ವೀರ ಕೇಸರಿ ಕಲಾವೃಂದ (ಮುಂಬಯಿ) ರಿ. ಇದರ ಮೂವತ್ತೊಂದನೆ ವಾರ್ಷಿಕೋತ್ಸವವು ಕಳೆದ ಮಂಗಳವಾರ (೧೬.೦೩.೨೦೧೦)ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘ ಮುಂಬಯಿ ಇದರ ವಿಶ್ವೇಶರಯ್ಯ ಸಭಾಗೃಹದಲ್ಲಿ ನೇರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ವೀರ ಕೇಸರಿ ಕಲಾವೃಂದ ಅಧ್ಯಕ್ಷರಾದ ರಮೇಶ್ ಕೆ.ಶೆಟ್ಟಿ ಇವ ರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಸಂಘಟಕ ಮತ್ತು ಉದ್ಯಮಿ ಸುರೇಶ್ ಶೆಟ್ಟಿ ಬಳ್ಳಾರಿ ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಕೆ.ಬೋಜರಾಜ್, ಬಾಂಬೇ ಬಂಟ್ಸ್ ಎಸೋಸಿಯೇಶನ್ನ ಉಪಾ ಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಹೈಕೋರ್ಟ್ನ ಖ್ಯಾತ ನ್ಯಾಯಾವಾದಿ ಗುಣಕರ್ ಶೆಟ್ಟಿ, ಮೊಗವೀರ ಬ್ಯಾಂಕ್ನ ಕಾರ್ಯಾಧ್ಯಕ್ಷ ಕೀರ್ತಿರಾಜ್ ಕೆ. ಸಾಲ್ಯಾನ್, ಸಮಾಜ ಸೇವಕ ಮತ್ತು ಖ್ಯಾತ ಹೊಟೇಲ್ ಉದ್ಯಮಿ ವಿಠಲ ಕೆ. ಶೆಟ್ಟಿ ಮುಂತಾದವರು ಆಗಮಿಸಿದ್ದರು.

ಈ ಶುಭಾರಂಭದಲ್ಲಿ ಕಾಂಚನ್ ಕಲ್ಚರಲ್ ಫೌಂಡೇಶನ್ ಬೆಹರಿನ್ ಇದರ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಪೊವಾಯಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಕಾಂದಿವಲಿ ಕನ್ನಡ ಸಂಘದ ಸಂಸ್ಥಾಪಕ ಸದಸ್ಯ ನಾಗೇಶ್ ಸನಿಲ್, ಗೋರೆಗಾಂವ್ ಕರ್ನಾಟಕ ಸಂಘ ಗೌ| ಪ್ರ. ಕಾರ್ಯದರ್ಶಿ ಶ್ರೀಮತಿ ಪದ್ಮಜಾ ಮಣ್ಣೂರು ಇವರನ್ನು ಅತಿಥಿಗಳು ಸನ್ಮಾನಿಸಿದರು.

ಸಂಘ ಸಂಸ್ಥೆಗಳು ಸಮಾಜಮುಖಿ ಒಲವನ್ನು ಬೆಳೆಸಿಕೊಂಡಾಗ ಪ್ರಗತಿ ಹೊಂದುತ್ತವೆ. ಜಾತಿ, ಪಂಥ ಕುಲವನ್ನು ಮೀರಿ ನಿಲ್ಲುವ ಹೃದಯಕ್ಕೆ ತಟ್ಟುವಂತಹ ಕೆಲಸ ಮಾಡುವ ಮಾನವೀಯ ಕಳಕಯಿರುವ ಸಂಘ ಸಂಸ್ಥೆಗಳಿಂದ ಸದೃಢ ಮತ್ತು ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಘಟಕ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಬಳ್ಳಾರಿ ತಿಳಿಸಿದರು.

ವೀರಕೇಸರಿ ಕಲಾವೃಂದ ಮಕ್ಕಳಲ್ಲಿ ವಿಶೇಷ ಒಲವು, ಆಸಕ್ತಿ ವಹಿಸಿ ಅವರಲ್ಲಿ ಹೊಸ ಭಾವನೆ, ಕಲ್ಪನೆಗಳನ್ನು ಬಿತ್ತುವ ಕಾರ್ಯವೆಸಗಿರುವುದು ಗಮನಾರ್ಹವಾದುದು ಎಂದರು. ಸುರೇಶ್ ಶೆಟ್ಟಿ ಬಳ್ಳಾರಿ ಅವರನ್ನು ಕಲಾವೃಂದದ ಅಧ್ಯಕ್ಷ ರಮೇಶ್ ಕೆ. ಶೆಟ್ಟಿ ಪಯ್ಯಾರು ಗೌರವಿಸಿದರು.
ರಮೇಶ್ ಶಿವಪುರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟಕ ಜಿ.ಟಿ.ಆಚಾರ್ಯ ಪ್ರಸ್ತಾವನೆ ಮಾಡಿದರು. ಉಷ ಪಿ. ಶೆಟ್ಟಿ, ಗೌ| ಪ್ರ. ಕಾರ್ಯದರ್ಶಿ ವಿಶ್ಬನಾಥ್ ಶೆಟ್ಟಿ ಪೇತ್ರಿ, ಸದಸ್ಯರಾದ ರತ್ನಾಕರ ಪೂಜಾರಿ, ಗಂಗಾಧರ ಅತಿಥಿಗಳನ್ನು ಪರಿಚಯಿಸಿದರು. ಅನಿಲ್ಕುಮಾರ್ ಸಸಿಹಿತ್ಲು ಮತ್ತು ನವೀನ್ ಗುಳಿಬೆಟ್ಟು ಸಮ್ಮಾನ ಪತ್ರಗಳನ್ನು ವಾಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾವೃಂದ ಸದಸ್ಯರಿಂದಸತೀಶ್ ಎನ್ ಬಂಗೇರ ಇವರ ಲೇಖನದ ನವೀನ್ ಕೆ. ಕರ್ಕೇರ ಇವರ ನಿರ್ದೇಶನದ ತನಿಖೆ ಎಂಬ ತುಳು ಕಿರುನಾಟಕ ಮತ್ತು ಪೊವಾಯಿ ಕನ್ನಡ ಸೇವಾ ಸಂಘ ಮತ್ತು ಗುರುಕುಲ ಕಲಾವಿದರಿಂದ ನಾಗರಾಜ್ ಗುರು ಪುರ ಇವರ ರಚನೆ ನಿರ್ದೇಶನದ ಡೋಲು ಕನ್ನಡ ಏಕಾಂಕ ನಾಟಕವನ್ನು ಪ್ರದರ್ಶಿಸಿದರು.