ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಬದಲಾಗಲಿದೆ ಬನ್ನೇರುಘಟ್ಟ

ಬನ್ನೇರುಘಟ್ಟ ಜೈವಿಕ ಉದ್ಯಾನವು ಬದಲಾಗಬೇಕು; ದೂಳೆದ್ದು ಮುಖ ಮೆತ್ತುವ ಬದಲು ನೋಡಿ ದವರ ಮುಖದಲ್ಲಿ ಸುತ್ತಲಿನ ಹಸಿರು ಹರ್ಷ ಮೂಡಿಸಬೇಕು! ಇಂಥ ಆಶಯವನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ದಿಟ್ಟ ಪ್ರಯತ್ನವೊಂದು ನಡೆದಿದೆ.  

ಇದೇನು ಉದ್ಯಾನವೇ? ಎಲ್ಲೆಡೆಯೂ ಧೂಳು. ಹಸಿರು ಎಲ್ಲಿದೆಯೆಂದು ಹುಡುಕಬೇಕು. ದೊಡ್ಡ ಮರಗಳ ಅಡಿಯಲ್ಲಿ ಬರಿ ಮಣ್ಣಿನ ಕಣಗಳ ನರ್ತನ. ಮನಸ್ಸಿಗೆ ಹಿತವೆನಿಸುವ ಬದಲು ಕಿರಿಕಿರಿ ಯೇ ಹೆಚ್ಚು. ಪ್ರವಾಸಿಗಳಿಗೆ ಅನಾನುಕೂಲ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಹೋದರಂತೂ ಪ್ರಾಣಿಗಳನ್ನು ನೋಡುವುದಕ್ಕಿಂತ ಪ್ರೇಮಿಗಳ ಲೀಲೆಯೇ ಕಣ್ಣಿಗೆ ಹೆಚ್ಚಾಗಿ ಬಿದ್ದು  ಮುಜುಗರ ಉಂಟು ಮಾಡುತ್ತದೆ. ಇಂಥದ ಅನೇಕ ಸಮಸ್ಯೆ ಬನ್ನೇರುಘಟ್ಟ ವನ್ಯಜೀವಿ ಉದ್ಯಾ ನದಲ್ಲಿ ಬಲವಾಗಿ ಕಾಡುತ್ತದೆ.

ವನ್ಯಜೀವಿಗಳನ್ನು ನೋಡಬೇಕೆಂದು ಬಂದವರಿಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಮಾಹಿತಿ ಬಿಟ್ಟರೆ ಬೇರೇನೂ ಇಲ್ಲ. ಎಲ್ಲಿ ಹೋಗಬೇಕು? ಯಾವ ಪ್ರಾಣಿ ಎಲ್ಲಿದೆ ಎಂದು ತಿಳಿಸುವ ವ್ಯವಸ್ಥೆಯೂ ಇಲ್ಲ. ಜಾತ್ರೆಯಲ್ಲಿ ಅಮ್ಮನ ಕೈತಪ್ಪಿಸಿಕೊಂಡು ನಿಂತ ಮಗುವಿನಂಥ ಪರಿಸ್ಥಿತಿ ಇಲ್ಲಿಗೆ ಬಂದ ವರದು.

ಇದಿಷ್ಟು ಪ್ರವಾಸಿಗಳ ಗೋಳಾದರೆ ಉದ್ಯಾನದಲ್ಲಿನ ಹಲವಾರು ಕೇಜ್‌ಗಳಲ್ಲಿರುವ (ಪಂಜರ) ವನ್ಯಜೀವಿಗಳಿಗೂ ನೆಮ್ಮದಿ ಇಲ್ಲ. ನಾನಾ ಕಾರಣಕ್ಕೆ ಕಿರಿಕಿರಿ ಆಗುತ್ತಿದ್ದರೂ ಮೌನವಾಗಿ ಲೋಹ ದ ಬಲೆಗಳ ಒಳಗೆ ನಿಂತು ಪಿಳಿಪಿಳಿ ಕಣ್ಣುಬಿಡುತ್ತವೆ. ಎಲ್ಲ ದಿಕ್ಕಿನಿಂದಲೂ ಬಂದು ನಿಂತು ತಮ್ಮ ನ್ನು ನೋಡುವ ಜನರ ತಂಟೆ, ಕುಚೇಷ್ಟೆಯಿಂದಯಿಂದ ಅವುಗಳಿಗೂ ಶಾಂತಿಯಿಲ್ಲ.

ವನ್ಯಜೀವಿ ವೈದ್ಯರು ಹೇಳುವ ಪ್ರಕಾರ ಇಂಥ ಪ್ರಾಣಿ ಸಂಗ್ರಹಾಲಯದ ಕೇಜ್‌ಗಳಲ್ಲಿನ ಜೀವಿ ಗಳನ್ನು ನೋಡಲು ಒಂದು ಕಡೆಯಿಂದ ಮಾತ್ರ ಅವಕಾಶ ಇರಬೇಕು. ಎಲ್ಲ ಕಡೆಯಿಂದ ಗದ್ದಲ ವಾಗುತ್ತಿದ್ದರೆ ಅವುಗಳು ಕೂಡ ಮಾನಸಿಕವಾಗಿ ದಣಿಯುವ ಅಪಾಯವಿರುತ್ತದೆ. ಆದ್ದರಿಂದ ಸುತ್ತಲೂ ನಿಂತು ನೋಡುವ ರೀತಿಯಲ್ಲಿ ವ್ಯವಸ್ಥೆ ಇರಲೇಬಾರದು. ಇವು ತುಂಬ ಸಣ್ಣ ವಿಷಯ ಗಳೆಂದು ಮೇಲು ನೋಟಕ್ಕೆ ಅನಿಸಬಹುದು.

ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ನಿರ್ದೇಶಕರಾದ ಮಿಲ್‌ಟ್ಯಾಗೊ ಅವರು ಉದ್ಯಾನಕ್ಕೆ ಹೊಸದೊಂದು ರೂಪ ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಪ್ರಾಣಿ ವೀಕ್ಷಣೆ ಮಾತ್ರ ಇಲ್ಲಿಗೆ ಬರುವವರ ಉದ್ದೇಶವಾಗಿರಬೇಕು, ಬೇರೆ ಚಟುವಟಿಕೆಗಳ ಕೇಂದ್ರ ಇದಾಗಬಾರದು ಎನ್ನುವುದೇ ಉದ್ಯಾನವನ್ನು ರೂಪಾಂತರಿಸುವ ಯೋಚನೆ ಹಾಗೂ ಯೋಜನೆಗೆ ಮೂಲ ಕಾರಣ. ವನ್ಯಜೀವಿ ಉದ್ಯಾನದ ಮೊದಲ ಗುರಿ ಪ್ರಾಣಿ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹವೆಂದು ಸ್ಪಷ್ಟಗೊಳಿಸುವ ಕಡೆಗೆ ಮಾತ್ರ ಗಮನ.

ಪ್ರೇಮಿಗಳ ಟೈಂಪಾಸ್‌ಗೆ ತಾಣ ಇದಲ್ಲವೆಂದು ಸಾರುವ ರೀತಿಯಲ್ಲಿಯೇ ಎಲ್ಲ ಸಂದಿಗೊಂದಿಯ ಮಾರ್ಗಗಳನ್ನು ಬಂದ್ ಮಾಡಲು ಕೂಡ ಒತ್ತು ನೀಡಲಾಗುತ್ತಿದೆ. ಕಲ್ಲುಗಳು, ಮರಗಳ ಸಂದು ಗಳ ನಡುವೆ ಕೂಡ ನುಗ್ಗಿ ಹೋಗದ ರೀತಿಯಲ್ಲಿ ಅಲ್ಲಿ ಹಚ್ಚಹಸಿರಾದ ಹೊಸ ವಿನ್ಯಾಸದ ಉದ್ಯಾ ನ ರೂಪ ಪಡೆಯಲಿದೆ. ಎಲ್ಲವೂ ವ್ಯವಸ್ಥಿತವಾಗಿ ಕಾಣಿಸಲಿದೆ ಎನ್ನುವುದು ಮಿಲ್‌ಟ್ಯಾಗೊ ಅವರ ಅಭಯ.

ಸಹಾಯಕ ನಿರ್ದೇಶಕ (ವನ್ಯಜೀವಿ ವೈದ್ಯಕೀಯ ಸೇವೆ) ಡಾ.ಬಿ.ಸಿ.ಚಿಟ್ಟಿಯಪ್ಪ ಅವರಿಗೆ ಬನ್ನೇರು ಘಟ್ಟ ಉದ್ಯಾನಕ್ಕೆ ಹೊಸ ರೂಪ ನೀಡಿ ವ್ಯವಸ್ಥಿತಗೊಳಿಸುವ ಹೊಣೆಯನ್ನು ವಹಿಸಲಾಗಿದೆ. ಪ್ರಕೃ ತಿ ಹಾಗೂ ವನ್ಯಜೀವಿಗಳ ಬಗ್ಗೆ ಸಹಜವಾಗಿಯೇ ಕಾಳಜಿಯನ್ನು ಹೊಂದಿರುವ ಚಿಟ್ಟಿಯಪ್ಪ ಹಲ ವಾರು ಹೊಸ ಅಂಶಗಳನ್ನು ಈ ಉದ್ಯಾನಕ್ಕೆ ಸೇರಿಸಲು ಮುಂದಾಗಿದ್ದಾರೆ.

ಕೇಜ್‌ಗಳ ಹೊಸ ಸ್ವರೂಪ: ಸದ್ಯ ವನ್ಯಜೀವಿಗಳನ್ನು ಎಲ್ಲ ಕಡೆಯಿಂದಲೂ ಸುತ್ತುವರಿದು ನೋಡು ವುದಕ್ಕೆ ಅವಕಾಶವಿದೆ.ಇದನ್ನು ಬದಲಿಸಿ, ಒಂದು ಕಡೆಯಿಂದ ಮಾತ್ರ ಕೇಜ್‌ಗಳತ್ತ ಪ್ರವೇಶಕ್ಕೆ ಅವಕಾಶ ಇರುವಂತೆ ಮಾಡುವ ವಿನ್ಯಾಸ ರೂಪಿಸಲಾಗಿದೆ. ಪ್ರಾಣಿಗಳಿಗೆ ಬಾಕಿ ಮೂರು ಕಡೆ ಯಿಂದ ಏಕಾಂತದ ವ್ಯವಸ್ಥೆ ಇರುತ್ತದೆ. ಜೊತೆಗೆ ಪ್ರತಿಯೊಂದು ಕೇಜ್‌ನ ಸುತ್ತಲೂ ಹೊಸದಾಗಿ ಮರಗಳನ್ನು ನೆಡುವ ಕೆಲಸವೂ ಆರಂಭವಾಗಿದೆ. ಅವುಗಳ ಬೆಳೆದು ನಿಂತ ನಂತರ ಅಲ್ಲಿನ ವಾತಾವರಣ ಇನ್ನಷ್ಟು ತಂಪಾಗಲಿದೆ.

ವ್ಯವಸ್ಥಿತ ಮಾರ್ಗ: ಎಲ್ಲೆಂದರಲ್ಲಿ ಗೊಂದಲವಾಗುವ ರೀತಿಯಲ್ಲಿ ಈಗ ಮಾರ್ಗಗಳು ಇರುವು ದರಿಂದ ಜನರು ತಮಗೆ ಇಷ್ಟಬಂದಂತೆ ಅಲ್ಲೊಂದು ಇಲ್ಲೊಂದು ಕೇಜ್‌ನಲ್ಲಿರುವ ಪ್ರಾಣಿ ಹಾಗೂ ಪಕ್ಷಿಗಳನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಇನ್ನು ಮುಂದೆ ಒಂದಾದ ನಂತರ ಒಂದು ಕೇಜ್‌ಗೆ ಹೋಗಲು ಅನುಕೂಲವಾಗುವ ರೀತಿಯಲ್ಲಿ ಮಾರ್ಗವನ್ನು ರೂಪಿಸಲಾಗುತ್ತಿದೆ.

ಅಷ್ಟೇ ಅಲ್ಲ ಈಗ ಖಾಲಿ ಇರುವ ಜಾಗಗಳಲ್ಲಿ ಹಸಿರು ಬೆಳೆಸುವ ಹಾಗೂ ವಿವಿಧ ಸಸ್ಯಗಳನ್ನು ನೆಡುವ ಕಾರ್ಯಕ್ಕೂ ಚಾಲನೆ ದೊರೆತಿದೆ. ಒಂದು ಮಾರ್ಗದಲ್ಲಿ ಹೊರಟರೆ ಸಂಪೂರ್ಣವಾಗಿ ಎಲ್ಲ ಕೇಜ್‌ಗಳನ್ನು ನೋಡಿಕೊಂಡು ನಿರ್ಗಮನ ಮಾರ್ಗದ ಮೂಲಕ ಹೊರಗೆ ಬರುವುದಕ್ಕೆ ಸಾಧ್ಯವಾಗಬೇಕು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಕದಲ್ಲಿ ಕಂಬಿಗಳ ಅಡ್ಡಗೋಡೆ ಕಟ್ಟಲಾಗುತ್ತಿದೆ. ಇದರಿಂದ ಖಾಲಿ ಜಾಗದಲ್ಲಿ ನೆಡಲಾಗಿರುವ ಗಿಡಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡಲು ಅವಕಾಶ ಇರುವುದಿಲ್ಲ.

ಇನ್ನೊಂದು ವಿಶೇಷವೆಂದರೆ ಪ್ರತಿಯೊಂದು ಕೇಜ್ ಹತ್ತಿರಕ್ಕೆ ಹೋಗುವ ಮೊದಲೇ ಅದರಲ್ಲಿ ಇರುವ ವನ್ಯಜೀವಿಯ ಸಂಪೂರ್ಣ ವಿವರ ಲಭ್ಯವಾಗುವಂತೆ ಮಾಡುವುದು. ಅದಕ್ಕಾಗಿ ಖಾಸಗಿ ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಗುಣಮಟ್ಟದ ಫಲಕಗಳನ್ನು ಸಿದ್ಧಪಡಿಸಲಾಗುತ್ತದೆ. ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯು ಇಂಥ ಮಾಹಿತಿ ಫಲಕಗಳನ್ನು ಸಿದ್ಧಪ ಡಿಸಿ ನೀಡಲು ಈಗಾಗಲೇ ಮುಂದೆ ಬಂದಿದೆ. ಸಚಿತ್ರವಾದ ಮಾಹಿತಿ ಫಲಕಗಳ ಮೂಲಕ ಅನಕ್ಷ ರಸ್ಥರಿಗೂ ಪ್ರಾಣಿ ಹಾಗೂ ಪಕ್ಷಿಯ ಕುರಿತು ಮಾಹಿತಿ ನೀಡಲಿವೆ.

ಹುಲ್ಲಿನ ಲಾನ್: ಉದ್ಯಾನದ ಎಲ್ಲ ಖಾಲಿ ಸ್ಥಳಗಳಲ್ಲಿ ಹುಲ್ಲಿನ ಹಾಸು ಹಾಸಲಾಗುತ್ತಿದೆ. ಹೀಗೆ ಮಾಡುವ ಮೂಲಕ ಬನ್ನೇರುಘಟ್ಟ ಉದ್ಯಾನವೆಂದರೆ ಧೂಳಿನ ಗೂಡು ಎನ್ನುವ ದೂರನ್ನೂ ಅಳಿಸಿ ಹಾಕಲಾಗುವುದು. ಉದ್ಯಾನಕ್ಕೆ ಸೇರಿದ ವಾಹನಗಳಿಗಾಗಿ ಇರುವ ಒಂದು ಟಾರ್ ರಸ್ತೆಯನ್ನು ಮಾತ್ರ ಹಾಗೆಯೇ ಉಳಿಸಲಾಗುತ್ತದೆ. ಆದರೆ ಬಾಕಿ ಎಲ್ಲ ಮಾರ್ಗಗಳನ್ನು ಮುಚ್ಚಿ ಎಲ್ಲೆಡೆ ಹಸಿರಾ ಗಿಸಲು ಒತ್ತು ನೀಡಲಾಗುವುದು.

ಈಗ ಮರಗಳ ಅಡಿಯಲ್ಲಿ ಎಲ್ಲೆಂದರಲ್ಲಿ ಇರುವ ಆಸನಗಳನ್ನು ತೆಗೆದು, ಅವುಗಳನ್ನು ಕೇವಲ ಕೇಜ್‌ಗಳ ಮಾರ್ಗದ ನಡುವೆ ಅಲ್ಲಲ್ಲಿ ಜೋಡಿಸಲಾಗುವುದು. ಹೀಗೆ ಮಾಡುವ ಮೂಲಕ ಕೇವಲ ಪ್ರೇಮಿಗಳ ಸಲ್ಲಾಪದ ಆಸನಗಳು ಮುಂದೆ ಎಲ್ಲರ ವಿರಾಮಕ್ಕೆ ಲಭ್ಯವಾಗುತ್ತವೆ. ಉದ್ಯಾನದಲ್ಲಿ ರುವ ಕಲ್ಲು ಬಂಡೆಗಳು ಹಾಗೂ ಮರಗಳ ಪಕ್ಕದಲ್ಲಿನ ಮರೆಗಳನ್ನು ಕೂಡ ಮುಚ್ಚಲಾಗುತ್ತದೆ.

ಹೀಗೆ ಮಾಡಿದ ನಂತರ ಈ ಉದ್ಯಾನವು ಪ್ರೇಮಿಗಳ ತಾಣವಾಗಿ ಉಳಿಯುವುದಿಲ್ಲ. ಕೇವಲ ವನ್ಯಜೀವಿಗಳನ್ನು ನೋಡುವ ಆಸಕ್ತಿ ಇರುವವರು ಮಾತ್ರ ಬರುವಂಥ ಜ್ಞಾನ ಕೇಂದ್ರವಾಗಲಿದೆ.

ಕೃತಕ ಜಲಪಾತ: ಉದ್ಯಾನದ ಅಕರ್ಷಣೆಯನ್ನು ಹೆಚ್ಚಿಸುವುದಕ್ಕಾಗಿ ಈಗಾಗಲೇ ಇಲ್ಲಿ ಪ್ರಕೃತಿ ಸಹಜವಾಗಿ ಲಭ್ಯವಿರುವ ಬಂಡೆಗಳ ಮೇಲಿಂದ ನೀರು ಧುಮ್ಮಿಕ್ಕಿ ಹರಿಯುವ ಜಲಪಾತ ನಿರ್ಮಾ ಣವಾಗಲಿದೆ. ಪಕ್ಕದ ಕೆರೆಯಲ್ಲಿನ ನೀರನ್ನು ಈ ಜಲಪಾತಕ್ಕಾಗಿ ಬಳಸಲಾಗುವುದು. ಜಲಪಾತಕ್ಕೆ ನಿಗದಿ ಮಾಡಿರುವ ಬಂಡೆಗಳ ಪಕ್ಕದಲ್ಲಿಯೇ ಸಾಕಷ್ಟು ಖಾಲಿ ಸ್ಥಳವಿದ್ದು ಅಲ್ಲಿ ಒಂದು ಪ್ರಕೃತಿ ಮಾಹಿತಿ ಕೇಂದ್ರ ತಲೆ ಎತ್ತಿ ನಿಲ್ಲಲಿದೆ.

ಮಾಹಿತಿ ಕೇಂದ್ರವು ಇಲ್ಲಿನ ಪ್ರಕೃತಿಗೆ ಭಂಗ ತರದ ಹಾಗೆ ಇರುತ್ತದೆ. ಅಲ್ಲಿ ಓಡಾಡಿ ಹೊರಗೆ ಬಂದರೆ ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಮಾಹಿತಿ ಪಡೆದ ಅನುಭವ ಆಗಬೇ ಕು.

ನೀರಿನ ಮರು ಬಳಕೆ: ವನ್ಯಜೀವಿಗಳ ಪಂಜರಗಳಿಂದ ಹೊರ ಬರುವ ನೀರು ಉದ್ಯಾನದ ಲಾನ್ ಹಾಗೂ ಮರಗಳಿಗೆ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ಉದುರುವ ಮರಗಳ ಎಲೆಗಳನ್ನು ಅದೇ ಮರಗಳಿಗೆ ಪ್ರಶಸ್ತವಾದ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ.ಇದೆಲ್ಲ ಪೂರ್ಣಗೊಂಡ ನಂತರ ಬನ್ನೇರುಘಟ್ಟವು ತನ್ನ ಈಗಿನ ಮುಖವನ್ನು ಕಳೆದುಕೊಂಡು ಹಸಿರುಟ್ಟ ಸುಂದರಿಯಾಗಿ ಅಂದ ಹೆಚ್ಚಿಸಿಕೊಳ್ಳಲಿದೆ!

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-18 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri