ಮಕ್ಕಳ ನಾಟಕೋತ್ಸವದಲ್ಲಿ ಇಂದು: ವೈದೇಹಿಯವರ ಢಾಣಾಡಂಗುರ |
ಪ್ರಕಟಿಸಿದ ದಿನಾಂಕ : 2009-02-21
ಉಡುಪಿ, ಫೆ.೨೦: ರಥಬೀದಿ ಗೆಳೆಯರು ವತಿಯಿಂದ ಕೆ.ಕೆ. ಪೈ ನೆನಪಿನಲ್ಲಿ ನಡೆದಿರುವ ಮಕ್ಕಳ ನಾಟಕೋತ್ಸವದಲ್ಲಿ ಇಂದು ಸಉಳ್ಯ ರಂಗಮನೆ ಸಾಂಸ್ಕೃತಿಕ ಕೇಂದ್ರದ ಮಕ್ಕಳಿಂದ ವೈದೇಹಿಯವರು ರಚಿಸಿ ಜೀವನ್ರಾಮ್ ಸುಳ್ಯ ಅವರು ನಿರ್ದೇಶಿಸಿರುವ ಢಾಣಾ ಡಂಗುರ ನಾಟಕದ ಪ್ರದರ್ಶನವಿದೆ.
ಮಣ್ಣಿನ ಮನೆ ಎಂಬ ಸೋವಿಯತ್ ಮಕ್ಕಳ ನಾಟಕವೊಂದನ್ನು ಅಧಾರವಾಗಿಟ್ಟುಕೊಂಡು ಜೊತೆಗೆ ಇನ್ನೂ ಕೆಲವು ಮಕ್ಕಳ ಕತೆ ಹಾಗೂ ಶಿಶುಗೀತೆಗಳನ್ನು ಪೋಣಿಸಿಕೊಂಡು ವೈದೇಹಿ ಅವರು ಈ ನಾಟಕವನ್ನು ಮಕ್ಕಳ ಮನೋರಂಜನೆಗಾಗಿಯೇ ರಚಿಸಿದ್ದಾರೆ.

ಮಣ್ಣಿನ ಮಡಕೆ, ಸೊಳ್ಳೆ, ಮೊಲ, ಇಲಿ ಮುಂತಾದ ಅತಿ ಸಣ್ಣ ಜೀವಿಗಳೂ ರಂಗದಲ್ಲಿ ಪಾತ್ರಗಳಾಗಿ ಕಾಣಿಸಿಕೊಳ್ಳುವುದು, ಅವುಗಳು ತಮಗಾಗಿರುವ ಅನ್ಯಾಯದ ವಿರುದ್ಧ ಹೋರಾಡುವುದು, ತಾವೂ ಕೂಡಾ ರಾಜ್ಯವಾಳಲು ಹಂಬಲಿಸುವುದು, ಚತುರ ಬೆಕ್ಕಿನ ಮಾತು ಕೇಳಿ ರೈತನ ಮಗಳು ಚೆಲುವಮ್ಮನನ್ನು ಹುಡುಕಿಕೊಂಡು ಕುದುರೆಯೇರಿ ಹೊರಟ ರಾಜ ಕುಮಾರ ಕಾಡಿನಲ್ಲಿ ವೃಕ್ಷದೇವತೆಯ ಶಾಪದಿಂದ ಕಪ್ಪೆಯಾಗಿ ಜನಿಸುವುದು, ರೈತನ ಸಂದಿಗ್ದ ಸ್ಥಿತಿ, ಚೆಲುವಮ್ಮನ ಮುಗ್ಧತೆ, ಹಸಿವು ಬಾಯಾರಿಕೆ ಯಿಂದ ಕಂಗೆಟ್ಟ ರಾಜ-ರಾಣಿ, ಕರಡಿಗಳ ಜೇನು ಹುಡುಕಾಟ, ಕೊನೆಗೆ ಕಪ್ಪೆ ರಾಜಕುಮಾರನಾಗುವುದು... ಹೀಗೆ ಅನೇಕ ಕುತೂಹಲಕಾರಿ ದೃಶ್ಯಗಳು ಈ ನಾಟಕದಲ್ಲಿವೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-02-21 00:00:00
|
|
|