ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ |
ಪ್ರಕಟಿಸಿದ ದಿನಾಂಕ : 2010-07-23
ಕೊಲ್ಲಿ ರಾಷ್ಟ್ರಗಳೊಂದರ ಕುವೈಟಿನ ಗೌಡ ಸಾರಸ್ವತ ಬ್ರಾಹ್ಮಣ(ಜಿ.ಎಸ್.ಬಿ) ಸಮಾಜದ ಪ್ರಥಮ ಅಧ್ಯಕ್ಷರಾದ ಶ್ರೀಯುತ ಪಾಲೆಮಾರ್ ಗಣೇಶ ಪ್ರಭು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಮನ್ ಪ್ರಭುರವರ ಬೀಳ್ಕೊಡುವ ಸಮಾರಂಭವು ಇತ್ತೀಚಿಗೆ ಕುವೈಟಿನಲ್ಲಿ ನೆರವೇರಿತು.
ಜಿ.ಎಸ್.ಬಿ ಸಮಾಜ ಕುವೈಟ್ 2003 ರಲ್ಲಿ ಆಗ ಇದ್ದ ಕೆಲವೇ ಕುಟುಂಬರ ಸದಸ್ಯರಿಂದ ಶ್ರೀ ಯುತ ಪಲೆಮಾರ್ 60 ಕುಟುಂಬದ ಸದಸ್ಯರಿಂದ ಕೂಡಿ ಬೆಳೆದು ನಿಂತಿದೆ.
ಸಭಾ ಕಾರ್ಯಕ್ರಮವು ಸಮಜಭಾಂಧವರ ಭಜನೆಯೊಂದಿಗೆ ಪ್ರಾರಂಭಗೊಂಡಿತು. ಹಿರಿಯ ಸದಸ್ಯರಾದ ಶ್ರೀ ಪುರುಷೋತ್ತಮ ನಾಯಕರು ನೆರೆದ ಸಭಿಕರನ್ನು ಸ್ವಾಗತಿಸಿ ಮಾತನಾಡಿ ಶ್ರೀ ಗಣೇಶ ಪ್ರಭು ದಂಪತಿಗಳ ಕಿರುಪರಿಚಯ ಮಾಡಿಸಿ, ಅವರ ವಿದ್ಯಾಭ್ಯಾಸದಿಂದ ಹಿಡಿದು ಜೀವನ ದಲ್ಲಿ ಈವರೆಗೆ ಸಾಧಿಸಿದ ಪ್ರಗತಿಯನ್ನು ಹಾಗೂ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಕೊಟ್ಟಿ ರುವ ಕೊಡುಗೆ ಬಗ್ಗೆ ಸಂಕ್ಶಿಪ್ತವಾಗಿ ವಿವರಿಸಿದರು.
ಶ್ರೀ ಗಣೇಶ ಪ್ರಭುರವರು ಉದ್ಯೋಗದಲ್ಲಿ ಇಲೆಕ್ಟ್ರಿಕಲ್ ಇಂಜಿನೀಯರ್ ಆಗಿ ಸ್ತಳೀಯ ಮೇ|| ಪೆಟ್ರೋಕೆಮಿಕಲ್ ಇಂಡಸ್ಟ್ರಿಸ್ ಕಂಪನಿಯಲ್ಲಿ ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಹಿರಿಯ ಮಗ ನವೀನ್ ಪ್ರಭುರವರು ಅಮೇರಿಕದಲ್ಲಿ ಇಂಜಿನೀಯರ್ ಆಗಿ ಉದ್ಯೋಗದಲ್ಲಿ ದ್ದಾರೆ. ಕಿರಿಯ ಮಗ ಅಶ್ವಿನ್ ಪ್ರಭುರವರು ಅಮೇರಿಕದಲ್ಲಿ ವಿಧ್ಯಾಭ್ಯಾಸ ಮುಗಿಸಿ ಈಗ ಲಂಡನ್ನ ಲ್ಲಿ ಉನ್ನತ ಅಭ್ಯಾಸ ಮಾಡುತಿದ್ದಾರೆ.
ಶ್ರೀ ಗಣೇಶ ಪ್ರಭುಗಳು 1981 ಇಸವಿಯಲ್ಲಿ ಕುವೈಟಿಗೆ ಉಧ್ಯೋಗಕ್ಕಾಗಿ ಬಂದಿದ್ದರು. 1990 ರಲ್ಲಿ ಇವರು ಕುವೈಟ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿಯೂ ಹಾಗು 1998 ರಲ್ಲಿ ಅಧ್ಯಕ್ಶರಾಗಿಯೂ ಕರ್ನಾಟಕದ ಕುವೈಟಿನಲ್ಲಿದ್ದ ಜನತೆಗೆ ತಮ್ಮಿಂದಾದ ಸೇವೆ ಸಲ್ಲಿಸ್ಸಿದ್ದಾರೆ. 2003 ರಲ್ಲಿ ಸ್ಥಾಪಿಸಲ್ಪಟ್ಟ ಜಿ.ಎಸ್.ಬಿ ಸಮಾಜದ ಪ್ರಥಮ ಅಧ್ಯಕ್ಶರಾಗಿ ಇದೇ ಜೂನ್ ತಿಂಗಳವರೆಗೆ ತಮ್ಮ ಸಮಾಜದ ಒಗ್ಗಟ್ಟಿಗಾಗಿ ಹಾಗೂ ಸಾಮಾಜಿಕ, ಸಾಂಸ್ಕ್ರತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿ ನಮಗೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದರು.
ಆಮೇಲೆ ಮಾತನಾಡಿದ ಸಮಾಜ ಸದಸ್ಯರಾದ ಶ್ರೀ ಹರಿದಾಸ ಆಚಾರ್ಯ, ಶ್ರೀ ಸುರೇಂದ್ರ ಕಾಮತ್, ಶ್ರೀ ವಿಶ್ವನಾಥ್ ಪ್ರಭು, ಶ್ರೀ ಸುಧೀರ್ ಶೆಣೈ, ಶ್ರೀ ಶ್ರೀನಿವಾಸ ಪ್ರಭು, ಶ್ರೀ ಮೋಹನ ದಾಸ ಕಾಮತ್, ಶ್ರೀ ಅನಿಲ್ ಪ್ರಭು, ಶ್ರೀಮತಿ ಅಕ್ಶತಾ ಶೆಣೈ ಹಾಗೂ ಇನ್ನಿತರರು ಮಾತನಾಡಿ ಈ ದಂಪತಿಗಳ ಗುಣಗಾನ ಮಾಡಿ ಪ್ರಶಂಸಿದರು.
ಇವರಿಬ್ಬರ ಗೈರುಹಾಜರಿಯು ಮುಂಬರುವ ವರ್ಶಗಳಲ್ಲಿ ನಮಗೆಲ್ಲರಿಗೂ ಬೇಸರ ತರುವಂತಾ ಗಿದೆ. ಇವರ ಮುಂದಿನ ವಿಶ್ರಾಂತಿ ಜೀವನ ತಮ್ಮ ತಾಯ್ನಾಡಲ್ಲಿ ನಡೆಸುವವರಿದ್ದಾರೆ. ಇವರಿಗೆ ಶ್ರೀ ಭಗವಂತನು ಸುಖ, ಶಾಂತಿ, ನೆಮ್ಮದಿ ಹಾಗೂ ಆಯುರಾರೋಗ್ಯವನ್ನು ಕೊಟ್ಟು ಕಾಪಾಡ ಲ್ಲೆಂದು ಹಾರೈಸಿದರು.
ಕೊನೆಯದಾಗಿ ಎಲ್ಲ ಸದಸ್ಯರ ವತಿಯಿಂದ ಈ ದಂಪತಿಗಳನ್ನು ಶ್ರೀ ಹರಿದಾಸ ಆಚಾರ್ಯ ಹಾಗೂ ಶ್ರೀ ಪುರುಷೋತ್ತಮ ನಾಯಕ್ ದಂಪತಿಗಳು, ಹಣ್ಣು ಹಂಪಲುಗಳನ್ನಿತ್ತು ಸನ್ಮಾನಿಸಿ, ಸವಿನೆನಪಿನ ಕಾಣಿಕೆಯಾಗಿ ಉಡುಗೊರೆಯನ್ನು ಕೊಡಲಾಯಿತು.
ಶ್ರೀ ಗಣೇಶ ಪ್ರಭು ಮತ್ತು ಶ್ರೀಮತಿ ಸುಮನ್ ಪ್ರಭುಗಳು ತಮ್ಮ ಭಾಷಣದಲ್ಲಿ, ನಮ್ಮ ಜಿ. ಎಸ್.ಬಿ ಸಮಾಜದವರು ತಮ್ಮಲ್ಲಿ ತೋರಿದ ಪ್ರೀತಿ, ವಾತ್ಸಲ್ಯ, ಸಹಕಾರಕ್ಕೆ ಅಭಿಂದನೆ ಸಲ್ಲಿಸಿದರು ಹಾಗೂ ಇಂದಿನ ಈ ಸಮಾರಂಭವು ತಮ್ಮ ಜೀವನದಲ್ಲಿ ಒಂದು ಮರೆಯಲಾಗದ ದಿನವಾಗಿದೆ ಎಂದು ತಮ್ಮ ಭಾವನಾತ್ಮಕ ಭಾಷಣ ಮುಗಿಸಿದರು.
ಶ್ರೀ ಸುಧೀರ್ ಶೆಣೈರವರು ಸಮಾರಂಭಕ್ಕೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸಿ ದರು. ಅಂತ್ಯದಲ್ಲಿ ಸೇರಿದ ಸಭಿಕರೆಲ್ಲರಿಗೂ ಊಟದ ಏರ್ಪಾಡು ಮಾಡಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ಮಂಜೇಶ್ವರ ಮೋಹನ್ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-23 00:00:00
|
|
|