ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ

ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ

ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಸರಣಿ ಈಗ ಗಲ್ಫ್ ಕನ್ನಡಿಗದಲ್ಲೂ ಪ್ರಕಟವಾಗುತ್ತದೆ. ಇದು ಈ ಸರಣಿಯ ಆರನೇ ಲೇಖನ .

`ಮುಂಗಾರು' ತಂಡ ಪತ್ರಿಕೆ ಹೊರತರುವ ತಾಲೀಮಿನಲ್ಲಿ ನಿರತವಾಯಿತು. ದಿನವೂ ಡಮ್ಮಿ ಪತ್ರಿಕೆ ಸಿದ್ದಪಡಿಸುವುದು ಮತ್ತು ಮುದ್ರಿಸುವುದು ನಿತ್ಯದ ಕಾಯಕವಾಯಿತು. ಈ ಹೊತ್ತಿ ಗಾಗಲೇ ಪೂರ್ಣಪ್ರಮಾಣದ ತಂಡ ಕರಾವಳಿಯಲ್ಲಿ ಜನಶಕ್ತಿ ಬೆಳೆತೆಗೆಯುವ ಶೆಟ್ಟರ ಕಲ್ಪನೆಯನ್ನು ಸಾಕಾರ ಗೊಳಿಸಲು ಪಣತೊಟ್ಟಿತ್ತು.

ಪ್ರಜಾವಾಣಿಯಿಂದ ಬಂದಿದ್ದ ಇಂದೂಧರ ಹೊನ್ನಾಪುರ ಅವರ ನೇತೃತ್ವದ ನುರಿತವರು ಮತ್ತು ಕರಾವಳಿ ಭಾಗದದಿಂದ ಹೊಸದಾಗಿ ಆಯ್ಕೆಯಾಗಿದ್ದ ಏಳುಮಂದಿ ಯುವಕರಾದ ನಾವು ಶೆಟ್ಟರ ಗರಡಿಯಲ್ಲಿ ಪಳಗುತ್ತಿದ್ದೆವು. ಆಗ ತಾನೆ ಉದಯವಾಣಿ ತೊರೆದು ಮುಂಗಾರು ಸೇರಿದ್ದ ಜಿ.ಕೆ. ಮಧ್ಯಸ್ಥ ಅವರು ಮಾತ್ರ ಈಭಾಗದಿಂದ ಬಂದವರಲ್ಲಿ ಅನುಭವಸ್ಥರು.

ಹೊಸಬರಾದ ನಮಗೆ ದಿನಪತ್ರಿಕೆಗೆ ಲೇಖನ ಬರೆಯುವುದು, ಸ್ಟೋರಿ ಬರೆಯುವುದು ಜೊತೆಗೆ ನಾವು ಬರೆದದ್ದೆಲ್ಲ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎನ್ನುವ ಪೊಗರು ಕೂಡಾ ಥ್ರಿಲ್ ಕೊಡುತ್ತಿತ್ತು. ಈ ಮೊದಲು ಲೇಖನ ಬರೆದು ತಿಂಗಳಾನುಗಟ್ಟಲೆ ಕಾದಮೇಲೆ ಅದು ಸ್ವೀಕೃತವಾಗಿದೆ ಎಂದೋ, ಪ್ರಕಟಿಸಲು ಅಸಾಧ್ಯವೆಂಬ ವಿಷಾದ ಸಂದೇಶ ಹೊತ್ತ ಪತ್ರ ಗಳನ್ನು ಕಾಣುತ್ತಿದ್ದ ನನ್ನಂಥವರಿಗೆ ಆ ಕ್ಷಣ ಬರೆದುಕೊಟ್ಟದ್ದು ರಾತ್ರಿಯಾಗುವಾಗ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ ಅಂತಾದರೆ ಅದೆಷ್ಟು ಖುಷಿ ಆಗುತ್ತಿತ್ತು ಆ ದಿನಗಳನ್ನು ಈಗ ಊಹಿಸಿಕೊಂಡರೆ ನನಗೇ ನಗು ಬರುತ್ತದೆ.

೧೯೮೪ ಸೆಪ್ಟಂಬರ್ ೯ ಮಂಗಳೂರು ಪುರಭವನದಲ್ಲಿ `ಮುಂಗಾರು' ಬಿಡುಗಡೆ ಸಮಾರಂಭ. ಈಗಲಾದರೆ ಮುಖ್ಯಮಂತ್ರಿಯೋ, ಕೇಂದ್ರ ಮಂತ್ರಿಯೋ ಮುಖ್ಯ ಅತಿಥಿ ಖಂಡಿತ. ಆದರೆ ಆ ದಿನ ಪತ್ರಿಕೆ ಬಿಡುಗಡೆ ಮಾಡಿದವರು ಕನ್ನಡದ ಖ್ಯಾತ ಬರಹಗಾರ ದೇವನೂರ ಮಹಾದೇವ. ಆದೇ ಮೊದಲು ದೇವನೂರು ಅವರನ್ನು ಹತ್ತಿರದಿಂದ ನೋಡಿದ್ದು.

ಕುರುಚಲು ಗಡ್ಡ, ಮಾಸಲು ಅಂಗಿ, ದೇಹ ಅದೆಷ್ಟು ದಿನಗಳಿಂದ ನೀರು ಕಂಡಿಲ್ಲವೋ ಅನ್ನುವ ರೀತಿ ಗೋಚರಿಸಿದರು. ಒಂದು ರೀತಿಯಲ್ಲಿ ನಾನು ಊಹಿಸಿಕೊಂಡಿದ್ದ ದೇವನೂರು ಇವರಲ್ಲ ಅನ್ನುವಷ್ಟರ ಮಟ್ಟಿಗೆ ಅವರನ್ನು ಕಂಡು ಆಘಾತಗೊಂಡೆ. ಮಣ್ಣಿನ ವಾಸನೆ, ಆಡುಭಾಷೆಯ ಸೊಗಡು ಬರಹದಲ್ಲಿ ಬರಬೇಕಾದರೆ ಮಣ್ಣು-ಧೂಳು ಕೊಳಕಿನಂತೆ ಕಾಣಬೇಕೇ? ಎನ್ನುವ ಮೂರ್ಖತನದ ಭಾವನೆಗಳು ಆಕ್ಷಣ ಬಂದದ್ದಂತೂ ನಿಜ.

ದೇವನೂರು ಕಾರ್ಯಕ್ರಮ ಮುಗಿಸ್ಕೊಂಡು ಶೆಟ್ರ ಜೊತೆ ಬೈಕಂಪಾಡಿ ಮುಂಗಾರು ಕಚೇರಿಗೆ ಬಂದರು. ಇನ್ನೂ ಹತ್ತಿರದಿಂದ ದೇವನೂರು ಅವರನ್ನು ಕಂಡೆ. ನಗುತ್ತಾ ಕೈಕುಲುಕಿ ಪರಿಚಯ ಮಾಡಿಕೊಂಡರು. ಕೆಂಡ ಉಗುಳುವಂತಿದ್ದ ಅವರ ಕಣ್ಣುಗಳನ್ನು ಕಂಡಾಗ ಸಿದ್ದಲಿಂಗಯ್ಯ ಅವರ ಕವಿತೆಯಲ್ಲಿ ಬರುವ `ಉಕ್ಕಿನ ದೇಹ ಹೂವಿನ ಮನಸ್ಸು' ಇದೇ ಇರಬೇಕಲ್ಲವೇ ಅಂದುಕೊಂಡೆ.

ಆದರೆ ದೇವನೂರು ಅವರದು ಸಣಕಲು ದೇಹ ಬಿಡಿ ಅಂದಿತು ಮನಸು. ದೇವನೂರು ಎಲ್ಲರನ್ನು ದ್ದೇಶಿಸಿ ಮಾತನಾಡಿ ಶೆಟ್ರೊಂದಿಗೆ ಕಾರುಹತ್ತಿ ಹೊರಟರು, ಮತ್ತೆ ಅವರನ್ನು ಹತ್ತಿರದಿಂದ ಕಾಣು ವ ಅವಕಾಶ ಸಿಕ್ಕಿಲ್ಲ ಇಲ್ಲಿಯವರೆಗೆ.

ಹುಟ್ಟು ಹಬ್ಬ ಆಚರಿಕೊಂಡಂಥ ಅನುಭವ `ಮುಂಗಾರು' ಬಿಡುಗಡೆಯ ದಿನ ನನಗೆ. ಬಹುಷ ಇಂದೂಧರ, ಶಂಕರ್ ಅವರಿಗೂ ಇದೇ ಅನುಭವ ಇರಬೇಕು ಎಲ್ಲರನ್ನು ಛೇಡಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದರು ಇಬ್ಬರೂ. ಪತ್ರಿಕೆಯ ಪುಟ ತೋರಿಸಿಕೊಂಡು ಆ ದಿನದ ಕಾರ್ಟೂನ್, ವ್ಯಂಗ್ಯಚಿತ್ರ ಬರೆದಿದ್ದ ಕಲ್ಲಪ್ಪ ಮಕಾಳಿ, ವಿ.ಮನೋಹರ್ ಅವರನ್ನು ಹೊಗಳುತ್ತಿದ್ದರು ಇಂದೂ ಧರ್.

ಆದರೆ ಮಾರುಕಟ್ಟೆಯಲ್ಲಿ ಮೊದಲ ದಿನದ ಪತ್ರಿಕೆಯ ಬಗ್ಗೆ ಎರಡು ನೇರ ಅಭಿಪ್ರಾಯಗಳು ಸುಳಿ ದಾಡುತ್ತಿದ್ದವು. ಮುಖಪುಟದಲ್ಲಿ ಪುರೋಹಿತರ ಕೈತಪ್ಪಿ ತೀರ್ಥ ಚೊಂಬು ಉರುಳಿರುವ ಮೂರು ಕಾಲಂ ಕಾರ್ಟೂನ್ ಅಭಿಪ್ರಾಯಗಳ ತರಂಗಗಳನ್ನೆಬ್ಬಿಸಿದ್ದವು. ಪತ್ರಿಕೆಯ ಮೊದಲ ದಿನವೇ ಸಂಪ್ರದಾಯವಾದಿಗಳ ನಂಬಿಕೆಯನ್ನು ಕಣಕಿದ್ದು ಯಾಕೆಂದು ಒಂದು ವರ್ಗ? ಪ್ರಶ್ನೆ ಮಾಡಿದರೆ, ಮತ್ತೊಂದು ವರ್ಗ ತಾವು ಶತಮಾನಗಳಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ಧ್ವನಿಯಾಗುವ ಪತ್ರಿಕೆ ಓದುಗರಿಗೆ ಸಿಗುತ್ತಿರುವುದಕ್ಕೆ ಬೀಗುತ್ತಿತ್ತು.

ರಘುರಾಮ ಶೆಟ್ರಂತೂ ಫುಲ್ ಖುಷ್ ಮೂಡ್ನಲ್ಲಿದ್ದರು. ಆ ದಿನ ಅದೆಷ್ಟು ಗಣೇಶ್ ಬೀಡಿ ಸೇದಿ ಎಸೆದರೋ ಗೊತ್ತಿಲ್ಲ. ಅಂತೂ ಅಂದುಕೊಂಡಂತೆ ಪತ್ರಿಕೆ ಹೊರತಂದ ಸಂತೃಪ್ತಿಯನ್ನು ಅವರ ಮುಖದಲ್ಲಿ ಕಂಡೆ. ಹೊಗಳಿಕೆ-ತೆಗಳಿಕೆ ಎರಡನ್ನೂ ಏಕಕಾಲದಲ್ಲಿ ಸಮಾನವಾಗಿ ಕೇಳಿಸಿಕೊಂಡದ್ದು ಅದೇ ಮೊದಲು.

(ಮುಂದುವರೆಯುವುದು)

- ಚಿದಂಬರ ಬೈಕಂಪಾಡಿ

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕೆ೦ಡಸ೦ಪಿಗೆ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-04

Tell a Friend
ಇತರ ಸಂಭಂದಪಟ್ಟ ವರದಿಗಳು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-5 : ಇಂದೂಧರ ಹೊನ್ನಾಪುರ ಬೆಂಬಲಕ್ಕೆ ನಿಂತರು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-4: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-3: ಯುವಕರ ಟೀಮ್ ಕಟ್ಟಿದ ಸಂತೃಪ್ತಿ ಶೆಟ್ರಿಗೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-2 : ಸ್ವಾಭಿಮಾನ ಕೆಣಕಿದ ನೇಮಕಾತಿ ಪತ್ರ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-1: ಸಂಪಾದಕ ಶೆಟ್ಟರ ಉಗ್ರಾವತಾರ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
»ಸುಳ್ಯದಲ್ಲಿ ಮತ್ತೆ ಬಂತು ಯಕ್ಷ ಕಲಿಕೆಗೆ ಜೀವ ಕಳೆ: ಯಕ್ಷ ಕಲಿಕೆಯಲ್ಲಿ ಯಕ್ಷಗುರು ಕೋಡ್ಲ ಗಣಪತಿ ಭಟ್‌
»ಪುಷ್ಪರಾಜ್ ಚೌಟರ ಕವಿತೆ " ಸಾಣೆ " ಹಿಡಿದಾಗ.
»ಮೋಹನ್ ಕೊಳ್ಳೆಗಾಲ ಈ ದಿನದ ಕವಿತೆ.. !
»ಪ್ರತಿಯೊಂದು ಅಕ್ಷರದ ಹಿಂದೆ ನನ್ನ ಕಣ್ಣೀರಿದೆ, ನೋವಿದೆ...: ‘ಸ್ವಾತಂತ್ರದ ಓಟ’ದ ಬೊಳುವಾರರ ಮನದಾಳದ ಮಾತು
»ಲಿಪಿಕಾರನಾಗಲು ಸಿದ್ಧ: ಚಂಪಾ ಪ್ರತಿ ಏಟು
»ಕನ್ನಡಕ್ಕೆ ಧಕ್ಕೆ ತರುವ ಸರಕಾರದ ವಿರುದ್ಧ ಸಂಘರ್ಷಕ್ಕೆ ಸಿದ್ಧ;ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹಾಲಂಬಿ ಗುಡುಗು
»ಕಸಾಪ ಶತಮಾನೋತ್ಸವ ಭವನ: ಹಾಲಂಬಿ ಗುರಿ; ಕನಸು ಹಂಚಿಕೊಂಡ ನೂತನ ಅಧ್ಯಕ್ಷ
»ಕಸಾಪ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಆಯ್ಕೆ; ಚಂಪಾಗೆ ಸೋಲು
»ಕವಿತೆಗಳು: ಹೋಗಿಬಾ ಗೆಳೆಯ...
»ಲೇಖನಿ...
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಪ್ರಾತಿನಿಧಿಕ ಸಂಸ್ಥೆ ಚುಕ್ಕಾಣಿ ಹಿಡಿಯಲು ಬಹುಮುಖ ಸ್ಪರ್ಧೆ
»ಕಸಾಪ ಚುನಾವಣೆಗೆ ಕ್ಷಣಗಣನೆ; ಲೆಕ್ಕಾಚಾರದಲ್ಲಿ ಸಾಹಿತ್ಯಲೋಕ
»ಬಾಲ(ಚಂದ್ರ)ನ ಕವಿತೆ ....
»ಕಾರಂತರ ಮನೆ ’ಮರಳಿ ಮಣ್ಣಿಗೆ’ ಸೇರಲು ಕ್ಷಣಗಣನೆ...
»ಕವನಗಳು....( ಲೇಖಕ: ಅಬುಧಾಬಿಯ ಸಂಜೀವ ಕುಮಾರ್)
»ಸತ್ಯಮೇವ ಜಯತೇ ಅಂದ್ರೆ ದಿಟವೊಂದೇ ಗೆಲ್ಲೋದು ಅಂತಾ...
»ಮಹಿಳಾ ಆತ್ಮಕಥನದಲ್ಲಿ ವಿಭಿನ್ನ ಸಾಲಿನಲ್ಲಿ ನಿಲ್ಲುವ ‘ಅನುದಿನದ ಅಂತರಗಂಗೆ’: ಅಗ್ರಹಾರ ಕೃಷ್ಣಮೂರ್ತಿ
»ಪಲವಳ್ಳಿ ಕವಿತೆ ಓದಿದ್ದೀರಾ ?...
»ಅನುಕರಣೆ ಬೇಡ ಅನುಸರಣೆ ಇರಲಿ: ಯುವ ಕಲಾವಿದರಿಗೆ ಚಿಟ್ಟಾಣಿ ಕಿವಿಮಾತು
»ನಾಟಕ ಬರವಣಿಗೆಯ ಕಡೆಗಣನೆ: ಕಂಬಾರ ಆತಂಕ | ‘ಕಾಗೆ ಕಣ್ಣು ಇರುವೆ ಬಲ’ ಪುಸ್ತಕ ಲೋಕಾರ್ಪಣೆ
»ಖ್ಯಾತ ಸಾಹಿತಿ ಕುಸುಮಾಕರ ದೇವರಗೆಣ್ಣೂರು ಕಾಲಲೀನ
»ಸಿನೆಮಾ ಅಧ್ಯಯನ ಶಿಬಿರ - ‘ಸಿನಿಮಾ ಓದೋಣ ಬನ್ನಿ'
»ಅವಳಿಗೊಂದಿಷ್ಟು ನಾಳೆಗಳು..!....
»ಹನಿಗವನಗಳು .....ಆರತಿ ಘಟಿಕಾರ್, ದುಬೈ ಇವರಿಂದ...
»ಮಕ್ಕಳಿಗೊಂದು ಮಾದರಿ ಶಿಬಿರ: ಸುಳ್ಯದ ಸ್ನೇಹ ಶಿಬಿರ
»ವಿಷು : ಹೊಸ ವರ್ಷದ ಶುರು -.ಸಮೃದ್ದಿ ಸಂಕಲ್ಪದ ದಿನ
»ಚಿತ್ರೀಕರಿಸಿ ಅಕ್ಷಯವಾಗಿಸುವಾ ಕಾಯಕ ...
»ಕಲಾ ಸಮ್ಮಿಲನದ ಗಾಂಧಾರ ಲೋಕ...
»`ಸತ್ಯ ಹೇಳುವ ಕೃತಿ ನಿರ್ಲಕ್ಷ್ಯ' - ಸಾಹಿತಿ ಎಸ್.ಎಲ್.ಭೈರಪ್ಪ ವಿಷಾದ
»ಸಂಧ್ಯಾ ಪೈ ಅವರ 20 ಕೃತಿಗಳು ಲೋಕಾರ್ಪಣೆ
»ಕಸಾಪ ಅಧ್ಯಕ್ಷ ಚುನಾವಣೆ: ದಕ್ಷಿಣ ಕನ್ನಡದ ಅಂತಿಮ ಕಣದಲ್ಲಿ ಮೂವರು; ಉಡುಪಿಯಲ್ಲಿ ಇಬ್ಬರು
»ಪಂಚ ಹನಿಗವನ....
»`ಸಾಹಿತಿಗಳು ರಾಜಕೀಯ ವ್ಯವಸ್ಥೆ ಬದಲಿಸಬೇಕು'
»ಉಗ್ರ ಹಫೀಜ್‌ಗೆ ಬಿಗಿ ಪೊಲೀಸ್ ರಕ್ಷಣೆ; ಪಾಕ್ ಬಣ್ಣ ಬಯಲು
»ವೈಚಾರಿಕತೆ ಮೂಡಿಸಲು ಅನುವಾದ ಸಹಕಾರಿ: ‘ನಮ್ಮನುವಾದ’ ಅನುವಾದಿತ ಕೃತಿ ಬಿಡುಗಡೆಗೊಳಿಸಿ ತೀ.ನಂ.ಶ್ರೀಧರ
»ಬನ್ನಂಜೆ ಬಾಬು ಅಮೀನ್‌ ಜಾನಪದ ಪ್ರಶಸ್ತಿ ಪ್ರಕಟ : ಡಾ|ವಾಮನ ನಂದಾವರ ಸಂಶೋಧನಾ ಪ್ರಶಸ್ತಿಗೆ ಹಾಗೂ ಬೊಗ್ರ ಶೇರಿಗಾರ್‌ ಕಲಾವಿದ ಪ್ರಶಸ್ತಿಗೆ ಆಯ್ಕೆ
»ರಂಗ ಗಲಾಟೆ ಮಾಡಿದವರು!...
»ಆಧ್ಯಾತ್ಮಿಕ ವ್ಯಕ್ತಿಗಳನ್ನು ವಿಮರ್ಶೆಗೆ ಒಳಪಡಿಸಬೇಕು - ಅನಂತಮೂರ್ತಿ
» ‘ಗೀತಪ್ರಿಯ’ರಿಗೆ ಐ.ಟಿ.ಕನ್ನಡಿಗರ ಎರಡನೇ ಕಂತಿನ ಕಿರು ಸಹಾಯ
»ಪ.ಗೋ.ಪ್ರಶಸ್ತಿಗೆ ಸ್ಟೀವನ್ ರೇಗೊ ಆಯ್ಕೆ
»ಸಾಹಿತ್ಯದೊಂದಿಗೆ ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಆಗಬೇಕಾಗಿದೆ: ಡಾ.ಬಿ.ಎ.ವಿವೇಕ ರೈ
»ಸಾವಿರದ ಸರದಾರ ‘ಗಮಕಿ’ವಿದ್ವಾನ್ ಕೈಂತಜೆ ನರಸಿಂಹ ಭಟ್
»‘ಸ್ವಾತಂತ್ರದ ಓಟ’ ಕವಲು, ಆವರಣ ಕಾದಂಬರಿಗೆ ಪರ್ಯಾಯ: ರಾಘವೇಂದ್ರರಾವ್
»ನಾಟಕಕಾರ ಪ್ರಸನ್ನರಿಗೆ ‘ಮುದ್ರಾಡಿ ನಾಟ್ಕ ಸಂಮಾನ’
»‘ಅತ್ರಿ ಬುಕ್ ಸೆಂಟರ್’ಗೆ ಅಶೋಕವರ್ಧನ್ ವಿದಾಯ...
»ಕಾರ್ಕಳದ ಗೊಮಟೇಶ್ವರ ಬೆಟ್ಟದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
»ಪರಿಣಾಮಕಾರಿಯಾಗಿ ಮೂಡಿಬಂದ ಸಾಂಬಶಿವ ಪ್ರಹಸನ
»ವಿಶ್ವಕರ್ಮ ಜನಾಂಗದ ಅಭಿವದ್ಧಿ ಪ್ರಾಧಿಕಾರ ರಚಿಸಿ: ಡಾ. ಕಂಬಾರ
»ಸ್ನೇಹ ಮಕ್ಕಳ ಶಿಬಿರ ಸಂಯೋಜನೆ 2012

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri