ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ |
ಪ್ರಕಟಿಸಿದ ದಿನಾಂಕ : 2010-03-20
( ವರದಿ: ಗಣೇಶ್ ರೈ. ಚಿತ್ರಗಳು: ಅಶೋಕ್ ಬೆಲ್ಮಣ್)
ದುಬೈ: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ ಮಾರ್ಚ್ ೧೯ ನೇ ಶುಕ್ರವಾರ ಬೆಳಿಗ್ಗೆ ೯.೦೦ ಗಂಟೆಗೆ ಸಂಕಲ್ಪದೊಂದಿಗೆ ಪ್ರಾರಂಭವಾಯಿತು. ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳು ಡಾ. ಪವನ್ ಭಟ್ ರವರಿಂದ ಶ್ರೀ ಸತ್ಯನಾರಾಯಣ ವೃತಕಥಾ ಪೂರ್ಣ ವಿವರಣೆಯೋಂದಿಗೆ ಸಾಂಗವಾಗಿ ನೆರವೇರಿತು. ಪೂಜಾ ಸೇವಾಕರ್ತರ ಪರವಾಗಿ ಶ್ರೀ ಕರಿಯ ಪೂಜಾರಿ ಮತ್ತು ಸುನಿತಾ ದಂಪತಿಗಳು ಆಯ್ಕೆಯಾಗಿ ಪೂಜೆಯಲ್ಲಿ ಭಾಗವಹಿಸಿದರು.




ಪೂಜಾ ಮಹಾ ಮಂಗಳಾರತಿ ಸಮಯದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕಲಾನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈ ರಚಿಸಿದ ಕುಬೇರ ಮತ್ತು ಮಹಾಲಕ್ಷ್ಮಿಗೆ ಸಕಲೈಶ್ವರ್ಯಗಳನ್ನು ಕರುಣಿಸುವ ಶ್ರೀ ಐಶ್ವರ್ಯೇಶ್ವರ ಸ್ವಾಮಿಯ ಚಿತ್ರಪಟವನ್ನು ಅರಬ್ ಉಡುಪಿ ರೆಸ್ಟೊರೆಂಟ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೇಕರ್ ಶೇಟ್ಟಿ ದಂಪತಿಗಳು ಬಿಡುಗಡೆಮಾದಿ ಲೋಕಾರ್ಪಣೆ ಮಾಡಿದರು.

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ಭಕ್ತಿ ಸಂಗೀತ ಆಡಿಯೋ ಸಿ. ಡಿ. ಯನ್ನು ಶ್ರೀ ಬಿ. ಪಿ. ನಾಯಕ್ ದಂಪತಿಗಳು ಬಿಡುಗಡೆ ಮಾಡಿದರು.







ಪೂಜೆಯ ಮಹಾಪ್ರಸಾದ ವಿತರಣೆಯ ನಂತರ "ಭಕ್ತ ಸುಧಾಮ" ಹರಿಕಥಾ ಕಾಲಕ್ಷೇಪ ವನ್ನು ಡಾ. ಪವನ್ ಭಟ್ ನಡೆಸಿ ಕೊಟ್ಟರು. ಪ್ರಾರಂಭದಲ್ಲಿ ಹರಿಕಥೆ ದಾಸರನ್ನು ಮತ್ತು ಹಿಮ್ಮೇಳದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಪವನ್ ಕುಮಾರ್

ಪರಿಚಯ
ಕರ್ನಾಟಕದಲ್ಲಿ ೧೯೭೮ ರಲ್ಲಿ ಜನಿಸಿದ್ದು, ಧಾರವಾಡ ಕರ್ನಾಟಕ ವಿಶ್ವವಿಧ್ಯಾಲಯದಲ್ಲಿ ೧೯೯೯ ರಲ್ಲಿ ಬಿ. ಎ. ಪಧವಿ, ೨೦೦೧ ರಲ್ಲಿ ಎಂ. ಎ. ಪಧವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದು, ೨೦೦೬ ರಲ್ಲಿ ಗೌರವ ಡಾಕ್ಟರೆಟ್ ಪಡೆದು, ಕನ್ನಡ ಸಂಸ್ಕೃತ, ಹಿಂದಿ, ಕೊಂಕಣಿ, ಮರಾಠಿ, ಆಂಗ್ಲ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದು, ಭಾರತದ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಮಂಗಳೂರು, ಗೋವಾ, ಕೇರಳದಲ್ಲಿ ಹರಿಕೀರ್ತನ, ಪ್ರವಚನ, ಉಪನಿಷತ್, ಗೀತಾ, ಬ್ರಹ್ಮಸೂತ್ರ, ವೇದಾ ಅಧ್ಯಯನ ಕಾರ್ಯಗಾರ ನಡೆಸಿದ ಕೀರ್ತಿ ಇವರದು.





ಭಾಗವತ ಸಪ್ತಾಹ ಮತ್ತು ರಾಮಾಯಣ ಸಪ್ತಾಹಗಳನ್ನು ೪೦ ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಜನಪ್ರಿಯತೆ ಯನ್ನು ಪಡೆದಿದ್ದಿರಿ. ೨೦೦೦ ದಲ್ಲಿ ಉಜ್ಜಯಿನಿ ನಡೆದ ಸಂಸ್ಕೃತ ಆಶು ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ೨೦೦೧ ರಲ್ಲಿ ರಾಮಕೃಷ್ಣ ಮಿಷನ್ ಕಲ್ಕತ್ತಾ ನಡೆದ " ಶ್ರೀ ಸ್ವಾಮಿ ವಿವೇಕಾನಂದಾ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ್ ಮತ್ತು ಚಿನ್ನದ ಪಧಕ, ೨೦೦೨ ರಲ್ಲಿ "ಕಾಳಿದಾಸ ಪ್ರತಿಭಾ ವಿಲಾಸ" ಸಂಸ್ಕೃತ ಕೃತಿಗೆ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ, ೨೦೦೩ ರಲ್ಲಿ ಮೀರತ್ ನಲ್ಲಿರುವ ಚತ್ರುವೇಧಿ ಚರಣ್ ಸಿಂಗ್ ಯೂನಿವರ್ಸಿಟಿ ಯಲ್ಲಿ ನಡೆದ "ಇಂಪ್ರೆಶನಲ್ ವರ್ಬಲ್ ಅಥಾರಿಟೀಸ್ ಆಫ್ ವೇದಾಸ್ ಆಯಂಡ್ ಇಟ್ಸ್ ರಿಲೇವೆನ್ಸ್" ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಚಿನ್ನದ ಪಧಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಪ್ರಸ್ತುತ ಹುಬ್ಬಳ್ಳಿಯ ಕಾಮಾಕ್ಷಿ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ, ಶ್ರೀ ಗಲಗಲಿ ಆಚಾರ್ಯರೊಂದಿಗೆ ಸಂಸ್ಕೃತದಲ್ಲಿ ಮಹಾಭಾರ್ತ ಕೋಷ, ಗೀತಾ ಭಾಗವತಂ, ವೇದ, ಚಂಪೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದು ಸಂಸ್ಕೃತಿಯ ಆಚಾರ ವಿಚಾರಗಳನ್ನು ಜನಕೋಟಿಗೆ ಮುಟ್ಟಿಸುವಲ್ಲಿ ಶ್ಲಾಘನೀಯವಾದ ಸೇವೆ ಸಲ್ಲಿಕೆ.





೨೦೧೦ ಮಾರ್ಚ್ ೧೯ ನೇ ತಾರೀಕು ದುಬಾಯಿಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ವಿಧಿ ವಿಧಾನದಲ್ಲಿ ಶ್ರೀ ಸತ್ಯನಾರಾಯಣ ವೃತಕಥಾಯೊಂದಿಗೆ, ದುಬಾಯಿಯಲ್ಲಿ ಪ್ರಥಮ ಬಾರಿಗೆ "ಭಕ್ತ ಸುಧಾಮ" ಹರಿಕಥಾ ಕಾಲಕ್ಷೇಪವನ್ನು ನಡೆಸಿಕೊಟ್ಟಿದ್ದಾರೆ, ಭಕ್ತಾಧಿಗಳನ್ನು ಪುನೀತರನ್ನಾಗಿ ಮಾಡಿದ ಇವರನ್ನು, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ, ಕಾರ್ಯಕಾರಿ ಸಮಿತಿ ಮತ್ತು ಭಕ್ತಸಮೂಹದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.


ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಉಳಿಕೆಯ ಹಣವನ್ನು ದಾನವಾಗಿ ನೀಡಲಾಗಿದೆ.
೨೦೦೮ ನೇ ಸಾಲಿನಲ್ಲಿ ನೀಡಿದ ಹಣದ ಮೊತ್ತ ರೂಪಾಯಿ ೫೦,೦೦೦/- : "ಸಾನಿಧ್ಯ" ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಭೇತಿ ಸಂಸ್ಥೆ, ಶಕ್ತಿ ನಗರ - ಮಂಗಳೂರು
೨೦೦೯ ರಲ್ಲಿ ನೀಡಿದ ಹಣದ ಮೊತ್ತ ರೂಪಾಯಿ ೪೦,೦೦೦/- : ಸಾಂದಿಪನಿ ಸಾಧನಾಶ್ರಮ, ಕೇಮಾರು, ಪಾಲಡ್ಕ ಮಂಗಳೂರು ತಾಲೂಕು ದ. ಕ. ಜಿಲ್ಲೆ.
ಶ್ರೀ ಭಗವತಿ ಸೇವಾ ಟ್ರಸ್ಟ್ (ರಿ)- ಅಶೋಕ್ ನಗರ, ಮಂಗಳೂರು. ರೂ. ೧೦,೦೦೦/-


ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀಯುತರುಗಳಾದ ಹರೀಶ್ ಕಾಮತ್, ವಿಟ್ಲ ಶಾಂತಾರಾಮ ಆಚಾರ್, ವಿಶ್ವನಾಥ್ ಶೆಟ್ಟಿ, ಜೀವನ್ ಕುಕ್ಯಾನ್, ಬಿ. ಕೆ. ಗಣೇಶ್ ರೈ, ವಸುಂಧರ ಆಚಾರ್ಯ, ಗಿರಿಧರ ನಾಯಕ್, ದಿನೇಶ್ ಆಚಾರ್ಯ ಬಿ ಎಂ, ರಾಜೇಂದ್ರ ಪೇಜಾವರ್, ಸದಾಶಿವ ಆಚಾರ್ಯ, ಜಗನ್ನಾಥ ಬೆಳ್ಳಾರೆ, ರಾಜೇಶ್ ಕುತ್ತಾರ್ ಅವಿರತ ಶ್ರಮದ ಫಲವಾಗಿ ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ವರದಿಯ ವಿವರಗಳು |
 |
ಕೃಪೆ : ವರದಿ: ಗಣೇಶ್ ರೈ. ಚಿತ್ರಗಳು: ಅಶೋಕ್ ಬೆಲ್ಮಣ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
| sonu, mangalore Dubai | 2010-05-19 | | Mr manoj
shut ur mouth .this is our dubai not kuwait . dubai is much greater than kuwait okay. ur staying in kuwait that is why ur thinking is verry small way. we proud we r staying in Dubai. we love dubai.Dubai loves us all. there is no partiality whether ur muslim or hindu or christian okay.ur staying in kuwait ie not enough u make ur mind broad , learn something more, this is not India.
mind it |
| ಸುರೇಖಾ, ಮಂಗಳೂರು | 2010-04-03 | | ಈ ಕಾರ್ಯಕ್ರಮ ವನ್ನು ನೋಡಿ ನನಗೆ ತುಂಭಾ ಸಂತೋಷ ವಾಯಿತು. ದುಬಾಯಿ ಯಲ್ಲಿ ಕೂಡ ಈ ರೀತಿಯ ಕಾರ್ಯಕ್ರಮವನ್ನು ನಡೆಸಿದ ಎಲ್ಲಾ ಭಕ್ತ ಸಮೂಹಕ್ಕು ನನ್ನ ಅಭಿನಂದನೆಗಳು |
| Umesh Chandra, Dubai | 2010-04-01 | | ಏನೆ ಆಗ್ಲಿ, ದೇವರ ಕೆಲಸ. ಪೂಜೆಯ ಮಹಿಮೆನೆ ಹಾಗೆ. ನೋಡಿದವರಿಗು, ಕೇಳಿದವರಿಗು, ಗಲ್ಪ್ ಕನ್ನಡಿಗ ವನ್ನು ನೋಡಿದವರಿಗು ಒಳ್ಳೇದಾಗ್ಲಿ. |
| ವಿಜಯ್ ಸುವರ್ಣ , ಕತಾರ್ | 2010-03-27 | | ನಿಜವಾಗಿಯೂ ಇಂತಹಾ ಒಂದು ಶ್ರೀ ಭಗವತ್ ಸತ್ಕಾರ್ಯಕ್ರಮ ಈ ನಾಡಿನಲ್ಲಿ ಸಂಘಟಿಸುವುದೇ ಒಂದು ಭಗೀರಥ ಪ್ರಯತ್ನ. ಪ್ರಪ್ರಥಮವಾಗಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಅಲ್ಲಿನ ಸರಕಾರಕ್ಕೆ ಎಲ್ಲರೂ ತುಂಬು ಹ್ರದಯದ ಧನ್ಯವಾದಗಳನ್ನು ಸಲ್ಲಿಸಲೇ ಬೇಕಾದುದು ಧರ್ಮ. ಇದೊಂದು ಸತ್ಕಾರ್ಯ. ಈ ದೇಶದಲ್ಲಿ ಇದನ್ನು ಏರ್ಪಡಿಸುವುದೇ ಒಂದು ಮಹಾತ್ಕಾರ್ಯ. ಇಂತಹಾ ಕಾರ್ಯಕ್ರಮಗಳಲ್ಲಿ ಇಂತಹ ಚಿಕ್ಕ ಚಿಕ್ಕ ವಿಷಯಗಳು ನಗಣ್ಯ. ಆದುದರಿಂದ ಅಂತಹ ವಿಷಯದಲ್ಲಿ ವಿಮರ್ಶೆ ಖಂಡಿತಾ ಸಲ್ಲ. ಹರೀಶ್ ಶೆಟ್ಟಿಯವರು ಹೇಳುವಂತೆ ಹಣ ಪಡೆದು ಏರ್ಪಡಿಸಿದ ಕಾರ್ಯಕ್ರಮವಲ್ಲ. ಹಾಗಿರುವಾಗ ಯಾವ ರೀತಿಯ ವಿಮರ್ಶೆಗೂ ಆಸ್ಪದವಿರುವುದಿಲ್ಲ. ಈ ದೇಶದಲ್ಲಿ ಇಂತಹಾ ಒಂದು ದೇವತಾ ಕಾರ್ಯದಲ್ಲಿ ಭಾಗವಹಿಸುವ ಸುಯೋಗ ದೊರೆತುದೇ ಮಹಾ ಅದ್ರಷ್ಟ.
ಕೊಲ್ಲಿರಾಷ್ಟ್ರವೊಂದರಲ್ಲಿ ಕರ್ನಾಟಕದ ಸಂಘಟನೆ ಒಂದು ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವೊಂದಕ್ಕೆ ಬ್ರಹತ್ ಮೊತ್ತ ತೆತ್ತು ನೋಡಲು ಹೋಗಿದ್ದೆ. ಸಾಮಾನ್ಯವಾಗಿ ದೊಡ್ಡ ಮೊತ್ತವೇ ಅದು. ಕಾರ್ಯಕ್ರಮವೂ ಅಷ್ಟಕ್ಕಷ್ಟೇ... ಬರೇ ಅರ್ಧ ಲೀಟರಿನ ನೀರು ಕುಡಿಸಿ ಸಪ್ಪೆ ಕಾರ್ಯಕ್ರಮ ನೋಡಿ ಹೊರಗೆ ಬರಬೇಕಾಯಿತು. ಯಾರಿಗೆ ಹೇಳುವುದು? ಹೋದದ್ದು ನಮ್ಮ ತಪ್ಪು. ಕೊಟ್ಟವ ಕೋಡಂಗಿ.... ಈಸ್ಕೊಂಡವ ಈರ್ಭದ್ರ ಎಂಬಂತೆ!!! ಏನೇ ಆಗಲಿ ದುಬಾಯಿಯಲ್ಲಿ ನೆಲಸಿರುವ ಕರ್ನಾಟಕದ ಜನತೆ ಅದ್ರಷ್ಟವಂತರು ಎನ್ನಬಲ್ಲೆ... ಯಾಕೆಂದರೆ ಅಲ್ಲಿನ ಸಂಘಟನೆಗಳು ಜನ ಸಾಮಾನ್ಯರಿಗೆ ಅವಶ್ಯಕವಿರುವ ಅಗತ್ಯವಿರುವ ಅಪರೂಪದ ಕಾರ್ಯಕ್ರಮಗಳನ್ನು ಸಂಘಟಿಸಿ ಜನತೆಯ ಮನಸ್ಸಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ. ಧನ್ಯವಾದಗಳು ಪ್ರತಿಯೊಂದೂ ಸಂಘಟಕರಿಗೆ. |
| ಹರೀಶ್ ಶೆಟ್ಟಿ , ಉಡುಪಿ ದುಬಾಯಿ | 2010-03-27 | | ಶ್ರೀಯುತ ಪವನ್ ಶೆಟ್ಟಿ ಬಾಂಬೆ ಹೆಸರಿನಲ್ಲಿ ತಾವು ನೀಡಿದ ಪ್ರತಿಕ್ರಿಯೆ ನೋಡಿದಾಗ ತಮ್ಮ ಮೇಲೆ ಮರುಕ ಉಂಟಾಗುತ್ತದೆ. ಕೈಲಾಗದವನು ಮೈಕೈ ಪರಚಿ ಕೊಂಡಂತಾಗಿದೆ ನಿಮ್ಮ ಪರಿಸ್ಥಿತಿ. ಮೊದಲನೆಯದಾಗಿ ನಾನೂರು ಐನೂರು ಜನ ಸೇರುವ ಸಭಾಂಗಣದಲ್ಲಿ ಸಾವಿರ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದು, ಹಿಂದೆ ಕುಳಿತ ಎಲ್ಲರಿಗೂ ಪೂಜೆ ವೀಕ್ಷಿಸಲು ಸಭಾಂಗಣದಲ್ಲಿ ಟಿ.ವಿ. ಅಳವಾಡಿಸಲಾಗಿತ್ತು. ಪ್ರವೇಶ ದರ ಸಂಗ್ರಹಿಸಿ ಪಂಚತಾರ ಹೋಟೆಲಿನಲ್ಲಿ ಮಾಡಿದ ಡೈನ್ ಅಂಡ್ ಡಾನ್ಸ್ ಪ್ರೋಗ್ರಾಮ್ ಎಂದು ನೀವು ತಿಳಿದು ಕೊಂಡಿರುವ ಹಾಗಿದೆ. ಪೂಜೆ ವ್ಯವಸ್ಥೆ ಮಾಡಿದ ಸಮಿತಿಯವರ ಹೆಸರು ಮೊಬೈಲ್ ನಂಬರ್ ದೊಡ್ಡದಾಗಿ ಬರೆದು ಪ್ರವೇಶ ಧ್ವಾರದಲ್ಲಿ ಇಡಲಾಗಿತ್ತು. ತಮಗೆ ಭೋಜನದಲ್ಲಿ, ಎ.ಸಿ.ಯಲ್ಲಿ ಅಸೌಕರ್ಯ ವಾಗಿದ್ದರೆ ಕರೆದು ಕೇಳಿ ದಬಾಯಿಸಬಹುದಿತ್ತು. ಮುಖ್ಯವಾಗಿ ಈ ನಾಡಿನಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಿದ ಸರ್ಕಾರಕ್ಕೆ ನಾವೆಲ್ಲಾ ಚಿರಋಣಿಗಳಾಗ ಬೇಕಿದೆ. ನನಗೆ ಪೂಜೆಗೆ ಆಹ್ವಾನ ಇದ್ದು ಪೂಜೆಯಲ್ಲಿ ಭಾಗವಹಿಸಿದ್ದೇನೆ. ಜನದಟ್ಟಣಿಯ ಮದ್ಯೆ ನಾನು ಕೂಡ ಒಬ್ಬ ಭಕ್ತನಾಗಿದ್ದು ಪೂಜೆ ಮುಗಿಸಿ ಮಹಾ ಪ್ರಸಾದ ಸ್ವೀಕರಿಸಿ ನಂತರ ಪ್ರಥಮ ಬಾರಿಗೆ ನಡೆದ ಹರಿಕಥೆಯನ್ನು ಕೇಳಿ ಆನಂದಿಸಿದ್ದೇನೆ. ಇಂತಹ ಒಂದು ಒಳ್ಳೆಯ ಪೂಜಾ ಸಮಾರಂಭ ನಡೆಸಿದ ಪೂಜಾ ಸಮಿತಿಯವರು ಪ್ರಶಂಸನಾರ್ಹರು. |
| Pawan Shetty, Bombay | 2010-03-26 | | It was a grand pooja, but not well organisd by the committee members. No one was paying attention to the crowd, everyone was interested in the photo session, cd, photo release etc. People could not see the mangala arathi also properly. Not at all well organised. Even food was not enough, all are standing in the line and waiting for food long time. It was horrible situation without ac also.... |
| Harish Kodi, Dubai | 2010-03-21 | | Congratulations to the organisers. Many many thanks for conducting such a nice event in Dubai.Beautiful stage, wonderful pooja set up,good arrangements,decent crowd,Tasty food,Informative Harikatha,worth spending a day in b/n hectic busy life in Dubai. Once again many thanks to all and lookforward for such events often and regularly. Hats off to Dr Paveen Bhat ...your message have really penetrated deep into the heart of the listeners. Wish you good luck and lookforward to see you again and again in dubai and to listen to your messages. |
| manoj, kuwait | 2010-03-20 | | mutalik and ramsene monky group, se this for not india this is dubai musslim country, |
| Shrilatha S Hegde, Mangalore / Dubai | 2010-03-20 | | Excellent photographs by Mr.Ashok B, keep up the good work. |
|