ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ |
ಪ್ರಕಟಿಸಿದ ದಿನಾಂಕ : 2010-04-22
ಕನ್ನಡ ತಾಯಿ ಭುವನೇಶ್ವರಿಯ ಆರಾಧನೆಯ ಕೊನೆಯ ಕ್ಷಣದ ತಯಾರಿಗಳು ಭರದಿಂದ ಸಾಗುತ್ತಿವೆ. ಬರಲಿರುವ ಗಣ್ಯ ವ್ಯಕ್ತಿಗಳ ಸ್ವಾಗತದ ಸಿದ್ಧತೆ, ಕೊನೆಯ ಕ್ಷಣಗಳ ಅಯೋಮಯ.. ಇನ್ನೇನು ಸಮ್ಮೇಳನದ ಅಂಕದ ಪರದೆ ಸರಿಯಲಿದೆ ಮೊತ್ತ ಮೊದಲ ಬಾರಿಗೆ ಸಾಹಿತ್ಯಾರಾಧನೆ ಮಧ್ಯಪ್ರಾಚ್ಯದ ಕರ್ಮಭೂಮಿಯಾದ ದುಬಾಯಿಯಲ್ಲಿ ಆರಂಭವಾಗಲಿದೆ.
೨೩-೦೪-೨೦೧೦ ರಂದು ದುಬಾಯಿ ಜೆಮ್ಸ್ ಸ್ಕೂಲಿನ ಸಭಾಂಗಣದಲ್ಲಿ ಪ್ರಾತಃಕಾಲ ೮.೩೦ಯಿಂದ ಸಾಯಂಕಾಲ ೭.೩೦ಯವರೆಗೆ ಜರಗಲಿರುವ ಈ ಉತ್ಸವಕ್ಕೆ ತಾಯ್ನಾಡಿನಿಂದ ಆಗಮಿಸಲಿರುವ ಅತಿಥಿಗಳಲ್ಲಿ ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಗಣೆಶ್ ಕಾರ್ಣಿಕ್ ಅಲ್ಲದೆ "ಮುಂಗಾರು ಮಳೆ" ಖ್ಯಾತಿಯ ಜಯಂತ್ ಕಾಯ್ಕಿಣಿ, ಕನ್ನಡ ಚಲನಚಿತ್ರದ ಅತ್ಯಂತ ಪ್ರತಿಭಾವಂತ ತಾರೆಯಾದ "ತಾರಾ", ವಿಜಯಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್, ಪ್ರಸಿದ್ಧ ಗಾಯಕ ಶಶಿಧರ್ ಕೋಟೆ, ಮನು ಬಳಿಗಾರ್ ಹೀಗೆ ಅನೇಕ ಗಣ್ಯವ್ಯಕ್ತಿಗಳ ಗಡಣವನ್ನು ಸ್ವಾಗತಿಸಲು ಭರದ ಸಿದ್ಧತೆಗಳು ನಡೆದಿವೆ.

{ ಜಯಂತ ಕಾಯ್ಕಿಣಿ, ತಾರಾ, ಶಶಿಧರ್ ಕೋಟೆ ಮತ್ತು ವಿಶ್ವೇಶ್ವರ ಭಟ್ }
ಹಿರಿಯಕವಿ, ಡಾ.ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ನಮ್ಮವರೇ ಆದ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಮನೋರಂಜನೆಗಾಗಿ ಸಾಹಿತ್ಯ ಗೋಷ್ಟಿಗಳ ನಡುನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುವಂತ ಮಧ್ಯಪ್ರಾಚ್ಯದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಧ್ವನಿ ಪ್ರತಿಷ್ಟಾನದ ಬೆಳ್ಳಿ ಹಬ್ಬದ ಆಚರಣೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತಾಗಲಿ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-22 00:00:00
|
|
| pradeep bellave, bengaluru | 2010-04-22 | | ಬಹಳ ಒಳ್ಳೆಯ ಸುದ್ದಿ. ಕನ್ನಡ ಕಂಪು ಎಲ್ಲೆಲ್ಲೂ ಹರಡಲಿ! |
|