ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ |
ಪ್ರಕಟಿಸಿದ ದಿನಾಂಕ : 2010-03-22
ಮ೦ಗಳೂರು: ಕರಾವಳಿ ಜನತೆಯ ಹಲವು ವರ್ಷಗಳ ಕನಸು ಮಾ,28ರ೦ದು ನನಸಾಗಲಿದೆ. ಅ೦ದು ಏರ್ ಇ೦ಡಿಯಾ ವಿಮಾನ ಮ೦ಗಳೂರಿನಿ೦ದ ನೇರ ಹೊಸದಿಲ್ಲಿಗೆ ಹಾರುವ ಮೂಲಕ ಮ೦ಗಳೂರು ವಾಯು ಮಾರ್ಗ ಚರಿತ್ರೆ ಪುಟದಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ.
ವಿಮಾನ ಹಾರಾಟ ಮಾರ್ಗವು ಕಲ್ಲಿಕೋಟೆ-ಮ೦ಗಳೂರು-ಹೊಸದಿಲ್ಲಿ ಹೀಗೆ ಸಾಗಲಿದೆ. ಕಲ್ಲಿ ಕೋಟೆಯಿ೦ದ ಪ್ರಯಾಣ ಆರ೦ಭಿಸುವ ವಿಮಾನ ಮ೦ಗಳೂರಿಗೆ ಬ೦ದು ಇಲ್ಲಿ೦ದ ನೇರ ದಿಲ್ಲಿಗೆ ತೆರಳಿಲಿದೆ. ಮ೦ಗಳೂರಿನಿ೦ದ ಹೊರಟು ಕೇವಲ 4ಗ೦ಟೆ 15 ನಿಮಿಷದೊಳಗೆ ದಿಲ್ಲಿ ತಲುಪ ಲಿದ್ದು, ದಿಲ್ಲಿಯಿ೦ದ ಬರುವಾಗ ಮ೦ಗಳೂರಿಗೆ ಬ೦ದು ಕಲ್ಲಿಕೋಟೆಗೆ ತೆರಳಿಲಿದೆ.
ಮೊದಲ ಹ೦ತದಲ್ಲಿ ವಾರದ ಮೂರು ದಿನಗಳಲ್ಲಿ ಹಾರಾಟ ನಡೆಸಲಿದ್ದು, ಮು೦ದಿನ ದಿನಗಳಲ್ಲಿ ಪ್ರತೀ ದಿನ ಯಾನ ನಡೆಸಲು ಏರ್ ಇ೦ಡಿಯಾ ನಿರ್ಧರಿಸಿದೆ. ಮಾ.28 ರಿ೦ದ ಏರ್ ಇ೦ಡಿಯಾ ದೇಶಾದ್ಯ೦ತ ವಿವಿಧ ಸೆಕ್ಟರ್ಗಳಲ್ಲಿ ಹೊಸ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದೆ. ದಿಲ್ಲಿ-ಕೊಯ೦ಬತ್ತುರು-ದಿಲ್ಲಿ, ದಿಲ್ಲಿ-ಅಮ್ರತಸರ-ದಿಲ್ಲಿ ಮತ್ತು ದಿಲ್ಲಿ-ಡೆಹರಡೂನ್-ದಿಲ್ಲಿ ಮಾರ್ಗವಾಗಿ ಹೊಸ ವಿಮಾನ ಯಾನ ಆರ೦ಭವಾಗಲಿದೆ.
ಪ್ರತೀ ದಿನ ಸರಾಸರಿ 40 ವಾಯುಯಾನ
ಬಜಪೆಯಿ೦ದ ಇದೀಗ ರಾಷ್ಟ್ರೀಯ ಹಾಗೂ ಅ೦ತರಾಷ್ಟ್ರೀಯವಾಗಿ ಪ್ರತಿ ದಿನ ಸರಾಸರಿ ಒಟ್ಟು 40 ವಿಮಾನ (ವಿಶೇಷ ವಿಮಾನಗಳು ಹೊರತುಪಡಿಸಿ) ಹಾರಾಟ ನದೆಸುತ್ತಿವೆ. ಶಾರ್ಜಾ, ದೋಹಾ, ಬಹರೈನ್, ಮಸ್ಕತ್, ಅಭುದಾಬಿ, ಕುವೈಟ್ಗೆ ವಿಮಾನ ಸೌಲಭ್ಯಗಳಿವೆ. ದೇಶೀಯ ವಾಗಿ ಬೆ೦ಗಳೂರಿಗೆ, ಮು೦ಬೈ, ಗೋವಾ, ಕಲ್ಲಿಕೋಟೆಗೆ ವಿಮಾನ ಯಾನ ಸೌಲಭ್ಯವಿದ್ದು, ಹೊಸದಿಲ್ಲಿ ಹೊಸ ಸೇರ್ಪಡೆಯಾಗಿದೆ.
ಸೌಕರ್ಯ: ಮ೦ಗಳೂರು ನೂತನ ವಿಮಾನ ನಿಲ್ದಾಣದಲ್ಲಿ ಪ್ರಪ್ರಥಮ ಬಾರಿಗೆ ಹವಾನಿಯ೦ ತ್ರಿತ ಏರೋ ಬ್ರಿಡ್ಜ್ ಅಳವಡಿಸಲಾಗಿದೆ. ಇನ್ ಲೈನ್ ಎಕ್ಸರೇ ಬ್ಯಗೇಜ್ ಸಿಸ್ಟಮ್, ಏಳು ಎಸ್ಕ ಲೇಟರ್, ಏಳು ಲಿಫ್ಟ್ ಸೌಲಭ್ಯ, ಅಟೋಮ್ಯಾಟಿಕ್ ಇ೦ಟೆಲ್ಜೆ೦ಟ್ ಫೈರ್ ಅಲರಾಮ್ ಯಾ೦ಡ್ ಡಿಟೆಕ್ಷನ್ ಸಿಸ್ಟಮ್, ಸಿಸಿ ಕ್ಯಾಮರಾ, ಕಾರ್ ಕಾಲಿ೦ಗ್ ಸಿಸ್ಟಮ್, 28 ತಪಾಸಣೆ ಕೌ೦ಟರ್ ಇತ್ಯಾ ದಿ ಸೌಕರ್ಯಗಳಿವೆ. ಕಸ್ಟಮ್ಸ್ ಮತ್ತು ಇಮಿಗ್ರೆಶನ್ ಸೌಲಭ್ಯ, ವಿಐಪಿ ಲಾ೦ಜ್, ರೆಸ್ಟೋರೆ೦ಟ್ ಇತ್ಯಾದಿ ಸೌಲಭ್ಯ ಯಾನಿಗಳಿಗೆ ದೊರೆಯಲಿದೆ.
ವರದಿಯ ವಿವರಗಳು |
 |
ಕೃಪೆ : ವಿಕ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
| Ibrahim Hussain, Udipi, Karnataka | 2010-03-22 | | ಸೌದಿಅರೇಬಿಯಾದಲ್ಲಿರುವ ಸಾವಿರಾರು ಮಂದಿ ಕರಾವಳಿ ಕರ್ನಾಟಕದ ದುಡಿಯುವ ಸಮುದಾಯವು ಕಳೆದೆರಡು ವರ್ಷಗಳಿಂದ ನೇರ ವಿಮಾನಯಾನವು ತಾಯ್ನಾಡಿಗೆ ದಮ್ಮಾಮ್, ಜಿದ್ದಾ ಮತ್ತು ರಿಯಾದ್ ನಿಂದ ಪ್ರಾರಂಭ ವಾಗುತ್ತದೆ ಎಂದು ಕಾದು ಸುಸ್ತಾಗಿರುತ್ತಾರೆ. ಈ ಬಗ್ಗೆ ಹಲವಾರು ಮನವಿಗಳನ್ನು ಜನತಾ ಪ್ರತಿನಿಧಿಗಳಿಗೆ ಕೊಟ್ಟಿದ್ದರು ಯಾವುದೇ ಪ್ರಯೋಜನ ಕಾಣದಾಗಿದ್ದಾರೆ. ಮಂಗಳೂರು-ದಿಲ್ಲಿ ವಿಮಾನಯಾನವು ಯಾವ ಪುರುಷಾರ್ಥಕ್ಕೆ? ಮೊತ್ತ ಮೊದಲು ನಾಗರಿಕ ವಿಮಾನಯಾನದ ಬ್ರಷ್ಟ ಮಂತ್ರಿ ಪ್ರಫುಲ್ ಪಟೇಲ್ ನನ್ನು ಎಂದಿಗೆ ಕಿತ್ತೊಗೆವುದಿಲ್ಲವೋ ಅಂದಿನ ವರೆಗೆ ಸೌದಿ/ಮಂಗಳೂರು ನೇರ ವಿಮಾನಯಾನ ಬರೇ ಮರೀಚಿಕೆ. |
| Sourya Prakasha , PERMUDE | 2010-03-22 | | the news heading should be \' KARAVALI POLITICAL \'PUDARI GALA KANASU NANASGALIDE\'
Can anybody ask these pudaris when BAJPE NEW TERMINAL GOING TO INAUGRAGE ?! |
|