ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ

ನೋವನ್ನು ನೀಡಿ ಅಳುತರಿಸುವವರ ನಡುವೆ, ತಮ್ಮ ನೋವುಗಳನ್ನು, ಸಮಸ್ಯೆಗಳನ್ನು ಮೂಟೆ ಕಟ್ಟಿ ಬದಿಯಲ್ಲಿರಿಸಿ, ಮೂರು ತಾಸುಗಳ ತನಕ ಒಂದೇ ಸಮನೆ ಜನರ ಕಣ್ಣಲ್ಲಿ ನೀರು ಬರೋ ತನಕ ಅಯ್ಯಯಮ್ಮ... ಸಾಕಪ್ಪ ಸಾಕು... ಎನ್ನುವವರೆಗೂ ಬಿಡದೇ ನಗುತರಿಸುವ, ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ, ಶ್ರೇಷ್ಟ ನಟನೆಯ, ಕುಂದಾಪುರ ಕನ್ನಡದ ಲೇಪವಿರುವ, ಅತ್ಯಂತ ಸುಂದರ ನಾಟಕವೇ "ಮೂರು ಮುತ್ತು".

ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು ಹಾಕುತ್ತಿರುವ ಈ ನಾಟಕ, ಈಗಾಗಲೇ ಪ್ರದರ್ಶನಗೊಂಡಿರುವ ಎಲ್ಲಾ ಪ್ರದೇಶ ಗಳಲ್ಲಿಯೂ, ಅಪಾರ ಜನ್ನಮನ್ನಣೆಯನ್ನು ಪಡೆದಿರುವ, ಅತ್ಯಂತ ಲೋಕಪ್ರಿಯ ನಾಟಕ.

"ಮೂರು ಮುತ್ತು" ಖಂಡಿತವಾಗಿಯೂ ಎವರ್‍‍ಗ್ರೀನ್ ಸೂಪರ್ ಹಿಟ್ ನಾಟಕ. ದೇಶದೆಲ್ಲೆಡೆ ಪ್ರಯೋಗ ಕಂಡ ಈ ನಾಟಕ ತನ್ನ ನವಿರಾದ ಹಾಸ್ಯ, ಸೊಗಸಾದ ಹಾಡು-ಸಂಗೀತ, ಮನ ಮೋಹಕವಾದ ಕ್ಯಾಸ್ಟೂಮ್ಸ್ ಜೊತೆಗೆ ಹೃದಯಕ್ಕೆ ಲಗ್ಗೆಯಿಡುವ ಕಚಗುಳಿಯ ಸಂಭಾಷಣೆ, ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಹ ಅಭಿನಯದ ಪೈಪೋಟಿಯ ಮಿಶ್ರಿತ ರಸಪಾಕದ ಪಂಚಾಮೃತದೊಂದಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿ| ಕೆ. ಬಾಲಕೃಷ್ಣ ಪೈ (ಕುಳ್ಳಪ್ಪು) ಈ ನಾಟಕದ ನಿರ್ಮಾಪಕರು. ಕನ್ನಡ ರಂಗಭೂಮಿ ಅವನತಿ ಅಂಚಿನಲ್ಲಿರುವ ಸಂದರ್ಭದಲ್ಲಿ ದಿ| ಬಾಲಕೃಷ್ಣ ಪೈ ತನ್ನ ಜಾಣ್ಮೆಯಿಂದ, ಸಾಮಾಜಿಕ ನಾಟಕಕ್ಕೆ, ಹಾಸ್ಯದ ಪ್ರಾಧಾನ್ಯತೆ ಕೊಟ್ಟು ರಚಿಸಿದ "ಮೂರು ಮುತ್ತು" ನಾಟಕದಿಂದ ಪುನಃ ಪ್ರೇಕ್ಷಕರು ರಂಗಭೂಮಿಯತ್ತ ಒಲವು ತೋರಿ ಸಿದರು.

ಅವರು ಸಾಕಿ ಬೆಳೆಸಿದ ನಾಟಕ ಕಂಪನಿ, ರೂಪಕಲಾ ನಾಟಕ ಮಂಡಳಿ. ಇಂದು ನಶಿಸಿ ಹೋಗು ತ್ತಿರುವ ನಾಟಕ ಕಂಪೆನಿಗಳಿಗೆ ಸವಾಲಾಗಿ ಬೆಳೆಯುತ್ತಿದೆ ಕುಂದಾಪುರದ ರೂಪಕಲಾ ನಾಟಕ ಮಂಡಳಿ. ಟಿ.ವಿ. ಸಿನೇಮಾ ಮಾದ್ಯಮದ ಪ್ರಭಾವದಿಂದ, ನಾಟಕದಿಂದ ಬಹು ದೂರವೇ ಉಳಿದಿ ದ್ದ ಜನರು, ಈಗ ಅದೇ ಜನ ಕುಳ್ಳಪ್ಪರವರ ಅಥವಾ ರೂಪಕಲಾ ನಾಟಕ ಮಂಡಳಿಯ ನಾಟಕ ಎಂದಾಕ್ಷಣ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ, ನಾಟಕದ ಆನಂದವನ್ನು ಸವಿಯುತ್ತಾರೆ.

ರೂಪಕಲಾತಂಡದ ಅದ್ಭುತ ಕೊಡುಗೆ "ಮೂರು ಮುತ್ತು" ನಾಟಕ ಮಾತ್ರವಲ್ಲ, ಅವುಗಳ ಪಾತ್ರ ಧಾರಿ ಅಶೋಕ್ ಶ್ಯಾನ್‍ಭಾಗ್, ಸತೀಶ್ ಪೈ, ಸಂತೋಷ್ ಪೈ ಕೂಡ. ರೂಪಕಲಾತಂಡದಿಂದ 'ಅವನಲ್ಲ ಇವನು', 'ನಗುವುದೋ ಅಳುವುದೋ', 'ರಾಮ ಲಕ್ಷ್ಮಣ', 'ಸುಸೈಡ್ ಸುಂದರ', 'ದತ್ತು ಪುತ್ರ', 'ಪಾಪ ಪಾಂಡು' ಮುಂತಾದ ನಾಟಕಗಳು ಪ್ರಯೋಗಕಂಡಿದೆ. ಆದರೆ, ಹೆಚ್ಚಿನ ಯಶಸ್ಸು - ಪ್ರತಿಷ್ಠೆ ತಂದು ಕೊಟ್ಟ ನಾಟಕ "ಮೂರು ಮುತ್ತು".

ಈ ಯಶಸ್ಸು, ಜನರ ಪ್ರೀತಿ ಮುಂದಿನ ನಾಟಕಗಳ ಅಭೂತಪೂರ್ವ ಯಶಸ್ಸಿಗೂ ನಾಂದಿಯಾ ಯಿತು. ಜನರು ಈ ಅದ್ಭುತ ಪ್ರತಿಭೆಗಳನ್ನು ರಾತ್ರಿ ಬೆಳಗಾಗುವುದರ ಒಳಗೆ ಹೃದಯದ ಮೂಲೆ ಯಲ್ಲಿ ಪ್ರೀತಿಯಿಂದ ಬಚ್ಚಿಟ್ಟುಕೊಂಡು ಪ್ರೀತಿಯ ಮಳೆ ಸುರಿದರು. ಆ ಪ್ರೀತಿಯ ಮಳೆಗೆ "ಮೂರು ಮುತ್ತು" ಹೆಮ್ಮರವಾಗಿ ಬೆಳೆಯಿತು. ತೊಡೆತಟ್ಟಿ ಹಾಸ್ಯಕ್ಕೆ ನಿಂತು ಬಿಟ್ಟರೆ ಈ ದೈತ್ಯ ಪ್ರತಿಭೆ ಗಳನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ದಟ್ ಈಸ್ "ಮೂರು ಮುತ್ತು".

ಅಭಿನಯದಲ್ಲಿ ಹಾಸ್ಯರಸ ತುಂಬಾ ಕಷ್ಟ. ಅದಕ್ಕೆ ಪರಿಶ್ರಮದೊಂದಿಗೆ ಸಮಯಪ್ರಜ್ಞೆ ಬೇಕು. ಮೈಯೆಲ್ಲಾ ಹುಷಾರಿರಬೇಕು. ಒಂದು ಪಂಚಿಂಗ್ ಡೈಲಾಗ್ ಆ ಸಮಯದೊಳಗೇನೆ ಪಂಚ್ ಆಗದಿದ್ದಲ್ಲಿ ಹಾಸ್ಯಕ್ಕೆ ಬೆಲೇನೆ ಇರಲ್ಲ. ಆದರೆ ಈ ಬಗ್ಗೆ ಈ ಮೂರುರತ್ನಗಳ ಸಾಧನೆಗೆ ಹ್ಯಾ ಟ್ಸ್‍ಫ್ ಅನ್ನಲೇಬೇಕು. ಇಲ್ಲಿ ಅಶ್ಲೀಲತೆಯಿಲ್ಲ, ದ್ವಂದ್ವಾರ್ಥದ ಸಂಭಾಷಣೆಯಿಲ್ಲ, ರುಂಡವನ್ನೇ ಚೆಲ್ಲಾಡುವ ಕಠೋರತೆಯಿಲ್ಲ...

ಆದರೂ ಇಲ್ಲಿ ಗಂಟಲ ನಾಡಿ ಉಬ್ಬಿಸುವ ನಗೆ ಇದೆ. ಮೈಯ ರೋಮಗಳನ್ನು ಸೆಟೆದೆಬ್ಬಿಸುವ ಕುತೂಹಲವಿದೆ. ಜಾರಿ ಹೋಗಲಾರದ ಆಕರ್ಷಣೆಯಿದೆ. ಅದು ಹೇಗೆಂದು ಅಚ್ಚರಿಯೇ? ತಿಳಿಯ ಬೇಕಾದರೆ ಈ ನಾಟಕವನ್ನು ನೋಡಲೇಬೇಕು.

ರೂಪಕಲಾತಂಡದ ಪ್ರತೀ ನಾಟಕವನ್ನೂ ಕಲಾರಸಿಕರು ಒಂದಲ್ಲ... ನಾಲ್ಕಾರು ಬಾರಿ ನೋಡಿ ಆನಂದಿಸಿದ್ದಾರೆ. ಎಂತೆಂತಹ ಗಣ್ಯಾತೀತಾ ಮಹನೀಯರು ಇವರ ನಟನೆಗೆ ಮೆಚ್ಚಿ ಬೆನ್ನು ತಟ್ಟಿದ್ದಾರೆ. ಊರ - ಪರವೂರ - ಪರರಾಜ್ಯದ ಕನ್ನಡಿಗರು ಇವರ ಸಾಧನೆಗೆ ಮೆಚ್ಚಿ ಹರಿಸಿದ್ದಾರೆ. ದೇಶದಾದ್ಯಂತ 'ರೂಪಕಲಾ' ಬಳಗ ನಿರಂತರವಾಗಿ ಹಾಸ್ಯ ನಾಟಕವನ್ನು ಪ್ರದರ್ಶಿಸುತ್ತಾ ನಗೆಯ ಹೊನಲನ್ನು ಹರಿಸುತ್ತಿದ್ದಾರೆ.

'ನಮ್ಮನ್ನು ಪ್ರೀತಿಯಿಂದ ಬೆಳೆಸಿದ ಈ ಜನರ ನಗುವೇ ನಮ್ಮ ಶಕ್ತಿ. ಪ್ರೀತಿಯ ಜನರು, ಕಲಾರ ಸಿಕರು ಸದಾ ನಗುತ್ತಲೇ ನೆಮ್ಮದಿಯಾಗಿ ಬದುಕಲಿ. ಅವರ ಜೀವನದಲ್ಲಿ ನಗು ಸದಾ ತುಂಬಿರಲಿ' ಎನ್ನುವುದು ಈ ಮೂರುಮುತ್ತುಗಳ ಶುಭಹಾರೈಕೆ...

ಇಂತಹ ಅಪಾರ ಜನಮನ್ನಣೆಯ, ಅದ್ಭುತ ಯಶಸ್ಸಿನ ನಾಟಕ ಯುಎಇ - ದುಬಾಯಿ ನಲ್ಲಿ ಇದೇ ಜೂನ್ 25 ರಂದು ಪ್ರದರ್ಶಿತಗೊಳ್ಳುತ್ತಿದೆ. ಪ್ರಥಮವಾಗಿ ರೂಪಕಲಾ ತಂಡ ಗಲ್ಫ್ ನಾಡಿನ ಲ್ಲೊಂದು ಪ್ರದರ್ಶನ ನೀಡಲು ಬರುತ್ತಿದೆ. ದುಬಾಯಿಯ ಎಮಿರೇಟ್ಸ್ ಇಂಗ್ಲೀಷ್ ಸ್ಕೂಲ್‍ನ ಸಭಾಂಗಣದಲ್ಲಿ ಈ ನಾಟಕ ಶುಕ್ರವಾರ ಸಂಜೆ 4.30 ಕ್ಕೆ ಪ್ರದರ್ಶಿತಗೊಳ್ಳುತ್ತಿದೆ.

ಕುಂದಾಪುರದವರೇ ಆದ, ದುಬಾಯಿಯ ಹೆಸರಾಂತ ಹೊಟೇಲ್ ಉದ್ಯಮಿ, ಹಲವಾರು ಕನ್ನಡ - ಕೊಂಕಣಿ - ತುಳು ಕಾರ್‍ಯಕ್ರಮಗಳ ಪೋಷಕರಾದ ಶ್ರೀ ಪ್ರವೀಣ್ ಶೆಟ್ಟಿರವರ FORTUNE ಬಳಗ ಈ ನಾಟಕದ ಹೊಣೆಯನ್ನು ಹೊತ್ತಿದ್ದಾರೆ. ಕಲಾಭಿಮಾನಿಗಳ ಅನುಕೂಲಗಾಗಿ ಪ್ರವೇಶ ಉಚಿತವಾಗಿದೆ, ಆದರೂ ಮೊದಲು ಬಂದವರಿಗೆ ಪ್ರಥಮ ಪ್ರಾಶಸ್ತ್ಯವನ್ನು ನೀಡಲಾಗುವುದು ಎಂದು ಪ್ರಾಯೋಜಕರು ತಿಳಿಸಿದ್ದಾರೆ.

ಗಮನಿಸಿ: ನಗುವವರಿಗೆ ವಿಶೇಷ ಆಮಂತ್ರಣ, ನಗದವರಿಗೆ ನಗದು ಬಹುಮಾನ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ನವೀನ್ ಸಿಕ್ವೇರಾ (ವಿವಿಧ ಮೂಲಗಳಿಂದ)
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-06-06 00:00:00

Tell a Friend

ಪ್ರತಿಸ್ಪಂದನ
M.E.Moolur, UDUPI/DUBAI
2010-06-21
On behalf of all UAE Kannadigas I congratulate and express my heartfelt gratitude to Mr.Praveen Shetty of Fortune Group for venturing to Show the the Kannada Drama " Mooru Muthu ".

It is an exceptionally hilarious drama with unique Kundapura Kannada touch by the renowed dramatist and poet late Mr.Balakrishna Pai.

I am eagerly looking forward to enjoy this drama.-M.E.Moolur

Raveendra, Kota (dubai)
2010-06-18
WOW its really Good news for Kannadigas. really nice drama. i have seen many times when i was in back home. i use to see their all dramas. even i have their Mooru Muthu video CD with me now.
venugopal, california USA
2010-06-07
We have seen \'Mooru muthu\' nataka several times and enjoyed a lot. Whenever we have a party, get-together this is the first choice of our friends. Great comedy drama. Hats off to all the artists.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
»ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
»ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
»Centre for Continuing Education and Community Outreach of GMU awards certificates of Short term courses
»ಫೆ.10: ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಕ್ರೀಡೋತ್ಸವ
»ಗಲ್ಪ್ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಏಶ್ಯನ್ ಕ್ರೀಡಾ ಫೆಡರೇಶನ್ ನ ಸ್ಪೋಟ್ಸ್ ಮೆಡಿಸಿನ್ ಸಮ್ಮೇಳನಕ್ಕೆ ಆಹ್ಪಾನ
»ಅಬುದಾಬಿ: ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ’ಇಂಡಿಯಾ ಉತ್ಸವ-2012
»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri