ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ: ವಿ. ಕೆ. ಮೂರ್ತಿ ಛಾಯಾಗ್ರಹಣ ಲೋಕದ ಸಂಶೋಧಕ: ಬೆನಗಲ್ |
ಪ್ರಕಟಿಸಿದ ದಿನಾಂಕ : 2010-03-22
(ಚಿತ್ರ ವರದಿ-ರೋನ್ಸ್ ಬ೦ಟ್ವಾಳ್)
ಮು೦ಬೈ: ಇಲ್ಲಿನ ಮೈಸೂರು ಸ೦ಘ ಮತ್ತು ಫಿಲ್ಮೀ ಪ್ರೆಟರ್ನಿಟಿಯವರ ಜ೦ಟಿ ಆಶ್ರಯದಲ್ಲಿ ಸಿನಿ ಮಾ ಛಾಯಾ ಚಿತ್ರಣದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ. ಮೂರ್ತಿಯವರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದರು.

ಈ ಸ೦ದರ್ಭದಲ್ಲಿ ಮೂರ್ತಿಯವರ ಛಾಯಾ ಚಿತ್ರಣ ಪ್ರದರ್ಶನ ಹಾಗೂ ನೇತರು ಪುಸ್ತಕವನ್ನು ಬಿಡುಗಡೆ ಮಾಡಿದರು.

ಮುಂಬಯಿ, ಮಾ. ೨೨: ಸಿನೆಮಾ ರಂಗದ ಸಾಧನೆಗೆ ಸಲ್ಲುವ ಸರ್ವಶ್ರೇಷ್ಠ ಪುರಸ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟ, ನಿರ್ಮಾಪಕ, ನಿರ್ದೇಶಕರು ಪಡೆದುಕೊಳ್ಳುತ್ತಿರುವುದು ಸಾಮಾನ್ಯ. ಆದರೆ ಓರ್ವ ಸಿನೆಮಾ ಛಾಯಾಗ್ರಾಹಕ ಈ ಪ್ರಶಸ್ತಿಯನ್ನು ಪಡೆದುಕೊಂಡು ವಿಕ್ರಮ ಸಾಧಿಸಿದ್ದಾರೆ.
ಛಾಯಾಗ್ರಹಣ ಲೋಕದ ಸಂಶೋಧಕನಾಗಿರುವ ವಿ. ಕೆ. ಮೂರ್ತಿ ಅವರ ಸಾಧನೆ ಅದ್ಭುತ ವಾದದ್ದು. ಕಪ್ಪು ಬಿಳುಪು ಚಿತ್ರಗಳಲ್ಲಿ ಅವರ ಕ್ಯಾಮರಾ ಚಳಕ ಅಸಾಧಾರಣವಾದದ್ದು. ದಿ|ಗುರು ದತ್ ಚಿತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಂತಿದೆಯಾ ದರೆ ಅದರಲ್ಲಿ ಮೂರ್ತಿ ಅವರ ಛಾಯಾಗ್ರಹಣದ ಕೊಡುಗೆಯೂ ಇದೆ ಎಂದು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಹೇಳಿದರು.

ಮೈಸೂರು ಅಸೋಸಿಯೇಶನ್ನ ಸಭಾಗೃಹದಲ್ಲಿ ರವಿವಾರ ಜರಗಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ವಿ. ಕೆ. ಮೂರ್ತಿ ಅವರನ್ನು ಸಮ್ಮಾನಿಸುವ ಸಮಾರಂಭದ ಅತಿಥಿ ಯಾಗಿ ಉಪಸ್ಥಿತರಿದ್ದು, ಮೂರ್ತಿಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸಿನೆಮಾ ಛಾಯಾಗ್ರಹಣ ಕ್ಷೇತ್ರದಲ್ಲಿ ಸುಬ್ರತೊ ಬ್ಯಾನರ್ಜಿ ಅವರ ಬಳಿಕ ನೆನಪಿನಲ್ಲಿ ಉಳಿಯುವವರು ವಿ. ಕೆ. ಮೂರ್ತಿ. ಸಿನೆಮಾ ರಂಗಕ್ಕೆ ಅವರು ನೀಡಿರುವ ಯೋಗದಾನ ಸಾರ್ವಕಾಲಿಕವಾದುದು. ಮೂರ್ತಿ ಅವರಂತಹ ಸೃಜನಶೀಲ ಛಾಯಾಗ್ರಾಹಕ ಮತ್ತೊಮ್ಮೆ ಚಿತ್ರರಂಗಕ್ಕೆ ದಕ್ಕಿಲ್ಲ ಎಂದರು.


ಜವಾಹರಲಾಲ್ ನೆಹರೂ ಅವರು ಭಾರತ್ ಏಕ್ ಖೋಜ್ನ ಚಿತ್ರೀಕರಣದ ದಿನಗಳಲ್ಲಿ ಮೂರ್ತಿ ಅವರ ಒಡನಾಟವನ್ನು ಸ್ಮರಿಸಿಕೊಂಡ ಬೆನಗಲ್, ನಿರಂತರವಾಗಿ ಎರಡು ವರ್ಷ ನಡೆದ ಚಿತ್ರೀ ಕರಣ ಸಂದರ್ಭದಲ್ಲಿ ಮೂರ್ತಿ ಅವರು ಶೋಧಿಸುತ್ತಿದ್ದ ಲೊಕೇಶನ್ಗಳು ಅದ್ಭುತವಾಗಿರುತ್ತಿದ್ದವು. ಆ ಲೋಕೇಶನ್ಗಳು ವಾಸ್ತವವಾಗಿರುತ್ತಿದ್ದವು. ಈ ಬಗ್ಗೆ ಮೂರ್ತಿಗಿದ್ದ ಜ್ಞಾನ ಅಪರಿಮಿತ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ವಿ. ಕೆ. ಮೂರ್ತಿ ಅವರ ಜೀವನ ಚರಿತ್ರೆ `ಬಿಸಿಲು ಕೋಲು' ಬರೆದಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕಿ ಉಮಾರಾವ್ ಮಾತ ನಾಡಿ, ಹಾರ್ಮೋನಿಯಂ ಬಾರಿಸುವ ಕೆಲಸವನ್ನು ಮಾಡುತ್ತಿದ್ದ ಮೂರ್ತಿ ಅವರು ವಿಶ್ವವಿಖ್ಯಾತ ಸಿನೆಮಾ ಛಾಯಾಗ್ರಾಹಕರಾಗಿ ಬೆಳೆದಿರುವ ರೀತಿ ಅದ್ಭುತವಾದದ್ದು. ಬದಲಾವಣೆಯ ಜತೆಗೆ ನಾವು ಬದಲಾಗಬೇಕೆಂಬ ಧೋರಣೆಯನ್ನು ಹೊಂದಿರುವ ಮೂರ್ತಿ ಬದುಕು ಇತರರಿಗೆ ಪ್ರೇರಣೆ ಎಂದರು.


ಶ್ಯಾಮ್ ಬೆನಗಲ್, ಗೋವಿಂದ ನಿಹಲಾನಿ, ಶಿರೀಶ್ ದೇಸಾಯಿ ಮುಂತಾದವರ ಸಂದರ್ಶನ ದೊಂದಿಗೆ `ಬಿಸಿಲುಕೋಲು' ಉತ್ತಮವಾಗಿ ಮೂಡಿ ಬಂದಿದೆ ಎಂದರು.
ಶಾಲು, ಗಂಧದ ಹಾರ, ಸ್ಮರಣಿಕೆ ಮತ್ತು ಫಲಪುಷ್ಪಗಳನ್ನಿತ್ತು ಮೂರ್ತಿಯವರನ್ನು ಆತ್ಮೀಯವಾಗಿ ಸಮ್ಮಾನಿಸಲಾಯಿತು.
ಸಮ್ಮಾನಕ್ಕುತ್ತರಿಸಿ ಮಾತನಾಡಿದ ಮೂರ್ತಿ, ಮೈಸೂರು ಅಸೋಸಿಯೇಶನ್ ಕಳೆದ ಸುಮಾರು ೫೦ ವರ್ಷಗಳಿಂದ ನನಗೆ ಮನೆಯಿದ್ದಂತೆ. ಕಷ್ಟದ ದಿನಗಳಲ್ಲಿ ಇಲ್ಲಿನ ಸ್ನೇಹಿತರು ಸಾಕಷ್ಟು ನೆರವು ನೀಡಿದ್ದಾರೆ ಎಂದರು.
ಮೈಸೂರು ಅಸೋಸಿಯೇಶನ್ ಸದಸ್ಯರೊಂದಿಗೆ ಸೇರಿ ನಾಟಕ ನಿರ್ದೇಶಿಸಿದ ದಿನಗಳನ್ನು ಮೂರ್ತಿ ಸ್ಮರಿಸಿಕೊಂಡರು. ವಿ .ಕೆ. ಮೂರ್ತಿ ಅವರ ಛಾಯಾಗ್ರಹಣದ ಕಪ್ಪು ಬಿಳುಪು ಚಿತ್ರಗಳ ತುಣುಕುಗಳನ್ನು ಪ್ರದರ್ಶಿಸಿ ಸಮ್ಮಾನವನ್ನು ಅರ್ಥಪೂರ್ಣವಾಗಿಸಲಾಯಿತು.


ಬಾಲಿವುಡ್ ನಿರ್ಮಾಪಕರ ಸಂಘಟನೆಯ ಪರವಾಗಿ ಹಿರಿಯ ಚಿತ್ರೋದ್ಯಮಿ ಮನಮೋಹನ ಶೆಟ್ಟಿ ಅವರು ಮೂರ್ತಿಅವರನ್ನು ಸಮ್ಮಾನಿಸಿದರು. ಮೈಸೂರು ಅಸೋಸಿಯೇಶನ್ ವಿ. ಕೆ. ಮೂರ್ತಿ ಅವರನ್ನು ಅಭಿನಂದಿಸಲು ಹೊರ ತಂದಿರುವ `ನೇಸರು' ವಿಶೇಷ ಸಂಚಿಕೆಯನ್ನು ಶ್ಯಾಮ್ ಬೆನ ಗಲ್ ಬಿಡುಗಡೆ ಮಾಡಿದರು. ಮೈಸೂರು ಅಸೋಸಿಯೇಶನ್ನ ಅಧ್ಯಕ್ಷ ರಾಮಭದ್ರ ಸ್ವಾಗತಿ ಸಿದರು.
ವೆಸ್ಟರ್ನ್ ಇಂಡಿಯಾ ಸಿನೆಮಾಟೋಗ್ರಾಫಿ ಅಸೋಸಿಯೇಶನ್ನ ಗಿರೀಶ್ ತಾವ್ರೆ ೧೯೪೬ರಿಂದ ಮೂರ್ತಿ ಅವರ ಸಿನೆಮಾ ಬದುಕಿನ ಘಟನೆಗಳ ಬಗ್ಗೆ ತಿಳಿಸಿದರು. ಛಾಯಾಗ್ರಾಹಕ ಅಶೋಕ್ ಮೆಹ್ತ, ಕೋಡಕ್ ಇಂಡಿಯಾದ ರಾಜೇಶ್ ಅವರೂ ಮೂರ್ತಿ ಅವರನ್ನು ಸಮ್ಮಾನಿಸಿದರು.

ಕರ್ನಾಟಕ ಸಂಘದ ಪರವಾಗಿ ಉಪಾಧ್ಯಕ್ಷ ಭರತಕುಮಾರ್ ಪೊಲಿಪು, ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಕೋಶಾಧಿಕಾರಿ ಬಿ.ಜಿ.ನಾಯಕ್, ಕನ್ನಡ ಕಲಾಕೇಂದ್ರ, ಬಿ.ಎಸ್.ಕೆ.ಬಿ. ಅಸೋಸಿಯೇ ಶನ್, ಮುಂಬಯಿ ಕನ್ನಡ ಸಂಘ, ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿ, ಎನ್.ಕೆ.ಇ. ಎಸ್. ಮತ್ತಿತರ ಸಂಘ ಸಂಸ್ಥೆಗಳು ಮೂರ್ತಿ ಅವರನ್ನು ಗೌರವಿಸಿವೆ. ಡಾ|ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾರಾಯಣ ನವಿಲೇಕರ್ ಸಮ್ಮಾನ ಪತ್ರ ವಾಚಿಸಿದರು. ಖ್ಯಾತ ನಿರ್ದೇಶಕ ಗೋವಿಂದ ನಿಹಲಾ ನಿ ಕಾರ್ಯಕ್ರಮ ನಿರೂಪಿಸಿ ಕೆ. ಮಂಜುನಾಥಯ್ಯ ವಂದಿಸಿದರು. ವಿ. ಕೆ. ಮೂರ್ತಿ ಅವರ ಬದುಕು ಹಾಗೂ ಸಾಧನೆಗಳನ್ನು ತಿಳಿಸುವ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|