ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್ನಿಂದ ಪ್ರತಿಭಟನೆ. |
ಪ್ರಕಟಿಸಿದ ದಿನಾಂಕ : 2010-03-18
ಮಂಗಳೂರು,ಮಾ.18;ದಕ್ಷಿಣವಲಯ ಕಾಂಗ್ರೇಸ್ ಸಮಿತಿ ವತಿಯಿಂದ ಮಂಗಳೂರಿನ ಸೂಟರ್ಪೇಟೆಯ ನೆಹರೂ ರೋಡಿನಲ್ಲಿ ಇಂದು ಬೆಳಗ್ಗೆ ವಾರ್ಡಿನ ಸಮಸ್ಯೆಗಳ ಬಗ್ಗೆ ಪತ್ರಿಭಟನಾ ಸಭೆ ನಡೆಯಿತು.
ಬಿಜೆಪಿ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷ ಸುಳ್ಳು ವಾಗ್ದಾನಗಳಿಂದ ಮಹಿಳಾ ಕಾರ್ಪೊರೇಟರ್ ಗಳಿರುವ ವಾರ್ಡ್ ಗಳಿಗೆ ಅನ್ಯಾಯ ಮಾಡುತ್ತಿದೆ. ಸೂಟರ್ ಪೇಟೆಯ ನೆಹರೂ ರೋಡಿಗೆ ಒಂದು ವರ್ಷದ ಹಿಂದೆ ಡಾಮರೀಕರಣಕ್ಕೆ ಟೆಂಡರ್ ಮಂಜೂರಾಗಿದ್ದರು ಇದುವರೆಗೆ ಕಾಮಗಾರಿ ಆರಂಭವಾಗದಿರುವುದನ್ನು ಖಂಡಿಸಿ ಕಾಂಗ್ರೇಸ್ ನಾಯಕರುಗಳು ಮತ್ತು ವಾರ್ಡಿನ ಕಾರ್ಪೋರೇಟರ್ ಗಳು ಪ್ರತಿಭಟನೆ ನಡೆಸಿದರು.
ಮಂಗಳೂರಿನಲ್ಲಿ ಈಗ ಬಿಜೆಪಿ ಆಡಳಿತ ನಡೆಸುತ್ತಿಲ್ಲ ಬದಲಿಗೆ ಜಿಲ್ಲಾಧಿಕಾರಿಯವರು ಅಭಿವೃದ್ಧಿಕಾಮಗಾರಿಗಳನ್ನು ಮಾಡತ್ತಿದ್ದಾರೆ. ಬಿಜೆಪಿ ಹೆಸರಿಗೆ ಮಾತ್ರ, ಕಾಮಗಾರಿಗಳನ್ನು ಡಿ.ಸಿಯವರೇ ಮಾಡುತ್ತಿದ್ದಾರೆಂದು ಕಾಂಗ್ರೇಸ್ ಮುಖಂಡ ಕೆ.ಹರಿನಾಥ್ ಹೇಳಿದರು.
ಪ್ರತಿಭಟನೆಯಲ್ಲಿ ವಾರ್ಡಿನ ಕಾರ್ಪೋರೇಟರ್ ಗಳಾದ ಅಪ್ಪಿ, ಶ್ರೀಮತಿ ಜೆಸಿಂತಾ ಅಲ್ಪ್ರೆಡ್, ಕಾಂಗ್ರೇಸ್ ಮುಖಂಡರಾದ ಪಿ.ವಿ.ಮೊಹನ್, ಎಂ.ಜಿ. ಹೆಗಡೆ, ಆಶೋಕ್, ಟಿ.ಕೆ ಸುಧೀರ್ ಮೊದಲಾದವರು ಪಾಲ್ಗೊಂಡಿದ್ದರು.
ಕಾರ್ಪೋರೇಟರ್ ಜೆಸಿಂತಾ ಅಲ್ಪ್ರೆಡ್ ಪ್ರತಿ ಪಕ್ಷನಾಯಕ ಡಿ.ಕೆ ಆಶೋಕ್ ಅವರಿಗೆ ಈ ಬಗ್ಗೆ ಮನವಿಯನ್ನು ಹಸ್ತಾಂತರಿಸಿದರು. ಬಳಿಕ ಸೂಟರ್ಪೇಟೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಪ್ರತಿಭಟನಾಕಾರರು ರಸ್ತೆತಡೆ ನಡೆಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-18
|
|
|