ಭಟ್ಕಳ: ಸರಕಾರದ ನಿರ್ಲಕ್ಷ್ಯದಿ೦ದ ನೆನೆಗುದಿಗೆ ಬಿದ್ದ ತೆಂಗನಗುಂಡಿ ಮೀನುಗಾರಿಗಾ ಬಂದರು ದುರಸ್ತಿಗೆ ಆಗ್ರಹ |
ಪ್ರಕಟಿಸಿದ ದಿನಾಂಕ : 2010-03-22
ಭಟ್ಕಳ, ಮಾ. ೨೧ : ಒಂದು ಕಾಲದಲ್ಲಿ ಅತಿ ಹೆಚ್ಚು ವಹಿವಾಟು ನಡೆಯುತ್ತಿದ್ದ ಇಲ್ಲಿನ ತೆಂಗನ ಗುಂಡಿ ಬಂದರು ಇಂದು ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆ ತಲುಪಿದೆ. ಕೋಟ್ಯಂ ತರ ರುಪಾಯಿ ಆದಾಯದ ಮೀನುಗಾರಿಕೆಯನ್ನು ಕಡೆಗಣಿಸಲಾಗುತ್ತಿದೆ ಎಂದು ತೆಂಗನಗುಂಡಿ ಮೀನುಗಾರರು ಆರೋಪಿಸಿದ್ದಾರೆ.
ತೆಂಗನಗುಂಡಿ ಮೀನುಗಾರಿಕಾ ಸಹಕಾರಿ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮೀನುಗಾರ ಮುಖಂಡರು ತಮ್ಮ ಸಮಸ್ಯೆಯನ್ನು ತೋಡಿಕೊಂಡರು.
ಮೀನುಗಾರರ ಮುಖಂಡ ಎಫ್.ಕೆ ಮೋಗೇರ ಮಾತನಾಡಿ, ತೆಂಗನಗುಂಡಿಯಲ್ಲಿ ವೆಂಕಟಾಪುರ ನದಿ ಸಮುದ್ರ ಸೇರುವ ಅಳಿವೆ ತುಂಬಾ ವಿಶಾಲವಾಗಿದ್ದು, ಈ ಬಂದರಿನಲ್ಲಿ ಯಾಂತ್ರಿಕ ಮೀನು ಗಾರಿಕೆ ಆರಂಭಗೊಂಡಾಗಿನಿಂದ ಮೀನುಗಾರಿಕೆ ನಡೆಯುತ್ತಿದೆ. ಅದಕ್ಕಿಂತ ಮುನ್ನ ಮೀನುಗಾ ರರು ಶಿರಸಿ, ಸಿದ್ದಾಪುರಗಳ ಅಡಕೆವಕೈರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಆದರೆ, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಮೀನುಗಾರಿಕಾ ಸಚಿವ ರಾಮಕೃಷ್ಣ ಹೆಗಡೆ ಮೀನುಗಾರರಿಗೆ ತೆಂಗನಗುಂಡಿ ಪ್ರದೇಶದಲ್ಲಿ ಬಂದರು ನಿರ್ಮಿಸಿ ಮೀನುಗಾರರಿಗೆ ಸ್ವತಂತ್ರ ಬದುಕು ಕಲ್ಪಿಸಿದ್ದರು ಎಂದು ಸ್ಮರಿಸಿದರು.
ನಂತರದ ದಿನದಲ್ಲಿ ಬೋಟುಗಳು ತಂಗಲು ಟಿ. ಜಟ್ಟಿ ನಿರ್ಮಾಣ ಮಾಡಲಾಯಿತು. ಆದರೆ, ಇತ್ತೀಚಿನ ದಶಕಗಳಲ್ಲಿ ಈ ಬಂದರು ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ, ಸಮುದ್ರ ಸೇರುವ ಅಳಿವೆ ಬಾಯಿಯಲ್ಲಿ ಹೂಳು ತುಂಬುವ ಸಮಸ್ಯೆಯಿಂದಾಗಿ ಈ ಬಂದರಲ್ಲಿ ಬೋಟುಗಳಿಗೆ ಪ್ರವೇಶಿಸಲು ಸಾಧ್ಯವಾಗದೇ ಅಕ್ಕ ಪಕ್ಕದ ತಾಲ್ಲೂಕುಗಳ ಬಂದರನ್ನು ಅವಲಂಬಿಸಬೇಕಾಗಿದೆ.
ಕೆಲವೇ ಬೋಟುಗಳು ಈಗ ಬಂದರಿನಲ್ಲಿ ನಿಲುಗಡೆಯಾಗುತ್ತಿದ್ದರೂ ಸಮುದ್ರದ ಎರಿಳಿತವನ್ನವ ಲಂಬಿಸಿ ಬೋಟುಗಳು ಒಳ ಪ್ರವೇಶಿಸಬೇಕಾಗಿದೆ. ಅಲ್ಲಿ ತುಂಬಿರುವ ಹೂಳಿನಿಂದಾಗಿ ಹಲವಾರು ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿವೆ. ಹಲವು ವರ್ಷಗಳಿಂದ ಈ ಭಾಗದ ಮೀನುಗಾರರು ಬ್ರೇಕ್ ವಾಟರ್ ಯೋಜನೆಗೆ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸು ತ್ತಿಲ್ಲ ಎಂದು ಅವರು ಆರೋಪಿಸಿದರು.
ಅಳ್ವಿಕೋಡಿಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣವಾಗುತ್ತಿದ್ದರೂ ಬ್ರೇಕ್ ವಾಟರ್ ಕಾಮಗಾರಿ ನಡೆಯದೇ ಬಂದರು ಉಪಯೋಗಕ್ಕೆ ಬಾರದು ಎಂದು ತಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದೇವಡಿಗ ಹೇಳಿದರು.
ತೆಂಗನಗುಂಡಿ ಬಂದರನ್ನು ಎಲ್ಲ ಜನಾಂಗದವರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ತೆಂಗನ ಗುಂಡಿ ಬಂದರಿನ ತಡೆಗೋಡೆ ಕುಸಿದಿರುವುದರಿಂದ ಮೀನುಗಾರರು ಬಹಳ ಕಷ್ಟ ಪಡುವಂತಾ ಗದೆ. ಈ ಎಲ್ಲ ಗಂಭೀರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಅವರಲ್ಲಿಗೆ ನಮ್ಮ ನಿಯೋಗ ಭೇಟಿ ಮಾಡಿ ಸಮಸ್ಯೆ ಪರಿಹರಿ ಸುವಂತೆ ಒತ್ತಾಯಿಸಲಾಗುವುದು ಎಂದರು.
ಗೋಷ್ಠಿಯ ಮುನ್ನ ಪ್ರತ್ಯಕ್ಷವಾಗಿ ತೋರಿಸಿ, ಬಂದರಿನ ತಡೆಗೋಡೆ ಸಂಪೂರ್ಣ ಕುಸಿದು ನೀರು ಪಾಲಾಗಿದೆ. ಇತ್ತೀಚೆಗೆ ದುರಸ್ತಿ ಕಂಡ ಹರಾಜು ಪ್ರಾಂಗಣ ಮತ್ತೆ ದುಸ್ಥಿತಿ ತಲುಪಿದೆ. ಈ ಮಳೆ ಗಾಲದ ಆರಂಭದಲ್ಲಿಯೇ ಉರುಳುವ ಲಕ್ಷಣ ಗೋಚರಿಸುತ್ತಿದೆ ಎಂದು ಮೀನುಗಾರ ಮುಖಂಡ ರು ತಿಳಿಸಿದರು.
ಹೆಬಳೆ ಗ್ರಾಪಂ ಅಧ್ಯಕ್ಷ ಪುಂಡಲಿಕ ಹೆಬಳೆ, ಕುಮಾರ ಹೆಬಳೆ ಮಾತನಾಡಿದರು.
ಗೋಷ್ಠಿಯಲ್ಲಿ ದುರ್ಗಪ್ಪ ಮೋಗೋರ, ಅನಂತ ಮೋಗೋರ, ನಾರಾಯಣ ಮೋಗೋರ, ಎಂ.ಇ. ಹೆಬಳೆ ಮುಂತಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22
|
|
|