ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ.... |
ಪ್ರಕಟಿಸಿದ ದಿನಾಂಕ : 2010-05-08
(232 ಚಿತ್ರಗಳಿವೆ)
( ಚಿತ್ರ: ಅಶೋಕ್ ಬೆಳ್ಮಣ್ )
ದುಬೈ; ಯು. ಎ. ಇ. ಬಂಟರ 36 ನೇ ವಾರ್ಷಿಕ ಸ್ನೇಹಮಿಲನ 2010, ಮೇ 7 ಶುಕ್ರವಾರ ಬೆಳಿಗ್ಗೆ 10.30ಕ್ಕೆ ದುಬಾಯಿ ಕ್ರೌನ್ ಪ್ಲಾಜಾ ಪಂಚತಾರ ಹೊಟೇಲ್ ಜುಮೆರಾ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಸಂಪ್ರದಾಯದ ಉಡುಗೆ ತೊಡುಗೆಗಳಿಂದ ಕಂಗೊಳಿಸುತ್ತಾ ಹರ್ಷಚಿತ್ತರಾಗಿ ಸಂಭ್ರಮದಿಂದ, ಬಂಧು ಬಳಗದವರೊಡನೆ ಬಂಟ ಬಾಂಧವರು ಸಮಾವೇಶಗೊಂಡಿದ್ದರು.






ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಯು.ಎ.ಇ. ಯಲ್ಲಿರುವ ಭಾರತೀಯ ರಾಯಬಾರಿ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್, ಭಾರತದಿಂದ ಆಗಮಿಸಿದ ಪದ್ಮಭೂಷಣ ಪುರಸ್ಕೃತ ಡಾ. ಬಿ. ಎಂ. ಹೆಗ್ಡೆ, ಯು.ಎ.ಇ. ಬಂಟ್ಸ್ ನ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ, ಡಾ. ಚಂದ್ರಕುಮಾರಿ ಬಿ.ಅರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸುಧಿರ್ ಶೆಟ್ಟಿಯವರು ಮತ್ತು ಹಲವಾರು ಗಣ್ಯರನ್ನು ಮುಖದ್ವಾರದಿಂದ ಸಭಾಂಗಣಕ್ಕೆ ಪಂಚವಾಧ್ಯದೊಂದಿಗೆ, ಕಳಸ ಹಿಡಿದ ಸುಮಂಗಲೆಯರು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.
ತುಳುನಾಡಿನ ಬಂಟರ ಸಂಪ್ರದಾಯದ ಮನೆಯ ಚಾವಡಿಯ ಕಂಬಗಳು, ತುಳುನಾಡಿನ ಸಂಸ್ಕೃತಿಯನ್ನು ಅನಾವರಣ ಗೊಳಿಸುವ ಬೃಹತ್ ಚಿತ್ರಪಟ, ಎಳನಿರುಬೊಂಡಗಳಿಂದ ಪುಷ್ಪ ಗಳಿಂದ ಅಲಂಕೃತವಾದ ಭವ್ಯ ವೇಧಿಕೆಯ ಮೇಲೆ ಮುಖ್ಯ ಅತಿಥಿಗಳೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಮಾನ್ಯ ಎಂ. ಕೆ. ಲೋಕೆಶ್, ಡಾ. ಬಿಎಂ. ಹೆಗ್ಡೆ, ಡಾ. ಬಿ ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಯು. ಎ. ಇ. ಬಂಟರ ಸ್ನೇಹಮಿಲನಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಶ್ರೀಮತಿ ಅಪರ್ಣಾ ಆಳ್ವ ರವರ ನೇತೃತ್ವದಲ್ಲಿ ತುಳು ಭಾಷೆಯಲ್ಲಿ ಸುಮಧುರ ಸ್ವಾಗತಗೀತೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು.


ಶ್ರೀಮತಿ ಮಂಜುಳಾ ಗಣೇಶ್ ರೈ ಮತ್ತು ಶ್ರೀಮತಿ ಅಮೃತಾ ವಿನಯಶೆಟ್ಟಿ ಯವರ ನೇತೃತ್ವದಲ್ಲಿ ಕು. ಐಶ್ವರ್ಯ ಗಣೇಶ್ ರೈ ಮತ್ತು ಅನುಷಾ ವಿನಯ ಶೆಟ್ಟಿ ಯವರು ಭಾರತದ ಶಾಸ್ತ್ರೀಯ ನೃತ್ಯಪ್ರಾಕಾರ ಭರತ ನಾಟ್ಯದ ಮೂಲಕ ವೇಧಿಕೆಯಲ್ಲಿ ಕಂಗೊಳಿಸುತಿದ್ದ ಮಹಾಗಣಪತಿ ವಿಗ್ರಹಕ್ಕೆ (ಬಿ. ಕೆ. ಗಣೇಶ್ ರೈಯವರಿಂದ ನಿರ್ಮಿಸಲ್ಪಟ್ಟಿದ್ದು) ಪುಷ್ಪಾರ್ಚನೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ ದಿನ ಪೂರ್ತಿ ನಡೆಯಲಿರುವ ವೈವಿಧ್ಯಮಯ ನೃತ್ಯಗಳಿಗೆ ಚಾಲನೆ ನೀಡಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಶಶಿಧರ ಶೆಟ್ಟಿಯವರು ಯು.ಎ.ಇ. ಬಂಟ್ಸ್ 36ನೇ ಸಮ್ಮಿಲನಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.




ತುಳು ಜಾನಪದ ನೃತ್ಯ, ಹಿಂದಿಗೀತಾ ನೃತ್ಯ, ಮಿಕ್ಸ್ ಮಸಾಲಾ, ಪ್ಯಾಶನ್ ಶೋ ಇತ್ಯಾದಿ ವರ್ಣರಂಜಿತ ವೈವಿಧ್ಯಮಯ ಸಮೂಹ ನೃತ್ಯಗಳು ದುಬಾಯಿ, ಅಬುಧಾಬಿ, ಶಾರ್ಜಾ, ರಸ್ ಅಲ್ ಕೈಮಾ, ಫ್ಯುಜೆರಾ, ಅಲ ಐನ್ ಕಡೆಗಳಿಂದ ಬಂದು ಕಾರ್ಯಕ್ರಮಗಳು ನೀಡಿ ಪ್ರೇಕ್ಷಕರ ಮನರಂಜಿಸಿದವು.
ಮುಖ್ಯ ಅತಿಥಿಗಳಿಗೆ ಸನ್ಮಾನ





ಮುಖ್ಯ ಅತಿಥಿ ಯು.ಎ.ಇ.ಯಲ್ಲಿ ಭಾರತೀಯ ರಾಯಭಾರಿಯಾಗಿರುವ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್ ರವರ ಪರಿಚಯ ವನ್ನು ಸುಧೀರ್ ಶೆಟ್ಟಿಯವರು ಮಾಡಿದರು ನಂತರ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಕ್ಕೆ ಉತ್ತರವಾಗಿ, ಕೃತಜ್ಞತೆಯನ್ನು ಸಲ್ಲಿಸಿ, ಬಂಟ ಬಂಟ ಸಮುದಾಯದ ಗಣ್ಯರು ಮಾಡಿರುವ ಸಾಧನೆ ಇತರರಿಗೆ ಮಾರ್ಗದರ್ಶವಾಗಿದ್ದು, ತುಳು ನಾಡಿನ ಘನತೆ ಗೌರವವನ್ನು ಎತ್ತಿ ಹಿಡಿದು ಉಳಿಸಿಕೊಂಡು ಇದೀಗ ವಿದೇಶದಲ್ಲಿಯೂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.







ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರಿಗೆ ಸನ್ಮಾನ
ಭಾರತದಿಂದ ಆಗಮಿಸಿದ್ದ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರ ಜೀವಿತಾವದಿಯ ವೈಧ್ಯಕೀಯ ರಂಗದ ಅವಿಸ್ಮರಣೀಯ ಸೇವೆಗಾಗಿ ಭಾರತ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದನ್ನು, ಅಭಿನಂದಿಸಿ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಮಹಾ ಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ.ಆರ್. ಶೆಟ್ಟಿಯವರು ಮತ್ತು ಮಾನ್ಯ ಎಂ. ಕೆ. ಲೋಕೇಶ್ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಫಲಪುಷ್ಪದೊಂದಿಗೆ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸರ್ವೋತ್ತಮ ಶೆಟ್ಟಿಯವರು ಶ್ರೀಯುತರ ಪೂರ್ಣ ಪರಿಚಯದೊಂದಿಗೆ ಸಾಧನೆಯ ಬಗ್ಗೆ ಗುಣಗಾನ ಮಾಡಿ ಸನ್ಮಾನ ಪ್ರಕ್ರೀಯಯನ್ನು ಸುಂದರವಾಗಿ ನಡೆಸಿಕೊಟ್ಟರು.
ಪ್ರೀತಿ ವಿಶ್ವಾಸ ಮಾತ್ರ ಮನುಷ್ಯನನ್ನು ಆರೋಗ್ಯವಂತನ್ನಾಗಿರಿಸುತ್ತದೆ - ಡಾ. ಬಿ. ಎಂ. ಹೆಗ್ಡೆ



ಸನ್ಮಾನಕ್ಕೆ ಉತ್ತರವಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಕೊಲ್ಲಿ ರಾಷ್ಟ್ರದಲ್ಲಿ ಬಂಟ ಭಾಂದವರು ಅತ್ಯುತ್ತಮ ರೀತಿಯಲ್ಲಿ ಸಂಪ್ರದಾಯವನ್ನು ಉಳಿಸಿಕೊಂಡು ಮುಂದುವರೆಸಿಕೊಂಡು ಮನ್ನಡೆಯುತ್ತಿವ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಎಲ್ಲಾ ಬಂದು ಮಿತ್ರರು ಸ್ನೇಹ, ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಕೂಡಿ ಬಾಳಿದರೆ, ಅರೋಗ್ಯವಂತರಾಗಿ ಬಾಳಿ ಬದುಕಬಹುದು ಎಂದು ಹೇಳಿ, ಯಾವ ಮನುಷ್ಯ ತನ್ನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಮತ್ಸರ, ಮೈಯಲ್ಲಿ ತುಂಬಿಕೊಂಡಿದ್ದರೆ, ಅದು ಬೇರೆಯವರಿಗೆ ತೊಂದರೆಯಾಗುವುದಿಲ್ಲ, ಸ್ವತಹ ತಾನೇ ಅನಾರೊಗ್ಯಕ್ಕೆ ತುತ್ತಾಗಿ ಅನುಭವಿಸುತ್ತಾನೆ. ಅದರ ಬದಲು ಎಲ್ಲರಲ್ಲಿಯೂ ಸ್ನೇಹ, ಉತ್ತಮ ಭಾಂದವ್ಯ ದಲ್ಲಿದ್ದರೆ, ಯಾವ ರೋಗಕ್ಕೆ ತುತ್ತಾಗುವುದಿಲ್ಲ. ಯಾವ ಔಷದಿಯೂ ಬೇಕಾಗುವುದಿಲ್ಲ ಎಂದು ಹೇಳಿ ಹಲವಾರು ಆರೋಗ್ಯ ಕಾಪಾಡುವ ರಹಸ್ಯವನ್ನು ತಿಳಿಸಿಕೊಟ್ಟರು.
ಯು. ಎ. ಇ. ಬಂಟ್ಸ್ ಪ್ರತಿಭಾ ಪುರಸ್ಕಾರ

ಬಂಟ್ಸ್ ಸಮುದಾಯದ ಪ್ರಥಮ್ ಮಹಿಳಾ ಪೈಲೆಟ್ ಎಂದು ಹೆಗ್ಗಳಿಕೆಗಳಿಸಿರುವ ಕು.ಅನೂಪ ಶೆಟ್ಟಿ ಯವರನ್ನು ಅವರ ಜನ್ಮದಾತೆಯ ಸಮ್ಮುಖದಲ್ಲಿ ಡಾ. ಬಿ. ಎಂ. ಹೆಗ್ಡೆಯವರು ಸನ್ಮಾನಿಸಿ ಗೌರವಿಸಿದರು






ಯು. ಎ. ಇ. ಬಂಟ್ಸ್ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರವನ್ನು ಈ ಬಾರಿಯೂ ಹತ್ತನೆ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಬಂಟ ಸಮುದಾಯದ ಮಕ್ಕಳಿಗೆ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಪಡೆದವರು, ಸುಶಿಕ್ಷಾ ಸುಧೀರ್ ಶೆಟ್ಟಿ, ಸುಶ್ಮಿಕಾ ಸುಧೀರ್ ಶೆಟ್ಟಿ, ರಿಯಾ ಪ್ರವೀಣ್ ಹೆಗ್ಡೆ, ನಿಕಿತಾ ಪ್ರವೀಣ್ ಹೆಗ್ಡೆ, ಐಶ್ವರ್ಯ ಅಶೋಕ್ ಶೆಟ್ಟಿ, ವರ್ಷಾ ಗಣೇಶ್ ಶೆಟ್ಟಿ, ಸಹಾನ್ಯ ರಮೇಶ್ ಶೆಟ್ಟಿ, ಸಿದ್ದಾಂತ್ ಸತೀಶ್ ಶೆಟ್ಟಿ, ದ್ವೀತಿಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೋನಿಶ್ ಗಣೇಶ್ ರೈ ಯ ಅನುಪಸ್ಥಿತಿಯಲ್ಲಿ ಮಾತಾಪಿತೃರಾದ ಮಂಜುಳಾ ಗಣೇಶ್ ರೈ ದಂಪತಿಗಳು ಸ್ವೀಕರಿಸಿದರು. ಡಾ. ಬಿ. ಎಂ. ಹೆಗ್ಡೆ ಯವರು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಭಾಗದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಮರ್ಥ ಸರ್ವೋತ್ತಮ ಶೆಟ್ಟಿ ನಿರ್ವಹಿಸಿದರು.












ಸಾಂಸ್ಕೃತಿಕ ವೈವಿಧ್ಯಮಯದಲ್ಲಿ ಕಿರಣ್ ಶೆಟ್ಟಿ ತಂಡದವರ ರಸಮಂಜರಿ, ವಿಶ್ವನಾಥ್ ಶೆಟ್ಟಿಯವರ ಜೊತೆಗೆ ಪುಟ್ಟ ಮಕ್ಕಳ ತಂಡದ ಹುಲಿವೇಷ ನೈಜ್ಯ ಬಣ್ಣದೊಂದಿಗೆ ರಂಜಿಸಿತ್ತು. ಸಂಪತ್ ಶೆಟ್ಟಿ ನಿರ್ದೇಶನದ ಕನ್ನಡ ಕಿರು ರೂಪಕ ’ಅಕ್ಷತೆ’ ವಿವಾಹ ಧಾರ್ಮೀಕ ಆಚರಣೆಯ ಬಗ್ಗೆ ಪೂರ್ಣ ಬೆಳಕು ಚೆಲ್ಲಿದರೆ, ತಾರನಾಥ್ ರೈ ತಂಡದವರ ಅಸ್ತಿಪಂಜರ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.
೨೦೧೧ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆ
ಯು. ಎ. ಇ. ಬಂಟ್ಸ್ ಪ್ರಾರಂಭ ವರ್ಷದಿಂದ ನಡೆಸಿಕೊಂಡು ಬರುತ್ತಿರುವ, ಪ್ರತಿವರ್ಷ ಕಾರ್ಯಕಾರಿ ಸಮಿತಿಯನ್ನು ರಚಿಸಿ ವರ್ಷದ ಪೂರ್ತಿ ಜವಬ್ದಾರಿಯನ್ನು ವಹಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ನೂತನ ಸಮಿತಿಯಲ್ಲಿ, ಶ್ರೀಯುತರುಗಳಾದ ಸಂತೋಷ್ ಶೆಟ್ಟಿ, ಜಯಶ್ರೀ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಡಾ. ಅನಿತಾ ಶೆಟ್ಟಿ, ಶಶಿಧರ್ ಶೆಟ್ಟಿ, ಅರ್ಚನಾ ಶೆಟ್ಟಿ, ಪ್ರೆಂಜಿತ್, ಸುಲಯಾ, ಯಶ್ ಶೆಟ್ಟಿ, ಕ್ಷಮತಾ ಶೆಟ್ಟಿ, ಸತೀಶ್ ಶೆಟ್ಟಿ, ರಮಾ ಶೆಟ್ಟಿ, ಸಂತೋಷ್ ಶೆಟ್ಟಿ, ನೂತನ್ ಶೆಟ್ಟಿ, ಶರತ್ ಶೆಟ್ಟಿ, ರೇಖಾ ಶೆಟ್ಟಿ ಮತ್ತು ಕಿರಣ್ ಶೆಟ್ಟಿ ದಂಪತಿಗಳು ಜವಬ್ಧಾರಿ ವಹಿಸಿಕೊಂಡರು.
ಯು. ಎ. ಇ. ಬಂಟರ ವೆಬ್ ಸೈಟ್ ಗೆ ಚಾಲನೆ:

ಯು. ಎ. ಇ. ಬಂಟರ ವೆಬ್ ಸೈಟ್ ಗೆ www.uaebunts.com ಗೆ ಮಹಾ ಪೋಷಕ ಡಾ.ಬಿ.ಆರ್ ಶೆಟ್ಟಿ ಮತ್ತು ಅತಿಥಿ ಡಾ. ಬಿ. ಎಂ. ಹೆಗ್ಡೆ ಚಾಲನೆ ನೀಡಿದರು.
ಅಭಿನಂದನೆ
ಕಾರ್ಯಕ್ರಮದ ಪ್ರಾಯೋಜಕರನ್ನು, ಮಾಧ್ಯಮ ಪ್ರತಿನಿಧಿಗಳಾದ ಗಲ್ಫ್ ಕನ್ನಡಿಗ, ದಾಯಿಜಿವಲ್ಡ್, ಮ್ಯಾಂಗ್ಳೂರಿಯನ್, ನಮ್ಮಟಿ.ವಿ. ಮತ್ತು ವೇದಿಕೆ ಅಲಂಕಾರ, ವರ್ಣಾಲಂಕಾರ, ನೃತ್ಯ ಸಂಯೋಜನೆಯಲ್ಲಿ ಸಹಕರಿಸಿದ ರಾಜೇಶ್ ಕುತ್ತಾರ್, ಧ್ವನಿ ಬೆಳಕಿನ ಜವಬ್ಧಾರಿಯನ್ನು ವಹಿಸಿದ ಪ್ರಸಾದ್ ರೈ, ಕಾರ್ಯಕ್ರಮದಲ್ಲಿ ಪೂರ್ಣ ಸಹಕಾರ ನೀಡಿದ ಕಿಶೋರ್ ಗಟ್ಟಿ, ಮತ್ತು ಇನ್ನಿತರರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.





ಬೆಳಗಿನಿಂದ ಸಂಜೆಯವರೆಗೆ ಸಹಸ್ರಸಂಖ್ಯೆಯಲ್ಲಿ ಆಗಮಿಸಿದ ಬಂಟಭಾಂದವರು ಮತ್ತು ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು, ಕೊನೆಯಲ್ಲಿ ಲಕ್ಕಿ ಡ್ರಾ, ವಂದಾನರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸರ್ವೋತ್ತಮ ಶೆಟ್ಟಿಯವರ ಮಾರ್ಗದರ್ಶನ, ನಾಯಕತ್ವ, ನಿರೂಪಣೆಯೊಂದಿಗೆ ಶಿಸ್ತುಬದ್ದ ಕಾರ್ಯಕ್ರಮಕ್ಕೆ ಯು. ಎ. ಬಂಟ್ಸ್ ೩೬ ನೇ ಸ್ನೇಹ ಮಿಲನ ಸಾಕ್ಷಿಯಾಯಿತು.



ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ, ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ಸರ್ವರ ಅಭಿನಂದನೆಗೆ ಪಾತ್ರರಾದರು.
36th UAE BUNTS GET-TOGETHER
PROGRAMME LIST
10.30 LIGHTING THE LAMP by HE M K Lokesh, Indian Ambassador
10.45 Welcome Song – By all the Co-Ordinators – Aparna Alva
10.50 Welcome Dance – Aishwarya G.Rai/Anusha VK Shetty Shj
10.55 Welcome Speech by Shashidhar Shetty - Organizer
11.00 Zoobie Doobie Dance – Sharina/Jayalaxmi Dubai
11.05 Kaisi hai yeh Rut & Heal the World – Pawan / Chaitra Adh
11.10 Tulu Folk Song, Naila Naila – Chetna / Nijesh Kumar, Dubai
11.15 Mix Masala – Zoobie Doobie – Symphony / Prathimakka Shj
11.20 Marathi Song – Group Dance – Jayashree Dubai
11.30 Dance – Old is gold – Laxmi Raviprasad Shetty Dubai
11.45 Discowale Khisko – Group Dance - By Pawan / Chaitra Adh
11.50 Folk Dance by Kiran / Rajesh Gatti – Dubai
11.55 Fusion – Classical & Western – Gagan /Swarna Dubai
12.05 Jiggy Wiggy & World Hold on by Pawan /Chaitra Abu dhabi
12.10 Aaja Nachle – Natasha / Latha Nagesh Shetty - Fujairah
12.15 Fashion Show – by Guru of UAE Xchange Centre
12.20 Felicitation to HE MKLokesh – Indian Ambassador – Chief Guest
12.30 Felicitation to Dr.B.M.Hegde – Padma Bhushana Awardee
12.40 Prathibha Puraskara / Felicitation to Anoopa Shetty (PILOT)
13.00 India-in Melodious Harmony – Santosh/Jayashree Dub
13.30 L U N C H
14.30 Orchestra by Kiran Shetty & Group Dubai
14.40 Kaleidoscope of Love – Dance – Pawan / Bharathi /Chaitra Adh
15.00 Pili Vesha – Vishwanath / Jyothica Dubai
15.25 Old & New remix – Aditi Prasanna Shetty / Lata Dubai
15.30 Naakamaka Tamil Song – Pramila/Deeksha Vivek Shetty Dub
15.40 Kannada Skit by Sampath Shetty & Team Dub
15.50 Hindi Song Dance by Dipti Shetty & Team Dubai
16.00 Kule – Skeleton Nruthya – by Tharanath Rai & Group Adh
16.10 Tribute to Aishwarya Rai – Chithra / Shradda Dubai
16.20 Prize Distribution / Raffle / Vote of thanks
| |
ವರದಿಯ ವಿವರಗಳು |
 |
ಕೃಪೆ : ಚಿತ್ರ: ಅಶೋಕ್ ಬೆಳ್ಮಣ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-05-08 00:00:00
|
|
| ಬಿ. ಕೆ. ಗಣೇಶ್ ರೈ, ಕೊಡಗು, ಶಾರ್ಜಾ | 2010-05-12 | | ನಮ್ಮ ಜನ್ಮಭೂಮಿಯನ್ನು ತೊರೆದು ವೃತ್ತಿಯನ್ನರಸಿ ಹೊರದೇಶಕ್ಕೆ ಬಂದಾಗ ನಮ್ಮ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರಗಳು ನಮ್ಮ ಜೊತೆಯಲ್ಲೆ ಇರುತ್ತದೆ. ಅದನ್ನು ನಮ್ಮ ನಮ್ಮ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡರೆ ಅದು ನಮ್ಮ ಹೆಗ್ಗಳಿಕೆಯಾಗುತ್ತದೆ. ಪ್ರತಿಸ್ಪಂದನದಲ್ಲಿ ಮಿತ್ರರ ಪ್ರತಿಕ್ರಿಯೇಯನ್ನು ವೀಕ್ಷಿಸಿದಾಗ ಅತೀವ ಅನಂದವಾಗುತ್ತಿದೆ. ನಮ್ಮ ನೆರೆಯ ರಾಜ್ಯದ ತಮಿಳರು, ಮಲಯಾಳಿ ಭಾಷಿಗರು ಅವರ ಸಂಪ್ರದಾಯದಲ್ಲಿಯೇ ಕಾರ್ಯಕ್ರಮಗಳನ್ನು ಅಭಿಮಾನದಿಂದಲೆ ನಡೆಸುತ್ತಾರೆ. ಯು.ಎ.ಇ. ಬಂಟರ ಸಮ್ಮಿಲನದಲ್ಲಿ ನಾವು ಹಲವಾರು ವರ್ಷಗಳಿಂದ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆ, ತುಳು ಭಾಷೆಯಲ್ಲೆ ಕಾರ್ಯಕ್ರಮ, ತುಳುನಾಡಿನ ಆಚಾರ, ಸಂಪ್ರದಾಯಗಳ ಪ್ರತಿಬಿಂಬವನ್ನು ಕೊಲ್ಲಿ ರಾಷ್ಟ್ರದ ಈ ನಾಡಿನಲ್ಲಿ ವೈಭವೀಕರಿಸಿಕೊಂಡು ಮುನ್ನಡೆಸುತಿದ್ದೇವೆ. ಈ ವರ್ಷದ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಅರ್. ಶೆಟ್ಟಿಯವರ ಆದರ್ಶ, ಸರ್ವೋತ್ತಮ ಶೆಟ್ಟಿಯವರ ಸಂಘಟನಾ ಚತುರತೆ, ಕಾರ್ಯಕಾರಿ ಸಮಿತಿಯ ಕಾರ್ಯಯೋಜನೆಯ ಅವಿರತ ಶ್ರಮವಿದೆ. ಕಾರ್ಯಕ್ರಮಕ್ಕೆ ಶುಭವನ್ನಾರೈಸಿದ ಪ್ರಾಯೋಜಕರು, ತಮ್ಮ ಕ್ಯಾಮೇರಾ ಕಣ್ಣಿನಿಂದ ಸೆರೆಹಿಡಿದ ಅಶೋಕ್ ಬೆಳ್ಮಣ್, ಸುದ್ದಿಯನ್ನು ವಿಶ್ವವ್ಯಾಪಿಗೊಳಿಸಿದ ಆತ್ಮೀಯ ಮಿತ್ರರಾದ ಬಿ. ಜಿ. ಮೋಹನ್ ದಾಸ್ ಮತ್ತು ಗಲ್ಫ್ ಕನ್ನಡಿಗ ತಂಡಕ್ಕೆ ಧನ್ಯವಾದಗಳು. |
| ಸರ್ವೋತ್ತಮ ಶೆಟ್ಟಿ, ಅಬುಧಾಬಿ | 2010-05-12 | | ಭಾಷೆಯ ಬಗ್ಯೆ ಇರುವ ನಿಮ್ಮೆಲ್ಲರ ಅಭಿಮಾನಕ್ಕೆ ಸ್ವಾಗತ. ಭಾಷೆ ನಿಂತ ನೀರಾಗಬಾರದು. ಭಾಷೆ ನಮ್ಮ ಸಂಸ್ಕ್ರತಿಯ ಜೀವಂತಿಕೆಯ ಲಕ್ಷಣ. ನಮ್ಮೆಲ್ಲರ ಕಾರ್ಯಕ್ರಮಗಳು ಕನ್ನಡ, ತುಳು, ಬ್ಯಾರಿ, ಕೊಂಕಣಿ ಇತ್ಯಾದಿ ನಮ್ಮ ಭಾಷೆಗಳಲ್ಲೇ ನಡೆಯಬೇಕು. ನಿರರ್ಗಳ ಭಾಷೆ ಮಾತನಾಡುವವರಿಗೇನೆ ಮತಾಡುವ ಅವಕಾಶ ಕಲ್ಪಿಸಿ ಕೊಡಬೇಕು. ಆದಷ್ಟು ನಮ್ಮ ಯುವ ಜನಾಂಗವನ್ನು ಇದಕ್ಕೆ ಬಳಸಿಕೊಳ್ಳಬೇಕು. ಆದಷ್ಟು ಮಟ್ಟಿಗೆ ನಮ್ಮ ಕಾರ್ಯಕ್ರಮಗಳಲ್ಲಿ ನಮ್ಮ ಉಡುಗೆ ತೊಡುಗೆಗಳನ್ನು ನಾವು ಧರಿಸಿ
ಕೊಂಡಿದ್ದರೆ ಅದು ಮತ್ತಷ್ಟು ನಮ್ಮ ಕಾರ್ಯಕ್ರಮಗಳಿಗೆ ಮೆರುಗುಕೊಡುತ್ತದೆ. ಇದಕ್ಕೆ ನಾವೆಲ್ಲಾ ಒಟ್ಟಿಗೆ ಪ್ರಯತ್ನಿಸೋಣವೇ ? |
| ರೋಶನ್, ಮಂಗಳೂರು ದುಬಾಯಿ | 2010-05-11 | | ಮಹ್ಮದ್ ಮಂಗಳೂರು ತಮ್ಮ ಪ್ರತಿಕ್ರಿಯೇ ಮೆಚ್ಚಿದ್ದೇವೆ. ತಾವು ತಿಳಿಸಿದಂತೆ ಬರೇ ಬಿ.ಸಿ.ಎಫ್. ಗೆ ಮಾತ್ರ ಅನ್ವಯವಾಗುವುದಿಲ್ಲ. ಇದು ಕರ್ನಾಟಕದ ಎಲ್ಲಾ ಸಮುದಾಯದವರಿಗೆ ಅನ್ವಯಿಸುತ್ತದೆ. ಅವರವರ ಮಾತೃ ಭಾಷೆ ಗೊತ್ತಿಲ್ಲದೆ ಇರುವ ಅಜ್ಞಾನಿಗಳು ಬೇಕಾದಷ್ಟು ಇದ್ದಾರೆ. ತಾವು ತಿಳಿಸಿದಂತೆ ಡಾ. ಬಿ. ಆರ್. ಶೆಟ್ಟಿಯವರು ಧರಿಸಿದ ಉಡುಪು, ಮಾತನಾಡಿದ ತುಳುಭಾಷೆಯ ಮಹತ್ವ ಅಲ್ಲಿದ್ದ ಎಷ್ಟು ಜನರಿಗೆ ತಿಳಿದಿದೆ. ಎಷ್ಟು ಮಕ್ಕಳಿಗೆ ಅವರ ಮಾತು ಅರ್ಥವಾಗಿದೆ. ಟುಸ್ಸ ಪುಸ್ಸ ಇಂಗ್ಲಿಷ್ ಮಾತ್ರ ಮಾತನಾಡಲಿಕ್ಕೆ ಗೊತ್ತು ಮಾತ್ರವಲ್ಲದೆ, ಬೇರೆ ಯಾವ ಜ್ಞಾನ ಸಂಪತ್ತು ಇಲ್ಲದೆ ಕಣ್ ಕಣ್ ಬಿಡುವ ಮಕ್ಕಳಿಗೆ ಅವರವರ ತಂದೆ ತಾಯಿಗಳು ಹೇಳಿ ಕೊಡಲು ಅವರಿಗೆ ಗೊತ್ತಿದ್ದರೆ ತಾನೇ ಅವರು ಮಕ್ಕಳಿಗೆ ಹೇಳಿಕೊಡುವುದು. ತಿಳುವಳಿಕೆ, ಅಭಿಮಾನ ಇರುವವರು ಎಲ್ಲೆ ಇರಲಿ ಯಾವ ರೀತಿಯಲ್ಲೇ ಇರಲಿ ಎಂದೆಂದಿಗೂ ಅವರು ಮಾತೃ ಭಾಷೆ, ಸಂಪ್ರದಾಯವನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮ ನಡೆದ ಚಿತ್ರ, ವರದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಯಾರ ಮಕ್ಕಳಿಗೆ ಮಾತೃ ಭಾಷೆ, ತಾಯಿನಾಡಿನ ಬಗ್ಗೆ ತಿಳುವಳಿಕೆ, ಸಂಪ್ರದಾಯ ಆಚಾರ, ಗೌರವ, ಅಭಿಮಾನ, ಪ್ರೀತಿ ಇಲ್ಲ, ಅವರು ಖಂಡಿತವಾಗಿಯೂ ಡಾ. ಬಿ. ಆರ್. ಶೆಟ್ಟಿಯವರ ಮಟ್ಟಕ್ಕೆ ಬರಲು ಸಾದ್ಯವೇ ಇಲ್ಲ. |
| JAYANAND, MANGALORE/DUBAI | 2010-05-10 | | Thanks to all supporters to making grand success this event, special thanks to Rajesh kuthar,Ganesh Rai,Jyothika,Vishwanth shetty,Sampath shety, Ashok Belman (for Excellent Photographs),Prasad Rai(sound system)and also Thanks Sarvothamanna's hard work, good leadership and guidance |
| sunandasainathshetty, Mumbai | 2010-05-10 | | Dear Sarvottamanna congratulations very good effort Grand Success |
| ಡಾ| ನಾ.ಸೋಮೇಶ್ವರ, ಬೆಂಗಳೂರು | 2010-05-10 | | ಬಂಟರ ವಾರ್ಷಿಕ ಮಿಲನ-೨೦೧೦ ಅದ್ಭುತವಾಗಿ ನಡೆಯಿತು ಎಂಬುದನ್ನು ಇಲ್ಲಿರುವ ಚಿತ್ರಗಳಿಂದ ಊಹಿಸಬಹುದು. ಇಂತಹ ಸೊಗಸಾದ ಕಾರ್ಯಕ್ರಮವನ್ನು ನಡೆಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಗುರುಗಳಾದ ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆಯವರನ್ನು ಕರೆಸಿ ಸನ್ಮಾನಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಯನ್ನು ತಂದುಕೊಟ್ಟಿದೆ. ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯನ್ನು ಮಾಡಿದ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ, ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ವಿಶೇಷ ಅಭಿನಂದನೆಗೆ ಪಾತ್ರರಾಗಿರುವರು. |
| mohammad, mangalore | 2010-05-10 | | ಬಿ.ಸಿ.ಎಫ್ ನ .ಬ್ಯಾರಿಗಳೆ ಈ ಬಂಟ ಸಹೋದರರನ್ನು ನೋಡಿ ಕಲಿಯಿರಿ,ಬಿ ಆರ್.ಶೆಟ್ಟಿಯಂತವರೇ ಸಾಂಸ್ಕ್ರಿತಿಕ ಉಡುಪಿನಲ್ಲಿ,ತುಳುವಿನಲ್ಲೇ ಮಾತನಾಡುವಾಗ
ನಿಮ್ಮ ಸೂಟು,ಬೂಟು,ಠುಸ್ ಪುಸ್ ಇಂಗ್ಲಿಷ್ ನ್ನು ಬಿಟ್ಟು ಮುಂದಿನ ಬ್ಯಾರಿ ಸಮ್ಮೇಳನದಲ್ಲಿ ಅಪ್ಪಟ ಬ್ಯಾರಿಗಳಾಗಿ. ಈ ಮೂಲಕ ಬ್ಯಾರಿ ಸಂಸ್ಕ್ರ್ ತಿಯನ್ನು ಉಳಿಸಿ |
| sainath shetty, mumbai | 2010-05-09 | | EXCELLENT |
| Harini R. Shetty, Kinnigoli / Abudhabi | 2010-05-09 | | 36th Annual Bunts Get Together function was a grand one well organised by young organisers... i would like to thank all of them for their effort and patience they had while organising this function.The groups of Dubai, Abudhabi and Sharjah performed very nicely with lots of energy and interest.. enjoyed a lot, i felt as if im in Mangalore, my native place.
Dr. Shetty couples were the gems of this programme. Their presence throughout this programme made us happy...
Sarvothamanna, Such a nice MC and looked after all over activities of members carefully. Thanks a lot anna...
My best friend Thokoorugutthu Sampath J. Shetty, u proved your ability and skill. keep it up... u r a shining star among bunts community, u have a bright future..
Feel proud to b an Indian, a Bunt....
Thanks..... |
| Nishith shetty, Sujeer-Thumbe | 2010-05-09 | | Hats off to the organisers.
we all had come to UAE recently from Bangalore thinking twice ... but after seeing lot of Kannadigas settled and doing well in UAE i feel proud of this Organisation.
Personally the speech of Dr BM Hegde was worth listening.
Hats off to all the organisers for providing an complete one day Entertainment package. |
| Sarvotham Shetty, Abu Dhabi - UAE | 2010-05-09 | | Congratulations to all the Organisers for making this 36th Annual Bunts Get-Together a grand success. Sincere thanks to all the participants, co-ordinators and Choreographers without whom it would not have been possible. The presence of Ambassador HE MK Lokesh, Padmabhushana Awardee Dr.B.M.Hegde, our Patron Dr.B.R.Shetty & Dr.Chandrakumari BR Shetty gave the right encourragement for all the participants as well as the organisers. On be half of UAE BUNTS my special thanks to Gulfkannadiga.com specially my dear friend BG Mohandas, Ganesh Rai & Ashok Belman for their exclusive coverage. Hope the quality of the programme keeps increasing as the years go by... |
| Latha Suresh Hegde, Dubai | 2010-05-08 | | Congratulations Sarvothamanna. Grand Sucess. Total entertainment and well packaged programme. Should appreciate & encourage people who work hard, sacrifice their family time & voluntarily serve to give good time to others. The highlight, the most attractive one was Padma Bushana Award winner Dr.B.M.Hegde, known to most as the people’s doctor’s wonderful speech, it was so inspiring. Still I remember Dr.A.P.J Abdul Kalam’s beautiful lines written to Dr.B.M.Hegde. – “your efforts to relieve pain everywhere would succeed with God’s grace.” I have really enjoyed a lot and learned a lot listening to your lectures. Your true service, giving people hope and helping people without expecting anything in return……amazing. Excellent Photographs of Ashok Belman/Gulf Kannadiga, keep up the good work. Sampath Shetty, your concept was really good, keep entertaining us, wish you all the best in the future. |
|