ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್ |
ಪ್ರಕಟಿಸಿದ ದಿನಾಂಕ : 2010-07-24
ಗುಜರಾತಿನ ಗೃಹ ರಾಜ್ಯ ಸಚಿವ ಅಮಿತ್ ಶಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತು.
ಅಹಮದಾಬಾದ್ (ಐಎಎನ್ಎಸ್): ಗುಜರಾತಿನ ಗೃಹ ರಾಜ್ಯ ಸಚಿವ ಅಮಿತ್ ಶಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತು.
ಎರಡನೇ ದಿನವೂ ಸಿಬಿಐ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲು ವಿಫಲರಾದ ಬಳಿಕ ಶಾ ಅವರು ಸಿಬಿಐ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಸೊಹ್ರಾ ಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದ ಆರೋಪಿ ಗುಜರಾತ್ನ ಸಹಾಯಕ ಗೃಹ ಸಚಿವ ಅಮಿತ್ ಶಾರ ನಿರೀಕ್ಷಣಾ ಜಾಮೀನು ಮನವಿಯನ್ನು ಸಿಬಿಐ ನ್ಯಾಯಾಲಯವಿಂದು ತಿರಸ್ಕರಿಸಿದೆ. ಶಾರ ವಿರುದ್ಧ ಸಿಬಿಐ, ಸೊಹ್ರಾಬುದ್ದೀನ್ ನನ್ನು ಅಪಹರಿಸುವ ಹಾಗೂ ಹತ್ಯೆ ನಡೆಸುವ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪವನ್ನು ಹೊರಿಸಿದ್ದು, ಅವರನ್ನು ಯಾವುದೇ ಸಮಯ ಬಂಧಿಸುವ ಸಾಧ್ಯತೆಯಿದೆ.
ಇದೇ ವೇಳೆ, ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್ಕೌಂಟರ್ ಪ್ರಕರಣದ ಸಂಬಂಧ ವಿಚಾರಣೆಗಾಗಿ ಸಿಬಿಐಯ ಮುಂದೆ ಹಾಜರಾಗಲು ತನಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಅಮಿತ್ ಶಾ ಕೋರಿದ್ದಾರೆ. ಆದರೆ ಅವರ ಮನವಿಯನ್ನು ಸಿಬಿಐ ತಿರಸ್ಕರಿಸಿದೆ. ಸಿಬಿಐ ಕಳುಹಿಸಿದ್ದ ಮೊದಲ ಸಮನ್ಸ್ಗೆ ಗುರುವಾರ ಶಾ ಪ್ರತಿಕ್ರಿಯೆ ನೀಡದ ಕಾರಣ, ಅವರಿಗೆ ಶುಕ್ರವಾರ ಮಧ್ಯಾಹ್ನ 1 ಗಂಟೆಯೊಳಗಾಗಿ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಎರಡನೆ ಬಾರಿ ಸಮನ್ಸ್ ಕಳುಹಿಸಿತ್ತು.
ಗಾಂಧಿನಗರದ ಸಿಬಿಐ ಕಚೇರಿಗೆ ಹೋಗಿದ್ದ ಶಾರ ವಕೀಲ ಮಿತೀಶ್ ಅಮೀನ್, ಸಚಿವರಿಗೆ ಹಾಜರಾಗಲು ಹೆಚ್ಚಿನ ಸಮಯಾವಕಾಶ ನೀಡುವಂತೆ ಹಾಗೂ ಅವರಿಗೆ ಪ್ರಶ್ನಾವಳಿಯೊಂದನ್ನು ಕಳುಹಿಸಿ ಉತ್ತರ ಪಡೆಯುವ ಆಯ್ಕೆಯನ್ನು ಪರಿಗಣಿಸುವಂತೆ ಸಿಬಿಐಗೆ ತಾನು ಮನವಿ ಸಲ್ಲಿಸಿದ್ದೆನೆಂದು ತಿಳಿಸಿದರು. ಆದರೆ, ಸಿಬಿಐ ಈ ಮನವಿಯನ್ನು ತಳ್ಳಿ ಹಾಕಿತೆಂದು ಅವರು ಹೇಳಿದರು. ಅವರು ಸಚಿವರಿಗೆ ಪ್ರಶ್ನಾವಳಿ ಕಳುಹಿಸುವ ವಿಚಾರ ಯೋಚಿಸಲೇ ಇಲ್ಲ. ತಾನೀಗ ಈ ಬಗ್ಗೆ ಶಾರೊಂದಿಗೆ ಚರ್ಚಿಸಲಿದ್ದೇನೆಂದು ಅಮೀನ್ ತಿಳಿಸಿದರು.
ಈ ಮಧ್ಯೆ ಸಿಬಿಐ ಮಾಜಿ ಪೊಲೀಸ್ ಉಪ ಕಮೀಷನರ್ ಅಭಯ್ ಚುಡಾಸಮ ವಿರುದ್ಧು 2005ರ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ದೋಷಾರೋಪ ಪಟ್ಟಿಯಲ್ಲಿ 18 ಜನರ ಹೆಸರಿದ್ದು, ಅವರ ಪೈಕಿ 15 ಜನ ಈಗಾಗಲೇ ಸೆರೆಮನೆಯಲ್ಲಿದ್ದಾರೆ. ಮೂವರನ್ನು ಇನ್ನೂ ಬಂಧಿಸಬೇಕಾಗಿದೆ. ಈ ಮೂವರಲ್ಲಿ ಅಮಿತ್ ಶಾ ಅವರ ಹೆಸರು ಕೂಡಾ ಇದೆ ಎಂದು ಹೇಳಲಾಗುತ್ತಿದೆ.
ಕಾಲಾವಕಾಶ ಕೋರಿದ ಶಾ, ಮನವಿ ತಿರಸ್ಕರಿಸಿದ ಸಿಬಿಐ
ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ನೀಡುವಂತೆ ನರೇಂದ್ರ ಮೋದಿ ಅವರ ನಿಕಟವರ್ತಿ, ಗುಜರಾತಿನ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಿಬಿಐ ಮುಂದೆ ಕೋರಿಕೆ ಮಂಡಿಸಿ ದ್ದಾರೆ. ಆದರೆ ಸಿಬಿಐ ಅವರ ಕೋರಿಕೆಯನ್ನು ತಳ್ಳಿ ಹಾಕಿದೆ.
ಗಾಂಧಿನಗರ (ಪಿಟಿಐ): ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ನೀಡುವಂತೆ ನರೇಂದ್ರ ಮೋದಿ ಅವರ ನಿಕಟವರ್ತಿ, ಗುಜರಾತಿನ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಸಿಬಿಐ ಮುಂದೆ ಕೋರಿಕೆ ಮಂಡಿಸಿದ್ದಾರೆ. ಆದರೆ ಸಿಬಿಐ ಅವರ ಕೋರಿಕೆಯನ್ನು ತಳ್ಳಿ ಹಾಕಿದೆ.
ಶಾ ಅವರಿಗೆ ಸಿಬಿಐ ಮುಂದೆ ಹಾಜರಾಗಲು ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. ಮೊದಲ ಸಮನ್ಸ್ ಪ್ರಕಾರ ಗುರುವಾರ ಸಿಬಿಐ ಮುಂದೆ ಹಾಜರಾಗಲು ಶಾ ಅವರು ವಿಫಲರಾದ ಬಳಿಕ ಎರಡನೇ ಸಮನ್ಸ್ ಕಳುಹಿಸಿ ಶುಕ್ರವಾರ ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಲಾಗಿತ್ತು.
ಸಿಬಿಐ ಕಚೇರಿಗೆ ಭೇಟಿ ನೀಡಿದ್ದ ಶಾ ಅವರ ವಕೀಲ ಮಿತಿಶ್ ಅಮಿನ್ ಅವರು 'ಹೆಚ್ಚಿನ ಕಾಲಾವಕಾಶ ನೀಡುವಂತೆ ಮತ್ತು ಉತ್ತರಿಸಲು ಅನುಕೂಲವಾಗುವಂತೆ ಸಚಿವರಿಗೆ ಪ್ರಶ್ನಾವಳಿಯನ್ನು ಕೊಡುವಂತೆ ಸಿಬಿಐಗೆ ಮನವಿ ಮಾಡಲಾಯಿತು' ಎಂದು ಹೇಳಿದರು.
ಆದರೆ ಪ್ರಶ್ನಾವಳಿ ನೀಡಬೇಕೆಂಬ ಮನವಿಯನ್ನು ಸಿಬಿಐ ತಳ್ಳಿ ಹಾಕಿತು. 'ನಮಗೆ ಪ್ರಶ್ನಾವಳಿ ನೀಡುವ ಅಗತ್ಯ ಇದೆ ಎಂದು ಅವರಿಗೆ ಅನ್ನಿಸಿದಂತಿಲ್ಲ' ಎಂದು ಅಮಿನ್ ಸಿಬಿಐ ಕಚೇರಿಯಿಂದ ಹೊರಬರುತ್ತಾ ಪತ್ರಕರ್ತರಿಗೆ ತಿಳಿಸಿದರು.
'ಈಗ ನಾನು ಈ ವಿಷಯವನ್ನು ಅವರೊಂದಿಗೆ (ಶಾ) ಚರ್ಚಿಸುವೆ' ಎಂದು ಅಮಿನ್ ಹೇಳಿದರು.
ಈಗ ನಿಮ್ಮ ಮುಂದೆ ಕಾನೂನುಬದ್ಧ ಆಯ್ಕೆಗಳು ಏನಿವೆ ಎಂಬ ಪ್ರಶ್ನೆಗೆ ಹಲವಾರು ಆಯ್ಕೆಗಳಿವೆ. ನಿರೀಕ್ಷಣಾ ಜಾಮೀನು ಪಡೆಯುವುದು ಅವುಗಳಲ್ಲಿ ಒಂದು. ಏನಿದ್ದರೂ ಮೊದಲು ನಾನು ನನ್ನ ಕಕ್ಷಿದಾರರ ಜೊತೆಗೆ ಚರ್ಚಿಸಬೇಕು' ಎಂದು ಅವರು ನುಡಿದರು
‘ಇದು ರಾಜಕೀಯ ಹಗೆತನ’ ಗುಜರಾತ್ ಗೃಹ ಸಚಿವ ಅಮಿತ್ ಷಾ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿರುವುದು ಕೇಂದ್ರ ಸರ್ಕಾರದ ರಾಜಕೀಯ ಹಗೆತನದ ಕ್ರಮವೇ ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ಟೀಕಿಸಿದೆ.
ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಶೂಟೌಟ್ ಪ್ರಕರಣದಲ್ಲಿ ಗುಜರಾತ್ ಗೃಹ ಸಚಿವ ಅಮಿತ್ ಷಾ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿರುವುದು ಕೇಂದ್ರ ಸರ್ಕಾರದ ರಾಜಕೀಯ ಹಗೆತನದ ಕ್ರಮವೇ ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ಟೀಕಿಸಿದೆ.
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಪೂರ್ವಭಾವಿಯಾಗಿ ವಿರೋಧ ಪಕ್ಷಗಳಿಗೆ ಪ್ರಧಾನಿ ಏರ್ಪಡಿಸಿದ್ದ ಔತಣಕೂಟವನ್ನು ಬಹಿಷ್ಕರಿಸಿದ ಬಳಿಕ, ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಆಡಳಿತಾರೂಢ ಪಕ್ಷವು ಅನುಕೂಲಕ್ಕೆ ತಕ್ಕ ಅಸ್ತ್ರದಂತೆ ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ. ಇದೊಂದು ನಾಚಿಕೆಗೇಡಿನ ದುರ್ಬಳಕೆ. ಈ ವಿಷಯ ವನ್ನು ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಜೇಟ್ಲಿ ದೂರಿದರು.
ಪರಿಸ್ಥಿತಿ ಅತ್ಯಂತ ಕಹಿಯಾಗಿ ರುವುದರಿಂದ ಪ್ರಧಾನಿ ಅವರೊಂದಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲು ನಮಗೆ ಮನಸ್ಸಾಗುತ್ತಿಲ್ಲ ಎಂದು ಸುಷ್ಮಾ ಸಮರ್ಥಿಸಿಕೊಂಡರು.
ದುರದೃಷ್ಟಕರ- ಕಾಂಗ್ರೆಸ್ ‘ಸಂಸತ್ತಿನ ಪ್ರತಿ ಅಧಿವೇಶನದ ಸಂದರ್ಭದಲ್ಲೂ ಪ್ರಧಾನಿ ಔತಣಕೂಟ ಏರ್ಪಡಿಸುತ್ತಾರೆ. ಇದನ್ನು ಬಹಿಷ್ಕರಿಸುವ ಮೂಲಕ ಬಿಜೆಪಿ ತನ್ನ ನಿಜವಾದ ನಡವಳಿಕೆಯನ್ನು ಪ್ರದರ್ಶಿಸಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಶುಕ್ರವಾರ ಸುದ್ದಿಗಾರರೊಂದಿಗೆ ದೂರಿದ್ದಾರೆ.
ನವದೆಹಲಿ (ಪಿಟಿಐ): ‘ಪ್ರಧಾನಿ ಅವರು ಏರ್ಪಡಿಸಿದ್ದ ಔತಣಕೂಟವನ್ನು ಬಹಿಷ್ಕರಿಸಿದ ಬಿಜೆಪಿ ನಿಲುವು ಜವಾಬ್ದಾರಿಯುತ ರಾಜಕೀಯ ಪಕ್ಷವೊಂದರ ಅತ್ಯಂತ ದುರದೃಷ್ಟಕರ ಮತ್ತು ಅನುಚಿತ ವರ್ತನೆ’ ಎಂದು ಕಾಂಗ್ರೆಸ್ ಬಣ್ಣಿಸಿದೆ.
‘ಸಂಸತ್ತಿನ ಪ್ರತಿ ಅಧಿವೇಶನದ ಸಂದರ್ಭದಲ್ಲೂ ಪ್ರಧಾನಿ ಔತಣಕೂಟ ಏರ್ಪಡಿಸುತ್ತಾರೆ. ಇದನ್ನು ಬಹಿಷ್ಕರಿಸುವ ಮೂಲಕ ಬಿಜೆಪಿ ತನ್ನ ನಿಜವಾದ ನಡವಳಿಕೆಯನ್ನು ಪ್ರದರ್ಶಿಸಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಶುಕ್ರವಾರ ಸುದ್ದಿಗಾರರೊಂದಿಗೆ ದೂರಿದ್ದಾರೆ.
ಕೇಂದ್ರ ಸರ್ಕಾರ ಸಿಬಿಐನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷದ ಆರೋಪವನ್ನು ಅವರು ತಳ್ಳಿಹಾಕಿದರು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ ಎಂಬ ವಿಷಯ ಇಡೀ ಪ್ರಪಂಚಕ್ಕೇ ತಿಳಿದಿದೆ. ಕಾನೂನು ಅವರನ್ನು ಸುತ್ತುವರಿಯುತ್ತಿದೆ, ಅದಕ್ಕೇ ಅವರು ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಮಿತ್ ಷಾ ಸಿಬಿಐ ಎದುರು ಹಾಜರಾಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಾನೂನು ತನ್ನದೇ ಕ್ರಮ ಕೈಗೊಳ್ಳುತ್ತದೆ ಎಂದ ಪ್ರಸಾದ್, ಸೂಕ್ತ ರೀತಿಯಲ್ಲಿ ತನಿಖೆ ನಡೆದರೆ ಬಹಳಷ್ಟು ರಹಸ್ಯ ವಿಷಯಗಳು ಹೊರಬೀಳಲಿವೆ ಎಂದಿದ್ದಾರೆ.
| |
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-24 00:00:00
|
|
|