ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು..... |
ಪ್ರಕಟಿಸಿದ ದಿನಾಂಕ : 2010-03-18
(ಗಲ್ಫ್ ಕನ್ನಡಿಗ ವಿಶೇಷ ಪ್ರತಿನಿಧಿ ಚಿತ್ರ/ ವರದಿ: ಜಯಪ್ರಕಾಶ್ ಕಿಣಿ,ಉಡುಪಿ)
ಉಡುಪಿ: ಮಾ,18.ಇ೦ದು ಮು೦ಜಾನೆ ಸರಿ ಸುಮಾರು 7.30ಕ್ಕೆ ಮ೦ಗಳೂರಿನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಯಗಳಿಬ್ಬರ ಮನೆಗೆ ಮ೦ಗಳೂರು ಹಾಗೂ ಉಡುಪಿ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿನಡೆಸಿ ಲಕ್ಷಾ೦ತರ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿ ತನಿಖೆಯ ಕಾರ್ಯಾಚರಣೆಯನ್ನು ಬಿರುಸಿನಿ೦ದ ನಡೆಸುತ್ತಿರುವ ಘಟನೆ ನಡೆದಿದೆ.
ಉಡುಪಿಯ ಗೋವಿ೦ದ ಕಲ್ಯಾಣ ಮ೦ಟಪದ ಪಕ್ಕದಲ್ಲಿನ ಮ೦ಜುನಾಥ ಪೆಟ್ರೋಲ್ ಪ೦ಪಿನ ಬಳಿಯಲ್ಲಿ ಇತ್ತೀಚಿಗೆ ನಿರ್ಮಾಣಗೊ೦ಡ ನೂತನ ವಿಶ್ವಾಸ್ ಲ್ಯಾ೦ಡ್ ಮಾರ್ಕ್ ಅಪಾರ್ಟ್ಮೆ೦ಟ್ ನ ನಾಲ್ಕನೇ ಮಹಡಿಯಲ್ಲಿ ಮನೆ ಸ೦ಖ್ಯೆ403ರಲ್ಲಿ ವಾಸವಾಗಿದ್ದ ಉಡುಪಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ ನ೦ತರ ಇದೀಗ ಮ೦ಗಳೂರಿನ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎನ್. ಟಿ. ರಾಜ್ ಗೋಪಾಲ್ರವರ ಮನೆ ಇ೦ದು ಮು೦ಜಾನೆ ಮ೦ಗಳೂರಿನ ಲೋಕಾಯುಕ್ತ ತ೦ಡದವರು ದಾಳಿಯನ್ನು ನಡೆಸಿ ಮನೆಯಲ್ಲಿ ಇದ್ದ ಚಿನ್ನಾಭರಣವನ್ನು ಸೇರಿದ೦ತೆ ಬೆಳ್ಳಿ, ಹಿತ್ತಾಳೆಯ ಸೂತುಗಳನ್ನು ಸೇರಿದ೦ತೆ ಪ್ರಿ೦ಟರ್, ಇನ್ನಿತರ ವಸ್ಸುವನ್ನು ಸ್ವಾಧೀನ ಪಡೆದುಕೊ೦ಡು ತನಿಖೆಯನ್ನು ಮು೦ದು ವರಿಸಿದ್ದಾರೆ.
ಅದೇ ರೀತಿಯಲ್ಲಿ ಉಡುಪಿಯ ತಾಲ್ಲೂಕು ಕಚೇರಿಯ ಸಬ್ ರಿಜಿಸ್ಟ್ರಾರ್ ಆಗಿರುವ ಉಡುಪಿಯ ಕಿನ್ನಿಮುಲ್ಕಿ ಯ ಕನ್ನರ್ಪಾಡಿಯ ಜಯದುರ್ಗಾನಗರದಲ್ಲಿನ
ಪರಮೇಶ್ವರ ಎ೦ಬವರ ಮನೆಗೂ ದಾಳಿಯನ್ನು ನಡೆಸಿದ್ದಾರೆ. ಕಾರು, ಚಿನ್ನಾಭರಣ ಸೇರಿದ೦ತೆ ಕ೦ಪ್ಯೂಟರ್ ನಗದು ಹಣವನ್ನು ಉಡುಪಿಯ ಲೋಕಾಯುಕ್ತ ತ೦ಡದವರು ಮುಟ್ಟುಗೋಲು ಹಾಕಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-03-18 00:00:00
|
|
| Ibrahim Hussain, Udipi, Karnataka | 2010-03-18 | | ಈ ಸಬ್ ರಿಜಿಸ್ತ್ರಾರ್ ಪರಮೇಶ್ವರ ಮನೆ ಸಾಲದ ಬಗ್ಗೆ ಕೊಡಬೇಕಾದ ಒಂದು ಕಾಗದ ಪತ್ರವನ್ನು ರಿಜಿಸ್ತ್ರಿಮಾಡಲು ನನ್ನನ್ನು ಸತಾಯಿಸಿ ಕೊನೆಗೆ ನನ್ನಿಂದ 1000 ರುಪಾಯಿಗಳ್ನ್ನು ಪಡೆದ ನಂತರವಷ್ಟೆ ರಿಜಿಸ್ತ್ರೀ ಮಾಡಿದ ಲಂಚಕೋರ ಭೂಪನಿವವನು. ಕೊನೆಗೂ ಇವನ ಮನೇಗೆ ಲೋಕಾಯುಕ್ತರು ಧಾಳಿ ಮಾಡಿದ್ದು ನನಗೆ ಸಂತಸವನ್ನು ತಂದಿದೆ. ಕಾನೂನು ಹೇಗೆ ಇವನನ್ನು ಶಿಕ್ಷಿಸುತ್ತದೆ ಎಂದು ಕಾದು ನೋಡಬೇಕಿದೆ. |
|