ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)

 ೭೫ನೇ ಸಮ್ಮೇಳನಕ್ಕೆ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಚಾಲನೆ

ಚಿತ್ರದುರ್ಗ, ಫೆ.೩ .ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆಯ ಹೊತ್ತಿಗೆ ವೃಂದಗಾನದಲ್ಲಿ ಅನುರಣಿಸುತ್ತಿದ್ದದ್ದು ನಾಡಗೀತೆ 'ಜಯಭಾರತ ಜನನಿಯ ತನುಜಾತೆ' ಮತ್ತು ಅದನ್ನು ಹೇಗೆ ನಾಲ್ಕು ನಿಮಿಷ ಮೂವತ್ತು ಸೆಕೆಂಡಿನೊಳಗೆ ಹಾಡಿ ಮುಗಿಸಬೇಕು ಎಂಬ ಸಂಗೀತ ನಿರ್ದೇಶಕರ ಸೂಚನೆ.

ಮಾರನೆ ದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ ಅನ್ನುವುದಕ್ಕೆ ಅಲ್ಲಿದ್ದ ಏಕೈಕ ಸಾಕ್ಷಿ ಅದೊಂದೇ. ಬಿಟ್ಟರೆ, ಮಾಧ್ಯಮ ಕೇಂದ್ರದ ಎದುರು ನೋಂದಣಿ ಮಾಡಿಸಿಕೊಳ್ಳಲು ಪಡಿಪಾಟಲು ಪಡುತ್ತಿದ್ದ ಮಾಧ್ಯಮದ ಮಂದಿಯ ದೊಡ್ಡ ಗುಂಪು. ಉಳಿದಂತೆ ಚಿತ್ರದುರ್ಗ ಎಂದಿನಂತಿತ್ತು. ಅದೇ ಮಣಗಟ್ಟಲೆ ಬಿಸಿಲು, ಮೊಳದುದ್ದ ಸೆಕೆ ಮತ್ತು ಲಾರಿಗಳು ಸುರಿಯುತ್ತಿದ್ದ ನೀರನ್ನೂ ಲೆಕ್ಕಿಸದೇ ಆಕಾಶಕ್ಕೇಳುತ್ತಿದ್ದ ಧೂಳು.
ಕೊಂಚ ನಿರುತ್ಸಾಹ, ಚೂರು ಬೇಸರ, ಸುಡು ಬಿಸಿಲಿನ ಝಳದೊಂದಿಗೆ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗದಲ್ಲಿ ಕ್ಷಣಗಣನೆ ಆರಂಭವಾಗಿದೆ.
ನಿರುತ್ಸಾಹ ಮತ್ತು ಬೇಸರಕ್ಕೆ ಕಾರಣ- ಸಾಹಿತ್ಯ ಸಮ್ಮೇಳನ ಒಮ್ಮೆ ನಿಗದಿಯಾಗಿ ಮುಂದಕ್ಕೆ ಹೋಗಿರುವುದು. ಇನ್ನು, ಬಿಸಿಲು ಮದಕರಿ ನಾಯಕನ ಕರ್ಮಭೂಮಿಯ ಯಾವತ್ತಿನ ನೆಂಟ!

ಬುಧವಾರ ಬೆಳಗ್ಗೆ ಇಲ್ಲಿ ೪ ದಿನದ ಕನ್ನಡ ಜಾತ್ರೆ ಆರಂಭವಾಗುತ್ತದೆ. ಸಿದ್ಧತೆಗಳು ಯಾಂತ್ರಿಕವಾಗಿ ನಡೆಯುತ್ತಿದ್ದರೂ ಹಬ್ಬದ ವಾತಾವರಣವಂತೂ ಇಲ್ಲ. 'ನಾಳೆ ಬೆಳಗ್ಗೆ ನೋಡಿ ಸರ್, ಸಾಗರದಂತೆ ಜನ ಹರಿದು ಬರುತ್ತಾರೆ. ಚಿತ್ರದುರ್ಗದಲ್ಲಿರುವಷ್ಟು ಸಾಹಿತ್ಯಾಸಕ್ತರು ಬೇರೆಲ್ಲೂ ಇಲ್ಲ.' ಈ ನಿರುತ್ಸಾಹದ ವಾತಾವರಣ ಸಾಹಿತ್ಯಾಸಕ್ತಿಯ ಮಾನದಂಡವಲ್ಲ ಎಂಬುದನ್ನು ಸೂಚಿಸುವಂತೆ ಉತ್ಸಾಹಿ ಕಾರ್ಯಕರ್ತರು ಸ್ಪಷ್ಟನೆ ಕೊಡುತ್ತಾರೆ.

ಹಾಗೆ ನೋಡಿದರೆ, ಅವರ ಮಾತು ಅರ್ಥವಿಲ್ಲದ್ದೇನೂ ಅಲ್ಲ. ಏಕೆಂದರೆ ಇದು ಆದಾಯ ಹಾಗೂ ಖರ್ಚಿನಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಸಮ್ಮೇಳನ. ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವೊಂದಕ್ಕೆ ಸರ್ಕಾರ ಮೂರು ಚಿಲ್ಲರೆ ಕೋಟಿ ರುಪಾಯಿ ಖರ್ಚು ಮಾಡುತ್ತಿದೆ.

ಜನರ ಔದಾರ್ಯವೂ ಕಡಮೆಯೇನಿಲ್ಲ. ಸರ್ಕಾರ ಖರ್ಚು ಮಾಡುತ್ತಿರುವುದಕ್ಕಿಂತ ಹೆಚ್ಚು ದೇಣಿಗೆ ಸಂಗ್ರಹವಾಗಿದೆ. ಜೊತೆಗೆ ಲೋಡುಗಟ್ಟಲೆ ಅಕ್ಕಿ, ಎಣ್ಣೆ, ಕಾಳು ಕಡಿಗಳು ಉಗ್ರಾಣಕ್ಕೆ ಬಂದು ಬಿದ್ದಿವೆ.

ಇಷ್ಟೆಲ್ಲ ಸಾಧ್ಯವಾಗಿದ್ದು ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹುಮ್ಮಸ್ಸಿನಿಂದ. ಅವರು ಕನ್ನಡಿಗರಲ್ಲ ಎಂಬುದು ಯಾರಿಗೂ ಅರಿವಾಗದಂತೆ ಕೆಲಸ ಮಾಡಿದ್ದಾರೆ. ಅವರ ಕೋರಿಕೆಗೆ ಜಿಲ್ಲೆಯ ಆಸುಪಾಸಿನ ಮಂದಿ ಅಷ್ಟೇ ತುಂಬು ಮನಸ್ಸಿನಿಂದ ಸ್ಪಂದಿಸಿದ್ದಾರೆ. ಗೋಷ್ಠಿಗಳು ಫಲಕಾರಿಯಾಗಿ, ಸಮ್ಮೇಳನದ ನಿರ್ಣಯಗಳು ಜಾರಿಯಾಗುವಂತೆ ನೋಡಿಕೊಂಡರೆ ಇದು ಖಂಡಿತ ಯಶಸ್ವಿ ಸಮ್ಮೇಳನವಾಗುತ್ತದೆ. ಆ ಜವಾಬ್ದಾರಿ ಸಾಹಿತಿಗಳ ಮೇಲಿದೆ.

- ನಿಜಕ್ಕೂ ಸುಂದರ ವೇದಿಕೆ:

ಧಗೆಯ ಊರಿಗೆ ಗಾಳಿ ಬೀಸಲೋ ಎಂಬಂತೆ ಸದಾ ಗಾಳಿಯಂತ್ರಗಳು ಸುತ್ತುವ ಬೆಟ್ಟದ ಸಾಲಿನ ತಪ್ಪಲಿನಲ್ಲಿ ಭವ್ಯ ವೇದಿಕೆ. ೧೦ ಸಾವಿರ ಆಸನಗಳ 'ರಾಜಾ ವೀರ ಮದಕರಿನಾಯಕ' ಸಭಾಂಗಣ. ಜನರ ಹರಿವು ಹೆಚ್ಚಿದರೆ ಸುತ್ತಲೂ ಕುಳಿತು ಕಲಾಪ ವೀಕ್ಷಿಸಬಹುದಾದ ಕ್ರೀಡಾಂಗಣದ ಮೆಟ್ಟಿಲುಗಳ ಸಾಲು. ವೇದಿಕೆಯ ಹಿನ್ನೆಲೆಯಲ್ಲಿ ಉರಿ ಬಿಸಿಲಿನಲ್ಲೂ ಮಂಜು ಮುಸುಕಿದಂತೆ ಕಾಣುವ ಪರ್ವತ ಪಂಕ್ತಿ. ಅದರ ಮೇಲೆ ಚಿತ್ರದುರ್ಗದ ಟ್ರೇಡ್‌ಮಾರ್ಕ್ ಗಾಳಿಯಂತ್ರಗಳು.

ಬಹುಶಃ ಇತ್ತೀಚಿನ ಯಾವ ಸಮ್ಮೇಳನಕ್ಕೂ ಸಿಗದ ಅತ್ಯಂತ ಸುಂದರ ವೇದಿಕೆಯನ್ನು ಹೊಂದುವ ಅವಕಾಶ ಈ ಸಲದ ಸಮ್ಮೇಳನದ್ದು.

- ಅತ್ಯಂತ ಹೆಚ್ಚು ಪುಸ್ತಕ ಮಳಿಗೆ:

ಸಮ್ಮೇಳನಕ್ಕೆ ಬರುವವರಿಗೆ ಈ ವರ್ಷ ಒಂದು ಅನುಕೂಲ ಏನೆಂದರೆ, ಸಭಾಂಗಣ, ಪುಸ್ತಕದ ಮಳಿಗೆ, ಊಟದ ಮನೆ ಎಲ್ಲವೂ ಒಂದೇ ನಿಲುಕಿಗೆ ಎಟಕುತ್ತವೆ. ಪುಸ್ತಕ ಪ್ರಿಯರಿಗೆ ಇಷ್ಟವಾಗುವ ಸಂಗತಿ ಏನೆಂದರೆ, ಅತಿ ಹೆಚ್ಚು ಪುಸ್ತಕದ ಮಳಿಗೆಗಳಿವೆ. ಅವುಗಳ ಸಂಖ್ಯೆ ಭರ್ತಿ ೬೩೦. ಅದರಲ್ಲಿ ಕೆಲ ವಾಣಿಜ್ಯ ಮಳಿಗೆಗಳೂ ಇವೆ.

ಆದರೆ, ನಿರೀಕ್ಷಿಸಿದಷ್ಟು ಜನರೇ ಬರದಿದ್ದರೆ ಮಾಡುವುದೇನು ಎಂಬ ಸಣ್ಣ ಆತಂಕ ವೊಂದು ಕಾರ್ಯಕರ್ತರಲ್ಲಿದೆ. ಏಕೆಂದರೆ, ಮಾಜಿ ರಾಷ್ಟ್ರಪತಿಗಳ ನಿಧನದಿಂದ ಸಮ್ಮೇಳನ ಮುಂದಕ್ಕೆ ಹೋಗಿರುವುದು ಸಮ್ಮೇಳನಕ್ಕೆ ಹೋಗಬೇಕೆಂಬ ಯೋಜನೆ ಹಾಕಿಕೊಂಡಿದ್ದ ಅನೇಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಆದರೂ ಸಿದ್ಧತೆಗೆ ತಕ್ಕ ಸ್ಪಂದನೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಸಮ್ಮೇಳನ ಆರಂಭವಾಗುತ್ತಿದೆ. ತರಾಸು ಸ್ಮರಣೆಯಲ್ಲಿ ದುರ್ಗದ ಇತಿಹಾಸದ ಪುಟಗಳಿಗೆ ಸಾಹಿತ್ಯಪ್ರಿಯರ ಮನಸ್ಸುಗಳು ದಾಂಗುಡಿಯಿಡುತ್ತಿವೆ.

-ಸಮ್ಮೇಳನಾಧ್ಯಕ್ಷರಿಗೆ ಅದ್ಧೂರಿ ಸ್ವಾಗತ

ಚಿತ್ರದುರ್ಗ: ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಲ್. ಬಸವರಾಜು ಅವರು ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ನಗರದ ಹೊರವಲಯದ ಚಳ್ಳಕೆರೆ ಟೋಲ್ ಗೇಟ್ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.

ಇಳಿ ಹೊತ್ತಿನ ೪-೩೦ರವೇಳೆಗೆ ಕುಟುಂಬದೊಂದಿಗೆ ಆಗಮಿಸಿದ ಎಲ್. ಬಸವರಾಜು ಅವರಿಗೆ ಮಹಿಳೆಯರು ಪೂರ್ಣಕುಂಭದ ಸ್ವಾಗತ ನೀಡಿದರು. ಕಾರಿನಲ್ಲಿಯೇ ಕುಳಿತು ಜನರತ್ತ ಕೈಬೀಸಿದ ಬಸವರಾಜು ಇಳಿಯುವ ಪ್ರಯತ್ನ ಮಾಡದೆ ನೇರವಾಗಿ ಎಸ್‌ಜೆ‌ಎಂ ಗೆಸ್ಟ್ ಹೌಸ್‌ಗೆ ತೆರಳಿದರು. ಕಸಾಪದ ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಜಿಲ್ಲಾಧಿಕಾರಿ ಬಿಸ್ವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಕೆ.ಎಂ. ವೀರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

-ಕಸಾಪ ವೆಬ್‌ಸೈಟ್‌ಲ್ಲಿ ಇನ್ನೂ ಶಿವಮೊಗ್ಗ ಸಮ್ಮೇಳನ

ಬೆಂಗಳೂರು: ಅಧ್ಯಕ್ಷರಾಗಿ ಯಾರೇ ಬರಲಿ ಕನ್ನಡ ಸಾಹಿತ್ಯ ಪರಿಷತ್ ಮಾತ್ರ ಸುಧಾರಿಸುವುದಿಲ್ಲ!

ಬರೀ ಮಾತು, ಭರವಸೆಗಳನ್ನೇ ನೀಡುತ್ತಾ ಅಧ್ಯಕ್ಷರು ತಮ್ಮ ಕಾಯಕ ಪೂರೈಸಿ ಬಿಡುತ್ತಾರೆ. ಅದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಅದರ ವೆಬ್‌ಸೈಟ್.

ಚಿತ್ರದುರ್ಗದಲ್ಲಿ ಅಮೃತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ, ಕಸಾಪ ವೆಬ್‌ಸೈಟ್ ಮಾತ್ರ ಇನ್ನೂ ಶಿವಮೊಗ್ಗದ ೭೪ನೇ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲೇ ಇದೆ!
ಅಷ್ಟೇ ಅಲ್ಲ ಕಸಾಪ ಅಧ್ಯಕ್ಷರು ಇನ್ನೂ ಪ್ರೊ. ಚಂದ್ರಶೇಖರ ಪಾಟೀಲರೇ!
ಇದು ವೆಬ್‌ಸೈಟ್ ಪ್ರವೇಶಿಸಿದರೆ ಕಾಣಸಿಗುವ ದುಃಸ್ಥಿತಿ. ಕಾರಣ ಆರ್ಥಿಕ ಪರಿಸ್ಥಿತಿ.

ರಾಜಕಾರಣಿಗಳನ್ನು ಹೊರಗಿಡಬೇಕು

ಚಿತ್ರದುರ್ಗ: ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ಹೊರಗಿಡಬೇಕು. ಸಮ್ಮೇಳನಕ್ಕೆ ನೆರವು ನೀಡುವಂತೆ ಅವರ ಮುಂದೆ ಕೈಚಾಚಿ ನಿಲ್ಲುವ ಪ್ರವೃತ್ತಿ ದೂರ ಸರಿಸಬೇಕು. ಸಮಸ್ತ ಕನ್ನಡಿಗರೇ ನಿಧಿ ಸ್ಥಾಪಿಸಿಕೊಂಡು ಸಮ್ಮೇಳನಗಳನ್ನು ಆಚರಿಸಬೇಕು.

ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಲ್. ಬಸವರಾಜು ವ್ಯಕ್ತಪಡಿಸಿದ ಅಭಿಪ್ರಾಯವಿದು. ಇಲ್ಲಿನ ಎಸ್‌ಜೆ‌ಎಂ ಗೆಸ್ಟ್ ಹೌಸ್‌ನಲ್ಲಿ ಮಂಗಳವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವ್ಯವಸ್ಥೆ ಕೆಟ್ಟು ಹೋಗಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದು ೬೦ ವರ್ಷಗಳು ಕಳೆದರೂ ಸಮುದಾಯಗಳು ಉದ್ಧಾರವಾಗದೇ ಹಾಗೆಯೇ ಉಳಿದಿವೆ ಎಂದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕನ್ನಡಪ್ರಭ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-18

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಂಗ್ರಹ]

»ನವದೆಹಲಿ: ಶಿಲ್ಪಾ ‘ಸಿರಿ’ ಕವನ ಸಂಕಲನ ಬಿಡುಗಡೆ
»ಅನಿವಾಸಿ ಕನ್ನಡಿಗರೆ ನೀವು ಕರ್ನಾಟಕ ಬಿಟ್ಟು ಹೋಗುವಾಗ ನಮ್ಮನ್ನು ಕೇಳಿದ್ದಿರಾ ?-ಮುಖ್ಯಮಂತ್ರಿ ಚಂದ್ರು(ಸ೦ಗ್ರಹ)
»ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಡೀವಿ ಖಚಿತ ಕಾಂಗ್ರೆಸ್‌ಗೆ `ತಾರಾ'ಬಲ? (ಸ೦ಗ್ರಹ)
»ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ)
»ಜನರ ಬಳಿಗೆ ಆಗಮಿಸುತ್ತಿದೆ ಗೂಗಲ್ ಇಂಟರ್ನೆಟ್ ಬಸ್ (ಸ೦ಗ್ರಹ)
»ಬೆಳ್ತಂಗಡಿ:‘ಕುಡಿದು’ ಕಲಿಸುವ ಶಿಕ್ಷಕಿ ಬೇಡವೇ ಬೇಡ...!(ಸ೦ಗ್ರಹ)
»ದುಡ್ಡು ಸಂಪತ್ತಿಗಿ೦ತ ಜನರಿಂದ ಪಡೆಯುವ ಪ್ರೀತಿಯೇ ದೊಡ್ಡದು: ಬನ್ನಂಜೆ (ಸ೦ಗ್ರಹ)
»ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ(ಸ೦ಗ್ರಹ)
»ಕೊಟ್ಟ ಮಾತು ತಪ್ಪದ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು : ಅನಿವಾಸಿ ಕನ್ನಡಿಗರ ಸಮಿತಿಗೆ ಬೇಡಿಕೆ -ಆಶ್ವಾಸನಪತ್ರ(ಸ೦ಗ್ರಹ)
»ವಿಜ್ರಂಭಣೆಯಿಂದ ನೆಡೆದ ಕತರ್ ತುಳು ಕೂಟದ 4 ನೇ ವಾರ್ಷಿಕೋತ್ಸವ; ಕಿಕ್ಕಿರಿದ ಸಭೆ,’ದೇವರ್ ನಡಪವೆರ್’ ಯಶಸ್ವಿ ಪ್ರದರ್ಶನ (ಸ೦ಗ್ರಹ)
»ಪತ್ರಿಕೆಗಳ ಮೇಲಿನ ಓದುಗರ ವಿಶ್ವಾಸಾರ್ಹತೆ ಕುಂಠಿತ: ಮಣಿಪಾಲದಲಿ ಮಿಂಟ್ ಸಂಪಾದಕ ರಾಜಾ ನರಶೆಟ್ಟಿ(ಸ೦ಗ್ರಹ)
»ಸಭಿಕರನ್ನು ಬಾವುಕತೆಯಲ್ಲಿ ಪುಳಕಿಸಿದ ’ದೋಹಾ ಕಿ ಶಾಮ್ ರಫಿ ಕಿ ನಾಮ್’(ಸ೦ಗ್ರಹ)
»ಸಿ.ಆರ್.ಶೆಟ್ಟಿ ಅವರಿಗೆ ‘ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ’ ಪ್ರಶಸ್ತಿ (ಸಂಗ್ರಹ)
»ಅಜ್ಮಾನ್: ನಾಲ್ಕನೆಯ ಪದವಿಪ್ರದಾನ ಸಮಾರಂಭ 2008-ಹಲವು ಗಣ್ಯರ ಉಪಸ್ಥಿತಿ( ಸಂಗ್ರಹ)
»ಮುಂಬೈಯಲ್ಲಿ ಕನ್ನಡ ಯುವತಿಯ ಸಾಧನೆ: ಜ್ಯೋತಿ ಬಿ.ದೇವಾಡಿಗರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ( ಸಂಗ್ರಹ)
»ಬಹುಜನ ಹಿತಾಯ ಬಹುಜನ ಸುಖಾಯ : ಹೋರಾಟ ನಿಮ್ಮದು ಬೆಂಬಲ ನಮ್ಮದು
»ಗಲ್ಫ್ ನಾಡಿನಲ್ಲಿ ಕನ್ನಡದ ಕಂಪು ( ಸಂಗ್ರಹ)
»ಸಂಗೀತಮಯ, ನೃತ್ಯ ಸಂಯೋಜಿತ ಹಾಗೂ ಖ್ಯಾತ ತಾರೆಗಳಿಂದ ಪ್ರಜ್ವಲಗೊಂಡ ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ (ಸಂಗ್ರಹ)
»ಬ್ಯಾರೀಸ್ ಕಲ್ಚರಲ್ ಫೊರಂನ ವತಿಯಿಂದ ವಿದ್ಯಾರ್ಥಿವೇತನ.. ಸಮುದಾಯದ ಅಭಿವೃದ್ಧಿಯಲ್ಲಿ ಸಹಭಾಗಿತ್ವ : ಜಯಪ್ರಕಾಶ್ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri