದಲ್ಲಿ ಪತನಗೊಳ್ಳುವ ಮೊದಲು ವಾಯು ಸಂಚಾರ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡಿತ್ತು. ಬೆಳಿಗ್ಗೆ ಸುಮಾರು 9.30ಕ್ಕೆ ಈ ಅಪಘಾತ ಸಂಭವಿಸಿದೆ. ಇದೀಗ ಹೆಲಿಕಾಫ್ಟರುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
 
ವಿಮಾನ ಪತನಗೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪಾಕಿಸ್ತಾನ ನಾಗರಿಕ ವಾಯುಯಾನ ಇಲಾಖೆಯ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.
 
ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನದ ಸುದ್ದಿ ವಾಹಿನಿಗಳು ಸ್ಥಳಕ್ಕೆ ಧಾವಿಸಿ ಅವಘಢದ ದೃಶ್ಯಗಳನ್ನು ನೇರ ಪ್ರಸಾರ ಮಾಡಿದವು. ದಟ್ಟಾರಣ್ಯ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ವರದಿಗಳು ಹೇಳಿವೆ.
 
ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ಖಚಿತವಾಗಿದೆ. ಅಲ್ಲಿ ಭಾರೀ ಹೊಗೆ ತುಂಬಿಕೊಂಡಿದೆ. ಬೆಟ್ಟ ಪ್ರದೇಶವಾಗಿರುವುದರಿಂದ ರಸ್ತೆ ಸಂಪರ್ಕವೂ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
 
ಘಟನೆ ನಡೆಯುತ್ತಿದ್ದಂತೆ ಇಸ್ಲಾಮಾಬಾದ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00

Tell a Friend

ಪ್ರತಿಸ್ಪಂದನ
Panchajanya, kuwait
2010-07-30
ದ್ವೇಷ ಎಷ್ಟೇ ಇದ್ದರೂ ಇಂತಹ ಸಮಯದಲ್ಲೂ ಅವರ ದುಃಖ ದಲ್ಲಿ ಪಾಲ್ಗೊಳ್ಳದಿರುವುದು ಭಾರತೀಯರ ಲಕ್ಷಣವಲ್ಲ.ಏಕೆಂದರೆ ಇಂತಹ ಸಾವನ್ನು ತುಂಬಾ ಸನಿಹದಿಂದ ಕಂಡವರು ನಾವು.ನಮ್ಮ ಸಹೋದರರನ್ನ ಇದೆ ರೀತಿ ಬಜ್ಪೆ ವಿಮಾನದುರಂತದಲ್ಲಿ ಕಳೆದುಕೊಂಡಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಅನುಕಂಪ ಗಳಿಸಿಕೊಂಡಿದ್ದೆವು.ಆಗ ಪಾಕಿಸ್ತಾನ ಸಂತಾಪ ವ್ಯಕ್ತಪಡಿಸಿದೆಯೋ ಇಲ್ಲವೋ,ಅದು ಬೇರೆ ವಿಷಯ.ಆದರೆ ನಾವು ಭಾರತೀಯರು.ದುರಂತದಲ್ಲಿ ಮಡಿದ ಪಾಕಿಸ್ತಾನಿಯರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿ ಭಗವಂತನು ನೀಡಲಿ,ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುವುದು ಭಾರತೀಯರಾದ ನಮ್ಮ ಹೆಚ್ಚುಗಾರಿಕೆ.ನಾವು ಕೂಡ ಇಂತಹ ಒಂದು ಆಘಾತದಿಂದ ಇನ್ನೂ ಹೊರಬಂದಿಲ್ಲ ಅಲ್ಲ ಸೋದರರೇ.....?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು
»ಶ್ರೀಮಂತ ಭಾರತೀಯರಿಗೆ ಮಾತ್ರ ಬ್ರಿಟನ್ ಮಣೆ
»23 ಮಕ್ಕಳ ಬಾಯಿಗೆ ವೀರ್ಯ ಹಾಕಿದ ಶಿಕ್ಷಕನ ಬಂಧನ
»ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು
»ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ
»ಉತ್ತರ ಪ್ರದೇಶ ದುಸ್ಥಿತಿಗೆ ಬಿಎಸ್‌ಪಿ, ಬಿಜೆಪಿ, ಎಸ್‌ಪಿ ಕಾರಣ: ಸೋನಿಯಾ
»ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, ಸೇನಾಬಲ ವರ್ಧನೆ
»ಕೋಮುಗಲಭೆ - ಮೋದಿಗೆ ಸಮನ್ಸ್: ಹೈಕೋರ್ಟ್ ನಕಾರ
»ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...
»ಮತದಾನ: ಪಂಜಾಬಿನಲ್ಲಿ ಶೇಕಡಾ 40, ಉತ್ತರಾಖಂಡ ಶೇಕಡಾ 20
»ಕೊನಾರ್ಕ್: ಮೇಘ ಸಪ್ತಮಿ, 5ಲಕ್ಷ ಭಕ್ತರಿಂದ ಪುಣ್ಯಸ್ನಾನ
»ಮಣಿಪುರದಲ್ಲಿ ಚುನಾವಣಾ ಹಿಂಸಾಚಾರ: ಓರ್ವ ಮಹಿಳೆ ಸೇರಿ ಐವರು ಸಾವು
»ಮಾಯಾವತಿ ಮೇಲಿನ ರಾಜಕೀಯ ವಿಡಂಬನಾತ್ಮಕ ನಾಟಕ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ
»ಥಾಲ್ಯಾಂಡ್‌ನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ
»ಅಮೆರಿಕದ ಯುದ್ಧ ಬೆದರಿಕೆಯ ಬಗ್ಗೆ ರಶ್ಯ-ಚೀನ ಕಳವಳ
»ಮಗನ ಜೊತೆ ಎಂಗೇಜ್‌ಮೆಂಟ್‌: ಅಪ್ಪನ ಜೊತೆ ಸೆಕ್ಸ್‌
»ಕೊಂಚಾವರಂನಲ್ಲಿ ಪದೇಪದೇ ಭೂಕಂಪನ
»ಜಾರ್ಖಂಡ್‌ನಲ್ಲಿ ನೆಲ ಬಾಂಬ್ ಸ್ಫೋಟ:11ಪೊಲೀಸರ ಸಾವು
»ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದರೆ ಇರಾನ್‌ ಜತೆಗೆ ಯುದ್ಧಕ್ಕೆ ಅಮೆರಿಕ ಸಜ್ಜು
»ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಅಪಘಾತದಿಂದ ಪಾರು
»ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಗಿಲಾನಿ
»ಡಯಾನಾ ಭೂತ ಚಿತ್ರ ವಿಡಿಯೋ ಬಹಿರಂಗ!
»ಕುದಿಯುತಿದೆ ಪಾಕ್ :ಗಿಲಾನಿಗೆ ಸಂಸತ್ತಿನ ಬೆಂಬಲ
» ಪಾಕಿಸ್ತಾನ ಬಿಕ್ಕಟ್ಟು: ರಾಜೀನಾಮೆ ನೀಡಲು ಸಿದ್ಧ; ಸು.ಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ನೋಟಿಸ್
»ಹವಾಮಾನ ಮೇಲ್ವಿಚಾರಣೆಗಾಗಿ ಚೀನಾದಿಂದ ಹೊಸ ಉಪಗ್ರಹ
» ಟೈಟಾನಿಕ್ ಮಾದರಿ ಹಡಗು ದುರಂತ: ಮೂವರ ಸಾವು: 4200ಮಂದಿಯ ರಕ್ಷಣೆ
»ಸದ್ಯದಲ್ಲೇ ಫೇಸ್ ಬುಕ್ ಬಳಕೆದಾರರು 100 ಕೋಟಿ
»ಉಗ್ರರ ಶವಗಳ ಮೇಲೆ ಅಮೆರಿಕ ಸೈನಿಕರ ಮೂತ್ರ ವಿಸರ್ಜನೆ
»ಪಾಕ್ ಸರ್ಕಾರ- ಸೇನೆ ಸಂಘರ್ಷ ತೀವ್ರ: ಖಾಲಿದ್ ನಯೀಮ್ ಲೋಧಿ ವಜಾ
»ಪಾಕಿಸ್ತಾನ ಬಿಕ್ಕಟ್ಟು: ರಕ್ಷಣಾ ಕಾರ್ಯದರ್ಶಿಯ ಉಚ್ಚಾಟನೆ; ಪ್ರಧಾನಿ-ಸೇನೆಯ ನಡುವೆ ತೀವ್ರಗೊಂಡ ಸಂಘರ್ಷ
»ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ
»ಅಧಿಕಾರ ತೊರೆಯುವುದಿಲ್ಲ: ಸಿರಿಯ ಅಧ್ಯಕ್ಷನ ಬಿಗಿಪಟ್ಟು
»Gulf states brace for unwanted US-Iran war
»ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು
»ಅತ್ಯಾಚಾರಕ್ಕೆ ಯತ್ನ, ಮಾವನ ಶಿಶ್ನ ಕತ್ತರಿಸಿದ ಸೊಸೆ
»ಇರಾನ್: ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ | ಇರಾನ್ ಪರಮಾಣು ನಿವೇಶನಗಳ ಮೇಲೆ ಬಾಂಬ್ ದಾಳಿ;ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಿಂದ ಎಚ್ಚರಿಕೆ
»ಪ್ರಬಲ ಭೂಕಂಪ ಕ್ಕೆ ನಡುಗಿದ ಜಪಾನ್: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
»ಬೇನಝೀರ್ ಭುಟ್ಟೊ ಹತ್ಯೆಯ ತನಿಖೆ ಬಹುತೇಕ ಪೂರ್ಣ: ಗೀಲಾನಿ
»ಕೋರ್ಟ್‌ನ ಮುಂದೆ ಹಾಜರಾದ ಮುಬಾರಕ್‌
»ರಷ್ಯಾ: ಭಗವದ್ಗೀತೆ ನಿಷೇಧಕ್ಕೆ ಕೋರ್ಟ್ ನಕಾರ
»ಭಾರತೀಯನ ಕೊಲೆ: ಆರೋಪಿ ಬಂಧನ
»6 ಜನರ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಸಾಂತಾಕ್ಲಾಸ್‌
»ಇರಾಕ್‌: ಆತ್ಮಹತ್ಯಾ ದಾಳಿ, 7 ಸಾವು
»ಚೀನಾ ಭೂ ಸೇನೆಯಲ್ಲಿ 10000 ತಜ್ಞ ಶ್ವಾನಗಳು!
»ರೂಪದರ್ಶಿಯ ಸ್ಥನದಲ್ಲಿ ಸಿಕ್ತು ಭಾರಿ 'ಮಾದಕ' ದ್ರವ್ಯ
»2011 ಸ್ಪೆಶಲ್; ಗಡಾಫಿ, ಲಾಡೆನ್ ಯುಗಾಂತ್ಯ-ಕ್ರಾಂತಿ
»ಸುನಾಮಿ: 7 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ ಬಾಲಕಿ
»ಸಮಾಧಿಯ ಬಳಿ ಗಗನಸಖಿ ಮೇಲೆ ಸಾಮೂಹಿಕ ಅತ್ಯಾಚಾರ
»ಕ್ರಿಸ್ಮಸ್ ಜಾಹೀರಾತಿನಲ್ಲಿ ಗರ್ಭಿಣಿ ಮೇರಿ, ಫುಲ್ ಗಲಾಟೆ
»ಭಾರಿ ಚಳಿ: ಸಾವಿನ ಸಂಖ್ಯೆ 26ಕ್ಕೆ ಏರಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri