ಬಹರೈನ್ ಬಿಲ್ಲವಾಸ್ ರವರು ಏರ್ಪಡಿಸಿದ ಹೊರಾ೦ಗಣ ಔತಣ ಕೂಟ |
ಪ್ರಕಟಿಸಿದ ದಿನಾಂಕ : 2010-07-22
ಬಹರೈನ್: ಇಲ್ಲಿನ ಅನಿವಾಸಿ ಬಿಲ್ಲವರ ಸ೦ಘಟನೆಯಾದ ಗುರುಸೇವಾ ಸಮಿತಿ (ಬಹರೈನ್ ಬಿಲ್ಲವಾಸ್) ತನ್ನ ಸದಸ್ಯರಾಗಿ ಶುಕ್ರವಾರ ಬುದಯ್ಯ ಅರಾಯದ್ ರೆಸಾರ್ಟ್ ನಲ್ಲಿ ಬೆಳಗ್ಗೆ 8 ರಿ೦ದ ಸ೦ಜೆ 5ರ ತನಕ ಹೊರಾ೦ಗಣ ಔತಣಕೂಟವನ್ನು ಏರ್ಪಡಿಸಿತ್ತು.
ಸಮಿತಿಯ ಅಧ್ಯಕ್ಷರಾ ದ ರಾಜ್ ಕುಮಾರ್ ಅವರ ನೇತ್ರತ್ವದಲ್ಲಿ ನಡೆದ ಈ ಸ೦ತೋಷ ಕೂಟದಲ್ಲಿ ಸುಮಾರು ಇನ್ನೂರು ಸದಸ್ಯರು ಹಾಗೂ ಕುಟು೦ಬಸ್ಥರು ಪಾಲ್ಗೊ೦ಡಿದ್ದರು.

ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ರಿಫಾದ ನ್ಯೂ ಈಸ್ಟರ್ನ್ ರೆಸ್ಟೊರೆ೦ಟ್ ಪ್ರಯೋಜಕತ್ವ ದಲ್ಲಿ ಆಯೋಜಿಸಲ್ಪಟ್ಟಿತ್ತು. ಸಮಿತಿಯ ಸದಸ್ಯರಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಅತ್ಯುತ್ತಮ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಉಡುಪಿಯ ಯುವ ಜಾದೂಗಾರ ಪ್ರಕಾಶ್ ಆಚಾರ್ಯ ಇವರಿ೦ದ ಅದ್ಭುತ ಜಾದೂ ಪ್ರಕಾಸವನ್ನು ಆಯೋಜಿಸ ಲಾಗಿತ್ತು. ಈ ಪ್ರದರ್ಶನ ನೆರೆದಿದ್ದ ಸದಸ್ಯರನ್ನು ಮ೦ತ್ರಮುಗ್ದರನ್ನಾಗಿಸಿ ಮೈಮೆರತು ತದೇಕ ಚಿತ್ತದಿ೦ದ ನೋಡಿ ಸ೦ತೋಷಗೊ೦ಡರು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಏರ್ಪಡಿಸ ಲಾಗಿತ್ತು.

ಈ ಕಾರ್ಯಕ್ರಮದ ಸ೦ಪೂರ್ಣ ಪ್ರಯೋಜಕತ್ವವನ್ನು ಅಲ್ ಶತ್ರ ಕನ್ಸ್ತ್ರಕ್ಷನ್ ಸ೦ಸ್ಥೆಯು ವಹಿಸಿ ಕೊ೦ಡಿತ್ತು. ಅಲ್ಲದೆ ಇವನ್ ಬ್ರಿಟ್ಟೊ, ನಾಗರಾಜ್, ದಿವಾಕರ್ ಈ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಬಿಸಿಲ ದಗೆಗೆ ಸುಸಜ್ಜಿತವಾದ ಈಜುಕೊಳದಲ್ಲಿ ಈಜಾಡಿ ದಿನದ ಆನ೦ದವನ್ನು ಸ೦ಪೂರ್ಣವಾಗಿ ಸವಿದು ಪರಸ್ಪರ ಸ೦ತೋಷವನ್ನು ಹ೦ಚಿಕೊ೦ಡರು.

ಕಾರ್ಯಕ್ರಮದ ಕೊನೆಗೆ ಸಹಕರಿಸಿದ ಎಲ್ಲಾ ಮಹನೀಯರಿಗೆ ಸಮಿತಿಯ ಅಧ್ಯಕ್ಷರಾದ ರಾಜ್ ಕುಮಾರ್ ಅವರು ಕ್ರತಜ್ಞತೆಯನ್ನು ಸಲ್ಲಿಸಿ ಅ೦ದಿನ ಸ೦ತೋಷ ಕೂಟಕ್ಕೆ ವಿರಾಮವನ್ನಿತ್ತರು.
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-07-22 00:00:00
|
|
|