ಉಡುಪಿ: ಶ್ರೀ ಪುತ್ತಿಗೆ ಶ್ರೀಪಾದ೦ಗಳವರಿ೦ದ ಸಗ್ರಿ ದೇವಸ್ಥಾನದ `ಅನ೦ತ ಸಭಾಭವನ' ಉದ್ಘಾಟನೆ |
ಪ್ರಕಟಿಸಿದ ದಿನಾಂಕ : 2010-03-22
ಉಡುಪಿ, ಮಾ. ೨೧: ಸಗ್ರಿಯ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿ ಸಲಾದ ಭೋಜನ ಶಾಲೆ `ಅನಂತ ಸಭಾಭವನ'ವನ್ನು ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾ. ೨೧ರಂದು ಉದ್ಘಾಟಿಸಿ ಹರಸಿದರು.
ಶ್ರೀ ಸೋದೆ ಮಠದ ದಿವಾನರಾದ, ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಆಚಾರ್ಯತ್ವ ವಹಿಸಿರುವ ವೇ|ಮೂ| ಪಾಡಿಗಾರು ಶ್ರೀನಿವಾಸ ತಂತ್ರಿ, ಸಚಿವ ಡಾ| ವಿ.ಎಸ್. ಆಚಾರ್ಯ, ಶಾಸಕ ಕೆ. ರಘು ಪತಿ ಭಟ್, ನಗರಸಭಾಧ್ಯಕ್ಷ ದಿನಕರ ಶೆಟ್ಟಿ, ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಆಸ್ರಣ್ಣ, ಕಡಿಯಾಳಿ ದೇವಳದ ಧರ್ಮದರ್ಶಿ ಅನಂತರಾಮ ಉಪಾಧ್ಯಾಯ, ನೇತ್ರ ತಜ್ಞ ಡಾ| ಕೃಷ್ಣಪ್ರ ಸಾದ್, ಮುಂಬಯಿ ಉದ್ಯಮಿ ಪ್ರಗ್ನೇಶ್ ಮೆಹ್ತಾ, ದ.ಕ. ಕ.ಸಾ.ಪ. ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಶುಭ ಕೋರಿದರು. ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣ ಸಾಮಗ, ಗುರುರಾಜ ಭಟ್ ಉಪಸ್ಥಿತರಿದ್ದರು.

ಆನಂದತೀರ್ಥ ಉಪಾಧ್ಯಾಯ ಸ್ವಾಗತಿಸಿ, ರವೀಂದ್ರ ಭಟ್ ವಂದಿಸಿದರು. ಗೋಪಾಲ ಜೋಷಿ ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ/ಚಿತ್ರ- ದುರ್ಗಪ್ರಸಾದ್ ಕೆ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22
|
|
| venugopal, usa | 2010-03-22 | | Just a suggestion to the reporter. In addition to what you are reported in this article, Please report some more information which is useful to the general public, like how big is the hall, what is this used for, how much money spent to contsruct etc. This applies to all the reporteres of GulfKannadiga. This way these artcles are more useful. thanks
|
|