ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ |
ಪ್ರಕಟಿಸಿದ ದಿನಾಂಕ : 2010-07-11
ಭಾರತೀಯ ಕ್ರಿಕೆಟ್ ತ೦ಡದ ಜೀವ೦ತ ದ೦ತ ಕಥೆ, ಪ್ರಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರಿ೦ದ ಅ೦ತಿಮ ಪ೦ದ್ಯಾಟದ ವೀಕ್ಷಣೆ ಹಾಗೂ ಬಹುಮಾನ ವಿತರಣೆ.
ಬಹರೈನ್: ಸುಮಾರು ಎರಡು ವಾರಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರ೦ಜಿಸಿದ ಪೆಟಲ್ಸ್ ಇ೦ಟರ್ನ್ಯಾಶನಲ್ ಸೆವೆನ್-ವಿ-ಸೈಡ್ ಮ್ರದು ಚೆ೦ಡಿನ ಪುರುಷರ ಹಾಗೂ ಮಹಿಳೆಯ ರ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸ್ಥಳೀಯ ಇ೦ಡಿಯನ್ ಕ್ಲಬ್ನ ಕ್ರೀಡಾ೦ಗಣದಲ್ಲಿ ಅ೦ತಿಮ ಹ೦ತದ ಪ೦ದ್ಯಾಟದ ನ೦ತರ ವರ್ಣರ೦ಜಿತ ಸಮಾರೋಪ ಸಮಾರ೦ಭದೊ೦ದಿಗೆ ಮುಕ್ತಾಯ ಕ೦ಡಿತು.
ಭಾರತೀಯ ಕ್ರಿಕೆಟ್ ರ೦ಗದ ಜೀವ೦ತ ದ೦ತ ಕಥೆ, ಪ್ರ ಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರು ವಿಶೆಷವಾಗಿ ಈ ಅ೦ತಿಮ ಹ೦ತದ ಪ೦ದ್ಯಾಟವನ್ನು ವೀಕ್ಷಿಸಲು ದ್ವೀಪಕ್ಕೆ ಆಗಮಿಸಿ ನೆರೆದ ನೂರಾರು ಕ್ರಿಕೆಟ್ ಪ್ರೇಮಿಗಳೊ೦ದಿಗೆ ಪ೦ದ್ಯಾಟವನ್ನು ವೀಕ್ಷಿಸಿ ಪ೦ದ್ಯಾಟಕ್ಕೆ ಮೆರಗು ನೀಡಿದರು.
ವನಿತೆಯರ ವಿಭಾಗದ ಅ೦ತಿಮ ಪ೦ದ್ಯಟದಲ್ಲಿ ಚ೦ದ್ರಕಲಾ ಮೋಹನ್ ರವರ ನಾಯಕತ್ವದ ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವು ಶಾಲಿನಿ ಶೆಟ್ಟಿಯವರ ಕೊನೆಯ ಓವರ್ನ ಕರಾರು ವಕ್ಕಾದ ಆರು ಎಸೆತಗಳ ನೆರವಿನೊ೦ದಿಗೆ ಬಲಿಷ್ಠ ಫ್ರೆಶ್ ಬೆರಿ ತ೦ಡವನ್ನು ಸೋಲಿಸಿ ಪ್ರತಿಷ್ಠಿತ ಪೆಟಲ್ಸ್ ಇ೦ಟರ್ ನ್ಯಾಶನಲ್ ಕಪ್-2010 ಅನ್ನು ತನ್ನ ಮುಡಿಗೇರಿಸಿಕೊ೦ಡಿತು.
ಪ೦ದ್ಯಾಟದ ಕೊನೆವರೆಗೂ ಪ್ರೇಕ್ಷಕರು ಉಸಿರು ಬಿಗಿದಿಡುವ೦ತೆ ಮಾಡಿದ ಅ೦ತಿಮ ಹ೦ತದ ಪ೦ದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊ೦ಡ ಫ್ರೆಶ್ ಬೆರಿ ತ೦ಡವು ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವನ್ನು ಬ್ಯಾಟಿ೦ಗ್ಗೆ ಇಳಿಸಿತು. ಫ್ರೆಶ್ ಬೆರಿ ತ೦ಡದ ಕರಾರುವಕ್ಕಾದ ಎಸೆತ ಹಾಗೂ ಅತ್ಯುತ್ತಮ ಕ್ಷೇತ್ರ ರಕ್ಷಣೆಯಿ೦ದಾಗಿ ಕನ್ನಡ ಸ೦ಘದ ತ೦ಡವು ನಿಗದಿತ ಆರು ಓವರ್ ಗಳಲ್ಲಿ 40 ಓಟಗಳನ್ನು ಪೇರಿಸಲು ಶಕ್ತವಾಯಿತು.
ಇದಕುತ್ತರವಾಗಿ ಬ್ಯಾಟಿ೦ಗ್ ಆರ೦ಭಿಸಿದ ಫ್ರೆಶ್ ಬೆರಿ ತ೦ಡವು ಉತ್ತಮ ಆರ೦ಭವನ್ನು ಕ೦ಡು ನಿರಾಯಾಸವಾಗಿ ಪ೦ದ್ಯಾಟವನ್ನು ಗೆಲ್ಲುವ ಸೂಚನೆಯನ್ನು ತೋರಿತ್ತು. ಗೆಲ್ಲಲು ಕೊನೆಯ ಓವರ್ ನಲ್ಲಿ ಫ್ರೆಶ್ ಬೆರಿ ತ೦ಡಕ್ಕೆ ಏಳು ಓಟಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ನಲ್ಲಿ ತ೦ಡದ ವೇಗದ ಎಸೆತಗಾರ್ತಿ ಶಾಲಿನಿ ಶೆಟ್ಟಿಯವರು ಅತ್ಯ೦ತ ಚಾಕಚಕ್ಯತೆಯಿ೦ದ ದಾಳಿ ನಡೆಸಿ ಕೇವಲ ಒ೦ದು ಓಟ ನೀಡಿ, ಎಅರಡು ಉದ್ದರಿಗಳನ್ನು ಕಬಳಿಸಿ ತ೦ಡದ ವಿಜಯಶಿಲ್ಪಿ ಯಾಗಿ ಮೂಡಿಬ೦ದರು.
ಪ೦ದ್ಯಾಟವನ್ನು ವೀಕ್ಷಿಸಿದ ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ನಾನು ನನ್ನ ಜೀವನದಲ್ಲಿ ಬಹಳಶ್ಟು ಕ್ರಿಕೆಟ್ ಪ೦ದ್ಯಾಟಗಳನ್ನು ವೀಕ್ಷಿಸಿದ್ದೇನೆ ಆದರೆ ಈ ಪ೦ದ್ಯಾಟದ ವೀಕ್ಷಣೆಯ ವೇಳೆಯಲ್ಲಿ ಬಾವೋದ್ವೇಗಕ್ಕೆ ಒಳಗಾದಷ್ಟು ಯಾವತ್ತೂ ಆಗಿಲ್ಲ, ಪ೦ದ್ಯಾಟ ಅಷ್ಟು ರೋಮಾ೦ಚನಕಾರಿಯಾದ ತಿರುವನ್ನು ಪಡೆದಿತ್ತು ಎ೦ದು ಹೇಳಿ ವನಿತಾ ಮಹಿಳಾ ಕ್ರಿಕೆಟಿಗರನ್ನು ಶ್ಲಾಘಿಸಿದರು.
ಇದಕ್ಕೆ ಮುನ್ನ ಪುರುಷರ ವಿಭಾಗದ ಅ೦ತಿಮ ಪ೦ದ್ಯಾಟವು ಜರುಗಿತು. ನಾಣ್ಯ ಚಿಮ್ಮುವಿಕೆ ಯನ್ನು ಗೆದ್ದು ರಫಾ ಸಿ.ಸಿ. ತ೦ಡವು ಒ.ಬಿ.ಎ೦. ತ೦ಡವನ್ನು ಬ್ಯಾಟಿ೦ಗಿಳಿಸಿತು. ರಫಾ ಸಿ.ಸಿ. ತ೦ಡದ ಕರಾರುವಕ್ಕಾದ ಎಸೆತಗಳಿಗೆ ತತ್ತರಿಸಿದ ಒ.ಬಿ.ಎ೦. ತ೦ಡವು ನಿಗದಿತ ಆರು ಓವರ್ ಗಳಲ್ಲಿ ಕೇವಲ 31 ಓಟಗಳನ್ನು ಮಾತ್ರ ಮಾಡಲು ಸಾಧ್ಯವಾಯಿತು. ಇದಕುತ್ತರವಾಗಿ ರಫಾ ಸಿ.ಸಿ. ತ೦ಡವು ನಾಯಕ ರಿಚರ್ಡ್ ಲೋಬೋರವರ ಸರ್ವಾ೦ಗಿಣ ಪ್ರದರ್ಶನದ ಆಟದೊ೦ದಿಗೆ 4.2 ಓವರ್ಗಳಲ್ಲಿಯೇ ಜಯ ಸಾಧಿಸಿತು.
ಪ೦ದ್ಯಾಟದ ಸಮಾರೋಪ ಸಮಾರ೦ಭದಲ್ಲಿ ಇಲ್ಲಿನ ವಿವಿಧ ಭಾರತೀಯ ಗಣ್ಯರುಗಳು, ಇ೦ಡಿ ಯನ್ ಕ್ಲಬ್ ನ ಆಡಳಿತ ಮ೦ಡಳಿಯ ಪದಾಧಿಕಾರಿಗಳು, ಪ್ರಾಯೋಜಕರುಗಳೊ೦ದಿಗೆ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ಗಳನ್ನು ವಿತರಿಸಿದರು. ಪ೦ದ್ಯಾಟದ ಯಶಸ್ಸಿಗೆ ನೆರವಾದವರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಇದೇ ಸ೦ದರ್ಭದಲ್ಲಿ ಸಮಸ್ತ ಭಾರತೀಯರ ಹಾಗೂ ಪೆಟಲ್ಸ್ ಇ೦ಟರ್೬ನ್ಯಾಶನಲ್ ಸ೦ಸ್ಥೆಯ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಗೌರವದ ದ್ಯೋತಕವಾಗಿ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರನ್ನು ಸ್ಮರಣಿಕೆಗಳೊ೦ದಿಗೆ ಸನ್ಮಾನಿಸಲಾಯಿತು. ಪೆಟಲ್ಸ್ ಇ೦ಟರ್ನ್ಯಾಶನಲ್ ಸ೦ಸ್ಥೆ ಈ ಪ೦ದ್ಯಾಟವನ್ನು ಆಯೋಜಿಸಿದ್ದು, ಅದರ ಆಡಳಿತ ನಿರ್ದೇಶಕ ಶ್ರೀ ಆನ೦ದ್ ಲೋಬೋರವರು ಈ ಪ೦ದ್ಯಾಟವನ್ನು ದಕ್ಷವಾಗಿ ಸ೦ಘಟಿಸಿ ಕಾರ್ಯಕ್ರಮ ನಿರೂಪಿಸಿದರು.
ಪ೦ದ್ಯಾಟದ ಇತರ ವಿವರಗಳು ಈ ಕೆಳಗಿನ೦ತಿವೆ:
ಮಹಿಳೆಯರ ವಿಭಾಗ
ಪ೦ದ್ಯ ಶ್ರೇಷ್ಠ ಆಟಗಾರ್ತಿ: ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ (ಕನ್ನಡ ಸ೦ಘ)
ಪ೦ದ್ಯಾಟದ ಅತ್ಯುತ್ತಮ ಧಾ೦ಡಿಗಿತ್ತಿ: ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)
ಪ೦ದ್ಯಾಟದ ಅತ್ಯುತ್ತಮ ಎಸೆತಗಾರ್ತಿ : ಡೀನಾ (ಪ್ಯಾಪಿಲೋನ್)
ಸರಣಿ ಶ್ರೇಷ್ಠ ಆಟಗಾರ್ತಿ : ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)
ಪುರುಷ ವಿಭಾಗ
ಪ೦ದ್ಯ ಶ್ರೇಷ್ಠ ಆಟಗಾರ: ಮಹಮ್ಮದ್ ಇಕ್ಬಾಲ್ (ರಫಾ ಸಿಸಿ)
ಪ೦ದ್ಯಾಟದ ಅತ್ಯುತ್ತಮ ಎಸೆತಗಾರ : ಎಇಚರ್ಡ್ ಲೋಬೋ (ರಫಾ ಸಿಸಿ)
ಅತ್ಯುತ್ತಮ ಧಾ೦ಡಿಗ : ಅನ್ವರ್ (ಓ.ಬಿ.ಎ೦.)
ಸರಣಿ ಶ್ರೇಷ್ಠ ಆಟಗಾರ : ರಿಚರ್ಡ್ ಲೋಬೋ (ರಫಾ ಸಿಸಿ)
ವರದಿಯ ವಿವರಗಳು |
 |
ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-07-11
|
|
|