ಇಂದಿನಿಂದ ಉಡುಪಿ ಸಾಹಿತ್ಯ ಸಮ್ಮೇಳನ |
ಪ್ರಕಟಿಸಿದ ದಿನಾಂಕ : 2010-03-19
ಉಡುಪಿ, ಮಾ. ೧೮: ಜಿಲ್ಲೆಯ ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮಾ. ೧೯ರಂದು ಸಾಂಸ್ಕೃತಿಕ ಚಟುವಟಿಕೆಗಳು ಆರಂಭಗೊಳ್ಳಲಿವೆ. ಅಂಬಲಪಾಡಿ ದೇವಳದ ಬನ್ನಂಜೆ ರಾಮಾಚಾರ್ಯ ಮಂಟಪ, ನಿ.ಬೀ. ಅಣ್ಣಾಜಿ ಬಲ್ಲಾಳ್ ವೇದಿಕೆಯಲ್ಲಿ ೩ ದಿನಗಳ ಕಾಲ ಸಮ್ಮೇಳನ ಸಂಪನ್ನಗೊಳ್ಳಲಿದೆ.
ಬಹುಶ್ರುತ ವಿದ್ವಾಂಸ ಡಾ| ಯು.ಪಿ. ಉಪಾಧ್ಯಾಯ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾ.೧೯ರ ಸಂಜೆ ೬ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮಾ. ೨೦ರ ಬೆಳಗ್ಗೆ ೮.೩೦ಕ್ಕೆ ಶೋಭಾಯಾತ್ರೆ ಬ್ರಹ್ಮಗಿರಿ ಲಯನ್ಸ್ ವೃತ್ತದಿಂದ ಆರಂಭಗೊಳ್ಳಲಿದೆ.
೯.೩೦ಕ್ಕೆ ಸಮ್ಮೇಳನವನ್ನು ಸಚಿವ ಡಾ|ವಿ.ಎಸ್.ಆಚಾರ್ಯ ಉದ್ಘಾಟಿಸಲಿದ್ದಾರೆ. ಎರಡು ದಿನಗಳ ಕಾಲ ಐದು ಗೋಷ್ಠಿಗಳು ನಡೆಯಲಿವೆ.
ಮಾ.೨೧ರ ಸಂಜೆ ಸಮಾರೋಪ ಸಮಾರಂಭದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.
ಕೇಂದ್ರ ಕ.ಸಾ.ಪ. ಅಧ್ಯಕ್ಷ ಡಾ|ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿಕ್ಷಕರಿಗೆ ಒಒಡಿ: ಅಂಬಲಪಾಡಿಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರು ಪಾಲ್ಗೊಳ್ಳಲು ಅನುಕೂಲ ವಾಗುವಂತೆ ಮಾ. ೨೦ರಂದು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಅನ್ಯಕಾರ್ಯನಿಮಿತ್ತ ಸೌಲಭ್ಯವನ್ನು ಡಿಡಿಪಿಐ ಅವರು ನೀಡಿದ್ದಾರೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅಂಬಾತನಯ ಮುದ್ರಾಡಿಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19
|
|
|