| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕುಲಾಂತರಿ ಬೀಜ ಮುಕ್ತ ರಾಜ್ಯಗಳ ಘೋಷಣೆಯಾಗಲಿ: ಭಾರತೀಯ ಕೃಷಿಕ ಸಮಾಜದ ರಾಷ್ಟ್ರಾಧ್ಯಕ್ಷ ಡಾ.ಕಿಶನ್ ಬೀರ್ ಚೌಧರಿ |
ಪ್ರಕಟಿಸಿದ ದಿನಾಂಕ : 2010-03-22
ಮಂಗಳೂರು, ಮಾ.೨೧: ದೇಶದಲ್ಲಿ ಕುಲಾಂತರಿ ಬೀಜಗಳನ್ನು ನಿಯಂತ್ರಿ ಸಲು ಕುಲಾಂತರಿ ಮುಕ್ತ ರಾಜ್ಯಗಳ ಘೋಷಣೆಯಾಗಬೇಕು ಮತ್ತು ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ.ಕಿಶನ್ ಬೀರ್ ಚೌಧರಿ ಅಭಿಪ್ರಾ ಯಪಟ್ಟಿದ್ದಾರೆ.
ನಾಗರಿಕ ಸೇವಾ ಟ್ರಸ್ಟ್ ವತಿಯಿಂದ ‘ತುಳುನಾಡಿನ ಕೃಷಿ-ಪ್ರಕೃತಿ-ಸಂಸ್ಕೃತಿ ಉಳಿಸಿ ಅಭಿಯಾನ’ದ ಅಂಗವಾಗಿ ಕರಾವಳಿ ಜಿಲ್ಲೆಗಳ ಪರಿಸರ ಮತ್ತು ಅಭಿವೃದ್ಧಿ ಸಂಬಂಧಿತ ಯೋಜನೆಗಳ ಕುರಿತು ಇಂದು ನಗರದಲ್ಲಿ ನಡೆದ ಸಮಾಲೋಚನಾ ಕಾರ್ಯಾಗಾರದಲ್ಲಿ ‘ಕುಲಾಂತರಿ ಆಹಾರ/ಬೀಜಗಳ ಪರಿಣಾಮಗಳು; ಬೀಜ ಮಸೂದೆಯ ಸಾಧಕ ಬಾಧಕಗಳು’ ಎಂಬ ವಿಷಯ ದಲ್ಲಿ ಅವರು ಮಾತನಾಡುತ್ತಿದ್ದರು.
ಎರಡನೆ ಹಸಿರು ಕ್ರಾಂತಿಯ ಹೆಸರಿನಲ್ಲಿ ವಿದೇಶದಿಂದ ಕುಲಾಂತರಿ ಬೀಜಗಳನ್ನು ಆಮದು ಮಾಡಿ ದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ, ಇದರಿಂದ ಸಾಂಪ್ರದಾಯಿಕ ಬೀಜದ ತಳಿಗಳು ನಾಶವಾಗುವ ಸಾಧ್ಯತೆ ಇದೆ. ದೇಶದಲ್ಲಿ ನಿಜವಾಗಿ ಆಹಾರದ ಸಮಸ್ಯೆ ಇಲ್ಲ. ಬದಲಾಗಿ ವಿತರಣೆಯ ಸಮಸ್ಯೆಯಿದ್ದು, ಭಾರತದ ಈಗಿನ ಆಹಾರ ನೀತಿಯಿಂದ ಯಾವುದೇ ಆಹಾರ ವಸ್ತುವನ್ನು ವಿದೇಶದಿಂದ ಅಡೆತಡೆ ಇಲ್ಲದೆ ಆಮದು ಮಾಡಿಕೊಳ್ಳ ಬಹುದು. ಇದರಿಂದ ದೇಶದ ಕೃಷಿ ಪದ್ಧತಿಗೆ ಸಾಕಷ್ಟು ತೊಂದರೆ ಉಂಟಾಗು ತ್ತಿದೆ ಎಂದು ಚೌಧರಿ ಹೇಳಿದರು.
ವಿದ್ಯುತ್ ಪರಿಸ್ಥಿತಿ: ‘ಕರ್ನಾಟಕ ರಾಜ್ಯದ ವಿದ್ಯುತ್ ಪರಿಸ್ಥಿತಿ; ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪರ್ಯಾಯಗಳು’ ಎಂಬ ವಿಷಯದಲ್ಲಿ ಮಾತನಾಡಿದ ಜೈವಿಕ ಇಂಧನ ಕಾರ್ಯ ಪಡೆಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ , ಕರಾವಳಿಯಲ್ಲಿ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸದೆ ಹೊಸ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಇದ ರಿಂದ ಪಶ್ಚಿಮ ಘಟ್ಟ ಸಹಿತ ಕರಾವಳಿಯ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದರು.
‘ವಿಶೇಷ ಆರ್ಥಿಕ ವಲಯಗಳ ಸಾಧಕ ಬಾಧಕ’ಗಳು ಎಂಬ ವಿಷಯದ ಬಗ್ಗೆ ಸ್ವದೇಶಿ ಜಾಗರಣ ಮಂಚ್ನ ರಾಷ್ಟ್ರೀಯ ಸಹ ಸಂಚಾಲಕ ಪ್ರೊ. ಬಿ.ಎಂ. ಕುಮಾರಸ್ವಾಮಿ, ‘ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತದ ಕೃಷಿ ಕ್ಷೇತ್ರದ ಮೇಲಾಗುತ್ತಿರುವ ಪರಿಣಾಮ ಗಳು’ ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಪ್ರೊ. ಕೆ.ಸಿ.ಬಸವರಾಜ್, ‘ನೇತ್ರಾವತಿ ನದಿ ತಿರುವು ಯೋಜನೆಯ ಅಪಾಯಗಳು ; ನೀರು ಪೂರೈಕೆಗೆ ಪರ್ಯಾಯ ಯೋಜನೆಗಳು’ ಎಂಬ ವಿಷಯದಲ್ಲಿ ಜಲತಜ್ಞ ಶ್ರೀ ಪಡ್ರೆ, ‘ಕರಾವಳಿ ವಲಯ ನಿಯಂತ್ರಣ ಅಧಿನಿಯಮದ ಅವಶ್ಯಕತೆ’ ಎಂಬ ವಿಷಯದಲ್ಲಿ ರಾಷ್ಟ್ರೀಯ ಮೀನುಗಾರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಾಸುದೇವ ಬೋಳೂರು ವಿಷಯ ಮಂಡಿಸಿದರು.
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಉಪಾಧ್ಯಕ್ಷೆ ವಿದ್ಯಾ ನಾಯಕ್, ಕಾರ್ಯದರ್ಶಿ ಬಿ.ಕೆ.ಪರಮೇಶ್ವರರಾವ್, ನಿರ್ದೇಶಕ ರಾದ ರಾಜೀವ ಸಾಲ್ಯಾನ್, ಜಯಪ್ರಕಾಶ್ ಭಟ್ ಸಿ.ಎಚ್., ಕೃಷಿಕ ವೇದಿಕೆಯ ಅಧ್ಯಕ್ಷ ವಿಠ್ಠಲ ಶೆಟ್ಟಿ ಪಾದೂರು, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಪಿ. ಹೇಮಾವತಿ, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ, ದ.ಕ. ಪರಿಸ ರಾಸಕ್ತ ಒಕ್ಕೂಟದ ಅಧ್ಯಕ್ಷ ಉಮೇಶ್ ನಿರ್ಮಲ್, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸಂಚಾಲಕ ಟಿ.ಆರ್.ಭಟ್, ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಉಪಸ್ಥಿತರಿದ್ದರು.
ಉದ್ಘಾಟನೆ: ಮಂಗಳೂರು ಮಹಾ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಬಿ.ಮಾಧವ ಭಂಡಾರಿ ಕಾರ್ಯಾ ಗಾರ ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉಪಮೇಯರ್ ರಾಜೇಂದ್ರ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|
|
|