ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos} |
ಪ್ರಕಟಿಸಿದ ದಿನಾಂಕ : 2010-06-27
{ Kindly view more pictures in the above ALBUM}
CONTACT: Email: mail@gulfkarnatakaforum.com
ದುಬೈ, ಜೂನ್ 26: ಗಲ್ಫ್ ರಾಷ್ಟ್ರಗಳಲ್ಲಿ ವಾಸವಾಗಿರುವ ಕನ್ನಡಿಗರ ಪಾಲಿಗೆ ಹೊಸ ಸುದ್ದಿ ಸಂತಸವನ್ನು ತಂದಿದೆ. ಈಗ ಅನಿವಾಸಿ ಗಲ್ಫ ಕನ್ನಡಿಗ (ಎನ್.ಆರ್.ಕೆ)ರ ಸಮಸ್ಯೆಗಳ ಹಾಗೂ ಅಗತ್ಯವಿರುವ ಸವಲತ್ತುಗಳನ್ನು ಹೊಂದುವ ಬಗ್ಗೆ ಗಮನ ಹರಿಸಲು ಗಲ್ಫ್ ಕರ್ನಾಟಕ ವೇದಿಕೆ (Gulf Karnataka forum) ಈಗಾಗಲೇ ಅಸ್ಥಿತ್ವಕ್ಕೆ ಬಂದಿದ್ದು ನಿನ್ನೆ ನಡೆದ ಸಮಾರಂಭದಲ್ಲಿ ಈ ಸಂಘಟನೆಗೆ ಅಧಿಕೃತ ಮನ್ನಣೆ ನೀಡಲಾಯಿತು.





ದುಬಾಯಿ ದೇರಾದಲ್ಲಿ ಯೂನಿಯನ್ ಮೆಟ್ರೋ ಸ್ಟೇಶನ್ ಎದುರಿನಲ್ಲಿರುವ ಲೋಟಸ್ ಡೌನ್ ಟೌನ್ ಮೆಟ್ರೋ ಹೊಟೇಲ್ ಅಪಾರ್ಟ್ಮೆಂಟಿನ ಭವ್ಯ ಸಭಾಂಗಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನ ಮತ್ತು ಬಹೆರೈನ್, ಕುವೈಟ್, ಒಮಾನ್ ನಿಂದ ಆಗಮಿಸಿದ ಕರ್ನಾಟಕದ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಕೊಡವ ಭಾಷೆಯ ಮತ್ತು ಇತರ ಜಾತಿ ಮತ ಸಮುದಾಯ ಸಂಘಟನೆಗಳ ಮುಖ್ಯಸ್ತರು, ಅದ್ಯಕ್ಷರು, ಪದಾಧಿಕಾರಿಗಳ ಸಮಾವೇಶಗೊಂಡಿದ್ದು, ಯು. ಎ. ಇ. ಗೆ -ಪ್ರಥಮ ಕನ್ನಡಿಗ ಭಾರತದ ರಾಯಬಾರಿ ಯಾಗಿರುವ ಮಾನ್ಯ ಶ್ರೀ ಎಂ. ಕೆ. ಲೋಕೇಶ್ ರವರು ಉದ್ಘಾಟಿಸಿದರು.


ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಚಿವ ಮಾನ್ಯ ಡಾ. ಆಸ್ಕರ್ ಫೆರ್ನಾಂಡಿಸ್, ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸೆಲ್ ನ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗಲ್ಫ್ ಕರ್ನಾಟಕ ವೇದಿಕೆಯ ಮಹಾ ಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ ಯವರು, ಹಿರಿಯ ಮುಂದಾಳು ಎಸ್. ಎಂ. ಸೈಯದ್ ಖಲೀಲುರ್ರಹ್ಮಾನ್ ಹಾಗೂ ಐ.ಸಿ.ಡಬ್ಲ್ಯು.ಸಿ. ದುಬಾಯಿ ಸಂಚಾಲಕರಾದ ಶ್ರೀ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮ ಮೋನಿಶ್ ಗಣೇಶ್ ರೈಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀ ಗಣೇಶ್ ರೈಯವರು ಸರ್ವರನ್ನು ಸ್ವಾಗತಿಸಿ, ಗಲ್ಪ್ ಕರ್ನಾಟಕ ವೇದಿಕೆಯ ಸ್ಥಾಪನೆಯ ಬಗ್ಗೆ ವಿವರಣೆ ನೀಡಿದರು. ಗಲ್ಫ್ ಕರ್ನಾಟಕ ವೇದಿಕೆಯ ಕಾರ್ಯಚಟು ವಟಿಕೆಗಳು, ಕಾರ್ಯ ಯೋಜನೆಗಳ ಬಗ್ಗೆ ಶ್ರೀ ಹರ್ಮನ್ ಲೂವೀಸ್ ರವರು ಸಭೆಯ ಮುಂದಿಟ್ಟರು.
ಇದುವರೆಗೆ ಗಲ್ಫ್ ರಾಷ್ಟ್ರಗಳಿಗೆ ಆಗಮಿಸಿದ ಗಣ್ಯರು ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ತಾಯ್ನಾಡಿಗೆ ಮರಳಿದ ಬಳಿಕ ಮರೆಯುವುದು ಸಾಮಾನ್ಯವಾಗಿತ್ತು, ನಮ್ಮ ಸಮಸ್ಯೆಗಳು ಹಾಗೇ ಉಳಿದಿವೆ, ಈ ವೇದಿಕೆಯ ಮೂಲಕ ಅನಿವಾಸಿ ಗಲ್ಫ್ ಕನ್ನಡಿಗರ ಅಹವಾಲುಗಳನ್ನು ಸ್ವೀಕರಿಸುವುದು ಅತ್ಯಗತ್ಯವಾಗಿದೆ ಎಂದು ಶ್ರೀ ಹರ್ಮನ್ ಲೂವಿಸ್ ರವರು ತಿಳಿಸಿದರು

ಸಭೆಯಲ್ಲಿ ’ಉಧ್ಯಮದಲ್ಲಿ ಬಂಡವಾಳ ಹೂಡಿಕೆ, ಸವಾಲು ಮತ್ತು ಅಭಿವೃದ್ದಿ ಬಗ್ಗೆ’ ಐವನ್ ಫೆರ್ನಾಂಡಿಸ್ ರವರು ಬಹಳ ಪರಿಣಮಕಾರಿಯಾಗಿ ತಮ್ಮ ಅನಿಸಿಕೆಗಳನ್ನು ಮಂಡಿಸಿ ಸಭಿಕರ ಮತ್ತು ಗಣ್ಯರ ಮೆಚ್ಚುಗೆ ಪಡೆದರು.
ಬಿ. ಜಿ. ಮೋಹನ್ ದಾಸ್ ರವರು ’ಮಾಧ್ಯಮಗಳ ಸದುಪಯೋಗ” ಯದ ಬಗ್ಗೆ ಮಾತಾಡಿ ಗಲ್ಫ್ ಕನ್ನಡಿಗ ಒಗ್ಗೂಟ ಬಹಳ ನಿರೀಕ್ಷೆಯಿಂದ ಸ್ಥಾಪನೆಗೊಂಡಿದ್ದು ಗಲ್ಫ್ ನ ಎಲ್ಲಾ ಅಂತರ್ಜಾಲ ಮಾದ್ಯಮಗಳು ಈ ನಿಟ್ಟಿನಿಲ್ಲಿ ಸಕಾರಾತ್ಮಕವಾಗಿ ಕೈ ಜೋಡಿಸುವದಾಗಿ ಅಶ್ವಾಸನೆ ನೀಡಿದರು.

ಸಿ, ಆರ್. ಶೆಟ್ಟಿಯವರು ಮಾತನಾಡಿ ಹಿರಿಯ ಅಣ್ಣ ಡಾ.ಬಿ.ಆರ್.ಶೆಟ್ಟರ ನೇತ್ರತ್ವದಲ್ಲಿ ಕನ್ನಡಿಗರ ಏಳ್ಗೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಹ್ರತ್ಪೂರ್ವಕ ಬೆಂಬಲ ಯಾವಾಗಲೂ ಇದೆ ಎಂದು ಘೋಷಿಸಿದರು



ಕರ್ನಾಟಕ ಸರಕಾರದ ಅಧಿಕ್ರತ ನಿಯೋಗಿ ಕರ್ನಾಟಕ ಅನಿವಾಸಿ ಭಾರತೀಯ ಸೆಲ್ ಉಪಾಧ್ಯಕ್ಷ ಹಾಗೂ ಶಾಸಕ ಕ್ಯಾ| ಗಣೇಶ್ ಕಾರ್ಣಿಕ್ ರವರು ಸ್ಪಂದಿಸಿ ಅನಿವಾಸಿ ಭಾರತೀಯ ಕರ್ನಾಟಕ ವಿಭಾಗದ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಅನಿವಾಸಿ ಕನ್ನಡಿಗರಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು ಗಲ್ಫ್ ಕರ್ನಾಟಕ ವೇದಿಕೆಯ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಈ ಸುಸಂದರ್ಭದಲ್ಲಿ ಘೋಷಿಸಿದರು .






ಸರ್ವೋತ್ತಮ ಶೆಟ್ಟಿಯವರು ಗಲ್ಫ ಕನ್ನಡಿಗರು ಪಡುತ್ತಿರುವ ತೊಡಕು, ತೊಂದರೆ, ಕಿರುಕುಳ ನೋವು ಅನುಭವಗಳನ್ನು ಸಭಿಕರಲ್ಲಿ ಹಾಗೂ ನೆರೆದ ಗಣ್ಣ್ಯರಲ್ಲಿ ಹಂಚಿಕೊಂಡು, ಗ.ಕ.ವೇದಿಕೆ ಈ ನಿಟ್ಟಿನಲ್ಲಿ ಯೋಜನೆಗಳನ್ನು ನಿರೋಪಿಸಿ ಸರಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಲು ಸದಾ ಪ್ರಯತ್ನಿಸಬೇಕೆಂದು ಕಳಿಕಳಿಯಿಂದ ವಿನಂತಿಸಿದರು.
ಬಹ್ರೈನ್ ನ ರಾಜ್ ಕುಮಾರ್, ಕುವೈಟ್ ನ ಎಲಿಯಾಸ್ ಸಾನ್ಕಟಸ್ ಮತ್ತು ಪಾಸ್ಕಲ್ ಪಿಂಟೋ, ಒಮಾನ್ ನ ಪ್ರಕಾಶ್ ನಾಯ್ಕ್ ಹಾಗೂ ಸಂತೋಷ್ ನಜರೆತ್, ಡಾ. ಬಿ. ಕೆ. ಯೂಸುಫ್ ಶುಭ ಹಾರೈಸಿ ತಮ್ಮ ಸಹಕಾರವನ್ನು ಪ್ರಕಟಿಸಿದರು.
ಎಸ್. ಎಂ. ಸೈಯದ್ ಖಲೀಲುರ್ರಹ್ಮಾನ್ ರವರು ಗಲ್ಫ್ ಕರ್ನಾಟಕ ಸಂಘಟನೆ ಒಂದು ಅಗತ್ಯ ವಾದ ಸಾಧನೆ ಎದರಿಂದ ಎಲ್ಲಾ ಕರ್ನಾಟಕದ ಅನಿವಾಸಿಗಳಿಗೆ ಉಪಯೋಗ ಆಗಲಿದೆ ಎಂದು ಹಾರೈಸಿದರು.



ರಾಜ್ಯಸಭಾ ಸದಸ್ಯರಾದ ಮಾನ್ಯ ಶ್ರೀ ಆಸ್ಕರ್ ಫೆರ್ನಾಂಡಿಸ್ ಮಾತಾಡಿ ಈಗ ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕದ ಘಟಾನುಘಟಿಗಳು ಸ್ಥಾನ ಹೊಂದಿದ್ದು ಗಲ್ಫ್ ಕನ್ನಡಿಗರ ಮತ್ತು ಅನಿವಾಸಿ ಕನ್ನಡಿಗರ ಬವಣೆಗಳಿಗೆ ತ್ರಪ್ತಿಕರ ಪರಿಹಾರ ಪಡೆದು ಕೊಳ್ಳಲು ಇದು ಸುಸಂಧರ್ಭ ಎಂದು ಕಿವಿಮಾತಾಡಿದರು ಹಾಗೆಯೇ ತಾವು ಈ ನಿಟ್ಟಿನಲ್ಲಿ ಅತಿತವಕದಿಂದ ಕಾರ್ಯೋನ್ಮಕರಾಗಿ ಪರಿಹಾರಕ್ಕೆ ಬಹಳ ಪ್ರಯತ್ನ ಪಡುವುದಾಗಿ ಸೂಚಿಸಿದರು.






ಗೌರವಾನ್ವಿತ ಮಾನ್ಯಶ್ರೀ ರಾಯಬಾರಿಯಾಗಿರುವ ಮಾನ್ಯ ಶ್ರೀ ಎಂ. ಕೆ. ಲೋಕೇಶ್ ರವರು ಗ.ಕ ಫೊರಮ್ ಗೆ ಶುಭವನ್ನು ಹಾರೈಸಿದರು
ಮತ್ತು ಐ.ಸಿ.ಡಬ್ಲ್ಯು.ಸಿ. ದುಬಾಯಿ ಸಂಚಾಲಕರಾದ ಶ್ರೀ ಕುಮಾರ್ ರವರು ತಮ್ಮ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿದರು.








ಗಲ್ಫ್ ಕರ್ನಾಟಕ ವೇದಿಕೆಯ ಮಹಾ ಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ಸಭೆಯಲ್ಲಿ ಮಾತನಾಡಿ ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಸಂಘಟನೆ ಗಳು ಈ ವೇದಿಕೆಯಲ್ಲಿ ಒಮ್ಮತದಿಂದ ಸೇರ್ಪಡೆಗೊಂಡು ಒಂದಾಗಿ ಕಾರ್ಯನಿ ರ್ವಹಿಸುವ ಮೂಲಕ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿ ಕೊಳ್ಳಬಹುದು ಎಂದು ಕರೆ ನೀಡಿ ದರು ಹಾಗೆಯೇ ಗಲ್ಫ್ ಕರ್ನಾಟಕ ವೇದಿಕೆಯ ಕಾರ್ಯ ಯೋಜನೆ ಮತ್ತು ಜವಬ್ಧಾರಿಯ ಬಗ್ಗೆ ಸರ್ವರಲ್ಲಿ ಜಾಗೃತಿ ಮೂಡಿಸಿ ಕೊಳ್ಳಲು ವಿನಂತಿಸಿದರು.
ಅನಿವಾಸಿ ಕನ್ನಡಿಗರ ಹಲವು ಬೇಡಿಕೆಗಳಾದ ಮಕ್ಕಳ ಉನ್ನತ ವ್ಯಾಸಾಂಗ, ವಿಮೆ, ಗೃಹ, ರೇಶನ್ ಕಾರ್ಡ್, ನ್ಯಾಶನಲ್ ಐಡಿ, ವಾಣಿಜ್ಯೋದ್ಯಮ ಅವಕಾಶಗಳು, ಉದ್ಯೋಗಾವಕಾಶಗಳು, ಕುಟುಂಬ ಕಲ್ಯಾಣ ಯೋಜನೆ, ಸಹಾಯವಾಣಿ, ಸರ್ಕಾರಿ ವಲಯಗಳಲ್ಲಿ ಪ್ರತಿನಿಧಿಗಳು ಮೊದ ಲಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಭವಿಷ್ಯದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಶ್ರೀ ಗಣೇಶ್ ಕಾರ್ಣಿಕ್ ರವರು ಆಶ್ವಾಸನೆ ನೀಡಿ ದರು.
ಸನ್ಮಾನಿತ ಶ್ರೀ ಎಂ. ಕೆ. ಲೋಕೇಶ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀ ಆಸ್ಕರ್ ಫೆರ್ನಾಂಡಿಸ್ ರವರನ್ನು ಡಾ. ಬಿ. ಆರ್. ಶೆಟ್ಟಿಯರು ಶಾಲು ಹೊದಿಸಿ, ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು


ನವೀನ್ ಸಿಕ್ವೇರಾ ನಿರ್ಮಿಸಿದ http://www.gulfkarnatakaforum.com ಅಂತರ್ಜಾಲಕ್ಕೆ ಚಾಲನೆ ನೀಡಲಾಯಿತು.
ಸ್ಥಳೀಯ ಗಣ್ಯ ಮುಂದಾಳುಗಳು ಹಾಗೂ ಕರ್ನಾಟಕ ಸರ್ಕಾರದ ಇತರ ಅಧಿಕಾರಿಗಳು ಸಭೆ ಯಲ್ಲಿ ಉಪಸ್ಥಿತರಿದ್ದರು.


ಸಂಚಾಲಕ ಶ್ರೀ ಜೇಮ್ಸ್ ಮೆಂಡೋನ್ಸಾ ರವರು ಧನ್ಯವಾದ ಸಮರ್ಪಿಸಿದರು.




ಉಭಯ ಕುಶಲೋಪರಿಯೊಂದಿಗೆ ಮದ್ಯಾಹ್ನದ ಊಟದ ನಂತರ ಪ್ರಶ್ನೋತ್ತರ ಸಭೆ ನಡೆಯಿತು.
ಬಹಳ ಮೆಚ್ಚುಗೆಯಾದ ಕರ್ನಾಟಕದ ವೈವಿದ್ಯಮಯ ಚರಿತ್ರೆಯನ್ನು ಸಾರುವ ಈ ವೇದಿಕೆಯ ವಿನ್ಯಾಸ ಮಾಡಿ ಜನ ಮನ್ನಡೆ ಪಡೆದವರು ಕನ್ನಡಿಗ ಕಾಸ್ಮಿಕ್ ನ ಮೂರ್ತಿಯವರು.
ಈ ಬರ್ಜರಿ ಕಾರ್ಯಕ್ರಮದ ಸಫಲತೆ ಮತ್ತು ಯಶಸ್ಸಿಗೆ ಮಹಾಪೋಷಕ ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿಯವರ ನಾಯಕತ್ವ ಕಾರಣರಾದರೆ, ಅವರೊಡನೆ ಭುಜಕ್ಕೆ ಭುಜ ಕೊಟ್ಟು ಕಾರ್ಯನಿರ್ವಹಿಸಿದ ಕ್ಯಾ.ಗಣೇಶ್ ಕಾರ್ಣಿಕ್, ಜೇಮ್ಸ್ ಮೆನ್ಡೊನ್ಸಾ, ಅಫ್ರೋಜ್ ಅಸಾದಿ, ಗಣೇಶ್ ರೈ ಹಾಗೂ ಸಂಚಾಲಕ ಹರ್ಮನ್ ಲೂಯಿಸ್ ರವರ ಅವಿರತ ನಿಷ್ಟೆ ಮತ್ತು ಕಾರ್ಯನಿರ್ವಹಿಸುವಿಕೆಯೇ ಕಾರಣವೆಂದು ಗಲ್ಫ್ ಕನ್ನಡಿಗರ ಅನಿಸಿಕೆ ಹಾಗೂ ಅಭಿಮತ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-06-27 00:00:00
|
|
| Koni Prakash Naik, Kundapur - Oman | 2010-06-29 | | Congratulations to the organizers of GKF, especially Padmashri Dr. B. R. Shetty and Mr. Herman Lewis, for taking the initiative to form GKF. I attended the meeting from Oman and had an opportunity to address the gathering. I hope the concerns and difficulties expressed by me as regards children's higher education, passport related issues and lack of facilities at Bangalore Passport Office, and the property registration /curruption related issues will be taken up seriously by the authorities concerned. As mentioned in my address, I do hope the other associations in Gulf countries will spread awarness about Karnataka's history, art & culture and language to the younger generation. I was glad to note that UAE Kannada Koota will be starting Kannada classes for young children soon.
My best wishes to each and every one who have been instrumental in the formation of GKF and who have shown interest in pursing the desired goals for the welfare of Kannada community residing in various gulf countries. |
| Santosh Kevin Nazareth, Dubai / Mangalore | 2010-06-28 | | This kick-off meeting is not just a call to action for all Karnataka-affiliated associations in the Gulf but a call to action for each one us, as Kannadigas and as Indian citizens to not just talk the talk, but walk the walk.
The GKF represents a golden step in building our civic and political participation in Karnataka. By building bridges between NRI Kannadigas here and the government authorities there, the GKF will also promote the development of strong, fruitful relationships between our various associations, where the goal is to work for the betterment of all NRI Kannadigas, casting aside any personal agendas, egos and power play.
I believe it is also important to include young people / ladies or a youth / lady representative in the GKF as this would allow for diversity of views and also build the leadership of our youth.
There will be teething troubles as the GKF takes form but I have no doubt that its leadership will set up the executive and governing bodies in an efficient and transparent fashion and our unstinted support and constructive criticism will see us through to a smooth start. |
|